Latest Updates
-
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ
ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಹೆಚ್ಚಿಸಲು ಇಲ್ಲಿವೆ ಸರಳ ಜ್ಯೋತಿಷ್ಯ ಪರಿಹಾರಗಳು
ಪ್ರತಿ ಮಗುವಿಗೆ ತನ್ನದೇ ಆದ ಆಸಕ್ತಿ, ಇಷ್ಟಗಳು ಇರುತ್ತವೆ. ಕೆಲವು ಮಕ್ಕಳು ದಿನವಿಡೀ ಪುಸ್ತಕಗಳಲ್ಲಿ ಮುಳುಗಿದ್ದರೆ, ಇನ್ನೂ ಕೆಲವರು ಓದಿನ ಹೆಸರು ಕೇಳಿದ ತಕ್ಷಣ ಓಡಿಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಗುವಿಗೆ ಅಧ್ಯಯನ ಮಾಡಲು ಇಷ್ಟವಿಲ್ಲದಿದ್ದರೆ, ಈ ಜ್ಯೋತಿಷ್ಯ ಪರಿಹಾರಗಳು ನಿಮಗೆ ಉಪಯುಕ್ತವಾಗಬಹುದು. ಇಲ್ಲಿ ನಾವು ಮಗುವಿಗೆ ಓದಿನ ಆಸಕ್ತಿಯನ್ನು ಹೆಚ್ಚಿಸುವ ಕೆಲವೊಂದು ಜ್ಯೋತಿಷ್ಯ ಪರಿಹಾರಗಳನ್ನು ತಿಳಿಸಿದ್ದೇವೆ. ಇದರಿಂದ ಖಂಡಿತ ಉತ್ತಮ ಫಲಿತಾಂಶ ಪಡೆಯತ್ತೀರಿ.
ಮಗುವಿನ ಓದಿನ ಆಸಕ್ತಿ ಹೆಚ್ಚಿಸುವ ಜ್ಯೋತಿಷ್ಯ ಪರಿಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಕುಂಕುಮದ ಪರಿಹಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಮಗುವಿಗೆ ಅಧ್ಯಯನ ಮಾಡಲು ಇಷ್ಟವಿಲ್ಲದಿದ್ದರೆ, ನೀವು ಅವನ ಜೇಬಿನಲ್ಲಿ ಒಂದು ಸಣ್ಣ ಆಲ್ಯುಂ ತುಂಡನ್ನು ಇಟ್ಟುಕೊಳ್ಳಬೇಕು. ಜೊತೆಗೆ ನಿಮ್ಮ ಮಗುವಿನ ಹಣೆ ಮತ್ತು ಹೊಕ್ಕುಳಿಗೆ ಪ್ರತಿದಿನ ಕುಂಕುಮ ತಿಲಕವನ್ನು ಹಚ್ಚಬೇಕು.

ಇವುಗಳನ್ನು ದಾನ ಮಾಡಿ:
ಮಗುವಿನ ಅಧ್ಯಯನದತ್ತ ಆಸಕ್ತಿಯನ್ನು ಹೆಚ್ಚಿಸಲು, ಪ್ರತಿ ಗುರುವಾರದಂದು ಭಗವಾನ್ ವಿಷ್ಣುವಿನ ದೇವಸ್ಥಾನದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಧಾರ್ಮಿಕ ಪುಸ್ತಕಗಳು ಮತ್ತು ಪೆನ್ನುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ತುಪ್ಪದ ದೀಪ ಬೆಳಗಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಷ್ಣುವಿನ ಚಿತ್ರದ ಮುಂದೆ ತುಪ್ಪದ ದೀಪವನ್ನು ಹಚ್ಚುವುದು, ಬಾಳೆಗಿಡಕ್ಕೆ ನೀರನ್ನು ಅರ್ಪಿಸುವುದು ಮತ್ತು ಅಲ್ಲಿನ ಮಣ್ಣಿನಿಂದ ಮಗುವಿಗೆ ತಿಲಕವನ್ನು ಹಚ್ಚುವುದು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ದಿಕ್ಕು ಕೂಡ ಮುಖ್ಯ:
ನಿಮ್ಮ ಮಗು ಅಧ್ಯಯನ ಮಾಡುವ ಸ್ಥಳದಲ್ಲಿ, ಅವನ ಸ್ಟಡಿ ಟೇಬಲ್ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಬೇಕು. ಅಷ್ಟೇ ಅಲ್ಲ, ಮಗುವಿನ ಕೊಠಡಿಯನ್ನು ಸ್ವಚ್ಚವಾಗಿಡಬೇಕು. ಅವರನ್ನು ಆಸಕ್ತಿಯನ್ನು ಸೆಳೆಯುವಂತಹ ಯಾವುದೇ ವಸ್ತುಗಳನ್ನು ಇಡಬೇಡಿ.

ಈ ಜಾಗದಲ್ಲಿ ಮಗುವಿನ ಕೊಠಡಿ ಬೇಡ:
ಬಾತ್ ರೂಮ್ ಅಥವಾ ಮೆಟ್ಟಿಲುಗಳ ಮುಂದೆ ಮಗುವಿನ ಕೋಣೆಯ ಬಾಗಿಲು ತೆರೆದರೂ, ಅವನ ಏಕಾಗ್ರತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದರಿಂದ ಮಗುವಿಗೆ ಅಧ್ಯಯನ ಮಾಡಲು ಮನಸ್ಸಾಗುವುದಿಲ್ಲ. ಆದ್ದರಿಂದ, ಮಕ್ಕಳ ಕೋಣೆಯ ಬಾಗಿಲು ಎಂದಿಗೂ ಬಾತ್ರೂಮ್ ಅಥವಾ ಮೆಟ್ಟಿಲುಗಳ ಮುಂದೆ ಇರಬಾರದು.

ಈ ಪರಿಹಾರ ಮಾಡಿ:
ಮಗುವಿಗೆ ಓದಲು ಇಷ್ಟವಿಲ್ಲದಿದ್ದರೆ, ಸರಸ್ವತಿಯ ಚಿತ್ರ ಅಥವಾ ಫೋಟೋವನ್ನು ಅವರ ಮೇಜಿನ ಮೇಲೆ ಇರಿಸಿ. ಇದರ ನಂತರ, ಅವರ ಮುಂದೆ ಬಿಳಿ ಅಥವಾ ಹಳದಿ ಪೆನ್ ಇಡಿ. ಬರವಣಿಗೆಯ ಕೆಲಸ ಮುಗಿದಾಗಲೆಲ್ಲ ಮಾತೆ ಸರಸ್ವತಿಯ ಪಾದದ ಬಳಿ ಪೆನ್ನು ಇಡಿ. ಇದಲ್ಲದೇ ಮಗುವಿಗೆ ಓದಲು ಕುಳಿತಾಗಲೆಲ್ಲ ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತು ಅಧ್ಯಯನ ಆರಂಭಿಸುವ ಮೊದಲು ‘ಓಂ ನಮೋ ಭಗವತಿ ಸರಸ್ವತಿ ವಾಗ್ವಾದಿನಿ ಬ್ರಹ್ಮಿಣಿ ಬ್ರಹ್ಮಸ್ವರೂಪಿಣಿ ಬುದ್ಧಿವಾದಿನಿ ಮಾಂ ವಿದ್ಯಾ ದೇಹಿ-ದೇಹಿ ಸ್ವಾಹಾ' ಎಂಬ ಮಂತ್ರದ 1, 3 ಬಾರಿ ಪಠಣವನ್ನು ಕಲಿಸಿ. ಇದನ್ನು ಸಾಧ್ಯವಾದರೆ 5, 7 ಅಥವಾ 11 ಬಾರಿಯಾದರೂ ಭಕ್ತಿಯಿಂದ ಪಠಿಸಿ, ಅದರ ನಂತರ ಓದಲು ಪ್ರಾರಂಭಿಸಲು ಹೇಳಿ.



Click it and Unblock the Notifications











