Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಓರ್ವ ಯುವತಿ ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು

ಒಬ್ಬ ಸನ್ಯಾಸಿ ಆಕೆಯನ್ನು ನದಿ ದಾಟಿಸಲು ಹಿಂಜರಿದರು. ತನ್ನಿಂದ ಅದು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು. ಆದರೆ ಇನ್ನೊಬ್ಬ ಸನ್ಯಾಸಿ, ನಕ್ಕು ಹಿಂದೆ ಮುಂದೆ ನೋಡದೆ, ಇನ್ನೊಬ್ಬ ಸನ್ಯಾಸಿ ಚಕಿತರಾಗುವಂತೆ ಹಠಾತ್ತನೆ ಅವಳನ್ನು ತಮ್ಮ ಬುಜದ ಮೇಲೆ ಹೊತ್ತುಕೊಂಡು ನದಿಯಲ್ಲಿ ಸಾಗಿ ನದಿಯ ಆ ಕಡೆಯ ದಡದ ಮೇಲೆ ಇಳಿಸಿದರು. ಆ ಯುವತಿ ಅವರನ್ನು ವಂದಿಸಿ ಅಲ್ಲಿಂದ ಹೊರಟು ಹೊದಳು.
ಈ ಘಟನೆ ಯುವತಿಯನ್ನು ನದಿ ದಾಟಿಸಲು ಹಿಂಜರಿದ ಸನ್ಯಾಸಿಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿತು. ಈ ಸನ್ಯಾಸಿ ಏಕೆ ಹೀಗೆ ಮಾಡಿದರು ಎಂದು ಚಿಂತಿಸುತ್ತ ಸಾಗುತ್ತಿದ್ದರು. ಆದರೆ, ಯುವತಿಯನ್ನು ನದಿ ದಾಟಿಸಿದ ಸನ್ಯಾಸಿ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಮೌನವಾಗಿ ಮಂದಸ್ಮಿತರಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದರು.
ಹಾಗೇ ಸನ್ಯಾಸಿಗಳು ತಮ್ಮ ದಾರಿಯಲ್ಲಿ ಮುಂದುವರೆಯುತ್ತಿರಲು, ಇನ್ನೊಬ್ಬ ಮೌನವನ್ನು ತಾಳದೆ "ಸಹೋದರ, ನಮ್ಮ ಧಾರ್ಮಿಕ ತರಬೇತಿಯಲ್ಲಿ ಹೇಳಿರುವಂತೆ ನಾವುಗಳು ಹೆಂಗಸರ ಜೊತೆಗಿನ ಯಾವುದೇ ತರಹದ ಸಂಪರ್ಕದಿಂದ ದೂರ ಇರಬೇಕು. ಆದರೆ ನೀನು ಅವಳನ್ನು ನಿನ್ನ ಬುಜದ ಮೇಲೆ ಹೊತ್ತು ಸಾಗಿದೆಯಲ್ಲ!" ಎಂದು ಕೇಳಿದನು.
"ಸಹೋದರ", ಎನ್ನುತ್ತಾ ಎರಡನೇ ಸನ್ಯಾಸಿ ಉತ್ತರಿಸಿದರು, "ನಾನು ಅವಳನ್ನು ಆ ಕಡೆಯ ದಡದ ಮೇಲೆ ಇಳಿಸಿಬಿಟ್ಟೆ, ಆದರೆ ನೀನು ಇನ್ನೂ ಅವಳನ್ನು ಹೊತ್ತುಕೊಂಡೇ ಸಾಗುತ್ತಿರುವೆಯಲ್ಲ?" ಈ ಉತ್ತರದಿಂದ ಯುವತಿಗೆ ನದಿ ದಾಟಿಸಲು ಸಹಾಯ ಮಾಡದ ಇನ್ನೊಬ್ಬ ಸನ್ಯಾಸಿಗೆ ತನ್ನ ತಪ್ಪು ಏನೆಂದು ಅರಿವಾಯಿತು.
(ಈ ಕತೆಯ ಕೆಲವು ಪ್ರತಿಗಳಲ್ಲಿ ಯತಿಗಳು ಮಹಿಳೆಯನ್ನು ಕೆಸರು ಗುಂಡಿಯನ್ನು ದಾಟಿಸಿದ್ದಾಗಿ ಬಣ್ಣಿಸಲಾಗಿದೆ).



Click it and Unblock the Notifications











