Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಝೆನ್ ಕಥೆ: ಯಾರಿಗಾಗಿ ಕೆಲಸ ಮಾಡುತ್ತೀರಿ?

ಅದಕ್ಕೆ ಗುರು "ನಾನು ನನ್ನ ಗುರುಗಳಿಗಾಗಿ ಸೌದೆ ಒಡೆಯುವುದು ಮತ್ತು ನೀರು ಹೊರುವುದುನ್ನು ಮಾಡುತ್ತಿದ್ದೆ" ಎಂದು ಉತ್ತರಿಸಿದರು.
ಆ ವಿದ್ಯಾರ್ಥಿಗೆ ಗುರುಗಳ ಉತ್ತರ ವಿಚಿತ್ರ ಅನ್ನಿಸಿತು. ಅದರಲ್ಲಿ ಅಂತಹ ವಿಶೇಷತೆಯೂ ಅವನಿಗೆ ಕಂಡುಬರಲಿಲ್ಲ. ಝೆನ್ ಗುರುಗಳ ಉತ್ತರಕ್ಕೆ ತೃಪ್ತನಾಗದೆ, "ಹಾಗಾದರೆ ಈಗೇನು ಮಾಡುತ್ತಿದ್ದೀರಿ?" ವಿದ್ಯಾರ್ಥಿ ಗುರುಗಳ ಮೇಲೆ ಮತ್ತೊಂದು ಪ್ರಶ್ನೆ ಎಸೆದ.
ಗುರುಗಳಿಗೆ ವಿದ್ಯಾರ್ಥಿಯ ಆಂತರ್ಯದಲ್ಲಿ ಏನು ಇದೆ ಎಂಬುದು ಅರ್ಥವಾಯಿತು. ಆದರೆ, ಯಾವುದೇ ಭಾವನೆಯನ್ನು ತೋರಗೊಡದೆ, "ಆಗ ಗುರುಗಳಿಗಾಗಿ ಮಾಡುತ್ತಿದ್ದೆ. ಈಗ ನನಗೋಸ್ಕರ ಸೌದೆ ಒಡೆಯುತ್ತೇನೆ ಮತ್ತು ನೀರು ಹೊರುತ್ತೇನೆ" ಎಂದು ಮುಗುಮ್ಮಾಗಿ ಉತ್ತರಿಸಿದರು.
ಆಗಲೂ ವಿದ್ಯಾರ್ಥಿಗೆ ಸಮಾಧಾನವಾಗಲಿಲ್ಲ. ಅಷ್ಟಕ್ಕೆ ಆತ ಗುರುಗಳನ್ನು ಬಿಡಲೂ ಇಲ್ಲ. ಮುಂದುವರೆದು, "ಅರೆ! ಇದರಲ್ಲೇನು ವ್ಯತ್ಯಾಸವಿದೆ ಗುರುಗಳೆ? ಇದನ್ನು ನೀವು ಈ ಮೊದಲೂ ಮಾಡುತಿದ್ದಿರಿ ಈಗಲೂ ಮಾಡುತ್ತಿದ್ದೀರಿ" ಎಂದಾಗ ಬೊಕುಜು ನಸುನಕ್ಕು, "ಮೊದಲು ನಾನು ಇದನ್ನು ಅಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೆ. ಆದರೆ ಈಗ ಪ್ರಜ್ಞಾಪೂರ್ವಕವಾಗಿ ಮಾಡುತ್ತಿದ್ದೇನೆ. ಅಷ್ಟೇ ವ್ಯತ್ಯಾಸ" ಎಂದು ಉತ್ತರಿಸಿದರು! ಆಗ ವಿದ್ಯಾರ್ಥಿ ಮರುಮಾತಾಡದೆ ತೆರಳಿದ.



Click it and Unblock the Notifications