Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಇಂದು ಸೋಮಾವತಿ ಅಮಾವಾಸ್ಯೆ: ಇದರ ಮಹತ್ವ ಹಾಗೂ ಪ್ರಯೋಜನಗಳು
ಇಂದು ಸೋಮಾವತಿ ಸೋಮಾವತಿ ಅಮಾವಾಸ್ಯೆ, ಇತರ ಅಮಾವಾಸ್ಯೆಗಿಂತ ಈ ಅಮವಾಸ್ಯೆ ತುಂಬಾ ವಿಶೇಷವಾದದ್ದು. ಇದು ವರ್ಷದ ಮೊದಲ ಹಾಗೂ ಕೊನೆಯ ಸೋಮಾವತಿ ಅಮವಾಸ್ಯೆಯಾಗಿದೆ. ಅಮಾವಾಸ್ಯೆ ಸೋಮಾವಾರದಂದು ಬಂದರೆ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುವುದು.
ಈ ಸೋಮಾವತಿ ಅಮವಾಸ್ಯೆಗೆ ಪಿತೃಗಳಿಗೆ ಭೋಜನ, ಜ ಅರ್ಪಿಸಬೇಕು, ಈ ದಿನ ಪಿತೃರನ್ನು ಸಂತೃಪ್ತ ಗೊಳಿಸಲು ಸೂಕ್ತ ಏಕೆ, ಈ ದಿನ ಏನು ಮಾಡಬೇಕು, ಹಣ, ಸಂಪತ್ತು ವೃದ್ಧಿಗೆ ಈ ದಿನ ಯಾವ ದೇವರನ್ನು ಪೂಜಿಸಬೇಕು ಮುಂತಾದ ಮಾಹಿತಿ ಇಲ್ಲಿದೆ:

ಪಿತೃ ಕಾರ್ಯಗಳಿಗೆ ಅಮಾವಾಸ್ಯೆ ಸರ್ವಶ್ರೇಷ್ಠ
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಅದರಲ್ಲೂ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ತುಂಬಾನೇ ಪುಣ್ಯ ಸಿಗುತ್ತದೆ, ಇಲ್ಲದಿದ್ದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲ ಹಾಕಿ ಸ್ನಾನ ಮಾಡಬೇಕು, ನಂತರ ಪೂರ್ವಜರಿಗೆ ಭೋಜನ, ವಸ್ತ್ರ ಜಲದಾನ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ.
ಈ ಬಾರಿ ಸೋಮಾವತಿ ಅಮಾವಾಸ್ಯೆ ಕುಂಭ ಮೇದ ಎರಡನೇ ಸ್ನಾನ ಕೂಡ ಬಂದಿರುವುದರಿಂದ ಈ ಅಮವಾಸ್ಯೆಗೆ ಮತ್ತಷ್ಟು ಮಹತ್ವ ಬಂದಿದೆ.

ಪಿತೃರನ್ನು ಸಂತೃಪ್ತಗೊಳಿಸುವುದು ಹೇಗೆ?
ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ನೀಡಿ, ಮನೆಯಲ್ಲಿಯೇ ಭೋಜನ ಮಾಡಿ ಅವರಿಗೆ ಭೋಜನ ಹಾಗೂ ಜಲವನ್ನು ಅರ್ಪಿಸಲಾಗುವುದು. ಅಲ್ಲದೆ ಈ ದಿನ ಮನೆಯಲ್ಲಿರುವ ಹಿರಿಯ ಸದಸ್ಯರ ಸೇವೆಯಿಂದಲೂ ಪಿತೃರನ್ನು ಸಂತೃಪ್ತಗೊಳಿಸಬಹುದು.

ಈ ಅಮಾವಾಸ್ಯೆ ಆಚರಿಸುವುದರಿಂದ ದೊರೆಯುವ ಪ್ರಯೋಜನಗಳು
ಈ ಅಮವಾಸ್ಯೆಯಂದು ಪಿತೃಗಳ ಆಶೀರ್ವಾದ ಸಿಕ್ಕರೆ ನಮ್ಮೆಲ್ಲಾ ದೋಷಗಳಿಂದ ಮುಕ್ತಿ ಸಿಗುವುದು. ಅಲ್ಲದೆ ಈ ದಿನ ಬೆಳಗ್ಗೆ ಮತ್ತು ಸಂಜೆ ಲಕ್ಷ್ಮೀಯನ್ನು ಪೂಜಿಸಬೇಕು. ಇದರಿಂದ ಸಂಪತ್ತು ವೃದ್ಧಿಯಾಗುವುದು.

ಧಾರ್ಮಿಕ ಕಾರ್ಯ ಹಾಗೂ ದಾನ ಮಾಡಬೇಕು
ಫಾಲ್ಗುಣ ಅಥವಾ ಚೈತ್ರ ಮಾಸದಲ್ಲಿ ಸೋಮಾವತಿ ಅಮಾವಾಸ್ಯೆ ಬಂದರೆ ಆ ದಿನ ನಾವು ದಾನ ಮಾಡುವುದರಿಂದ, ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಬರುತ್ತದೆ. ಇಂಥ ದಿನಗಳಲ್ಲಿ ಜಾತ್ರೆಗಳನ್ನು ಮಾಡಲಾಗಿತ್ತು, ಆದರೆ ಈ ವರ್ಷ ಕೊರೊನ ಕಾರಣ ಜಾತ್ರೆಯ ಸಡಗರ ಇರಲ್ಲ.



Click it and Unblock the Notifications