Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವ್ಯಕ್ತಿಯ ವೃತ್ತಿಯನ್ನು ಆತನ ಬಾಲ್ಯ ನಿರ್ಧರಿಸಬಲ್ಲುದೇ?
ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ತಮ್ಮ ಪಾಲಕರಿಂದ ಪ್ರೀತಿ, ಕಾಳಜಿ ಮತ್ತು ಎಲ್ಲಾ ವಿಧದ ಸೌಕರ್ಯಗಳನ್ನು ಪಡೆದು ಬಾಲ್ಯವನ್ನು ಕಳೆದ ಮಕ್ಕಳು ಹಿರಿಯರಾದ ಬಳಿಕ ವೃತ್ತಿಯಲ್ಲಿ ಅತ್ಯುನ್ನತ ಸಾಧನೆ ಸಾಧಿಸುತ್ತಾರೆ.
ಅಲ್ಲದೇ ಹಿರಿಯರಾಗಿ ಈ ವ್ಯಕ್ತಿಗಳು ಹೆಚ್ಚು ಸಂತೃಪ್ತರೂ ಗೌರವಾನ್ವಿತರೂ ಆಗಿರುತ್ತಾರೆ. ಶಿಕ್ಷಣದಲ್ಲಿ ಉತ್ತಮ ಸಾಧನೆ, ಜೀವನದಲ್ಲಿ ಸಂತೋಷ, ವೃತ್ತಿರಂಗದಲ್ಲಿ ತೃಪ್ತಿ ಎಲ್ಲವೂ ಬಾಲ್ಯದಲ್ಲಿ ಪಾಲಕ ಪೋಷಕರಿಂದ ಸಿಕ್ಕ ಪ್ರೀತಿಗೆ ಪೂರಕವಾಗಿವೆ ಎಂದು ಈ ಸಂಶೋಧನೆ ತಿಳಿಸುತ್ತದೆ.

ವೃತ್ತಿರಂಗದಲ್ಲಿ ಉನ್ನತ ಸಾಧನೆ ಸಾಧಿಸಿದ ಕೆಲವು ವ್ಯಕ್ತಿಗಳು ಬಾಲ್ಯದಲ್ಲಿ ತಮ್ಮ ಪಾಲಕರ ಕಟ್ಟುನಿಟ್ಟಿನ ನಿಯಮಗಳಲ್ಲಿ ಬಂಧಿತರಾಗಿದ್ದು ಕಂಡುಬಂದರೂ ಇವರು ಜೀವನವನ್ನು ಸುಖವಾಗಿ ಅನುಭವಿಸುವುದರಲ್ಲಿ ಅಥವಾ ಸಂತೋಷಪಡುವುದರಲ್ಲಿ ಇತರರಿಗಿಂತ ಹಿಂದಿರುತ್ತಾರೆ ಎಂದು ಈ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.
ಆದ್ದರಿಂದ ಅತ್ಯುತ್ತಮ ಅಂಕ ಬೇಕೇ ಬೇಕು ಎಂದು ಮಕ್ಕಳ ಮೇಲೆ ಅಪಾರ ಒತ್ತಡ ಹೇರುವ ಪಾಲಕರ ಕ್ರಮದ ಪರಿಣಾಮದಿಂದಲೂ ಈ ಮಕ್ಕಳು ಹಿರಿಯರಾದ ಬಳಿಕ ಹೆಚ್ಚು ಸಂತುಷ್ಟರಾಗಿರುವುದಿಲ್ಲ. ಈ ಸಂಶೋಧನೆಯಲ್ಲಿ ತಜ್ಞರು ಸುಮಾರು ಐದು ಸಾವಿರಕ್ಕೂ ಹೆಚ್ಚು ವಿವಿಧ ಶ್ರೇಣಿಯ ವ್ಯಕ್ತಿಗಳನ್ನು ಭೇಟಿಯಾಗಿ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದು ವಿಶ್ಲೇಷಿಸಿ ಮೇಲಿನ ತೀರ್ಮಾನಕ್ಕೆ ಬರಲಾಗಿದೆ.
ಇದರಲ್ಲಿ ವಿಶೇಷವಾಗಿ ಬಾಲ್ಯದಲ್ಲಿ ತಂದೆ ತಾಯಿಯರು, ಹಿರಿಯರು, ಶಿಕ್ಷಕರು ಅವರನ್ನು ನಡೆಸಿಕೊಂಡಿದ್ದ ರೀತಿಯ ಬಗ್ಗೆ ಅಪಾರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಆದ್ದರಿಂದ ವೃತ್ತಿಜೀವನದಲ್ಲಿ ಉನ್ನತ ಸಾಧನೆ ಸಾಧಿಸಿದರೂ ವೈಯಕ್ತಿಕವಾಗಿ ಅಸುಖಿಗಳಾಗಿರಲು ಬಾಲ್ಯದ ಕಟ್ಟುಪಾಡು ಪ್ರಮುಖ ಕಾರಣವಾಗಿದೆ.
ಇದಕ್ಕೆ ತದ್ವಿರುದ್ಧವಾಗಿ ಬಾಲ್ಯದಲ್ಲಿ ಪಾಲಕರ ಪೋಷಕರ ಪ್ರೀತಿಯನ್ನು ಪಡೆದವರು ಉನ್ನತ ಪದವನ್ನು ಪಡೆದರೂ ಪಡೆಯದಿದ್ದರೂ ತಮ್ಮ ಪಾಲಿನ ಜೀವನವನ್ನು ಸಂತುಷ್ಟರಾಗಿ, ಸದಾ ನೆಮ್ಮದಿಯಿಂದ ಸವೆಸುತ್ತಿರುತ್ತಾರೆ.



Click it and Unblock the Notifications



