Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ದುರ್ಗಾ ಮಾತೆಯ ಅವತಾರದ ಹಿಂದಿರುವ ಕುತೂಹಲಕಾರಿ ಕಥೆ
ನವರಾತ್ರಿ ಹಬ್ಬವು ದುರ್ಗಾ ದೇವಿಯನ್ನು ಆರಾಧಿಸುವ ಸಲುವಾಗಿ ನಡೆಯುವ ಹಬ್ಬವಾಗಿದೆ. ಈಕೆಯು ಕಾಳಿ, ಪಾರ್ವತಿ, ಗೌರಿ, ಸತಿ, ಮಹಮಾಯ ಮತ್ತು ಮಹಿಷಾಸುರ ಮರ್ದಿನಿ ಎಂದು ವಿವಿಧ ರೂಪಗಳಲ್ಲಿ ಪೂಜಿಸಲ್ಪಡುತ್ತಾಳೆ. ದುರ್ಗಾದೇವಿಯು ಪರಮಶಿವನ ಪತ್ನಿಯಾಗಿದ್ದು, ದೇವತೆಗಳಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿ ಶಕ್ತಿ ಎಂದು ಕರೆಯಲ್ಪಡುತ್ತಾಳೆ.
ಈ ದುರ್ಗಾದೇವಿಯ ಅವತಾರವು ಅತ್ಯಂತ ಕುತೂಹಲಕಾರಿಯಾಗಿದೆ. ಇದು ನವರಾತ್ರಿಯ ಜೊತೆಗೆ ತಳುಕನ್ನು ಹಾಕಿಕೊಂಡಿದೆ. ಒಂದಾನೊಂದು ಕಾಲದಲ್ಲಿ ಮಹಿಷಾಸುರನೆಂಬ ಎಮ್ಮೆ ರೂಪದ ರಾಕ್ಷಸನು ತನ್ನ ಅಪರಿಮಿತ ಸೈನ್ಯದೊಂದಿಗೆ ದಾಳಿ ಮಾಡಿ, ದೇವತೆಗಳನ್ನು ದೇವಲೋಕದಿಂದ ಹೊರಗೆ ಅಟ್ಟಿದನಂತೆ. ನವರಾತ್ರಿಯಲ್ಲಿ ಪಾಲಿಸುವ ಕೆಲ ಪದ್ಧತಿಗಳು
ಆಗ ದೇವತೆಗಳೆಲ್ಲರು ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು ಮತ್ತು ಮಹೇಶ್ವರರನ್ನು ಕಾಪಾಡುವಂತೆ ಕೇಳಿಕೊಂಡರು. ಆಗ ಆ ಮೂವರು ಸೇರಿ ತಮ್ಮ ದೇಹದಲ್ಲಿದ್ದ ಶಕ್ತಿಯನ್ನೆಲ್ಲ ಸೇರಿಸಿ ಒಂದು ಹೊಸ ದೇವತೆಯನ್ನು ಸೃಷ್ಟಿಸಿದರು. ಕೊನೆಗೆ ಎಲ್ಲಾ ದೇವರ ಸ್ವಲ್ಪ ಶಕ್ತಿಯು ಸೇರಿ ದುರ್ಗಾ ದೇವಿಯು ಅವತಾರವೆತ್ತಿದಳು.

ದುರ್ಗಾ ದೇವಿಯ ಅವತಾರವು ಎಲ್ಲಾ ದೇವರ ಶಕ್ತಿಗಳ ಸಂಗಮದಿಂದ ಆಯಿತು. ಇದರ ಫಲಿತಾಂಶವಾಗಿ ಆಕೆಯು ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿ ಗುರುತಿಸಲ್ಪಟ್ಟಿದ್ದಾಳೆ. 10 ಕೈಗಳನ್ನು ಹೊಂದಿರುವ ಸುಂದರವಾದ ಹೆಂಗಸಾಗಿ ದುರ್ಗಾ ದೇವಿಯು ಜನಿಸಿದ ನಂತರ, ಎಲ್ಲಾ ದೇವರುಗಳು ಆಕೆಗೆ ಉಡುಗೊರೆಗಳನ್ನು ನೀಡಿದರು. ಈಶ್ವರನು ಆಕೆಗೆ ತನ್ನ ತ್ರಿಶೂಲವನ್ನು ನೀಡಿದನು, ವಿಷ್ಣುವು ಆಕೆಗೆ ಚಕ್ರವನ್ನು ನೀಡಿದನು ಮತ್ತು ವರುಣ ದೇವನು ಆಕೆಗೆ ಪಾಶವನ್ನು ನೀಡಿದನು, ಇಂದ್ರನು ಆಕೆಗೆ ವಜ್ರಾಯುಧವನ್ನು ನೀಡಿದನು ಹಾಗೂ ವಾಯುವು ಆಕೆಗೆ ಬಾಣಗಳನ್ನು ನೀಡಿದನು. ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು
ಆಕೆಯ ವಸ್ತ್ರಗಳನ್ನು ಮತ್ತು ವಾಹನವಾದ ಸಿಂಹವನ್ನು ಪರ್ವತಗಳ ರಾಜನಾದ ಹಿಮವಂತನು ನೀಡಿದನು. ಈ ಎಲ್ಲಾ ಆಯುಧಗಳಿಂದ ಸನ್ನದ್ಧಳಾದ ದುರ್ಗಾ ದೇವಿಯು ಯುದ್ಧಕ್ಕೆ ಸಿದ್ಧಳಾದಳು. ಆಕೆಯು ರಾಕ್ಷಸರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು.
ಒಂಭತ್ತು ದಿನಗಳ ಪರ್ಯಾಂತ ನಡೆದ ಈ ಯುದ್ಧದಲ್ಲಿ ಮಹಿಷಾಸುರನು ಎಮ್ಮೆಯ ರೂಪವನ್ನು ತಾಳಿ ದೇವಿ ದುರ್ಗೆಯ ಮೇಲೆ ಆಕ್ರಮಣ ಮಾಡಿದನು. ಆದರೆ ದುರ್ಗಾ ದೇವಿಯು ಅವತಾರವೆತ್ತಿ ಬಂದಿದ್ದೇ ಮಹಿಷಾಸುರನನ್ನು ಸಂಹರಿಸಲು, ಆಕೆಯು ತನ್ನ ಸಿಂಹ ಮತ್ತು ಆಯುಧಗಳ ಸಹಾಯದಿಂದ ಅವನನ್ನು ಸಂಹರಿಸಿದಳು.
ಇದರಿಂದಾಗಿ ದೇವತೆಗಳು ಮತ್ತೆ ಸ್ವರ್ಗಕ್ಕೆ ವಾಪಸಾದರು. ಮುಂದೆ ಹಲವಾರು ಬಾರಿ ರಾಕ್ಷಸರು ಸ್ವರ್ಗಕ್ಕೆ ದಾಳಿ ಮಾಡಿದಾಗ ದೇವತೆಗಳು ದುರ್ಗಾ ದೇವಿಯ ಮೊರೆ ಹೋದರು. ಈಗಾಗಿ ಅಂದಿನಿಂದ ನವರಾತ್ರಿ ಹಬ್ಬವು ದುರ್ಗಾ ದೇವಿಯ ವಿಜಯದ ನೆನಪಿಗಾಗಿ ಆಚರಿಸಿಕೊಂಡು ಬರಲಾಗುತ್ತಿದೆ.



Click it and Unblock the Notifications