Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಓರ್ವ ಯುವತಿ ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು

ಒಬ್ಬ ಸನ್ಯಾಸಿ ಆಕೆಯನ್ನು ನದಿ ದಾಟಿಸಲು ಹಿಂಜರಿದರು. ತನ್ನಿಂದ ಅದು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು. ಆದರೆ ಇನ್ನೊಬ್ಬ ಸನ್ಯಾಸಿ, ನಕ್ಕು ಹಿಂದೆ ಮುಂದೆ ನೋಡದೆ, ಇನ್ನೊಬ್ಬ ಸನ್ಯಾಸಿ ಚಕಿತರಾಗುವಂತೆ ಹಠಾತ್ತನೆ ಅವಳನ್ನು ತಮ್ಮ ಬುಜದ ಮೇಲೆ ಹೊತ್ತುಕೊಂಡು ನದಿಯಲ್ಲಿ ಸಾಗಿ ನದಿಯ ಆ ಕಡೆಯ ದಡದ ಮೇಲೆ ಇಳಿಸಿದರು. ಆ ಯುವತಿ ಅವರನ್ನು ವಂದಿಸಿ ಅಲ್ಲಿಂದ ಹೊರಟು ಹೊದಳು.
ಈ ಘಟನೆ ಯುವತಿಯನ್ನು ನದಿ ದಾಟಿಸಲು ಹಿಂಜರಿದ ಸನ್ಯಾಸಿಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿತು. ಈ ಸನ್ಯಾಸಿ ಏಕೆ ಹೀಗೆ ಮಾಡಿದರು ಎಂದು ಚಿಂತಿಸುತ್ತ ಸಾಗುತ್ತಿದ್ದರು. ಆದರೆ, ಯುವತಿಯನ್ನು ನದಿ ದಾಟಿಸಿದ ಸನ್ಯಾಸಿ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಮೌನವಾಗಿ ಮಂದಸ್ಮಿತರಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದರು.
ಹಾಗೇ ಸನ್ಯಾಸಿಗಳು ತಮ್ಮ ದಾರಿಯಲ್ಲಿ ಮುಂದುವರೆಯುತ್ತಿರಲು, ಇನ್ನೊಬ್ಬ ಮೌನವನ್ನು ತಾಳದೆ "ಸಹೋದರ, ನಮ್ಮ ಧಾರ್ಮಿಕ ತರಬೇತಿಯಲ್ಲಿ ಹೇಳಿರುವಂತೆ ನಾವುಗಳು ಹೆಂಗಸರ ಜೊತೆಗಿನ ಯಾವುದೇ ತರಹದ ಸಂಪರ್ಕದಿಂದ ದೂರ ಇರಬೇಕು. ಆದರೆ ನೀನು ಅವಳನ್ನು ನಿನ್ನ ಬುಜದ ಮೇಲೆ ಹೊತ್ತು ಸಾಗಿದೆಯಲ್ಲ!" ಎಂದು ಕೇಳಿದನು.
"ಸಹೋದರ", ಎನ್ನುತ್ತಾ ಎರಡನೇ ಸನ್ಯಾಸಿ ಉತ್ತರಿಸಿದರು, "ನಾನು ಅವಳನ್ನು ಆ ಕಡೆಯ ದಡದ ಮೇಲೆ ಇಳಿಸಿಬಿಟ್ಟೆ, ಆದರೆ ನೀನು ಇನ್ನೂ ಅವಳನ್ನು ಹೊತ್ತುಕೊಂಡೇ ಸಾಗುತ್ತಿರುವೆಯಲ್ಲ?" ಈ ಉತ್ತರದಿಂದ ಯುವತಿಗೆ ನದಿ ದಾಟಿಸಲು ಸಹಾಯ ಮಾಡದ ಇನ್ನೊಬ್ಬ ಸನ್ಯಾಸಿಗೆ ತನ್ನ ತಪ್ಪು ಏನೆಂದು ಅರಿವಾಯಿತು.
(ಈ ಕತೆಯ ಕೆಲವು ಪ್ರತಿಗಳಲ್ಲಿ ಯತಿಗಳು ಮಹಿಳೆಯನ್ನು ಕೆಸರು ಗುಂಡಿಯನ್ನು ದಾಟಿಸಿದ್ದಾಗಿ ಬಣ್ಣಿಸಲಾಗಿದೆ).



Click it and Unblock the Notifications