Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಯಾವ್ಯಾವ ಸ್ಥಳಗಳಲ್ಲಿ ಮನೆ ನಿರ್ಮಿಸಬಾರದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದರೆ ಅದರಿಂದ ಜೀವನದಲ್ಲಿ ಲೌಕಿಕ ಸುಖ, ಸಮೃದ್ಧಿ, ವ್ಯಾಪಾರದಲ್ಲಿ ಅಭಿವೃದ್ಧಿ, ವೃತ್ತಿಯಲ್ಲಿ ಶ್ರೇಯೋಭಿವೃದ್ಧಿ ಸಿಗುವುದು. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ವಾಸ್ತು ಪ್ರಕಾರವೇ ಮನೆ ಕಟ್ಟಲು ಮುಂದಾಗುತ್ತಿದ್ದಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಹೆಚ್ಚಿನ ಧನಾತ್ಮಕ ಶಕ್ತಿಯು ಸಿಗುವುದು.

ಮನೆಯಲ್ಲಿ ಧನಾತ್ಮಕ ಶಕ್ತಿಯಿದ್ದರೆ ಆಗ ಜೀವನವು ಸುಗಮವಾಗಿ ಸಾಗಲು ನೆರವಾಗುವುದು. ವಾಸ್ತು ಪ್ರಕಾರ ಮನೆ ಕಟ್ಟಿದರೆ ಅದರಿಂದ ದೇವದೇವತೆಗಳು ಕೂಡ ನೆಲೆಸುವರು ಎಂದು ಹೇಳಲಾಗುತ್ತದೆ. ಅದಾಗ್ಯೂ, ಕೆಲವೊಂದು ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಲೇಬಾರದು ಎಂದಿರುತ್ತದೆ. ಇಂತಹ ಸ್ಥಳಗಳಲ್ಲಿ ನಾವು ಮನೆ ನಿರ್ಮಾಣ ಮಾಡಿದರೂ ಅಲ್ಲಿ ವಾಸ್ತು ಫಲಿಸುವುದಿಲ್ಲ. ಮನೆ ನಿರ್ಮಾಣ ಮಾಡಲು ಯೋಗ್ಯವಲ್ಲದೆ ಇರುವಂತಹ ಪ್ರದೇಶಗಳು ಯಾವುದು ಎಂದು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳುವ.

ಎರಡು ರಸ್ತೆಗಳು ಛೇಧಿಸುವಲ್ಲಿ ಮನೆ ನಿರ್ಮಿಸಬಾರದು
ಹಿಂದೂ ಧರ್ಮದಲ್ಲಿರುವಂತಹ ಭವಿಷ್ಯ ಪುರಾಣದ ಪ್ರಕಾರ, ರಸ್ತೆಗಳೆರಡು ಛೇದಿಸುವಂತಹ ಜಾಗದಲ್ಲಿ ಮನೆ ನಿರ್ಮಾಣ ಮಾಡಬಾರದು. ಎರಡು ರಸ್ತೆಗಳು ಛೇದಿಸುವುದು ಮನೆಯಲ್ಲಿನ ಜನರಿಗೆ ಒಳ್ಳೆಯದಲ್ಲವೆಂದು ಪರಿಗಣಿಸಲಾಗಿದೆ. ಇದು ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಇದರಿಂದ ಸಂಗಾತಿಗಳ ಮಧ್ಯೆ ಪದೇ ಪದೇ ಜಗಳವಾಗಬಹುದು.

ವಧಾಗೃಹದ ಸಮೀಪ
ವಧಾಗೃಹದಿಂದ ಸಮೀಪ ಮನೆ ನಿರ್ಮಾಣ ಮಾಡಬಾರದು. ಯಾಕೆಂದರೆ ಇಲ್ಲಿಂದ ಬರುವಂತಹ ಶಕ್ತಿಯನ್ನು ನಕಾರಾತ್ಮಕವೆಂದು ಪರಿಗಣಿಸಲಾಗಿದೆ ಮತ್ತು ಇದು ಮನೆಯಲ್ಲಿ ವಾಸಿಸುವ ಜನರಿಗೆ ಅಶುಭವಾಗಿರುವುದು. ಇದರಿಂದ ಬಡತನ ಮತ್ತು ಮನೆಯ ಸಂತೋಷ ದೂರವಾಗುವುದು.

ಆಸ್ಪತ್ರೆಗೆ ಹತ್ತಿರವಾಗಿ..
ಆಸ್ಪತ್ರೆಗೆ ಹತ್ತಿರವಾಗಿರುವಂತಹ ಮನೆಯನ್ನು ಯಾವತ್ತೂ ಖರೀದಿಸಬೇಡಿ. ಈ ವಾತಾವರಣವು ಅಶುಭವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಇಲ್ಲಿರುವ ಕೀಟಾಣುಗಳು ಹಬ್ಬುವುದು ಎನ್ನುವ ಕಾರಣಕ್ಕೆ ಮಾತ್ರವಲ್ಲದೆ, ಪದೇ ಪದೇ ಸಂಭವಿಸುವ ಸಾವು ಹಾಗೂ ಇಲ್ಲಿನ ರೋಗಿಗಳ ಅನಾರೋಗ್ಯವು ನಿಮ್ಮ ಮನೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು.

ಅನಾಥ ಮನೆ ಸಮೀಪ
ಹಲವಾರು ವರ್ಷಗಳಿಂದಲೂ ಅನಾಥವಾಗಿರುವಂತಹ ಮನೆ ಅಥವಾ ಕಟ್ಟಡದಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದು ಎಂದು ಹೇಳಲಾಗುತ್ತದೆ. ಅರ್ಧ ಕುಸಿದಿರುವ, ಅರ್ಧ ಕಟ್ಟಿ ಬಿಡಲಾಗಿರುವ ಅಥವಾ ಅನಾಥವಾಗಿರುವಂತಹ ಕಟ್ಟಡ ಅಥವಾ ಮನೆ ಸಮೀಪ ನೀವು ಮನೆ ನಿರ್ಮಿಸಿದರೆ ಆಗ ವಾಸ್ತು ದೋಷ ಕಾಡುವುದು. ಇಂತಹ ಸ್ಥಳಗಳಲ್ಲಿ ಕೆಲವೊಂದು ಸಲ ಅಸಾಮಾನ್ಯ ಸಂಗತಿಗಳು ಘಟಿಸುವುದು.

ಮದ್ಯದಂಗಡಿ ಬಳಿ
ವಾಸ್ತು ಶಾಸ್ತ್ರದ ಪ್ರಕಾರ ಮದ್ಯದಂಗಡಿ ಸಮೀಪದಲ್ಲಿ ಮನೆ ನಿರ್ಮಾಣ ಮಾಡಬಾರದು. ಹಿಂದೂ ಧರ್ಮದ ಪ್ರಕಾರ ದುಷ್ಟಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳು ಮದ್ಯ, ಮಾಂಸಾಹಾರಿ ಆಹಾರ ಇತ್ಯಾದಿಗಳತ್ತ ಬೇಗನೆ ಆಕರ್ಷಿತವಾಗುವುದು. ಇದರಿಂದ ನೀವು ಮದ್ಯದಂಗಡಿ ಸಮೀಪ ಮನೆ ನಿರ್ಮಿಸಬೇಡಿ.

ಸ್ಮಶಾನದ ಹತ್ತಿರ
ಸ್ನಶಾನದ ಸಮೀಪ ಮನೆ ನಿರ್ಮಾಣ ಮಾಡಬಾರದು ಎನ್ನುವ ಮಾತು ಹಿಂದಿನಿಂದಲೂ ಕೇಳಿಬರುತ್ತಿದೆ. ಶಾಸ್ತ್ರದ ಪ್ರಕಾರ ಸ್ಮಶಾನದ ಸಮೀಪದ ಮನೆ ನಿರ್ಮಾಣ ಮಾಡುವುದರಿಂದ ಅಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಮನೆಗೆ ಬರುವುದು. ಇದಕ್ಕೆ ಹೊರತಾಗಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಕೆಲವೊಂದು ಮನೆಗಳು ಕೂಡ ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.



Click it and Unblock the Notifications