Just In
- 1 hr ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 1 hr ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 13 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 14 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- Sports CSK vs LSG IPL 2024: ಚೆನ್ನೈನ ಚೆಪಾಕ್ ಕೋಟೆಯನ್ನು ಭೇದಿಸುವುದೇ ಲಕ್ನೋ?; ಸಂಭಾವ್ಯ ಆಡುವ 11ರ ಬಳಗ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- News Ballari Lok Sabha Election: ಶ್ರೀರಾಮುಲು ಪತ್ನಿ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಣ್ಣಿಮೆ ಅಮಾವಾಸ್ಯೆ ಎನ್ನುವುದು ಚಂದ್ರನಿಗೆ ಗಣೇಶ ಕೊಟ್ಟ ಶಾಪ!
ನಮ್ಮ ಹಿಂದೂ ದೇವತೆಗಳ ಪುರಾಣದಲ್ಲಿ ಅನೇಕ ಚಿಕ್ಕ ಪುಟ್ಟ ಕಥೆಗಳಿವೆ. ಅದರಲ್ಲೂ ಭಗವಾನ್ ಗಣಪತಿ, ಶ್ರೀಕೃಷ್ಣ, ಹನುಮಂತ ಸೇರಿದಂತೆ ಅನೇಕ ದೇವತೆಗಳ ಬಾಲ್ಯ ಜೀವನದ ಕಥೆಗಳು ಸುಂದರವಾಗಿವೆ. ಪ್ರತಿಯೊಂದು ಸಹ ತನ್ನದೇ ಆದ ವಿಶೇಷತೆ ಹಾಗೂ ಅರ್ಥವನ್ನು ನೀಡುತ್ತವೆ.
ಕೆಲವೊಂದು ನಮ್ಮ ಹಬ್ಬ-ಹರಿದಿನಗಳ ಕಾರಣಗಳನ್ನು ಬಿಚ್ಚಿಡುತ್ತವೆ. ಅಂತಹ ಕಥೆಗಳಲ್ಲಿ ಪ್ರಥಮ ಪೂಜಿತ ಗಣೇಶನ ಕಥೆಗಳು ಒಂದು. ಗಣೇಶನ ವಿಗ್ರಹ ಅಥವಾ ಫೋಟೋಗಳಲ್ಲಿ ದಂತವೊಂದು ಅರ್ಧ ಮುರಿದಂತೆ ಇರುತ್ತದೆ. ಅಥವಾ ತನ್ನ ದಂತದ ಚೂರನ್ನು ಕೈಯಲ್ಲಿ ಹಿಡಿದುಕೊಂಡಿರುವಂತೆ ಇರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸುಂದರ ಕಥೆ ಇಲ್ಲಿದೆ...
ಕಥೆ-1
ಒಮ್ಮೆ ಗಣೇಶನು ಚೌತಿ ಹಬ್ಬದಂದು ಭಕ್ತರೆಲ್ಲರೂ ನೀಡಿರುವ ಸಿಹಿ ತಿಂಡಿಗಳನ್ನು ತಿಂದು, ತನ್ನ ವಾಹನವಾದ ಕ್ರೌಂಚಾ ಎಂಬ ಇಲಿಯ ಮೇಲೆ ಕುಳಿತು ಪ್ರಯಾಣಿಸುತ್ತಿದ್ದನು. ಹೀಗೆ ಸಾಗುತ್ತಿದ್ದಾಗ, ದಾರಿಯಲ್ಲೊಂದು ಹಾವು ಎದುರಾಯಿತು. ಇದನ್ನು ಕಂಡ ಇಲಿ ಭಯದಿಂದ ಹೆಜ್ಜೆಯನ್ನು ಹಿಂದೆ ಇಟ್ಟಿತು. ಇಲಿಯ ಭಯದಿಂದಾಗಿ ಗಣೇಶನು ಎಡವಿ ಬಿದ್ದನು. ಆಗ ಗಣೇಶನ ಹೊಟ್ಟೆ ಒಡೆದು, ತಿಂಡಿಗಳೆಲ್ಲಾ ಹೊರ ಬಿದ್ದವು. ಗಣೇಶ ಬೇಸರದಿಂದ ತಿಂಡಿಯನ್ನು ಪುನಃ ತುಂಬಿಕೊಂಡು, ಹಾವನ್ನು ಹೊಟ್ಟೆಗೆ ಬಿಗಿದುಕೊಂಡನು.
ಕಥೆ-2
ಇದನ್ನು ಗಮನಿಸುತ್ತಿದ್ದ ಚಂದ್ರನು ಗಣಪತಿಯ ಸ್ಥಿತಿಗೆ ಅಪಹಾಸ್ಯ ಮಾಡುತ್ತಾ ನಗಲಾರಂಭಿಸಿದನು. ಬೇಸರ ಹಾಗೂ ಕೋಪಗೊಂಡ ಗಣೇಶ ತನ್ನ ದಂತದ ತುದಿಯನ್ನು ಮುರಿದು, ಶಕ್ತಿಯಿಂದ ಚಂದ್ರನೆಡೆಗೆ ಎಸೆದನು.
ಕಥೆ-3
ಹೀಗೆ ಚಂದ್ರನಿಗೆ ತನ್ನ ಹಲ್ಲನ್ನು ಮುರಿದು ಹೊಡೆದ ಕಥೆಯು ಒಂದು ದಂತಕಥೆಯಲ್ಲಿ ಒಂದಾಯಿತು. ಚಂದ್ರನ ಸೌಂದರ್ಯ ಹಾಗೂ ಅಹಂಕಾರವನ್ನು ಖಂಡಿಸಿ, ಆಕಾಶದಲ್ಲಿ ಒಮ್ಮೆ ಸಂಪೂರ್ಣವಾಗಿ ಕಣ್ಮರೆಯಾಗಬೇಕು ಎಂದು ಶಾಪ ನೀಡಿದನು.
ಕಥೆ-4
ಗಣೇಶನ ಕೋಪಕ್ಕೆ ಗುರಿಯಾದ ಚಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಜೊತೆಗೆ ಗಣೇಶನಲ್ಲಿ ಕ್ಷಮೆ ಯಾಚಿಸಿ ಶಾಪದಿಂದ ಮುಕ್ತಿ ಹೊಂದಲು ಕೇಳಿಕೊಂಡನು. ಆಗ ಗಣೇಶ ಒಮ್ಮೆ ಶಾಪ ನೀಡಿದ ಮೇಲೆ ಪುನಃ ಹಿಂದೆ ಪಡೆಯಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದನು. ತಿಂಗಳಲ್ಲಿ ಒಮ್ಮೆ ಮಾತ್ರ ಪೂರ್ಣ ಚಂದ್ರನಾಗಿ ಸುಂದರವಾಗಿ ಕಾಣಬಹುದು. ನಂತರ ಪುನಃ ಮರೆಯಾಗುತ್ತಾ ಹೋಗಬೇಕು ಎಂದು ಹೇಳಿದನು.
ಕಥೆ-5
ಹಾಗಾಗಿಯೇ ನಾವು ಚಂದ್ರನನ್ನು ತಿಂಗಳಲ್ಲಿ ಪೂರ್ಣಿಮೆ/ಹುಣ್ಣಿಮೆಯ ದಿನ ಪೂರ್ಣವಾಗಿ ನೋಡಲು ಸಾಧ್ಯ. ಉಳಿದ ದಿನಗಳಲ್ಲಿ ಕ್ಷೀಣಿಸುತ್ತಾ ಹೋಗುತ್ತಾನೆ. ಅಮವಾಸ್ಯೆಯ ದಿನ ಸಂಪೂರ್ಣವಾಗಿ ಮಾಯವಾಗುತ್ತಾನೆ.