Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ಕನ್ನಡಿಯನ್ನು ಒಡೆದರೆ ಏಳು ವರ್ಷಗಳ ದುರಾದೃಷ್ಟವಂತೆ ಹೌದೇ?
ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ?
ಅಪಶಕುನಗಳ ಬಗ್ಗೆ ಭಾರತದಲ್ಲಿದ್ದಷ್ಟು ನಂಬಿಕೆಗೆಳು ಪ್ರಾಯಶಃ ಬೇರೆಲ್ಲೂ ಇರಲಾರದು. ಉದಾಹರಣೆಗೆ ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ? ಇದಕ್ಕೆ ಕಾರಣಗಳನ್ನು ಇಂದಿನ ಲೇಖನದಲ್ಲಿ ನೋಡೋಣ. ಮೂಢನಂಬಿಕೆಗಳನ್ನೆಲ್ಲಾ ನಂಬಬೇಡಿ ಪ್ಲೀಸ್, ಅದೆಲ್ಲಾ ಭ್ರಮೆ ಅಷ್ಟೇ!
ಪುರಾತನ ಹೇಳಿಕೆಗಳ ಪ್ರಕಾರ ದುರ್ವಿಧಿ ಏಳು ವರ್ಷ ಕಾಡುತ್ತದೆ ಹಾಗೂ ಇದಕ್ಕೆ ಸೂಕ್ತ ಪ್ರತಿರೋಧವನ್ನು ಒಡ್ಡದೇ ಇದ್ದರೆ ಇದು ಏಳು ವರ್ಷಗಳವರೆಗೆ ದುರ್ವಿಧಿಯನ್ನು ಅನುಭವಿಸಬೇಕಾಗಿ ಬರಬಹುದು. ಅಷ್ಟಕ್ಕೂ ಕನ್ನಡಿ ಒಡೆಯುವುದರಿಂದ ದುರ್ವಿಧಿ ಎದುರಾಗುವ ಕಾರಣಗಳೇನು? ನೋಡೋಣ...

ಈ ನಂಬಿಕೆಯನ್ನು ಪ್ರಾರಂಭಿಸಿದವರು ರೋಮನ್ನರು
ಈ ಬಗ್ಗೆ ವಿವರಗಳನ್ನು ಕೆದಕುತ್ತಾ ಹೋದರೆ ಕನ್ನಡಿಯ ಆವಿಷ್ಕಾರ ಮಾಡಿದ ರೋಮನ್ನರೇ ಈ ನಂಬಿಕೆಯನ್ನು ಹುಟ್ಟುಹಾಕಿದರು ಎಂದು ತಿಳಿದುಬರುತ್ತದೆ.

ಇತರ ನಂಬಿಕೆಗಳ ಪ್ರಕಾರ....
ರೋಮನ್ನರು, ಗ್ರೀಕರು, ಚೀನೀಯರು, ಆಫ್ರಿಕನ್ನರು ಮತ್ತು ಭಾರತೀಯರು ತಮ್ಮ ತಮ್ಮ ಸಂಪ್ರದಾಯದಲ್ಲಿ ಒಡೆದ ಕನ್ನಡಿ ಉಪಯೋಗಿಸುವಾತನ ಆತ್ಮವನ್ನು ಸ್ವಾಧೀನಗೊಳಿಸುವ ಶಕ್ತಿ ಹೊಂದಿರುತ್ತದೆ ಎಂದು ನಂಬಿಕೊಂಡು ಬಂದಿದ್ದಾರೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಒಂದು ವೇಳೆ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಯಾವುದೇ ರೀತಿಯಲ್ಲಿ ವಿರೂಪಗೊಂಡಿದ್ದರೆ ಇದರ ಅರ್ಥ ಆ ವ್ಯಕ್ತಿಯ ಆತ್ಮ ಭ್ರಷ್ಟವಾಗಿದೆ ಎಂದು ತಿಳಿಯಲಾಗುತ್ತದೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಈ ವ್ಯಕ್ತಿ ಕನ್ನಡಿಯನ್ನು ಒಡೆದರೆ ಈತನ ಭ್ರಷ್ಟ ಆತ್ಮದ ಒಂದು ಭಾಗ ಈ ಕನ್ನಡಿಯಲ್ಲಿ ಬಂಧಿತವಾಗುತ್ತದೆ ಎಂದು ನಂಬಲಾಗಿದೆ.

ಈ ತೊಂದರೆಯ ನಿವಾರಣೆಗೆ ಏನು ಮಾಡಬೇಕು?
ಒಡೆದ ಕನ್ನಡಿ ಒಡೆದ ಆತ್ಮದ ಪ್ರತೀಕವಾಗಿರುವ ಕಾರಣ ಒಡೆದ ಕನ್ನಡಿಯ ತುಣುಕುಗಳನ್ನು ಯಾರಿಗೂ ಹಾನಿಯಾಗದ ಸ್ಥಳದಲ್ಲಿ ವಿಸರ್ಜಿಸುವುದೇ ಉತ್ತಮ. ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!



Click it and Unblock the Notifications