Just In
Don't Miss
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಕ್ಕಳಿಗೆ ಓದಿನ ಮೇಲೆ ಆಸಕ್ತಿ ಹೆಚ್ಚಿಸಲು ಇಲ್ಲಿವೆ ಸರಳ ಜ್ಯೋತಿಷ್ಯ ಪರಿಹಾರಗಳು
ಪ್ರತಿ ಮಗುವಿಗೆ ತನ್ನದೇ ಆದ ಆಸಕ್ತಿ, ಇಷ್ಟಗಳು ಇರುತ್ತವೆ. ಕೆಲವು ಮಕ್ಕಳು ದಿನವಿಡೀ ಪುಸ್ತಕಗಳಲ್ಲಿ ಮುಳುಗಿದ್ದರೆ, ಇನ್ನೂ ಕೆಲವರು ಓದಿನ ಹೆಸರು ಕೇಳಿದ ತಕ್ಷಣ ಓಡಿಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಗುವಿಗೆ ಅಧ್ಯಯನ ಮಾಡಲು ಇಷ್ಟವಿಲ್ಲದಿದ್ದರೆ, ಈ ಜ್ಯೋತಿಷ್ಯ ಪರಿಹಾರಗಳು ನಿಮಗೆ ಉಪಯುಕ್ತವಾಗಬಹುದು. ಇಲ್ಲಿ ನಾವು ಮಗುವಿಗೆ ಓದಿನ ಆಸಕ್ತಿಯನ್ನು ಹೆಚ್ಚಿಸುವ ಕೆಲವೊಂದು ಜ್ಯೋತಿಷ್ಯ ಪರಿಹಾರಗಳನ್ನು ತಿಳಿಸಿದ್ದೇವೆ. ಇದರಿಂದ ಖಂಡಿತ ಉತ್ತಮ ಫಲಿತಾಂಶ ಪಡೆಯತ್ತೀರಿ.
ಮಗುವಿನ ಓದಿನ ಆಸಕ್ತಿ ಹೆಚ್ಚಿಸುವ ಜ್ಯೋತಿಷ್ಯ ಪರಿಹಾರಗಳನ್ನು ಈ ಕೆಳಗೆ ನೀಡಲಾಗಿದೆ:
ಕುಂಕುಮದ ಪರಿಹಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಮಗುವಿಗೆ ಅಧ್ಯಯನ ಮಾಡಲು ಇಷ್ಟವಿಲ್ಲದಿದ್ದರೆ, ನೀವು ಅವನ ಜೇಬಿನಲ್ಲಿ ಒಂದು ಸಣ್ಣ ಆಲ್ಯುಂ ತುಂಡನ್ನು ಇಟ್ಟುಕೊಳ್ಳಬೇಕು. ಜೊತೆಗೆ ನಿಮ್ಮ ಮಗುವಿನ ಹಣೆ ಮತ್ತು ಹೊಕ್ಕುಳಿಗೆ ಪ್ರತಿದಿನ ಕುಂಕುಮ ತಿಲಕವನ್ನು ಹಚ್ಚಬೇಕು.
ಇವುಗಳನ್ನು ದಾನ ಮಾಡಿ:
ಮಗುವಿನ ಅಧ್ಯಯನದತ್ತ ಆಸಕ್ತಿಯನ್ನು ಹೆಚ್ಚಿಸಲು, ಪ್ರತಿ ಗುರುವಾರದಂದು ಭಗವಾನ್ ವಿಷ್ಣುವಿನ ದೇವಸ್ಥಾನದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಧಾರ್ಮಿಕ ಪುಸ್ತಕಗಳು ಮತ್ತು ಪೆನ್ನುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ತುಪ್ಪದ ದೀಪ ಬೆಳಗಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಷ್ಣುವಿನ ಚಿತ್ರದ ಮುಂದೆ ತುಪ್ಪದ ದೀಪವನ್ನು ಹಚ್ಚುವುದು, ಬಾಳೆಗಿಡಕ್ಕೆ ನೀರನ್ನು ಅರ್ಪಿಸುವುದು ಮತ್ತು ಅಲ್ಲಿನ ಮಣ್ಣಿನಿಂದ ಮಗುವಿಗೆ ತಿಲಕವನ್ನು ಹಚ್ಚುವುದು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ದಿಕ್ಕು ಕೂಡ ಮುಖ್ಯ:
ನಿಮ್ಮ ಮಗು ಅಧ್ಯಯನ ಮಾಡುವ ಸ್ಥಳದಲ್ಲಿ, ಅವನ ಸ್ಟಡಿ ಟೇಬಲ್ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಬೇಕು. ಅಷ್ಟೇ ಅಲ್ಲ, ಮಗುವಿನ ಕೊಠಡಿಯನ್ನು ಸ್ವಚ್ಚವಾಗಿಡಬೇಕು. ಅವರನ್ನು ಆಸಕ್ತಿಯನ್ನು ಸೆಳೆಯುವಂತಹ ಯಾವುದೇ ವಸ್ತುಗಳನ್ನು ಇಡಬೇಡಿ.
ಈ ಜಾಗದಲ್ಲಿ ಮಗುವಿನ ಕೊಠಡಿ ಬೇಡ:
ಬಾತ್ ರೂಮ್ ಅಥವಾ ಮೆಟ್ಟಿಲುಗಳ ಮುಂದೆ ಮಗುವಿನ ಕೋಣೆಯ ಬಾಗಿಲು ತೆರೆದರೂ, ಅವನ ಏಕಾಗ್ರತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದರಿಂದ ಮಗುವಿಗೆ ಅಧ್ಯಯನ ಮಾಡಲು ಮನಸ್ಸಾಗುವುದಿಲ್ಲ. ಆದ್ದರಿಂದ, ಮಕ್ಕಳ ಕೋಣೆಯ ಬಾಗಿಲು ಎಂದಿಗೂ ಬಾತ್ರೂಮ್ ಅಥವಾ ಮೆಟ್ಟಿಲುಗಳ ಮುಂದೆ ಇರಬಾರದು.
ಈ ಪರಿಹಾರ ಮಾಡಿ:
ಮಗುವಿಗೆ ಓದಲು ಇಷ್ಟವಿಲ್ಲದಿದ್ದರೆ, ಸರಸ್ವತಿಯ ಚಿತ್ರ ಅಥವಾ ಫೋಟೋವನ್ನು ಅವರ ಮೇಜಿನ ಮೇಲೆ ಇರಿಸಿ. ಇದರ ನಂತರ, ಅವರ ಮುಂದೆ ಬಿಳಿ ಅಥವಾ ಹಳದಿ ಪೆನ್ ಇಡಿ. ಬರವಣಿಗೆಯ ಕೆಲಸ ಮುಗಿದಾಗಲೆಲ್ಲ ಮಾತೆ ಸರಸ್ವತಿಯ ಪಾದದ ಬಳಿ ಪೆನ್ನು ಇಡಿ. ಇದಲ್ಲದೇ ಮಗುವಿಗೆ ಓದಲು ಕುಳಿತಾಗಲೆಲ್ಲ ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತು ಅಧ್ಯಯನ ಆರಂಭಿಸುವ ಮೊದಲು ‘ಓಂ ನಮೋ ಭಗವತಿ ಸರಸ್ವತಿ ವಾಗ್ವಾದಿನಿ ಬ್ರಹ್ಮಿಣಿ ಬ್ರಹ್ಮಸ್ವರೂಪಿಣಿ ಬುದ್ಧಿವಾದಿನಿ ಮಾಂ ವಿದ್ಯಾ ದೇಹಿ-ದೇಹಿ ಸ್ವಾಹಾ' ಎಂಬ ಮಂತ್ರದ 1, 3 ಬಾರಿ ಪಠಣವನ್ನು ಕಲಿಸಿ. ಇದನ್ನು ಸಾಧ್ಯವಾದರೆ 5, 7 ಅಥವಾ 11 ಬಾರಿಯಾದರೂ ಭಕ್ತಿಯಿಂದ ಪಠಿಸಿ, ಅದರ ನಂತರ ಓದಲು ಪ್ರಾರಂಭಿಸಲು ಹೇಳಿ.