Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಓರ್ವ ಯುವತಿ ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು

ಒಬ್ಬ ಸನ್ಯಾಸಿ ಆಕೆಯನ್ನು ನದಿ ದಾಟಿಸಲು ಹಿಂಜರಿದರು. ತನ್ನಿಂದ ಅದು ಸಾಧ್ಯವಿಲ್ಲ ಎಂದು ಉತ್ತರ ನೀಡಿದರು. ಆದರೆ ಇನ್ನೊಬ್ಬ ಸನ್ಯಾಸಿ, ನಕ್ಕು ಹಿಂದೆ ಮುಂದೆ ನೋಡದೆ, ಇನ್ನೊಬ್ಬ ಸನ್ಯಾಸಿ ಚಕಿತರಾಗುವಂತೆ ಹಠಾತ್ತನೆ ಅವಳನ್ನು ತಮ್ಮ ಬುಜದ ಮೇಲೆ ಹೊತ್ತುಕೊಂಡು ನದಿಯಲ್ಲಿ ಸಾಗಿ ನದಿಯ ಆ ಕಡೆಯ ದಡದ ಮೇಲೆ ಇಳಿಸಿದರು. ಆ ಯುವತಿ ಅವರನ್ನು ವಂದಿಸಿ ಅಲ್ಲಿಂದ ಹೊರಟು ಹೊದಳು.
ಈ ಘಟನೆ ಯುವತಿಯನ್ನು ನದಿ ದಾಟಿಸಲು ಹಿಂಜರಿದ ಸನ್ಯಾಸಿಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿತು. ಈ ಸನ್ಯಾಸಿ ಏಕೆ ಹೀಗೆ ಮಾಡಿದರು ಎಂದು ಚಿಂತಿಸುತ್ತ ಸಾಗುತ್ತಿದ್ದರು. ಆದರೆ, ಯುವತಿಯನ್ನು ನದಿ ದಾಟಿಸಿದ ಸನ್ಯಾಸಿ ಮಾತ್ರ ಏನೂ ಆಗೇ ಇಲ್ಲ ಎಂಬಂತೆ ಮೌನವಾಗಿ ಮಂದಸ್ಮಿತರಾಗಿ ನಿಧಾನಗತಿಯಲ್ಲಿ ಸಾಗುತ್ತಿದ್ದರು.
ಹಾಗೇ ಸನ್ಯಾಸಿಗಳು ತಮ್ಮ ದಾರಿಯಲ್ಲಿ ಮುಂದುವರೆಯುತ್ತಿರಲು, ಇನ್ನೊಬ್ಬ ಮೌನವನ್ನು ತಾಳದೆ "ಸಹೋದರ, ನಮ್ಮ ಧಾರ್ಮಿಕ ತರಬೇತಿಯಲ್ಲಿ ಹೇಳಿರುವಂತೆ ನಾವುಗಳು ಹೆಂಗಸರ ಜೊತೆಗಿನ ಯಾವುದೇ ತರಹದ ಸಂಪರ್ಕದಿಂದ ದೂರ ಇರಬೇಕು. ಆದರೆ ನೀನು ಅವಳನ್ನು ನಿನ್ನ ಬುಜದ ಮೇಲೆ ಹೊತ್ತು ಸಾಗಿದೆಯಲ್ಲ!" ಎಂದು ಕೇಳಿದನು.
"ಸಹೋದರ", ಎನ್ನುತ್ತಾ ಎರಡನೇ ಸನ್ಯಾಸಿ ಉತ್ತರಿಸಿದರು, "ನಾನು ಅವಳನ್ನು ಆ ಕಡೆಯ ದಡದ ಮೇಲೆ ಇಳಿಸಿಬಿಟ್ಟೆ, ಆದರೆ ನೀನು ಇನ್ನೂ ಅವಳನ್ನು ಹೊತ್ತುಕೊಂಡೇ ಸಾಗುತ್ತಿರುವೆಯಲ್ಲ?" ಈ ಉತ್ತರದಿಂದ ಯುವತಿಗೆ ನದಿ ದಾಟಿಸಲು ಸಹಾಯ ಮಾಡದ ಇನ್ನೊಬ್ಬ ಸನ್ಯಾಸಿಗೆ ತನ್ನ ತಪ್ಪು ಏನೆಂದು ಅರಿವಾಯಿತು.
(ಈ ಕತೆಯ ಕೆಲವು ಪ್ರತಿಗಳಲ್ಲಿ ಯತಿಗಳು ಮಹಿಳೆಯನ್ನು ಕೆಸರು ಗುಂಡಿಯನ್ನು ದಾಟಿಸಿದ್ದಾಗಿ ಬಣ್ಣಿಸಲಾಗಿದೆ).



Click it and Unblock the Notifications