Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಕನ್ನಡಿಯನ್ನು ಒಡೆದರೆ ಏಳು ವರ್ಷಗಳ ದುರಾದೃಷ್ಟವಂತೆ ಹೌದೇ?
ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ?
ಅಪಶಕುನಗಳ ಬಗ್ಗೆ ಭಾರತದಲ್ಲಿದ್ದಷ್ಟು ನಂಬಿಕೆಗೆಳು ಪ್ರಾಯಶಃ ಬೇರೆಲ್ಲೂ ಇರಲಾರದು. ಉದಾಹರಣೆಗೆ ಕನ್ನಡಿಯನ್ನು ಒಡೆಯುವುದರಿಂದ ಏಳು ವರ್ಷಗಳ ದುರಾದೃಷ್ಟ ಕಾಡುತ್ತದೆ ಎಂದು ನಂಬಲಾಗುತ್ತದೆ. ದುರಾದೃಷ್ಟಕ್ಕೂ ಕನ್ನಡಿ ಒಡೆಯುವುದಕ್ಕೂ ಏನು ಸಂಬಂಧ? ಇದಕ್ಕೆ ಕಾರಣಗಳನ್ನು ಇಂದಿನ ಲೇಖನದಲ್ಲಿ ನೋಡೋಣ. ಮೂಢನಂಬಿಕೆಗಳನ್ನೆಲ್ಲಾ ನಂಬಬೇಡಿ ಪ್ಲೀಸ್, ಅದೆಲ್ಲಾ ಭ್ರಮೆ ಅಷ್ಟೇ!
ಪುರಾತನ ಹೇಳಿಕೆಗಳ ಪ್ರಕಾರ ದುರ್ವಿಧಿ ಏಳು ವರ್ಷ ಕಾಡುತ್ತದೆ ಹಾಗೂ ಇದಕ್ಕೆ ಸೂಕ್ತ ಪ್ರತಿರೋಧವನ್ನು ಒಡ್ಡದೇ ಇದ್ದರೆ ಇದು ಏಳು ವರ್ಷಗಳವರೆಗೆ ದುರ್ವಿಧಿಯನ್ನು ಅನುಭವಿಸಬೇಕಾಗಿ ಬರಬಹುದು. ಅಷ್ಟಕ್ಕೂ ಕನ್ನಡಿ ಒಡೆಯುವುದರಿಂದ ದುರ್ವಿಧಿ ಎದುರಾಗುವ ಕಾರಣಗಳೇನು? ನೋಡೋಣ...

ಈ ನಂಬಿಕೆಯನ್ನು ಪ್ರಾರಂಭಿಸಿದವರು ರೋಮನ್ನರು
ಈ ಬಗ್ಗೆ ವಿವರಗಳನ್ನು ಕೆದಕುತ್ತಾ ಹೋದರೆ ಕನ್ನಡಿಯ ಆವಿಷ್ಕಾರ ಮಾಡಿದ ರೋಮನ್ನರೇ ಈ ನಂಬಿಕೆಯನ್ನು ಹುಟ್ಟುಹಾಕಿದರು ಎಂದು ತಿಳಿದುಬರುತ್ತದೆ.

ಇತರ ನಂಬಿಕೆಗಳ ಪ್ರಕಾರ....
ರೋಮನ್ನರು, ಗ್ರೀಕರು, ಚೀನೀಯರು, ಆಫ್ರಿಕನ್ನರು ಮತ್ತು ಭಾರತೀಯರು ತಮ್ಮ ತಮ್ಮ ಸಂಪ್ರದಾಯದಲ್ಲಿ ಒಡೆದ ಕನ್ನಡಿ ಉಪಯೋಗಿಸುವಾತನ ಆತ್ಮವನ್ನು ಸ್ವಾಧೀನಗೊಳಿಸುವ ಶಕ್ತಿ ಹೊಂದಿರುತ್ತದೆ ಎಂದು ನಂಬಿಕೊಂಡು ಬಂದಿದ್ದಾರೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಒಂದು ವೇಳೆ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಯಾವುದೇ ರೀತಿಯಲ್ಲಿ ವಿರೂಪಗೊಂಡಿದ್ದರೆ ಇದರ ಅರ್ಥ ಆ ವ್ಯಕ್ತಿಯ ಆತ್ಮ ಭ್ರಷ್ಟವಾಗಿದೆ ಎಂದು ತಿಳಿಯಲಾಗುತ್ತದೆ.

ಒಂದು ವೇಳೆ ಪ್ರತಿಬಿಂಬ ವಿರೂಪಗೊಂಡಿದ್ದರೆ
ಈ ವ್ಯಕ್ತಿ ಕನ್ನಡಿಯನ್ನು ಒಡೆದರೆ ಈತನ ಭ್ರಷ್ಟ ಆತ್ಮದ ಒಂದು ಭಾಗ ಈ ಕನ್ನಡಿಯಲ್ಲಿ ಬಂಧಿತವಾಗುತ್ತದೆ ಎಂದು ನಂಬಲಾಗಿದೆ.

ಈ ತೊಂದರೆಯ ನಿವಾರಣೆಗೆ ಏನು ಮಾಡಬೇಕು?
ಒಡೆದ ಕನ್ನಡಿ ಒಡೆದ ಆತ್ಮದ ಪ್ರತೀಕವಾಗಿರುವ ಕಾರಣ ಒಡೆದ ಕನ್ನಡಿಯ ತುಣುಕುಗಳನ್ನು ಯಾರಿಗೂ ಹಾನಿಯಾಗದ ಸ್ಥಳದಲ್ಲಿ ವಿಸರ್ಜಿಸುವುದೇ ಉತ್ತಮ. ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!



Click it and Unblock the Notifications











