Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಝೆನ್ ಕಥೆ: ಯಾರಿಗಾಗಿ ಕೆಲಸ ಮಾಡುತ್ತೀರಿ?

ಅದಕ್ಕೆ ಗುರು "ನಾನು ನನ್ನ ಗುರುಗಳಿಗಾಗಿ ಸೌದೆ ಒಡೆಯುವುದು ಮತ್ತು ನೀರು ಹೊರುವುದುನ್ನು ಮಾಡುತ್ತಿದ್ದೆ" ಎಂದು ಉತ್ತರಿಸಿದರು.
ಆ ವಿದ್ಯಾರ್ಥಿಗೆ ಗುರುಗಳ ಉತ್ತರ ವಿಚಿತ್ರ ಅನ್ನಿಸಿತು. ಅದರಲ್ಲಿ ಅಂತಹ ವಿಶೇಷತೆಯೂ ಅವನಿಗೆ ಕಂಡುಬರಲಿಲ್ಲ. ಝೆನ್ ಗುರುಗಳ ಉತ್ತರಕ್ಕೆ ತೃಪ್ತನಾಗದೆ, "ಹಾಗಾದರೆ ಈಗೇನು ಮಾಡುತ್ತಿದ್ದೀರಿ?" ವಿದ್ಯಾರ್ಥಿ ಗುರುಗಳ ಮೇಲೆ ಮತ್ತೊಂದು ಪ್ರಶ್ನೆ ಎಸೆದ.
ಗುರುಗಳಿಗೆ ವಿದ್ಯಾರ್ಥಿಯ ಆಂತರ್ಯದಲ್ಲಿ ಏನು ಇದೆ ಎಂಬುದು ಅರ್ಥವಾಯಿತು. ಆದರೆ, ಯಾವುದೇ ಭಾವನೆಯನ್ನು ತೋರಗೊಡದೆ, "ಆಗ ಗುರುಗಳಿಗಾಗಿ ಮಾಡುತ್ತಿದ್ದೆ. ಈಗ ನನಗೋಸ್ಕರ ಸೌದೆ ಒಡೆಯುತ್ತೇನೆ ಮತ್ತು ನೀರು ಹೊರುತ್ತೇನೆ" ಎಂದು ಮುಗುಮ್ಮಾಗಿ ಉತ್ತರಿಸಿದರು.
ಆಗಲೂ ವಿದ್ಯಾರ್ಥಿಗೆ ಸಮಾಧಾನವಾಗಲಿಲ್ಲ. ಅಷ್ಟಕ್ಕೆ ಆತ ಗುರುಗಳನ್ನು ಬಿಡಲೂ ಇಲ್ಲ. ಮುಂದುವರೆದು, "ಅರೆ! ಇದರಲ್ಲೇನು ವ್ಯತ್ಯಾಸವಿದೆ ಗುರುಗಳೆ? ಇದನ್ನು ನೀವು ಈ ಮೊದಲೂ ಮಾಡುತಿದ್ದಿರಿ ಈಗಲೂ ಮಾಡುತ್ತಿದ್ದೀರಿ" ಎಂದಾಗ ಬೊಕುಜು ನಸುನಕ್ಕು, "ಮೊದಲು ನಾನು ಇದನ್ನು ಅಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೆ. ಆದರೆ ಈಗ ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೇನೆ. ಅಷ್ಟೇ ವ್ಯತ್ಯಾಸ" ಎಂದು ಉತ್ತರಿಸಿದರು! ಆಗ ವಿದ್ಯಾರ್ಥಿ ಮರುಮಾತಾಡದೆ ತೆರಳಿದ.



Click it and Unblock the Notifications











