Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಕನ್ನಡಿಯನ್ನು ಒಡೆದರೆ ಏಳು ವರ್ಷಗಳ ದುರಾದೃಷ್ಟವಂತೆ ಹೌದೇ?
ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ?
ಅಪಶಕುನಗಳ ಬಗ್ಗೆ ಭಾರತದಲ್ಲಿದ್ದಷ್ಟು ನಂಬಿಕೆಗೆಳು ಪ್ರಾಯಶಃ ಬೇರೆಲ್ಲೂ ಇರಲಾರದು. ಉದಾಹರಣೆಗೆ ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ? ಇದಕ್ಕೆ ಕಾರಣಗಳನ್ನು ಇಂದಿನ ಲೇಖನದಲ್ಲಿ ನೋಡೋಣ. ಮೂಢನಂಬಿಕೆಗಳನ್ನೆಲ್ಲಾ ನಂಬಬೇಡಿ ಪ್ಲೀಸ್, ಅದೆಲ್ಲಾ ಭ್ರಮೆ ಅಷ್ಟೇ!
ಪುರಾತನ ಹೇಳಿಕೆಗಳ ಪ್ರಕಾರ ದುರ್ವಿಧಿ ಏಳು ವರ್ಷ ಕಾಡುತ್ತದೆ ಹಾಗೂ ಇದಕ್ಕೆ ಸೂಕ್ತ ಪ್ರತಿರೋಧವನ್ನು ಒಡ್ಡದೇ ಇದ್ದರೆ ಇದು ಏಳು ವರ್ಷಗಳವರೆಗೆ ದುರ್ವಿಧಿಯನ್ನು ಅನುಭವಿಸಬೇಕಾಗಿ ಬರಬಹುದು. ಅಷ್ಟಕ್ಕೂ ಕನ್ನಡಿ ಒಡೆಯುವುದರಿಂದ ದುರ್ವಿಧಿ ಎದುರಾಗುವ ಕಾರಣಗಳೇನು? ನೋಡೋಣ...

ಈ ನಂಬಿಕೆಯನ್ನು ಪ್ರಾರಂಭಿಸಿದವರು ರೋಮನ್ನರು
ಈ ಬಗ್ಗೆ ವಿವರಗಳನ್ನು ಕೆದಕುತ್ತಾ ಹೋದರೆ ಕನ್ನಡಿಯ ಆವಿಷ್ಕಾರ ಮಾಡಿದ ರೋಮನ್ನರೇ ಈ ನಂಬಿಕೆಯನ್ನು ಹುಟ್ಟುಹಾಕಿದರು ಎಂದು ತಿಳಿದುಬರುತ್ತದೆ.

ಇತರ ನಂಬಿಕೆಗಳ ಪ್ರಕಾರ....
ರೋಮನ್ನರು, ಗ್ರೀಕರು, ಚೀನೀಯರು, ಆಫ್ರಿಕನ್ನರು ಮತ್ತು ಭಾರತೀಯರು ತಮ್ಮ ತಮ್ಮ ಸಂಪ್ರದಾಯದಲ್ಲಿ ಒಡೆದ ಕನ್ನಡಿ ಉಪಯೋಗಿಸುವಾತನ ಆತ್ಮವನ್ನು ಸ್ವಾಧೀನಗೊಳಿಸುವ ಶಕ್ತಿ ಹೊಂದಿರುತ್ತದೆ ಎಂದು ನಂಬಿಕೊಂಡು ಬಂದಿದ್ದಾರೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಒಂದು ವೇಳೆ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಯಾವುದೇ ರೀತಿಯಲ್ಲಿ ವಿರೂಪಗೊಂಡಿದ್ದರೆ ಇದರ ಅರ್ಥ ಆ ವ್ಯಕ್ತಿಯ ಆತ್ಮ ಭ್ರಷ್ಟವಾಗಿದೆ ಎಂದು ತಿಳಿಯಲಾಗುತ್ತದೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಈ ವ್ಯಕ್ತಿ ಕನ್ನಡಿಯನ್ನು ಒಡೆದರೆ ಈತನ ಭ್ರಷ್ಟ ಆತ್ಮದ ಒಂದು ಭಾಗ ಈ ಕನ್ನಡಿಯಲ್ಲಿ ಬಂಧಿತವಾಗುತ್ತದೆ ಎಂದು ನಂಬಲಾಗಿದೆ.

ಈ ತೊಂದರೆಯ ನಿವಾರಣೆಗೆ ಏನು ಮಾಡಬೇಕು?
ಒಡೆದ ಕನ್ನಡಿ ಒಡೆದ ಆತ್ಮದ ಪ್ರತೀಕವಾಗಿರುವ ಕಾರಣ ಒಡೆದ ಕನ್ನಡಿಯ ತುಣುಕುಗಳನ್ನು ಯಾರಿಗೂ ಹಾನಿಯಾಗದ ಸ್ಥಳದಲ್ಲಿ ವಿಸರ್ಜಿಸುವುದೇ ಉತ್ತಮ. ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!



Click it and Unblock the Notifications