Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಮಂತ್ರೋಚ್ಛಾರಣೆಗೆ ಮೊದಲು 'ಓಂ' ಪದ ಹೇಳುವುದು ಯಾಕೆ?
ಹಿಂದೂ ಧರ್ಮದಲ್ಲಿನ ಹೆಚ್ಚಿನ ಮಂತ್ರಗಳು ನಮ್ಮ ಸುತ್ತಲು ಇರುವಂತಹ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಧನಾತ್ಮಕವಾದ ಶಕ್ತಿಯನ್ನು ಉಂಟು ಮಾಡುವುದು ಎಂದು ಹೇಳಲಾಗುತ್ತದೆ. ಮಂತ್ರೋಚ್ಛಾರದಿಂದಾಗಿ ಸುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿ ಮೂಡುವುದು ಎನ್ನುವ ನಂಬಿಕೆ ಕೂಡ ಇದೆ. ಇದರ ಬಗ್ಗೆ ಕೆಲವೊಂದು ಅಧ್ಯಯನಗಳು ವೈಜ್ಞಾನಿಕವಾಗಿ ಇದು ಸಾಬೀತಾಗಿದೆ ಎಂದು ಹೇಳಿವೆ. ಹೆಚ್ಚಾಗಿ ಪ್ರತಿಯೊಂದು ಮಂತ್ರದಲ್ಲೂ ಕೂಡ ಓಂ ಎನ್ನುವ ಶಬ್ದವಿರುವುದನ್ನು ನಾವು ನೋಡಿದ್ದೇವೆ.

ಪ್ರತಿಯೊಂದು ಮಂತ್ರವು ಓಂನಿಂದ ಆರಂಭವಾಗಿ ಸ್ವಾಹಾದಿಂದ ಕೊನೆಯಾಗುವುದು. ಇದರ ಹಿಂದಿರುವ ಕಾರಣಗಳು ಏನು ಎಂದು ನೀವು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ಇಲ್ಲ ತಾನೇ? ಹಾಗಾದರೆ ಈ ಲೇಖನ ಓದಿಕೊಂಡು ನಿಮ್ಮ ಜ್ಞಾನ ವೃದ್ಧಿಸಿಕೊಳ್ಳಿ. ಯಾಕೆಂದರೆ ಅನಾದಿ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಓಂ ಎನ್ನುವ ಪದವು ತುಂಬಾ ಶಕ್ತಿಯುತವಾಗಿರುವುದು ಎಂದು ನಂಬಲಾಗಿದೆ. ಓಂ ಶಬ್ಧವನ್ನು ಉಚ್ಛಾರ ಮಾಡಿದಾಗ ಓ' ಊ' ಮಾ' ಎನ್ನುವ ಮೂರು ಶಬ್ಧಗಳು ಬರುವುದು. ಹಿಂದೂ ನಂಬಿಕೆಗಳ ಪ್ರಕಾರ ಈ ಮೂರು ಪದಗಳು ತ್ರಿಮೂರ್ತಿಗಳಾಗಿರುವ ಬ್ರಹ್ಮ ದೇವರು, ವಿಷ್ಣು ದೇವರು ಮತ್ತು ಈಶ್ವರ ದೇವರಿಗೆ ಸಂಬಂಧಿಸಿದ್ದಾಗಿದೆ.

ಧರ್ಮಶಾಸ್ತ್ರದ ಪ್ರಕಾರ ಇದಕ್ಕೆ ಏನು ಅರ್ಥವಿದೆ
ಧರ್ಮಶಾಸ್ತ್ರವು ಹೇಳುವಂತೆ ಈ ಭೂಮಿಯು ಮೂರು ವಿಧದ ಶಕ್ತಿಗಳಿಂದ ನಿರ್ಮಿಸಲ್ಪಟ್ಟಿರುವುದಾಗಿದೆ. ಅವುಗಳೆಂದರೆ ಸತ್ವ, ರಾಜಸ ಮತ್ತು ತಮಸ. ಸತ್ವ ಎಂದರೆ ಅದರಲ್ಲಿ ಒಳ್ಳೆಯ ಗುಣಗಳು ಇದೆ ಎಂದು ಹೇಳಬಹುದು. ರಾಜಸ ಎಂದರೆ ಇದು ಮನುಷ್ಯ ಅಥವಾ ಒಬ್ಬ ರಾಜನ ಗುಣಗಳು ಇದೆ ಎಂದು ಹೇಳಬಹುದು. ತಮಸ ಎಂದರೆ ರಾಕ್ಷಸರಂತಹ ಗುಣಗಳು ಇದೆ ಎಂದು ಹೇಳಬಹುದು. ಪ್ರತಿಯೊಂದು ಅಂಶವು ಈ ಮೂರು ಗುಣಗಳನ್ನು ವಿಭಿನ್ನ ಪ್ರಮಾಣದಲ್ಲಿ ಶಕ್ತಿಗಳೊಂದಿಗೆ ಒಳಗೊಂಡಿದೆ. ಇಲ್ಲಿ ಕೆಲವು ಸಲ ಶಕ್ತಿಯ ಪ್ರಮಾಣದಲ್ಲಿ ಬದಲಾವಣೆಗಳು ಆಗಬಹುದು. ಆದರೆ ಅಂಶವು ಮಾತ್ರ ಅದೇ ಆಗಿರುವುದು. ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡಾಗ ಇದು ಒಂದು ಪರಿಪೂರ್ಣ ಸಮೂಹವಾಗುವುದು. ಈ ಮೂರು ಗುಣಗಳ ಸಮೀಕರಣವನ್ನು ಓಂ ಎನ್ನುವ ಒಂದು ಪದವು ಹೇಳುವುದು ಮತ್ತು ಇದರ ಗುಣಮಟ್ಟವನ್ನು ಗುಣ ಗಳು ಎಂದು ಕರೆಯಲಾಗುತ್ತದೆ. ಪ್ರಾಮುಖ್ಯತೆ ಎಂದು ಹೇಳಬಹುದಾಗಿದೆ.
Most Read: 'ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು

ಒಂದು ಪವಿತ್ರ ಆರಂಭ
ಹಿಂದೂ ಧರ್ಮದ ಪ್ರಕಾರ ಓಂ ಎನ್ನುವುದು ಕೇವಲ ಈಶ್ವರ ದೇವರ ಸಂಕೇತ ಮಾತ್ರವಲ್ಲ, ಇದು ಗಣಪತಿ ದೇವರ ಸಂಕೇತವು ಹೌದು. ಇದರಿಂದಾಗಿ ನಾವು ಗಣಪತಿ ದೇವರನ್ನು ಹೆಚ್ಚಾಗಿ ಓಂ ಆಕಾರದ ಚಿತ್ರಗಳಲ್ಲಿ ಕಾಣಬಹುದಾಗಿದೆ. ಯಾವುದೇ ಕಾರ್ಯಕ್ರಮ, ಕೆಲಸವಾದರೂ ನಾವು ಮೊದಲಿಗೆ ಗಣಪತಿ ದೇವರನ್ನು ವಂದಿಸುವ ಕಾರಣದಿಂದಾಗಿ ಮೊದಲಿಗೆ ನಾವು ಓಂ ಮಂತ್ರವನ್ನು ಉಚ್ಛಾರ ಮಾಡುತ್ತೇವೆ. ಗಣಪತಿ ದೇವರ ಯಾವುದೇ ರೀತಿಯ ಮಂತ್ರೋಚ್ಛಾರ ಮಾಡುವಾಗಲೂ ನಾವು ಮೊದಲಿಗೆ ಓಂ ಪದವನ್ನು ಬಳಸುತ್ತೇವೆ.

ಮೊದಲು ಕೇಳಿಬಂದ ಪದವಿದು
ಮೊದಲ ಸಲ ಭೂಮಿಯ ಸೃಷ್ಟಿಯಾದಾಗ ಮೊದಲು ಕೇಳಿಬಂದ ಶಬ್ಧವೇ ಓಂ ಎಂದು ಹೇಳಲಾಗುತ್ತದೆ. ಭೂಮಿಯು ಅಂತ್ಯವಾಗುವಾಗಲೂ ಇದೇ ರೀತಿಯ ಶಬ್ಧವು ಕೇಳಿಬರಲಿದೆ ಎಂದು ಹೇಳಲಾಗುತ್ತದೆ. ಇದು ಮೊದಲ ಶಬ್ಧವಾಗಿರುವ ಕಾರಣದಿಂದಾಗಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯು ಇದೆ. ಈ ಕಾರಣದಿಂದಾಗಿಯೇ ನಾವು ಮಂತ್ರೋಚ್ಛಾರವನ್ನು ಮಾಡುವ ವೇಳೆಯಲ್ಲಿ ಮೊದಲಿಗೆ ಈ ಪದವನ್ನು ಉಚ್ಛಾರ ಮಾಡುತ್ತೇವೆ.

ಏಕಾಗ್ರತೆ ಸುಧಾರಣೆ ಮಾಡುವುದು
ಈ ಎಲ್ಲಾ ಶಕ್ತಿಗಳ ಮೇಲೆ ಹಿಡಿತ ಸಾಧಿಸಿಕೊಂಡು, ಅದನ್ನು ಸಮತೋಲನದಲ್ಲಿ ಇರಿಸಿಕೊಂಡಿರುವ ವ್ಯಕ್ತಿಯು ಯಾವಾಗಲೂ ಮಾನಸಿಕವಾಗಿ ಬಲಿಷ್ಠನಾಗಿರುವನು ಮತ್ತು ಇದು ಆತನಿಗೆ ತುಂಬಾ ಆರಾಮ ನೀಡುವುದು ಎಂದು ಹೇಳಲಾಗಿದೆ. ಮಾನಸಿಕವಾಗಿ ಆರಾಮವಾಗಿರುವ ವ್ಯಕ್ತಿಯು ಯಾವಾಗಲೂ ಹೆಚ್ಚು ಏಕಾಗ್ರತೆ ಸಾಧಿಸಬಹುದು. ಮಂತ್ರೋಚ್ಛಾರಣೆ ಮಾಡುವ ವೇಳೆ ಏಕಾಗ್ರತೆ ಎನ್ನುವುದು ತುಂಬಾ ಮಹತ್ವದ ವಿಚಾರವಾಗಿದೆ. ಇದರಿಂದಾಗಿ ಮಂತ್ರವು ನಮಗೆ ಏಕಾಗ್ರತೆ ಉಂಟು ಮಾಡಲು ನೆರವಾಗುವುದು. ಇದರಿಂದಾಗಿಯೇ ಯೋಗದಲ್ಲೂ ಇದನ್ನು ಬಳಸಲಾಗಿದೆ. ರಾಜ ಯೋಗ ಮತ್ತು ಹಠ ಯೋಗ ವ್ಯಾಯಾಮಕ್ಕೆ ಮೊದಲು ಈ ಮಂತ್ರಗಳನ್ನು ಹೇಳಲಾಗುತ್ತದೆ.



Click it and Unblock the Notifications











