Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಶದ ರಕ್ಷಣೆಗಾಗಿ ಪ್ರೇತವಾಗಿ ಕಾಯುತ್ತಿರುವ ಹುತಾತ್ಮ ಯೋಧನ ಕಥೆ!
ಆಶ್ಚರ್ಯ ಹಾಗೂ ಕುತೂಹಲ ಕೆರಳಿಸುವ ವಿಷಯ ಎಂದರೆ ಯೋಧನೊಬ್ಬನ ಆತ್ಮ ಪ್ರೇತಾತ್ಮವಾಗಿ ಓಡಾಡುತ್ತಿರುವುದು!... ಅಚ್ಚರಿಯಾಗುತ್ತಿದೆ ಅಲ್ಲವೇ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ....
ಕೆಲವೊಮ್ಮೆ ವಿಚಿತ್ರ ವಿಷಯಗಳು ನಮ್ಮನ್ನು ಕಾಡುತ್ತವೆ. ಇವು ನಿಜನಾ? ಸುಳ್ಳಾ? ಎನ್ನುವ ಗೊಂದಲ ಹುಟ್ಟಿಕೊಳ್ಳುತ್ತವೆ. ಕೆಲವರು ಅದು ನಿಜ ಎಂದು ಹೇಳಿದರೆ ಇನ್ನು ಕೆಲವರು ಅವೆಲ್ಲಾ ಸುಳ್ಳು ಎನ್ನುವ ತರ್ಕವನ್ನು ಮುಂದಿಡುತ್ತಾರೆ. ಕುತೂಹಲ ಕೆರಳಿಸುವ ಕಾರ್ಗಿಲ್ ಕದನದ ರೋಚಕ ಕ್ಷಣಗಳು!
ಇಂತಹ ಆಶ್ಚರ್ಯ ಹಾಗೂ ಕುತೂಹಲ ಕೆರಳಿಸುವ ವಿಷಯ ಎಂದರೆ ಯೋಧನೊಬ್ಬನ ಆತ್ಮ ಪ್ರೇತಾತ್ಮವಾಗಿ ಓಡಾಡುತ್ತಿರುವುದು!... ಅಚ್ಚರಿಯಾಗುತ್ತಿದೆ ಅಲ್ಲವೇ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ....

ವೀರ ಯೋಧ ಬಾಬಾ ಹರಭಜನ್ ಸಿಂಗ್
ಭಾರತದ ರಕ್ಷಣೆಯ ಪಣತೊಟ್ಟು ಗಡಿಕಾದಿರುವ ಯೋಧ ಬಾಬಾ ಹರಭಜನ್ ಸಿಂಗ್. ಇವರು 1986ರಲ್ಲೇ ಮೃತಪಟ್ಟಿದ್ದರು. ಇದೀಗ ಗಡಿಕಾಯುತ್ತಿರುವ ತಮ್ಮ ಸಹೋದರರ ರಕ್ಷಣೆಗೆ ನಿಂತಿದ್ದಾರೆ ಎನ್ನುವ ವಿಷಯ ಎಲ್ಲೆಡೆ ಹರಡಿಕೊಂಡಿದೆ.

ವೀರ ಯೋಧ ಬಾಬಾ ಹರಭಜನ್ ಸಿಂಗ್
ದೇಶದ ರಕ್ಷಣೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಇವರ ಊರು ಪಂಜಾಬ್ನ ಒಂದು ಹಳ್ಳಿ. 1941ರಲ್ಲಿ ಜನಿಸಿದ ಇವರು 1956ರಲ್ಲಿ ದೇಶದ ಭಾರತೀಯ ಸೈನ್ಯಕ್ಕೆ ಸೇರಿಕೊಂಡರು. ರಜಪೂತರ ದಳದೊಂದಿಗೆ ಸೇವೆಸಲ್ಲಿಸಲು ನೇಮಕಗೊಂಡರು. 1965ರಲ್ಲಿ ಅವರಿಗೆ ಒಂದು ಕಮಿಷನ್ ನೀಡಲಾಗಿತ್ತು.

ಹಿಮದಲ್ಲಿ ಜಾರಿಬಿದ್ದು ವೀರ ಮರಣ ಹೊಂದಿದ್ದರು
1967ರಲ್ಲಿ ನಾಥೂ-ಲಾ ಪಾಸ್ ಸಮೀಪದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಹಿಮದಲ್ಲಿ ಜಾರಿಬಿದ್ದು, ಮುಳುಗಿ ಹೋಗಿದ್ದರು. ನಂತರ ಮೂರುದಿನಗಳ ಹುಡುಕಾಟದಿಂದ ಮೃತ ದೇಹವನ್ನು ಹೊರತಂದಿದ್ದರು. ಅದಾದ ಬಳಿಕ ಮೂರು ದಿನದ ಬಳಿಕ ಗೌರವದಿಂದ ಸಮಾಧಿ ಮಾಡಲಾಯಿತು.

ತನಗೊಂದು ಗುಡಿಬೇಕು!
ಹೀಗೆ ಸ್ವಲ್ಪ ದಿನಗಳು ಕಳೆದ ಮೇಲೆ, ತನ್ನ ಸ್ನೇಹಿತರ ಕನಸಿನಲ್ಲಿ ಬಂದ ಯೋಧ ತನಗೊಂದು ಗುಡಿಯೊಂದನ್ನು ನಿರ್ಮಿಸುವಂತೆ ಕೇಳಿಕೊಳ್ಳುತ್ತಿದ್ದ. ಹಾಗಾಗಿಯೇ ಯೋಧನಿಗೆ ಒಂದು ಗುಡಿಯನ್ನು ನಿರ್ಮಿಸಲಾಯಿತು.

ಯೋಧನ ಆತ್ಮ ಪ್ರೇತಾತ್ಮವಾಗಿ ಎಲ್ಲರನ್ನೂ ರಕ್ಷಿಸುತ್ತಿದೆ!
ಅಂದು ಈ ಹಿನ್ನೆಲೆಯನ್ನು ಹೊಂದಿರುವ ಯೋಧ ಇಂದಿಗೂ ಪ್ರೇತಾತ್ಮವಾಗಿ ಎಲ್ಲರನ್ನೂ ರಕ್ಷಿಸುತ್ತಿದೆ ಎಂದು ನಂಬುತ್ತಿದ್ದಾರೆ ಸ್ಥಳೀಯರು ಹಾಗೂ ಯೋಧರು. ಈ ಆತ್ಮ ಗಡಿಯಲ್ಲಿ ನಡೆಯುವ ಆಕ್ರಮಣಕಾರಿ ಕ್ರಮದ ಬಗ್ಗೆ ಮೂರು ದಿನದ ಮುಂಚಿತವಾಗಿಯೇ ಯೋಧರಿಗೆ ಎಚ್ಚರಿಸುತ್ತದೆಯಂತೆ.

ರಾತ್ರಿ ಶಿಬಿರದಲ್ಲಿ ನಿದ್ರಿಸುವ ಸೈನಿಕರಿಗೆ ಎಚ್ಚರಿಸಿ, ರಕ್ಷಣೆ ನೀಡುತ್ತದೆ...
ಹಾಗಾಗಿಯೇ ಚೀನಿಯರು ಸಹ ಸಿಂಗ್ರ ದೇವಾಲಯವನ್ನು ಗೌರವಿಸುತ್ತಾರೆ. ಈ ದೇಗುಲಕ್ಕೆ ಬರಿಗಾಲಿನಲ್ಲಿ ರಕ್ಷಣೆ ನೀಡುತ್ತಾರೆ, ಉಳಿದ ಯೋಧರು ಗೌರವಿಸುತ್ತಾರೆ. ಇದು ರಾತ್ರಿ ಶಿಬಿರದಲ್ಲಿ ನಿದ್ರಿಸುವ ಸೈನಿಕರಿಗೆ ಎಚ್ಚರಿಸಿ, ರಕ್ಷಣೆ ನೀಡುತ್ತದೆ ಎನ್ನಲಾಗುತ್ತದೆ.

ಪ್ರತಿವರ್ಷ ಸೆಪ್ಟಂಬರ್11 ರಂದು....
ಪ್ರತಿವರ್ಷ ಸೆಪ್ಟಂಬರ್11 ರಂದು ಇವರ ವಸ್ತುಗಳನ್ನು ಸಹವರ್ತಿ ಸೈನಿಕರೊಂದಿಗೆ ಮೂಲ ಮನೆಯ ಬಾಗಿಲಿಗೆ ಮುಟ್ಟಿಸಲಾಗುತ್ತದೆ. ಗೌರವಾನ್ವಿತ ಕ್ಯಾಪ್ಟನ್ ಆಗಿ ನಿವೃತ್ತಗೊಂಡಿದ್ದ ಇವರು ಇಂದಿಗೂ ದೇಶ ಪ್ರೇಮವನ್ನು ಇಟ್ಟುಕೊಂಡಿದ್ದಾರೆ.

ಇಂದಿಗೂ ಆತನನ್ನು ಬಾಬಾ ಎಂದು ಉಲ್ಲೇಖಿಸುತ್ತಾರೆ
ಸಿಂಗ್ ಪವಿತ್ರ ಸಂತನಾಗಿ ಹಾಗೂ ಸೈನಿಕನಾಗಿ ಕಾಣಿಸಿಕೊಳ್ಳುತ್ತಾನೆ. ಸೈನಿಕರು ಆತನನ್ನು ಬಾಬಾ ಎಂದು ಉಲ್ಲೇಖಿಸುತ್ತಾರೆ ಎನ್ನುವ ಸುದ್ದಿ ಇದೆ.



Click it and Unblock the Notifications