Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸೂರ್ಯ ಗ್ರಹಣದ ನಂತರ ಈ ನಾಲ್ಕು ರಾಶಿಗಳ ಅದೃಷ್ಟವೇ ಬದಲಾಗಲಿದೆ!

ಗ್ರಹಣಕ್ಕೆ ಹಿಂದೂ ಪಂಚಾಗದಲ್ಲಿ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ. ಪ್ರಕೃತಿಯ ಸಮತೋಲನವನ್ನು ಕಾಪಾಡುವ ಸೂರ್ಯ ಮತ್ತು ಚಂದ್ರರಿಗೆ ಗ್ರಹಣ ಉಂಟಾದರೆ ವಾತಾವರಣದಲ್ಲಿ ಮಾಲಿನ್ಯ ಅಥವಾ ಅಶುಚಿಯುಂಟಾಗುವುದು ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಉಪವಾಸ ಗೈದು, ದೇವರ ನಾಮವನ್ನು ಸ್ಮರಿಸುತ್ತಾ ಭಕ್ತಿ ಭಾವದಲ್ಲಿ ಲೀನವಾಗಬೇಕು. ಆಗ ನಮ್ಮ ಸುತ್ತಮುತ್ತಲಲ್ಲಿ ನಡೆಯುವ ಅನೇಕ ಅನಾಹುತಗಳನ್ನು ತಪ್ಪಿಸಬಹುದು ಎನ್ನುವ ನಂಬಿಕೆ ಇರುವುದನ್ನು ಕಾಣಬಹುದು.
ಗ್ರಹಣವು ಕೆಲವು ರಾಶಿಗಳ ಮೇಲೆ ಹಿಡಿದಾಗ, ಆ ರಾಶಿಯಲ್ಲಿ ಜನಿಸಿದವರು ದೀಪದ ಕಾಣಿಯನ್ನು ದಾನ ಮಾಡಬೇಕು. ಆಗ ದೋಷಗಳು ಪರಿಹಾರವಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಗ್ರಹಣದಿಂದಾಗಿ ಹೇಗೆ ಪರಿಸರದಲ್ಲಿ ಕಲುಶಿತತೆ ಉಂಟಾಗುವುದೋ ಹಾಗೆಯೇ ರಾಶಿಚಕ್ರದ ಮೇಲೂ ಮಹತ್ತರವಾದ ಬದಲಾವಣೆಗಳು ಸಂಭವಿಸುವುದು. ಇವು ವ್ಯಕ್ತಿಯ ನಿತ್ಯದ ಜೀವನದ ಮೇಲೆ ಪ್ರಭಾವ ಬೀರುವುದು.
ಜುಲೈ 13ರಂದು ಸೂರ್ಯ ಗ್ರಹಣ ಹಾಗೂ ಜುಲೈ 27ರಂದು ಚಂದ್ರ ಗ್ರಹಣವು ಸಂಭವಿಸಲಿದೆ. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಕಾಣಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಈ ಬದಲಾವಣೆಯ ಜೊತೆಗೆ ಮಂಗಳ, ಪ್ಲುಟೋ, ನೆಪ್ಚೂನ್, ಶನಿ, ಗುರು ಈ ಐದು ಗ್ರಹಗಳು ವಿಭಿನ್ನ ಬದಲಾವಣೆಯನ್ನು ಪಡೆದುಕೊಳ್ಳುತ್ತದೆ. ಇದರ ಪರಿಣಾಮವು ಕೆಲವು ರಾಶಿಚಕ್ರದವರ ಮೇಲೆ ಗಂಭೀರ ಪ್ರಭಾವ ಬೀರುವುದು ಎಂದು ಅಂದಾಜಿಸಲಾಗಿದೆ. ಗ್ರಹಣ ಹಾಗೂ ಗ್ರಹಗತಿಗಳ ಪ್ರಭಾವ ನಿಮ್ಮ ರಾಶಿಚಕ್ರದ ಮೇಲೆ ಪ್ರಭಾವ ಬೀರುವುದೇ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಕರ್ಕ
ಈ ರಾಶಿಚಕ್ರದವರು ಗ್ರಹಗತಿಗಳ ಪ್ರಭಾವದಿಂದಾಗಿ ಊಹಿಸಲಾಗದಂತಹ ಆಶ್ವರ್ಯಕರ ಬದಲಾವಣೆಯನ್ನು ಕಾಣುವರು. ತಮ್ಮ ವಯಸ್ಸಿಗಿಂತ ಮಿಗಿಲಾದ ರೀತಿಯಲ್ಲಿ ಶಾಂತತೆಯನ್ನು ಅನುಸರಿಸುವರು. ಸಾಕಷ್ಟು ತೊಡಕು ಅಥವಾ ಅಡ್ಡಿಗಳು ಎದುರಾದರೂ ಅಂತಿಮವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಕೆಲವು ಪ್ರದೇಶಗಳಿಗೆ ನೀವು ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ ಅಥವಾ ಉತ್ತಮ ಚಿಕಿತ್ಸೆಗೆ ಒಳಗಾಗುವಿರಿ. ಆಧ್ಯಾತ್ಮಿಕ ಚಿಂತನೆಯ ಕಡೆಗೆ ಗಮನವನ್ನು ಕೇಂದ್ರೀಕರಿಸಿ. ಆಗಾಗ ನಿಮ್ಮ ಸ್ನೇಹಿತರೊಂದಿಗೆ ಸಮಯವನ್ನು ಕಳೆಯಿರಿ. ಆಗ ಒಂದಷ್ಟು ಸುಂದರ ಅನುಭವವನ್ನು ಹೊಂದುವಿರಿ.

ಸಿಂಹ
ಈ ತಿಂಗಳು ನೀವು ಕೆಲವು ಕುತೂಹಲಕಾರಿ ಅಥವಾ ಪತ್ತೆದಾರಿ ಆಟವನ್ನು ಆಡುವ ಸಾಧ್ಯತೆಗಳಿವೆ. ಕೆಲವು ರಹಸ್ಯವನ್ನು ಅರಿಯಲು ಪ್ರಯತ್ನಿಸುವಿರಿ. ಅಂತಿಮವಾಗಿ ಅದಕ್ಕೆ ಸೂಕ್ತ ಉತ್ತರವನ್ನು ಪಡೆದುಕೊಳ್ಳುವರು. ಕೈಗೊಳ್ಳುವ ಕೆಲಸದಲ್ಲಿ ಸಂತೋಷವಾಗಿಯೇ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಒಲವು ತೋರುವಿರಿ. ನಿಮ್ಮ ನಂಬಿಕೆಗಳು ಪುನಃ ಸ್ಥಾಪನೆಗೊಳ್ಳುವುದು.

ಧನು
ಈ ತಿಂಗಳು ನೀವು ನಿಮ್ಮ ಶಕ್ತಿಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವಿರಿ. ನಿಧಾನವಾಗಿ ನಿಮ್ಮ ಉದ್ದೇಶ, ಕನಸು ಹಾಗೂ ಗುರಿಯ ಬಗ್ಗೆ ಪರಿಶೀಲಿಸಿ. ಆಗ ನೀವು ನಿಮ್ಮ ಕನಸಿನ ಜೀವನವನ್ನು ಪಡೆಯಬಹುದು. ನಿಮ್ಮ ವೈಯಕ್ತಿಕ ಜೀವನ ಮತ್ತು ನಿಮ್ಮ ಸಂತೋಷವನ್ನು ನೀವೇ ಕಂಡುಕೊಂಡರೆ ಎಲ್ಲವೂ ಉತ್ತಮವಾಗಿರುತ್ತದೆ. ಪ್ರತಿಯೊಂದು ವಿಚಾರದ ಬಗ್ಗೆಯೂ ಪ್ರಾಥಮಿಕ ಚಿಂತನೆ ನಡೆಸಿ. ಸಂತೋಷದ ಮಾರ್ಗವನ್ನು ಅಪ್ಪಿಕೊಂಡರೆ ನಿಮ್ಮ ಮಾರ್ಗವು ಸುಗಮವಾಗುವುದು.

ಕುಂಭ
ಇವರು ಜುಲೈ ತಿಂಗಳಲ್ಲಿ ಪರಿಸ್ಥಿತಿ ಹಾಗೂ ಅವಕಾಶಗಳು ಸಿಕ್ಕ ಹಾಗೆ ಜಾರಿಕೊಳ್ಳಬೇಕು. ಇದೀಗ ಜೀವನದಲ್ಲಿ ಸಂತೋಷವನ್ನು ಹೊಂದಲು ಅರ್ಹರಾಗಿದ್ದೀರಿ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸಂತೋಷವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಆಗ ನೀವು ಹೆಚ್ಚು ಆನಂದದಿಂದ ಇರಬಹುದು ಎಂದು ಹೇಳಲಾಗುವುದು. ಜೀವನದ ಚಿಕ್ಕ ಬದಲಾವಣೆಯು ಹೆಚ್ಚು ಸಂತೋಷವನ್ನು ನೀಡುವುದು. ಗ್ರಹಗಳ ಹಿಮ್ಮುಖ ಚಲನೆಯು ಒಂದಿಷ್ಟು ತೊಡಕನ್ನು ತಂದೊಡ್ಡಬಹುದು. ಅಂತಹ ಸಂದರ್ಭದಲ್ಲಿ ಸೂಕ್ತ ನಿರ್ವಹಣೆ ನಡೆಸುವ ಜಾಣ್ಮೆಯನ್ನು ನೀವು ವಹಿಸಬೇಕು.



Click it and Unblock the Notifications











