Just In
- 45 min ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 1 hr ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 2 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 2 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಷಯ ತೃತೀಯದಂದು ಏನು ಮಾಡಬೇಕು? ಏನು ಮಾಡಬಾರದು?
ಈ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್ 22ರಂದು ಆಚರಿಸಲಾಗುವುದು. ಅಕ್ಷಯ ತೃತೀಯವು ಪವಿತ್ರವಾದ ಹಬ್ಬವಾಗಿದೆ. ಈ ದಿನದಂದು ಮಾಡುವ ಎಲ್ಲಾ ಕಾರ್ಯದಲ್ಲೂ ನೀವು ಶುಭವನ್ನೇ ಕಂಡುಕೊಳ್ಳುತ್ತೀರಿ ಎಂಬ ಮಾತಿದ್ದು ಐಶ್ವರ್ಯವನ್ನು ಪಡೆದುಕೊಳ್ಳಲು ಈ ದಿನ ದೇವತೆಗಳನ್ನು ಸಂಪ್ರೀತಿ ಪಡಿಸಿದರೆ ಆಯಿತು ನಿಮ್ಮ ಕೆಲಸ ಕೈಗೂಡಿದಂತೆಯೇ. ಮಹಾಲಕ್ಷ್ಮೀ, ವಿಷ್ಣು ಮತ್ತು ಕುಬೇರನನ್ನು ಈ ದಿನ ವಿಶೇಷವಾಗಿ ಪೂಜಿಸಲಾಗುತ್ತದೆ. ಅಕ್ಷಯ ತೃತೀಯ ವಿಶೇಷ: ಜಾತಕದಲ್ಲಿ ದೋಷವಿದ್ದರೆ ಈ ಮಂತ್ರಗಳನ್ನು ಪಠಿಸಿ
ಅವರ ಮಂತ್ರಗಳನ್ನು ಉಚ್ಛರಿಸಿ ಅವರನ್ನು ಸಂಪ್ರೀತಿಪಡಿಸಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಅವಕಾಶವನ್ನು ಭಕ್ತರಿಗೆ ಅಕ್ಷಯ ತೃತೀಯ ಮಾಡಿಕೊಡುತ್ತದೆ. ಅಂತೆಯೇ ಅಕ್ಷಯ ತೃತೀಯ ನಿಮಗೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸುತ್ತದೆ ಮತ್ತು ನಿಮ್ಮ ಮನದಲ್ಲಿರುವ ಬಯಕೆಗಳನ್ನು ಈಡೇರಿಸುತ್ತದೆ. ಆದ್ದರಿಂದಲೇ ಈ ದಿನಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ದಿನಕ್ಕಾಗಿ ನೀವು ಏನೆಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ....
ಚಿನ್ನ ಖರೀದಿ
ಚಿನ್ನವನ್ನು ಲಕ್ಷ್ಮೀ ಮಾತೆಯ ಪ್ರತಿರೂಪವಾಗಿ ಕಂಡುಕೊಳ್ಳಲಾಗುತ್ತದೆ. ಈ ದೇವರನ್ನು ನೆನೆಯುವುದರಿಂದ ಸಿರಿ ಸಂಪತ್ತು ನಮ್ಮಲ್ಲಿ ಶಾಶ್ವತವಾಗಿರುತ್ತದೆ ಎಂಬ ಮಾತಿದೆ. ಈ ದಿನ ಚಿನ್ನವನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಬರುವುದರಿಂದ ಅದು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...
ಕಾರು ಅಥವಾ ಇತರ ವಾಹನಗಳ ಖರೀದಿ
ಈ ದಿನ ಕಾರು ಅಥವಾ ಇತರ ವಾಹನಗಳನ್ನು ಖರೀದಿಸುವುದು ಹೆಚ್ಚು ಪವಿತ್ರ ಮತ್ತು ವಿಶೇಷ ಎಂಬುದಾಗಿ ಪರಿಗಣಿಸಲಾಗಿದೆ. ಹಿಂದಿನ ಕಾಲದಲ್ಲಿ ಜನರು ಈ ದಿನದಂದು ಕುದುರೆ, ಎತ್ತಿನ ಗಾಡಿ, ದನಕರುಗಳನ್ನು ಖರೀದಿ ಮಾಡುತ್ತಿದ್ದರು. ಈ ದಿನ ನೀವು ವಾಹನಗಳನ್ನು ಖರೀದಿಸುವುದರಿಂದ ಇದು ನಿಮಗೆ ಸುರಕ್ಷತೆಯನ್ನು ಒದಗಿಸಲಿದೆ. ಅಂತೆಯೇ ವಾಹನ ಮಾರಾಟ ಸಂಸ್ಥೆಗಳೂ ಕೂಡ ಈ ದಿನ ವಿಶೇಷ ಆಫರ್ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತದೆ.
ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವುದು
ಪೂಜೆ, ಯಾಗ, ಯಜ್ಞಗಳನ್ನು ಈ ದಿನ ಒಳ್ಳೆಯದು ಶುಭ ಎಂಬ ನಂಬಿಕೆಯಿಂದ ನಡೆಸಲಾಗುತ್ತಿದೆ. ಇದರಿಂದ ನಿಮಗೆ ಶುಭವಾಗಿ ಉತ್ತಮ ಫಲಗಳು ದೊರೆಯುವುದು ಖಂಡಿತ.
ವಿವಾಹಗಳನ್ನೇರ್ಪಡಿಸುವುದು
ವಿವಾಹಗಳನ್ನು ಈ ದಿನ ನಡೆಸುವುದರಿಂದ ಸತಿಪತಿಯರಲ್ಲಿ ಆ ಬಾಂಧವ್ಯ ಗಟ್ಟಿಯಾಗಿರುತ್ತದೆ ಮತ್ತು ಯಾವುದೇ ಸಮಸ್ಯೆಗಳು ಅವರ ಬಂಧವನ್ನು ಮುರಿಯುವುದಿಲ್ಲ ಎಂಬುದಾಗಿ ನಂಬಲಾಗುತ್ತದೆ. ಆದ್ದರಿಂದಾಗಿಯೇ ಈ ದಿನ ಸಾವಿರಾರು ವಿವಾಹಗಳು ನಡೆಯುತ್ತಿರುತ್ತವೆ.
ಹೊಸ ಉದ್ಯಮದ ಆರಂಭ
ನೀವು ಹೊಸ ಉದ್ಯಮವನ್ನು ಆರಂಭಿಸಬೇಕೆಂದಿದ್ದೀರಾ ಎಂದಾದಲ್ಲಿ ಅಕ್ಷಯ ತೃತೀಯ ಅದಕ್ಕೆ ಪೂರಕವಾದುದಾಗಿದೆ. ಯಾವುದೇ ಆರಂಭಕ್ಕೆ ಅಕ್ಷಯ ತೃತೀಯ ಶುಭವಾಗಿದೆ.
ಹೊಸ ಮನೆಯನ್ನು ಖರೀದಿಸುವುದು
ನೀವು ಹೊಸ ಮನೆ ಅಥವಾ ಭೂಮಿಯನ್ನು ಖರೀದಿಸಬೇಕು ಎಂಬ ಯೋಜನೆಯನ್ನು ಮಾಡುತ್ತಿದ್ದಲ್ಲಿ ಅದಕ್ಕೆ ಅಕ್ಷಯ ತೃತೀಯ ಅತ್ಯುತ್ತಮವಾಗಿದೆ. ಈ ದಿನ ಗೃಹಪ್ರವೇಶದಂತಹ ಶುಭ ಕಾರ್ಯವನ್ನು ನಿಮಗೆ ಆಯೋಜಿಸಬಹುದಾಗಿದೆ. ಇದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
ಈ ದಿನ ಮಾಡಬಾರದ ಕಾರ್ಯಗಳು
ಪವಿತ್ರ ದಾರಗಳನ್ನು ಕಟ್ಟಿಕೊಳ್ಳುವುದು
ಈ ದಿನ ಉಪನಯನದಂತಹ ಶುಭ ಕಾರ್ಯಗಳನ್ನು ನಡೆಸಬಾರದು. ಇದು ಅಶುಭ ಎಂಬುದಾಗಿ ಪರಿಗಣಿಸಲಾಗಿದೆ.ವ್ರತವನ್ನು ಮುಗಿಸುವುದು
ಅಕ್ಷಯ ತೃತೀಯ ಎಂದರೆ ಶುಭದ ಆರಂಭ ಎಂದಾಗಿದೆ. ಈ ದಿನ ಉದ್ಯಾಪನ ಅಥವಾ ವ್ರತವನ್ನು ಪೂರ್ಣಗೊಳಿಸುವಂತಹ ಕಾರ್ಯಕ್ರಮಗಳನ್ನು ನಡೆಸಬಾರದು. ನೀವು ಇಂತಹದ್ದೇನಾದರೂ ಈ ಮೊದಲೇ ಆಯೋಜಿಸಿದ್ದರೂ ಕೂಡ ಅಕ್ಷಯ ತೃತೀಯದಂದು ಅದು ಮುಗಿಯುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.