Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವ್ಯಾವ ಸ್ಥಳಗಳಲ್ಲಿ ಮನೆ ನಿರ್ಮಿಸಬಾರದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದರೆ ಅದರಿಂದ ಜೀವನದಲ್ಲಿ ಲೌಕಿಕ ಸುಖ, ಸಮೃದ್ಧಿ, ವ್ಯಾಪಾರದಲ್ಲಿ ಅಭಿವೃದ್ಧಿ, ವೃತ್ತಿಯಲ್ಲಿ ಶ್ರೇಯೋಭಿವೃದ್ಧಿ ಸಿಗುವುದು. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ವಾಸ್ತು ಪ್ರಕಾರವೇ ಮನೆ ಕಟ್ಟಲು ಮುಂದಾಗುತ್ತಿದ್ದಾರೆ. ವಾಸ್ತು ಪ್ರಕಾರ ನಿರ್ಮಾಣವಾದ ಮನೆಯಲ್ಲಿ ಹೆಚ್ಚಿನ ಧನಾತ್ಮಕ ಶಕ್ತಿಯು ಸಿಗುವುದು.

ಮನೆಯಲ್ಲಿ ಧನಾತ್ಮಕ ಶಕ್ತಿಯಿದ್ದರೆ ಆಗ ಜೀವನವು ಸುಗಮವಾಗಿ ಸಾಗಲು ನೆರವಾಗುವುದು. ವಾಸ್ತು ಪ್ರಕಾರ ಮನೆ ಕಟ್ಟಿದರೆ ಅದರಿಂದ ದೇವದೇವತೆಗಳು ಕೂಡ ನೆಲೆಸುವರು ಎಂದು ಹೇಳಲಾಗುತ್ತದೆ. ಅದಾಗ್ಯೂ, ಕೆಲವೊಂದು ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಲೇಬಾರದು ಎಂದಿರುತ್ತದೆ. ಇಂತಹ ಸ್ಥಳಗಳಲ್ಲಿ ನಾವು ಮನೆ ನಿರ್ಮಾಣ ಮಾಡಿದರೂ ಅಲ್ಲಿ ವಾಸ್ತು ಫಲಿಸುವುದಿಲ್ಲ. ಮನೆ ನಿರ್ಮಾಣ ಮಾಡಲು ಯೋಗ್ಯವಲ್ಲದೆ ಇರುವಂತಹ ಪ್ರದೇಶಗಳು ಯಾವುದು ಎಂದು ಈ ಲೇಖನದ ಮೂಲಕ ನಾವು ತಿಳಿದುಕೊಳ್ಳುವ.

ಎರಡು ರಸ್ತೆಗಳು ಛೇಧಿಸುವಲ್ಲಿ ಮನೆ ನಿರ್ಮಿಸಬಾರದು
ಹಿಂದೂ ಧರ್ಮದಲ್ಲಿರುವಂತಹ ಭವಿಷ್ಯ ಪುರಾಣದ ಪ್ರಕಾರ, ರಸ್ತೆಗಳೆರಡು ಛೇದಿಸುವಂತಹ ಜಾಗದಲ್ಲಿ ಮನೆ ನಿರ್ಮಾಣ ಮಾಡಬಾರದು. ಎರಡು ರಸ್ತೆಗಳು ಛೇದಿಸುವುದು ಮನೆಯಲ್ಲಿನ ಜನರಿಗೆ ಒಳ್ಳೆಯದಲ್ಲವೆಂದು ಪರಿಗಣಿಸಲಾಗಿದೆ. ಇದು ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಇದರಿಂದ ಸಂಗಾತಿಗಳ ಮಧ್ಯೆ ಪದೇ ಪದೇ ಜಗಳವಾಗಬಹುದು.

ವಧಾಗೃಹದ ಸಮೀಪ
ವಧಾಗೃಹದಿಂದ ಸಮೀಪ ಮನೆ ನಿರ್ಮಾಣ ಮಾಡಬಾರದು. ಯಾಕೆಂದರೆ ಇಲ್ಲಿಂದ ಬರುವಂತಹ ಶಕ್ತಿಯನ್ನು ನಕಾರಾತ್ಮಕವೆಂದು ಪರಿಗಣಿಸಲಾಗಿದೆ ಮತ್ತು ಇದು ಮನೆಯಲ್ಲಿ ವಾಸಿಸುವ ಜನರಿಗೆ ಅಶುಭವಾಗಿರುವುದು. ಇದರಿಂದ ಬಡತನ ಮತ್ತು ಮನೆಯ ಸಂತೋಷ ದೂರವಾಗುವುದು.

ಆಸ್ಪತ್ರೆಗೆ ಹತ್ತಿರವಾಗಿ..
ಆಸ್ಪತ್ರೆಗೆ ಹತ್ತಿರವಾಗಿರುವಂತಹ ಮನೆಯನ್ನು ಯಾವತ್ತೂ ಖರೀದಿಸಬೇಡಿ. ಈ ವಾತಾವರಣವು ಅಶುಭವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಇಲ್ಲಿರುವ ಕೀಟಾಣುಗಳು ಹಬ್ಬುವುದು ಎನ್ನುವ ಕಾರಣಕ್ಕೆ ಮಾತ್ರವಲ್ಲದೆ, ಪದೇ ಪದೇ ಸಂಭವಿಸುವ ಸಾವು ಹಾಗೂ ಇಲ್ಲಿನ ರೋಗಿಗಳ ಅನಾರೋಗ್ಯವು ನಿಮ್ಮ ಮನೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು.

ಅನಾಥ ಮನೆ ಸಮೀಪ
ಹಲವಾರು ವರ್ಷಗಳಿಂದಲೂ ಅನಾಥವಾಗಿರುವಂತಹ ಮನೆ ಅಥವಾ ಕಟ್ಟಡದಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದು ಎಂದು ಹೇಳಲಾಗುತ್ತದೆ. ಅರ್ಧ ಕುಸಿದಿರುವ, ಅರ್ಧ ಕಟ್ಟಿ ಬಿಡಲಾಗಿರುವ ಅಥವಾ ಅನಾಥವಾಗಿರುವಂತಹ ಕಟ್ಟಡ ಅಥವಾ ಮನೆ ಸಮೀಪ ನೀವು ಮನೆ ನಿರ್ಮಿಸಿದರೆ ಆಗ ವಾಸ್ತು ದೋಷ ಕಾಡುವುದು. ಇಂತಹ ಸ್ಥಳಗಳಲ್ಲಿ ಕೆಲವೊಂದು ಸಲ ಅಸಾಮಾನ್ಯ ಸಂಗತಿಗಳು ಘಟಿಸುವುದು.

ಮದ್ಯದಂಗಡಿ ಬಳಿ
ವಾಸ್ತು ಶಾಸ್ತ್ರದ ಪ್ರಕಾರ ಮದ್ಯದಂಗಡಿ ಸಮೀಪದಲ್ಲಿ ಮನೆ ನಿರ್ಮಾಣ ಮಾಡಬಾರದು. ಹಿಂದೂ ಧರ್ಮದ ಪ್ರಕಾರ ದುಷ್ಟಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳು ಮದ್ಯ, ಮಾಂಸಾಹಾರಿ ಆಹಾರ ಇತ್ಯಾದಿಗಳತ್ತ ಬೇಗನೆ ಆಕರ್ಷಿತವಾಗುವುದು. ಇದರಿಂದ ನೀವು ಮದ್ಯದಂಗಡಿ ಸಮೀಪ ಮನೆ ನಿರ್ಮಿಸಬೇಡಿ.

ಸ್ಮಶಾನದ ಹತ್ತಿರ
ಸ್ನಶಾನದ ಸಮೀಪ ಮನೆ ನಿರ್ಮಾಣ ಮಾಡಬಾರದು ಎನ್ನುವ ಮಾತು ಹಿಂದಿನಿಂದಲೂ ಕೇಳಿಬರುತ್ತಿದೆ. ಶಾಸ್ತ್ರದ ಪ್ರಕಾರ ಸ್ಮಶಾನದ ಸಮೀಪದ ಮನೆ ನಿರ್ಮಾಣ ಮಾಡುವುದರಿಂದ ಅಲ್ಲಿರುವಂತಹ ನಕಾರಾತ್ಮಕ ಶಕ್ತಿಗಳು ಮನೆಗೆ ಬರುವುದು. ಇದಕ್ಕೆ ಹೊರತಾಗಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಕೆಲವೊಂದು ಮನೆಗಳು ಕೂಡ ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.



Click it and Unblock the Notifications