Just In
- 50 min ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 14 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 15 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
Don't Miss
- News Lok Sabha Election: ಮತದಾನದ ದಿನ ಬಸ್ಗಳ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Movies ತಾತನಿಗೆ ಧನ್ಯಾ ರಾಮ್ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನ್ಮಾಷ್ಟಮಿ ವಿಶೇಷ: ರಾಧಾ-ಕೃಷ್ಣರ ನಡುವಿನ ನಿಷ್ಕಲ್ಮಶ ಪ್ರೇಮ ಕಥೆ
ಇಂದಿಗೂ ಕೂಡ ರಾಧೆ ಮತ್ತು ಕೃಷ್ಣನ ಪ್ರೇಮವು ಅಮರವಾಗಿದೆ. ಯಾವುದೇ ಪ್ರೇಮಕಥೆಯಾದರೂ ಅದರು ರಾಧೆ ಹಾಗೂ ಕೃಷ್ಣನಂತಿರಬೇಕು ಎಂದು ಪ್ರತಿಯೊಬ್ಬರು ಬಯಸುವರು. ರಾಧೆ ಮತ್ತು ಕೃಷ್ಣನ ಪ್ರೇಮವು ಪರಮಾತ್ಮ ಮತ್ತು ಜೀವಾತ್ಮದ ಅಪೂರ್ವ ಸಮಾಗಮವಾಗಿದೆ. ಭಗವದ್ಗೀತೆಯಲ್ಲಿ ರಾಧೆ ಮತ್ತು ಕೃಷ್ಣನ ಪ್ರೇಮದ ಬಗ್ಗೆ ವಿವರವಿದೆ. ಈ ಪ್ರೇಮಕಥೆಯು ಸಾವಿರಾರು ವರ್ಷಗಳಿಂದಲೂ ಹಾಗೆ ಬೆಳೆದು ಬರುತ್ತಾ ಇದೆ.
ಕೃಷ್ಣ ಜನ್ಮಾಷ್ಟಮಿಯಂದು ಈ 6 ಸ್ಥಳಗಳಿಗೆ ಭೇಟಿ ನೀಡಿದರೆ ಕಷ್ಟ ನಿವಾರಣೆಯಾಗುವುದು
ರಾಧೆ ಮತ್ತು ಕೃಷ್ಣನ ಪ್ರೇಮಕಥೆಯನ್ನು ಕೇಳಿದ ಹೆಚ್ಚಿನವರಲ್ಲಿ ಮೂಡುವಂತಹ ಪ್ರಶ್ನೆಯೆಂದರೆ ರಾಧೆಯನ್ನು ಕೃಷ್ಣ ಯಾಕೆ ಮದುವೆಯಾಗಲಿಲ್ಲ. ವೃಂದಾವನವನ್ನು ಬಿಟ್ಟುಹೋದ ಕೃಷ್ಣ, ರುಕ್ಮಿಣಿಯನ್ನು ಮದುವೆಯಾಗಿರುವುದು ಯಾಕೆ ಎನ್ನುವ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಇದರ ಬಗ್ಗೆ ತಿಳಿಯಲು ಒಂದು ರೀತಿಯ ಅಧ್ಯಯನವನ್ನೇ ಮಾಡಲಾಗಿದೆ. ಈ ಅಧ್ಯಯನದಿಂದ ಹಲವಾರು ರೀತಿಯ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿದೆ....
ರಾಧೆ ಕೃಷ್ಣನ ಬಾಲ್ಯದ ಸ್ನೇಹಿತೆ
ರಾಧೆಯು ಕೃತಿಧಾ ಮತ್ತು ವೃಸಭನುವಿನ ಮಗಳಾಗಿದ್ದಳು. ಕೃಷ್ಣನು ನಂದಾ ಮತ್ತು ಯೋಶೋಧೆಯ ಮಗ. ಕೆಲವು ಪುರಾಣಗಳ ಪ್ರಕಾರ ರಾಧೆಯು, ಕೃಷ್ಣನ ಸೋದರ ಸಂಬಂಧಿ ಎಂದರೆ ಇನ್ನು ಕೆಲವು ಪುರಾಣಗಳು ಕೃಷ್ಣನ ಚಿಕ್ಕಮ್ಮ ರಾಧೆ ಎನ್ನುತ್ತವೆ. ಯಶೋಧೆಯು ರಾಧೆಯನ್ನು ಹೆಚ್ಚು ಪ್ರೀತಿಸುತ್ತಾ ಇದ್ದಳು ಮತ್ತು ಆಕೆಯನ್ನು ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು. ಕೃಷ್ಣ ಗೋಪಾಲಕನಾಗಿದ್ದರೆ, ರಾಧೆಯು ಹಳ್ಳಿ ಹುಡುಗಿಯಂತಿದ್ದಳು. ಆದರೆ ವಯಸ್ಸಿನಲ್ಲಿ ಕೃಷ್ಣನಿಗಿಂತ ರಾಧೆಯು ಹತ್ತು ವರ್ಷ ದೊಡ್ಡವಳು. ಬಾಲ್ಯದಲ್ಲಿ ಜತೆಯಾಗಿ ಆಟವಾಡುತ್ತಿದ್ದ ಅವರಿಬ್ಬರು ಪರಸ್ಪರರನ್ನು ಬಿಟ್ಟಿರುತ್ತಲೇ ಇರಲಿಲ್ಲ. ಅವರಿಬ್ಬರು ದೈಹಿಕತೆಗಿಂತ ಆಧಾತ್ಮಿಕವಾಗಿ ತುಂಬಾ ಹತ್ತಿರವಾಗಿದ್ದರು. ಅವರು ಬೆಳೆಯುತ್ತಾ ಇದ್ದಂತೆ ಅವರಿಬ್ಬರ ಪ್ರೀತಿಯು ಹೆಚ್ಚಾಗುತ್ತಾ ಹೋಯಿತು. ಕೃಷ್ಣ ಮತ್ತು ರಾಧೆ ಬಾಲ್ಯದಿಂದಲೇ ತುಂಬಾ ಪ್ರೀತಿಸುತ್ತಾ ಇದ್ದರೂ ಅವರಿಬ್ಬರ ಮಧ್ಯೆ ದೈಹಿಕ ಆಕರ್ಷಣೆ ಮಾತ್ರ ಇರಲಿಲ್ಲ ಎಂದು ಹೇಳಲಾಗಿದೆ.
ವೃಂದಾವನ ಬಿಟ್ಟ ಕೃಷ್ಣ
ಬಾಲ್ಯದ ಬಳಿಕ ತನ್ನ ನಿಜವಾದ ತಂದೆತಾಯಿ ಯಶೋಧೆ ಮತ್ತು ನಂದಾ ಅವರಲ್ಲ ಎನ್ನುವುದು ಕೃಷ್ಣನಿಗೆ ತಿಳಿದುಬರುತ್ತದೆ. ದೇವಕಿ ಮತ್ತು ರಾಜ ವಾಸುದೇವ ತನ್ನ ನಿಜವಾದ ತಂದೆತಾಯಿ ಎಂದು ಕೃಷ್ಣನಿಗೆ ತಿಳಿಯುತ್ತದೆ. ತನ್ನ ಸೋದರ ಮಾವ ಕಂಸನ ದುಷ್ಕೃತ್ಯಗಳಿಂದಾಗಿ ತನ್ನ ತಂದೆತಾಯಿ ಜೈಲಿನಲ್ಲಿದ್ದಾರೆ ಎಂದು ತಿಳಿದ ಕೃಷ್ಣ ಕಂಸನನ್ನು ಸಂಹಾರ ಮಾಡಿ ತನ್ನ ತಂದೆತಾಯಿ ಹಾಗೂ ರಾಜ್ಯವನ್ನು ಕಂಸನ ದುಷ್ಕೃತ್ಯದಿಂದ ರಕ್ಷಿಸುತ್ತಾನೆ. ಕಂಸನ ಸಂಹಾರಕ್ಕಾಗಿಯೇ ತಾನು ಹುಟ್ಟಿದ್ದೇನೆಂದು ತಿಳಿದ ಕೃಷ್ಣ ವೃಂದಾವನ ಬಿಟ್ಟು ಹೋಗುತ್ತಾನೆ.
ಕೃಷ್ಣ ಮತ್ತು ರಾಧೆ ಯಾಕೆ ಮದುವೆಯಾಗಲಿಲ್ಲ?
ವೃಂದಾವನ ಬಿಟ್ಟು ಕಂಸನನ್ನು ವಧೆ ಮಾಡಿದ ಕೃಷ್ಣ ದ್ವಾರಕೆಯಲ್ಲಿ ರಾಜನಾದ. ಅಲ್ಲಿ ಆತ ರಾಜ ವಿಸ್ಮಕನ ಪುತ್ರಿ ರುಕ್ಮಿಣಿಯನ್ನು ಮದುವೆಯಾದ. ರಾಜನಾದ ಬಳಿಕ ಯಾವತ್ತೂ ಕೃಷ್ಣನನ್ನು ಭೇಟಿಯಾಗುವುದಿಲ್ಲವೆಂದು ರಾಧೆ ಹೇಳಿದ್ದಳು. ಗೋಪಾಲಕ ಹಾಗೂ ಸರಳವಾಗಿದ್ದ ಕೃಷ್ಣನನ್ನು ಮಾತ್ರ ತಾನು ಪ್ರೀತಿಸಿದ್ದು, ರಾಜನಾದ ಬಳಿಕ ಕೃಷ್ಣನಿಗೆ ತಾನು ಸರಿಯಾದ ಜೋಡಿಯೂ ಅಲ್ಲ ಎಂದು ರಾಧೆ ಹೇಳುತ್ತಾಳೆ. ಇದರಿಂದಾಗಿಯೇ ಅವರು ಮದುವೆಯಾಗಲಿಲ್ಲ. ಆದರೆ ಅವರ ನಿಷ್ಕಲ್ಮಶ ಪ್ರೀತಿ ಮಾತ್ರ ಇಂದಿಗೂ ಪೂಜ್ಯನೀಯವಾಗಿದೆ ಎಂದು ಇತಿಹಾಸವು ಹೇಳುತ್ತದೆ.
ಪ್ರೀತಿ ಎನ್ನುವುದು ನಿಸ್ವಾರ್ಥ ಮತ್ತು ಸುಂದರ ಭಾವನೆ
ಕೃಷ್ಣ ಕೂಡ ಮದುವೆಯಲ್ಲಿ ನಂಬಿಕೆಯನ್ನು ಇಟ್ಟಿರಲಿಲ್ಲ. ಯಾಕೆಂದರೆ ಮದುವೆಯಾದರೆ ಬಂಧನದಲ್ಲಿದ್ದು, ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎನ್ನುವುದು ಕೃಷ್ಣನ ಯೋಚನೆ. ಪ್ರೀತಿ ಎನ್ನುವುದು ನಿಸ್ವಾರ್ಥ ಮತ್ತು ಸುಂದರ ಭಾವನೆ. ಅದೇ ಮದುವೆ ಒಂದು ಒಪ್ಪಂದ. ನಿಜವಾದ ಪ್ರೀತಿಯು ಯಾವುದೇ ಅಡೆತಡೆಗಳು ಇಲ್ಲದೆ ಇಬ್ಬರ ಮಧ್ಯೆ ಮೂಡುವುದು. ಇದರ ಮಧ್ಯೆ ಬರುವ ಎಲ್ಲವನ್ನು ಅದು ಬೇರ್ಪಡಿಸುತ್ತದೆ.
ರಾಧೆ ಮತ್ತು ಕೃಷ್ಣನ ಪ್ರೀತಿಯು ಪರಿಶುದ್ಧ ಹಾಗೂ ಸುಂದರವಾಗಿತ್ತು
ಹೌದು, ರಾಧೆ ಮತ್ತು ಕೃಷ್ಣನ ಪ್ರೀತಿಯು ಪರಿಶುದ್ಧ ಹಾಗೂ ಸುಂದರವಾಗಿತ್ತು. ಅವರ ಪ್ರೀತಿಯು ಯಾವುದೇ ಬಾಹ್ಯ ಆಕರ್ಷಣೆಯನ್ನು ಹೊಂದಿರಲಿಲ್ಲ. ಅವರು ಪ್ರೇಮಿಗಳಾಗಿ ಒಂದು ಉನ್ನತ ಮಟ್ಟವನ್ನು ದಾಟಿದ್ದರು. ಆದರೆ ಯಾವತ್ತೂ ಮದುವೆಯಾಗಲಿಲ್ಲ.