Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಂದು ಸೋಮಾವತಿ ಅಮಾವಾಸ್ಯೆ: ಇದರ ಮಹತ್ವ ಹಾಗೂ ಪ್ರಯೋಜನಗಳು
ಇಂದು ಸೋಮಾವತಿ ಸೋಮಾವತಿ ಅಮಾವಾಸ್ಯೆ, ಇತರ ಅಮಾವಾಸ್ಯೆಗಿಂತ ಈ ಅಮವಾಸ್ಯೆ ತುಂಬಾ ವಿಶೇಷವಾದದ್ದು. ಇದು ವರ್ಷದ ಮೊದಲ ಹಾಗೂ ಕೊನೆಯ ಸೋಮಾವತಿ ಅಮವಾಸ್ಯೆಯಾಗಿದೆ. ಅಮಾವಾಸ್ಯೆ ಸೋಮಾವಾರದಂದು ಬಂದರೆ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುವುದು.
ಈ ಸೋಮಾವತಿ ಅಮವಾಸ್ಯೆಗೆ ಪಿತೃಗಳಿಗೆ ಭೋಜನ, ಜ ಅರ್ಪಿಸಬೇಕು, ಈ ದಿನ ಪಿತೃರನ್ನು ಸಂತೃಪ್ತ ಗೊಳಿಸಲು ಸೂಕ್ತ ಏಕೆ, ಈ ದಿನ ಏನು ಮಾಡಬೇಕು, ಹಣ, ಸಂಪತ್ತು ವೃದ್ಧಿಗೆ ಈ ದಿನ ಯಾವ ದೇವರನ್ನು ಪೂಜಿಸಬೇಕು ಮುಂತಾದ ಮಾಹಿತಿ ಇಲ್ಲಿದೆ:

ಪಿತೃ ಕಾರ್ಯಗಳಿಗೆ ಅಮಾವಾಸ್ಯೆ ಸರ್ವಶ್ರೇಷ್ಠ
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಅದರಲ್ಲೂ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ತುಂಬಾನೇ ಪುಣ್ಯ ಸಿಗುತ್ತದೆ, ಇಲ್ಲದಿದ್ದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಬೇಕು, ನಂತರ ಪೂರ್ವಜರಿಗೆ ಭೋಜನ, ವಸ್ತ್ರ ಜಲದಾನ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ.
ಈ ಬಾರಿ ಸೋಮಾವತಿ ಅಮಾವಾಸ್ಯೆ ಕುಂಭ ಮೇದ ಎರಡನೇ ಸ್ನಾನ ಕೂಡ ಬಂದಿರುವುದರಿಂದ ಈ ಅಮವಾಸ್ಯೆಗೆ ಮತ್ತಷ್ಟು ಮಹತ್ವ ಬಂದಿದೆ.

ಪಿತೃರನ್ನು ಸಂತೃಪ್ತಗೊಳಿಸುವುದು ಹೇಗೆ?
ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ನೀಡಿ, ಮನೆಯಲ್ಲಿಯೇ ಭೋಜನ ಮಾಡಿ ಅವರಿಗೆ ಭೋಜನ ಹಾಗೂ ಜಲವನ್ನು ಅರ್ಪಿಸಲಾಗುವುದು. ಅಲ್ಲದೆ ಈ ದಿನ ಮನೆಯಲ್ಲಿರುವ ಹಿರಿಯ ಸದಸ್ಯರ ಸೇವೆಯಿಂದಲೂ ಪಿತೃರನ್ನು ಸಂತೃಪ್ತಗೊಳಿಸಬಹುದು.

ಈ ಅಮಾವಾಸ್ಯೆ ಆಚರಿಸುವುದರಿಂದ ದೊರೆಯುವ ಪ್ರಯೋಜನಗಳು
ಈ ಅಮವಾಸ್ಯೆಯಂದು ಪಿತೃಗಳ ಆಶೀರ್ವಾದ ಸಿಕ್ಕರೆ ನಮ್ಮೆಲ್ಲಾ ದೋಷಗಳಿಂದ ಮುಕ್ತಿ ಸಿಗುವುದು. ಅಲ್ಲದೆ ಈ ದಿನ ಬೆಳಗ್ಗೆ ಮತ್ತು ಸಂಜೆ ಲಕ್ಷ್ಮೀಯನ್ನು ಪೂಜಿಸಬೇಕು. ಇದರಿಂದ ಸಂಪತ್ತು ವೃದ್ಧಿಯಾಗುವುದು.

ಧಾರ್ಮಿಕ ಕಾರ್ಯ ಹಾಗೂ ದಾನ ಮಾಡಬೇಕು
ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಸೋಮಾವತಿ ಅಮಾವಾಸ್ಯೆ ಬಂದರೆ ಆ ದಿನ ನಾವು ದಾನ ಮಾಡುವುದರಿಂದ, ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಬರುತ್ತದೆ. ಇಂಥ ದಿನಗಳಲ್ಲಿ ಜಾತ್ರೆಗಳನ್ನು ಮಾಡಲಾಗಿತ್ತು, ಆದರೆ ಈ ವರ್ಷ ಕೊರೊನ ಕಾರಣ ಜಾತ್ರೆಯ ಸಡಗರ ಇರಲ್ಲ.



Click it and Unblock the Notifications