Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಕನ್ನಡಿಯನ್ನು ಒಡೆದರೆ ಏಳು ವರ್ಷಗಳ ದುರಾದೃಷ್ಟವಂತೆ ಹೌದೇ?
ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ?
ಅಪಶಕುನಗಳ ಬಗ್ಗೆ ಭಾರತದಲ್ಲಿದ್ದಷ್ಟು ನಂಬಿಕೆಗೆಳು ಪ್ರಾಯಶಃ ಬೇರೆಲ್ಲೂ ಇರಲಾರದು. ಉದಾಹರಣೆಗೆ ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ? ಇದಕ್ಕೆ ಕಾರಣಗಳನ್ನು ಇಂದಿನ ಲೇಖನದಲ್ಲಿ ನೋಡೋಣ. ಮೂಢನಂಬಿಕೆಗಳನ್ನೆಲ್ಲಾ ನಂಬಬೇಡಿ ಪ್ಲೀಸ್, ಅದೆಲ್ಲಾ ಭ್ರಮೆ ಅಷ್ಟೇ!
ಪುರಾತನ ಹೇಳಿಕೆಗಳ ಪ್ರಕಾರ ದುರ್ವಿಧಿ ಏಳು ವರ್ಷ ಕಾಡುತ್ತದೆ ಹಾಗೂ ಇದಕ್ಕೆ ಸೂಕ್ತ ಪ್ರತಿರೋಧವನ್ನು ಒಡ್ಡದೇ ಇದ್ದರೆ ಇದು ಏಳು ವರ್ಷಗಳವರೆಗೆ ದುರ್ವಿಧಿಯನ್ನು ಅನುಭವಿಸಬೇಕಾಗಿ ಬರಬಹುದು. ಅಷ್ಟಕ್ಕೂ ಕನ್ನಡಿ ಒಡೆಯುವುದರಿಂದ ದುರ್ವಿಧಿ ಎದುರಾಗುವ ಕಾರಣಗಳೇನು? ನೋಡೋಣ...

ಈ ನಂಬಿಕೆಯನ್ನು ಪ್ರಾರಂಭಿಸಿದವರು ರೋಮನ್ನರು
ಈ ಬಗ್ಗೆ ವಿವರಗಳನ್ನು ಕೆದಕುತ್ತಾ ಹೋದರೆ ಕನ್ನಡಿಯ ಆವಿಷ್ಕಾರ ಮಾಡಿದ ರೋಮನ್ನರೇ ಈ ನಂಬಿಕೆಯನ್ನು ಹುಟ್ಟುಹಾಕಿದರು ಎಂದು ತಿಳಿದುಬರುತ್ತದೆ.

ಇತರ ನಂಬಿಕೆಗಳ ಪ್ರಕಾರ....
ರೋಮನ್ನರು, ಗ್ರೀಕರು, ಚೀನೀಯರು, ಆಫ್ರಿಕನ್ನರು ಮತ್ತು ಭಾರತೀಯರು ತಮ್ಮ ತಮ್ಮ ಸಂಪ್ರದಾಯದಲ್ಲಿ ಒಡೆದ ಕನ್ನಡಿ ಉಪಯೋಗಿಸುವಾತನ ಆತ್ಮವನ್ನು ಸ್ವಾಧೀನಗೊಳಿಸುವ ಶಕ್ತಿ ಹೊಂದಿರುತ್ತದೆ ಎಂದು ನಂಬಿಕೊಂಡು ಬಂದಿದ್ದಾರೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಒಂದು ವೇಳೆ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಯಾವುದೇ ರೀತಿಯಲ್ಲಿ ವಿರೂಪಗೊಂಡಿದ್ದರೆ ಇದರ ಅರ್ಥ ಆ ವ್ಯಕ್ತಿಯ ಆತ್ಮ ಭ್ರಷ್ಟವಾಗಿದೆ ಎಂದು ತಿಳಿಯಲಾಗುತ್ತದೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಈ ವ್ಯಕ್ತಿ ಕನ್ನಡಿಯನ್ನು ಒಡೆದರೆ ಈತನ ಭ್ರಷ್ಟ ಆತ್ಮದ ಒಂದು ಭಾಗ ಈ ಕನ್ನಡಿಯಲ್ಲಿ ಬಂಧಿತವಾಗುತ್ತದೆ ಎಂದು ನಂಬಲಾಗಿದೆ.

ಈ ತೊಂದರೆಯ ನಿವಾರಣೆಗೆ ಏನು ಮಾಡಬೇಕು?
ಒಡೆದ ಕನ್ನಡಿ ಒಡೆದ ಆತ್ಮದ ಪ್ರತೀಕವಾಗಿರುವ ಕಾರಣ ಒಡೆದ ಕನ್ನಡಿಯ ತುಣುಕುಗಳನ್ನು ಯಾರಿಗೂ ಹಾನಿಯಾಗದ ಸ್ಥಳದಲ್ಲಿ ವಿಸರ್ಜಿಸುವುದೇ ಉತ್ತಮ. ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!



Click it and Unblock the Notifications