Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಕ್ಕಳಲ್ಲಿ ಪ್ರೌಡಾವಸ್ಥೆಗೆ ಬರುವ ಮೊದಲೇ ಮಾನಸಿಕ ಅಸ್ವಸ್ಥತೆ! ಏನು ಮಾಡುವುದು ?
ನಮ್ಮ ಮನೆಯ ಮಗು ಎಂದಿಗೂ ನಮ್ಮ ಮನೆಗೆ ನಂದಾ ದೀಪ . ಮಗುವನ್ನು ಹೆತ್ತ ಮೇಲೆ ಅದನ್ನೊಂದು ಒಳ್ಳೆಯ ಶಾಲೆಗೆ ಸೇರಿಸಿ ಉನ್ನತವಾದ ಶಿಕ್ಷಣ ಕೊಡಿಸಿ ಸುಂದರ ಭವಿಷ್ಯ ರೂಪಿಸಬೇಕೆಂಬ ಕನಸು ಎಲ್ಲಾ ತಂದೆ ತಾಯಂದಿರಿಗೂ ಇದ್ದೆ ಇರುತ್ತದೆ . ಅದಕ್ಕಾಗಿ ಜೀವನದಲ್ಲಿ ತಮ್ಮ ಸುಖ ಸಂತೋಷಗಳನ್ನು , ಆಸೆಗಳನ್ನು ತ್ಯಾಗ ಮಾಡಿ ಕೇವಲ ಮಗುವಿನ ಉದ್ದಾರಕ್ಕಾಗಿ ಹಗಲು ಇರುಳು ಎನ್ನದೆ ಶ್ರಮಿಸುತ್ತಾರೆ . ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ. ಮಗುವಿನ ಮುಖದಲ್ಲಿ ಮಂದಹಾಸ ನೋಡಿ ತಮ್ಮ ಎಲ್ಲಾ ನೋವನ್ನೂ ಮರೆಯುತ್ತಾರೆ .
ತಂದೆ ತಾಯಂದಿರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಂಡು ಮಗು ಬೆಳೆದು ದೊಡ್ಡವನಾಗಿ ಜವಾಬ್ದಾರಿಯಿಂದ ನಮ್ಮನ್ನೂ ನೋಡಿಕೊಂಡು ಮುಂದೊಂದು ದಿನ ನಮಗೆ ಆಸರೆಯಾಗಿ ನಿಂತು ತನ್ನ ಜೀವನವನ್ನೂ ನಿರ್ವಹಣೆ ಮಾಡುವನೆಂಬ ಆಸೆಯಿಂದ ದಿನಗಳನ್ನು ದೂಡುತ್ತಿರುತ್ತಾರೆ . ಕೆಲ ಮಕ್ಕಳು ಇದಕ್ಕೆ ಪುಷ್ಟಿ ಕೊಟ್ಟು ತಂದೆ ತಾಯಿಯ ಆಸೆಯಂತೆ ಬದುಕಿದರೆ , ಇನ್ನೂ ಕೆಲವರು ಅವರ ಆಸೆಗೆ ತಣ್ಣೀರೆರೆಚುತ್ತಾರೆ . ಇಲ್ಲಿ ಮಕ್ಕಳು ಕೇವಲ ಕೆಟ್ಟ ದಾರಿಯನ್ನು ಹಿಡಿದು ತಂದೆ ತಾಯಿಗೆ ಮೋಸ ಮಾಡಬೇಕು ಎಂದೇನಿಲ್ಲ ಅಲ್ಲವೇ ? ಕೆಲವೊಂದು ಬಾರಿ ಪೋಷಕರ ಆಸೆ ಈಡೇರದಿರುವುದಕ್ಕೆ ವಿಧಿ ಲಿಖಿತವೂ ಕಾರಣವಾಗಬಹುದು . ಉದಾಹರಣೆಗೆ ತಮ್ಮ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಕ್ಕಳಿಗೆ ರಸ್ತೆಯಲ್ಲಿ ಅಪಘಾತವಾಗಬಹುದು , ಅಥವಾ ಯಾವುದಾದರೂ ಕೆಟ್ಟ ಭಯಂಕರ ಸಾಂಕ್ರಾಮಿಕ ರೋಗ ಬರಬಹುದು , ಅಥವಾ ಮಕ್ಕಳನ್ನು ಅಪಹರಿಸಿ ಪೋಷಕರಿಗೆ ಅವರ ಮಕ್ಕಳು ಇನ್ನೆಂದೂ ಕೈ ಗೆ ಸಿಗದಂತೆ ಮಾಡಬಹುದು . ಹೀಗೆ ಹಲವಾರು ರೀತಿಯಲ್ಲಿ ಮನುಷ್ಯರ ಬಾಳಲ್ಲಿ ಆ ವಿಧಿ ಆಟವಾಡುತ್ತದೆ . ನಾವು ಅಂದುಕೊಳ್ಳುವುದೇ ಒಂದಾದರೆ ದೈವ ಬಗೆಯುವುದೇ ಇನ್ನೊಂದು ಎಂಬ ಸತ್ಯ ಗೊತ್ತಿದ್ದರೆ ಅದೇ ಜೀವನವನ್ನು ಅರ್ಥ ಮಾಡಿಕೊಂಡು ನಡೆದಂತೆ .

ಇಂತಹದೇ ಒಂದು ನಾವು ಬಯಸದೆ ನಮ್ಮ ಮಕ್ಕಳ ಬಾಳಲ್ಲಿ ಆಟವಾಡುವ ವಿಷಯವೆಂದರೆ ಅದು ಮಕ್ಕಳು ಮಾನಸಿಕ ಅಸ್ವಸ್ಥತೆಗೆ ಬಲಿಯಾಗುವುದು . ಮನುಷ್ಯ ಸಾಮಾಜಿಕ ಜೀವಿ ಎಂದು ಎಲ್ಲರೂ ಹೇಳುತ್ತಾರೆ . ಅಂದರೆ ತನ್ನ ಇರುವಿಕೆಗೆ ಮತ್ತು ಈ ಸಮಾಜದಲ್ಲಿ ತನ್ನ ಸಂಸಾರದೊಂದಿಗೆ ಯಶಸ್ವಿಯಾಗಿ ಜೀವನ ನಡೆಸಲು ಆತ ಅನೇಕರ ಸಹಾಯ ತೆಗೆದುಕೊಳ್ಳಲೇ ಬೇಕಾಗುತ್ತದೆ . ಅದು ನೆಂಟರು , ಬಂದು ಬಾಂಧವರು ಅಥವಾ ಸ್ನೇಹಿತರೂ ಆಗಿರಬಹುದು . ಒಟ್ಟಿನಲ್ಲಿ ನನಗೆ ಯಾರೂ ಬೇಡ ನಾನೊಬ್ಬನೇ ಜೀವಿಸಬಲ್ಲೆ ಎನ್ನುವುದು ಅಸಾಧ್ಯದ ಮಾತು . ತನ್ನ ಸಂಸಾರ ಮಕ್ಕಳು ಮರಿ ಎಲ್ಲಾ ಸಂಗತಿಗಳನ್ನು ಈ ಸಮಾಜದಲ್ಲಿ ಇತರರ ಜೊತೆ ಬೆರೆಯುವಂತೆ ಮಾಡುವುದು ಅವನ ಕರ್ತವ್ಯ ಕೂಡ . ಆದರೂ ಕೆಲವೊಮ್ಮೆ ಎಡವಟ್ಟಾಗಿ ಬಿಡುತ್ತದೆ .
ತಂದೆ ತಾಯಿಯ ಮಾತನ್ನು ಮಕ್ಕಳು ಕೆಲವೊಮ್ಮೆ ಕೇಳುವುದೇ ಇಲ್ಲ. ಇತರರ ಜೊತೆ ಬೆರೆಯುವುದೂ ಇಲ್ಲ. ತಮ್ಮ ನೋವು ಸಂಕಟಗಳನ್ನು ಬೇರೆಯವರ ಅಥವಾ ಮನೆಯವರ ಜೊತೆ ಹಂಚಿಕೊಳ್ಳುವುದೂ ಇಲ್ಲ. ಯಾವಾಗ ನೋಡಿದರೂ ಒಬ್ಬರೇ ಇರಲು ಬಯಸುತ್ತಾರೆ . ತಮ್ಮದೇ ಆದ ಪ್ರಪಂಚದಲ್ಲಿ ಜೀವಿಸುತ್ತಾರೆ . ಇಂತಹ ಹಠಾತ್ ಬದಲಾವಣೆ ಪೋಷಕರಲ್ಲಿ ಆತಂಕ ಹೆಚ್ಚುವಂತೆ ಮಾಡಿ ಏನು ಮಾಡಬೇಕೆಂದು ದಿಕ್ಕೇ ತೋಚದಂತೆ ಮಾಡುತ್ತದೆ . ಆರಂಭದಲ್ಲಿ ಯಾವುದೂ ಅರ್ಥ ಆಗುವುದಿಲ್ಲ . ಆದರೆ ದಿನ ಕಳೆದಂತೆ ಅದು ಹೆಚ್ಚಾಗಿ ತಂದೆ ತಾಯಿಯರ ಎದುರಿಗೇ ಮಕ್ಕಳ ಸುಂದರ ಭವಿಷ್ಯವನ್ನೇ ಬಲಿ ತೆಗೆದುಕೊಳ್ಳುತ್ತದೆ .
ಮಕ್ಕಳು ಪ್ರೌಡಾವಸ್ಥೆಗೆ ಬರುವ ಮೊದಲೇ ಈ ರೀತಿಯ ಮಾನಸಿಕ ಅಸ್ವಸ್ಥತೆ ಎದುರಾದರೆ ಅದನ್ನು ತಡಮಾಡದೆ ಮಾನಸಿಕ ತಜ್ಞರ ಬಳಿ ತೋರಿಸಿ ಸೂಕ್ತ ಚಿಕಿತ್ಸೆಯನ್ನು ಆದಷ್ಟು ಬೇಗನೆ ಪಡೆದುಕೊಳ್ಳ ಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಈ ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗುತ್ತಿತ್ತು
* ಉನ್ಮಾದ ವ್ಯತ್ಯಾಸಗಳು .
*ವರ್ಚಸ್ವೀ ಗುಣಲಕ್ಷಣಗಳು .
ಆದರೆ ಕಾಲ ಬದಲಾದಂತೆ ತಂತ್ರಜ್ಞಾನ ಮುಂದುವರೆದಂತೆ , ವಿಜ್ಞಾನಿಗಳ ಸಂಶೋಧನೆ ಹೆಚ್ಚಾದಂತೆ ಮಾನಸಿಕ ಅಸ್ವಸ್ಥತೆಯನ್ನು ಈ ಕೆಳಗಿನ ರೀತಿಯಲ್ಲಿ ವಿಂಗಡಣೆ ಮಾಡಿದ್ದಾರೆ.
*ಮಾನಸಿಕ ಯೋಗ ಕ್ಷೇಮ.
*ಮಾನಸಿಕ ಕಾಯಿಲೆ.
ಇಲ್ಲಿ ಗಮನಿಸಬೇಕು. ಇವೆರಡೂ ಬಹಳ ಅಪರೂಪದ ಸೂಕ್ತ ಗ್ರಹಿಸುವಿಕೆಗಾಗಿ ವಿಂಗಡಿಸಿದ ರೀತಿಗಳಷ್ಟೇ.
ಅಮೇರಿಕಾದಲ್ಲಿ ಮಕ್ಕಳ ಮೇಲೆ ನಡೆಯಿತು ಮಾನಸಿಕ ಖಾಯಿಲೆ ಪತ್ತೆ ಹಚ್ಚುವ ಈ ಪ್ರಯೋಗ ಸದ್ಯದ ವರದಿಯ ಪ್ರಕಾರ ಅಮೇರಿಕಾದಲ್ಲಿ ನಡೆದ ಅತಿ ದೊಡ್ಡ ಮಟ್ಟದ ಸಂಶೋಧನೆ ಇದು . ಈ ಸಂಶೋಧನೆಗೆ ವಿಜ್ಞಾನಿಗಳು ಸುಮಾರು ನಲವತ್ತ ಆರು ಮಿಲಿಯನ್ ನಷ್ಟು ಶಾಲಾ ವಯಸ್ಸಿನ ಮಕ್ಕಳನ್ನು ಬಳಸಿಕೊಂಡರು . ಸಂಶೋಧನೆಯ ನಂತರ ಅವರಿಗೆ ಸಿಕ್ಕ ಉತ್ತರ ಅಷ್ಟೂ ಜನ ಮಕ್ಕಳಲ್ಲಿ ಸುಮಾರು ಏಳೂವರೆ ಮಿಲಿಯನ್ ನಷ್ಟು ಮಕ್ಕಳು ಗುಣ ಪಡಿಸಬಹುದಾದಂತ ಮಾನಸಿಕ ಖಾಯಿಲೆಗೆ ತುತ್ತಾಗಿ ಅದಾಗಲೇ ಬಳಲುತ್ತಿದ್ದರು . ವಿಜ್ಞಾನಿಗಳು ಆ ಮಕ್ಕಳನ್ನು ಬೇರೆ ಮಾಡಿ ಅವರು ಈ ರೀತಿಯ ಖಾಯಿಲೆಗೆ ತುತ್ತಾಗಿರುವುದಕ್ಕೆ ಕಾರಣ ಏನಿರಬಹುದು ಎಂದು ಕೋನ್ಸೆಲ್ಲಿಂಗ್ ಮುಖಾಂತರ ಬಗೆ ಹರಿಸಿಕೊಳ್ಳಲು ಮುಂದಾದರು . ಆಗ ಅವರಿಗೆ ಸಿಕ್ಕ ವಿಷಯಗಳು ಈ ರೀತಿ ಇವೆ .
ಮಕ್ಕಳಲ್ಲಿ
*ಮಾನಸಿಕ ಉದ್ವೇಗ ಮತ್ತು ಮಾನಸಿಕ ಚಿಂತೆ .
*ಮನಸ್ಸಿನಲ್ಲಿ ಅಸಮಾನತೆ ಮನೆಮಾಡಿ ತಳಮಳ ಉಂಟಾಗಿರುವುದು .
*ಯಾವ ಕೆಲಸದಲ್ಲಿಯೂ ಆಸಕ್ತಿ ಇಲ್ಲದೆ ಚೈತನ್ಯ ಶಕ್ತಿ ಕಳೆದು ಕೊಂಡಿರುವುದು ಬೆಳಕಿಗೆ ಬಂದಿತು .
ಈ ಸಂಶೋಧನೆ ಮುಗಿದ ಮೇಲೆ ವಿಜ್ಞಾನಿಗಳಿಗೆ ಒಂದು ಅಚ್ಚರಿ ಮತ್ತು ಆಘಾತ ಕಾದಿತ್ತು . ಏನೆಂದರೆ ಮಾನಸಿಕ ರೋಗದಿಂದ ಬಳಲುತ್ತಿದ್ದ ಆ ಮಕ್ಕಳು ಅದುವರೆಗೂ ಯಾವ ವೈದ್ಯಕೀಯ ಚಿಕಿತ್ಸೆಯನ್ನಾಗಲೀ ಅಥವಾ ಇನ್ನಾವುದೇ ವೈದ್ಯಕೀಯ ಆರೈಕೆಯನ್ನಾಗಲೀ ಪಡೆಯದಿರುವುದು ಬಹಳ ಆಶ್ಚರ್ಯ ಉಂಟು ಮಾಡಿತು .
ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಸಹಾಯ ಹಸ್ತ
ಕೆಲವು ಆರೋಗ್ಯ ತಜ್ಞರ ಪ್ರಕಾರ , ಮಕ್ಕಳ ಭವಿಷ್ಯದ ಹಿತಾಸಕ್ತಿಯ ದೃಷ್ಟಿಯಿಂದ ತಮ್ಮ ಮಕ್ಕಳಿಗೆ ಎದುರಾದ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಬಗೆಹರಿಸಲು ಪೋಷಕರಿಂದ ಮತ್ತು ಸಮಾಜದಿಂದ ಮಾನಸಿಕ ವೈದ್ಯರ ಮೇಲೆ ಬಹಳ ಒತ್ತಡ ಎದುರಾಗುತ್ತಿದೆಯಂತೆ . ಅದಕ್ಕೆ ಕಾರಣಗಳು ಈ ರೀತಿ ಇವೆ :
*ಸಮಾಜದಲ್ಲಿ ಹಲವಾರು ಜನ ಬಡ ಜನರೇ ಆಗಿದ್ದು , ಅವರ ಬಳಿ ಚಿಕಿತ್ಸೆಗೆ ಹಣವಿರುವುದಿಲ್ಲದಿರುವುದು .
*ಹಲವಾರು ಮಂದಿಯಲ್ಲಿ ಚಿಕೆತ್ಸೆ ಎಲ್ಲಿ ಹೇಗೆ ಎಂಬ ಅರಿವಿನ ಕೊರತೆ ಎದ್ದು ಕಾಣುತ್ತಿರುವುದು .
*ಮಾನಸಿಕ ರೋಗಿಗಳ ಅನುಪಾತಕ್ಕೆ ತಕ್ಕಂತೆ ಮಾನಸಿಕ ವೈದ್ಯರ ಕೊರತೆ ಎಲ್ಲಾ ಕಡೆ ಇರುವುದು .
ಒಂದು ವೇಳೆ ಮಾನಸಿಕ ಚಿಕಿತ್ಸೆ ಲಭ್ಯವಾದರೆ ಮಕ್ಕಳಿಗೆ ಅದನ್ನು ಯಾವ ರೀತಿಯಲ್ಲಿ ನೀಡುತ್ತಾರೆಂದರೆ ,
* ಮಗುವನ್ನು ಒಂದು ಕೊಠಡಿಯಲ್ಲಿ ಕೂರಿಸಿ ಅದರ ಮಾನಸಿಕ ವರ್ತನೆಯ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು . ಮತ್ತು ಅದೇ ಮಗುವನ್ನು ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯಲು ಬಿಟ್ಟು ಅಲ್ಲಿ ಅದರ ಮಾನಸಿಕ ಗುಣ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುವುದು.
* ಮಾನಸಿಕ ರೋಗಕ್ಕೆ ತುತ್ತಾಗಿರುವ ಮಕ್ಕಳ ಪೋಷಕರಿಗೆ ಮತ್ತು ಮಕ್ಕಳಿಗೆ ಸಂಬಂಧಪಟ್ಟ ದೊಡ್ಡವರಿಗೆ ಮಕ್ಕಳ ವರ್ತನೆಯ ಬಗ್ಗೆ ತಿಳಿ ಹೇಳಿ ಜಾಗ್ರತೆ ಮೂಡಿಸುವುದು .
* ಸಾಮಾನ್ಯವಾಗಿ ಮಾನಸಿಕ ರೋಗ ಲಕ್ಷಣದ ಮಕ್ಕಳು ಇತರ ಮಕ್ಕಳ ಜೊತೆ ಕೂರುವುದಿಲ್ಲ . ಅಂತಹ ಮಕ್ಕಳಿಗೆ ಬೇರೆ ಕಡೆ ಶಿಕ್ಷಣದ ಸಹಾಯ ಒದಗಿಸುವುದು.
* ಶಾಲೆಯ ಆಡಳಿತ ಮಂಡಳಿಯಿಂದ ಅಂತಹ ಮಕ್ಕಳಿಗೋಸ್ಕರ ಒಬ್ಬ ನುರಿತ ಕೌನ್ಸಿಲರ್ ಗಳನ್ನು ನೇಮಿಸುವುದು .
* ಅವರಿಗೆ ವೈದ್ಯಕೀಯ ನೆರವನ್ನು ನೀಡುವುದು .
* ಅನೇಕ ಚಿಕಿತ್ಸಾ ವಿಧಾನಗಳನ್ನು ಪ್ರಯೋಗಿಸುವುದು.
" ಬಿ . ಎಂ . ಜೆ . ಓಪನ್ " ಎಂಬ ಜರ್ನಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ , ಇನ್ನೊಂದು ವಿಜ್ಞಾನಿಗಳ ಗುಂಪು ಕೇವಲ ೨೦ ಮಂದಿಯನ್ನು ಮಾನಸಿಕ ರೋಗಕ್ಕೆ ತುತ್ತಾಗಿರುವರೆಂಬ ಮೊದಲ ಲಕ್ಷಣಗಳಿಂದ ಪರೀಕ್ಷೆಗೆ ಅಂದರೆ ಸಂಶೋಧನೆಗೆ ಒಳಪಡಿಸಿತು . ಅಲ್ಲಿ ಅವರಿಗೆ ಕಂಡ ಸತ್ಯ ಏನೆಂದರೆ ಅವರೂ ಕೂಡ ಮಾನಸಿಕ ರೋಗಕ್ಕೆ ಗುರಿಯಾಗಿದ್ದರು . ಅವರಿಗೆ ಮಾನಸಿಕ ಖಾಯಿಲೆ ಬರಲು ಕಾರಣ ಗಳನ್ನು ಪತ್ತೆ ಹಚ್ಚಲು ಹೊರಟಾಗ ಅವರಿಗೆ ಸಿಕ್ಕ ಕೆಲವು ಸಂಗತಿಗಳು ಈ ರೀತಿ ಇವೆ :
ಮಾನಸಿಕ ರೋಗಿಗಳೆಂದು ದಾಖಲಾದವರು
* ಕುಡಿತದ ಚಟಕ್ಕೆ ದಾಸರಾಗಿದ್ದರು .
* ಕ್ಷಯ ರೋಗಕ್ಕೆ ತುತ್ತಾಗಿ ಸವೆದು ಹೋಗಿದ್ದರು .
* ಚಿಕ್ಕ ವಯಸ್ಸಿನಿಂದಲೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು .
* ಅಕಾಲಿಕ ಮತ್ತು ಶೀಘ್ರ ಸ್ಪಲನಕ್ಕೆ ಬಲಿಯಾದವರು .
* ದ್ವಿಲಿಂಗತ್ವ ಹೊಂದಿದವರು .
* ಡ್ರಗ್ಸ್ ಅಥವಾ ಮಾದಕ ವಸ್ತುಗಳಿಗೆ ದಾಸರಾಗಿದ್ದರು .
* ದೇಹದಲ್ಲಿ ಚೈತನ್ಯ ಶಕ್ತಿಯನ್ನೇ ಕಳೆದುಕೊಂಡವರು .
* ಹಠಾತ್ ಆಗಿ ಯಾವುದೋ ಆಘಾತಕ್ಕೆ ಒಳಗಾಗಿರುವವರು .
* ಬಾಜಿ ಕಟ್ಟಿ ಸೋತಿರುವವರು .
* ಭಿನ್ನ ವ್ಯಕ್ತಿತ್ವ ಹೊಂದಿರುವವರು .
* ಮಾನಸಿಕವಾಗಿ ಬಹಳ ಕುಗ್ಗಿ ಹೋಗಿರುವವರು .
* ಗಂಡು ಮತ್ತು ಹೆಣ್ಣು ಇಬ್ಬರ ಗುಣ ಲಕ್ಷಣ ಹೊಂದಿರುವವರು .
* ನಿದ್ದೆಯೇ ಬಾರದಿರುವವರು .
ಇವರಲ್ಲಿ ಶೇಕಡಾವಾರು ರೋಗಿಗಳು ಮತ್ತು ಅವರಿಗೆ ಬಂದಿದ್ದಂತ ಖಾಯಿಲೆಗೆ ಕಾರಣಗಳನ್ನು ಗಮನಿಸುವುದಾದರೆ ,
* 75 ರಷ್ಟು ಮಂದಿ ಆಟಿಸಂ ಅನ್ನು ಮಾನಸಿಕ ರೋಗ ಲಕ್ಷಣ ಎಂದು ಒಪ್ಪಿಕೊಂಡರೆ ಇನ್ನು ಉಳಿದವರು ದ್ವಿ ಲಿಂಗತ್ವ ಮಾನಸಿಕ ರೋಗಕ್ಕೆ ಕಾರಣವಾಯಿತು ಎಂದು ಯೋಚನೆ ಮಾಡಲೂ ತಯಾರಿರಲಿಲ್ಲ .
* ಶೇಖಡಾ 50 ರಿಂದ 75 ಮಂದಿ ಹಠಾತ್ ಆಗಿ ಆದ ಆಘಾತ , ಅಸಮಾನತೆಯನ್ನು ಮಾನಸಿಕ ರೋಗಗಳಿಗೆ ಕಾರಣ ಗಳೆಂದು ಒಪ್ಪಿಕೊಂಡರು .
* ಇದರಲ್ಲಿ ಕೆಲ ಮಂದಿ ಕುಡಿತ , ಮಾದಕ ವ್ಯಸನ , ಗ್ಯಾಂಬಲಿಂಗ್ , ನಿದ್ರಾ ಹೀನತೆ ಮತ್ತು ಕೆಲಸದ ಒತ್ತಡ ಮಾನಸಿಕ ಖಾಯಿಲೆಗಳಿಗೆ ಕಾರಣವಾಯಿತು ಎಂದು ಸಮ್ಮತಿ ಸೂಚಿಸಿದರು .
* ಕೆಲವು ಮಂದಿ ಈ ಸಮೀಕ್ಷೆಗಳನ್ನು ಒಪ್ಪಿಕೊಂಡು ಅದಕ್ಕೆ ಇನ್ನಷ್ಟು ಬಲಗೊಳ್ಳುವಂತೆ ಮಾಡಿ ಕುಗ್ಗುವಿಕೆಗೆ ಕಾರಣ ಇತರ ವೈದ್ಯರು , ಉಸ್ತುವಾರಿ ಸದಸ್ಯರು ಮತ್ತು ಸಂಸತ್ತಿನ ಸದಸ್ಯರ ನಡವಳಿಕೆಗಳು ಎಂದು ಸೂಚಿಸಿದರು .
ತಂದೆ ತಾಯಂದಿರಿಗೆ ಕೆಲವು ಮಾರ್ಗದರ್ಶನಗಳು :
* ಮಾನಸಿಕ ಅಸ್ವಸ್ಥತೆ ವಾಸಿಯಾಗದ ಖಾಯಿಲೆಯೇನೂ ಅಲ್ಲ . ವಾಸಿಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಅಷ್ಟೇ . ಆದ್ದರಿಂದ ಭಯ ಪಡಬೇಡಿ .
* ಮಾನಸಿಕ ರೋಗಿಗಳನ್ನು ಸಮಾಜ ಬೇರೆ ತರವೇ ನೋಡುತ್ತದೆ . ಹಾಗಾಗಿ ನೀವೂ ಅವರಂತೆಯೇ ನಡೆದುಕೊಳ್ಳಬೇಡಿ .
* ನಿಮ್ಮ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಗುವಿಗೆ ತಕ್ಷಣಕ್ಕೆ ಬೇಕಾಗಿರುವುದು ಸಾಂತ್ವನದ ಮಾತುಗಳು . ಅದನ್ನು ಬಿಟ್ಟು ಆ ಮಗು ಬೇರೇನನ್ನೂ ಅಪೇಕ್ಷಿಸುವುದಿಲ್ಲ . ಆದ್ದರಿಂದ ಮಗುವಿನ ಜೊತೆ ಮಾತನಾಡಿ ಅದರ ಜೊತೆಯಲ್ಲಿ ಇದ್ದು ಅದಕ್ಕೆ ಸಮಾಧಾನ ಮಾಡಿ .
* ನಿಮ್ಮಲ್ಲಿ ಇಂತಹ ಸಂದರ್ಭದಲ್ಲಿ ತಾಳ್ಮೆ ಬಹಳ ಮುಖ್ಯ . ಯಾವುದೇ ಕಾರಣಕ್ಕೂ ಮಗುವಿನ ಮೇಲೆ ಮಾನಸಿಕವಾಗಿ ಅಥವಾ ದೈಹಿಕವಾಗಿ ಹಲ್ಲೆ ನಡೆಸಬೇಡಿ . ಇದರಿಂದ ಅವರ ಮಾನಸಿಕ ಖಾಯಿಲೆ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ .
* ಮಕ್ಕಳನ್ನು ಸ್ನೇಹಿತರಂತೆ ಕಾಣಿ . ಏಕೆಂದರೆ ನಿಮಗೆ ಅವರಿಗಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ . ನೀವು ಪ್ರತಿ ದಿನ ಕಷ್ಟ ಪಟ್ಟು ದುಡಿಯುವುದು ಅವರಿಗೋಸ್ಕರವೇ ತಾನೇ .
* ಮಾನಸಿಕ ಅಸ್ವಸ್ಥತೆಯ ಮಕ್ಕಳು ಮಾಡುವ ಅವಾಂತರಗಳನ್ನು ಸಹಿಸಿಕೊಳ್ಳಿ . ಅದನ್ನು ಖಂಡನೆ ಮಾಡುವ ಬದಲು ಆದಷ್ಟು ಅವರನ್ನು ಅರ್ಥ ಮಾಡಿಕೊಳ್ಳಿ .
* ಮಗುವಿನ ಚಲನ ವಲನಗಳನ್ನು ಆಗಾಗ ಗಮನಿಸುತ್ತಿರಿ . ಅವರ ಪ್ರತಿ ಕ್ಷಣದ ವರ್ತನೆಗಳನ್ನು ವೈದ್ಯರ ಬಳಿ ತಿಳಿಸಿ ಹೇಳಿ . ಅವರಿಂದ ಸೂಕ್ತ ಚಿಕಿತ್ಸೆಗಳನ್ನು ನಿಮ್ಮ ಮಗುವಿಗೆ ಕೊಡಿಸಿ .



Click it and Unblock the Notifications











