For Quick Alerts
ALLOW NOTIFICATIONS  
For Daily Alerts

ಹುಣ್ಣಿಮೆ ಅಮಾವಾಸ್ಯೆ ಎನ್ನುವುದು ಚಂದ್ರನಿಗೆ ಗಣೇಶ ಕೊಟ್ಟ ಶಾಪ!

By Manu
|

ನಮ್ಮ ಹಿಂದೂ ದೇವತೆಗಳ ಪುರಾಣದಲ್ಲಿ ಅನೇಕ ಚಿಕ್ಕ ಪುಟ್ಟ ಕಥೆಗಳಿವೆ. ಅದರಲ್ಲೂ ಭಗವಾನ್ ಗಣಪತಿ, ಶ್ರೀಕೃಷ್ಣ, ಹನುಮಂತ ಸೇರಿದಂತೆ ಅನೇಕ ದೇವತೆಗಳ ಬಾಲ್ಯ ಜೀವನದ ಕಥೆಗಳು ಸುಂದರವಾಗಿವೆ. ಪ್ರತಿಯೊಂದು ಸಹ ತನ್ನದೇ ಆದ ವಿಶೇಷತೆ ಹಾಗೂ ಅರ್ಥವನ್ನು ನೀಡುತ್ತವೆ.

ಕೆಲವೊಂದು ನಮ್ಮ ಹಬ್ಬ-ಹರಿದಿನಗಳ ಕಾರಣಗಳನ್ನು ಬಿಚ್ಚಿಡುತ್ತವೆ. ಅಂತಹ ಕಥೆಗಳಲ್ಲಿ ಪ್ರಥಮ ಪೂಜಿತ ಗಣೇಶನ ಕಥೆಗಳು ಒಂದು. ಗಣೇಶನ ವಿಗ್ರಹ ಅಥವಾ ಫೋಟೋಗಳಲ್ಲಿ ದಂತವೊಂದು ಅರ್ಧ ಮುರಿದಂತೆ ಇರುತ್ತದೆ. ಅಥವಾ ತನ್ನ ದಂತದ ಚೂರನ್ನು ಕೈಯಲ್ಲಿ ಹಿಡಿದುಕೊಂಡಿರುವಂತೆ ಇರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸುಂದರ ಕಥೆ ಇಲ್ಲಿದೆ...

ಕಥೆ-1

ಕಥೆ-1

ಒಮ್ಮೆ ಗಣೇಶನು ಚೌತಿ ಹಬ್ಬದಂದು ಭಕ್ತರೆಲ್ಲರೂ ನೀಡಿರುವ ಸಿಹಿ ತಿಂಡಿಗಳನ್ನು ತಿಂದು, ತನ್ನ ವಾಹನವಾದ ಕ್ರೌಂಚಾ ಎಂಬ ಇಲಿಯ ಮೇಲೆ ಕುಳಿತು ಪ್ರಯಾಣಿಸುತ್ತಿದ್ದನು. ಹೀಗೆ ಸಾಗುತ್ತಿದ್ದಾಗ, ದಾರಿಯಲ್ಲೊಂದು ಹಾವು ಎದುರಾಯಿತು. ಇದನ್ನು ಕಂಡ ಇಲಿ ಭಯದಿಂದ ಹೆಜ್ಜೆಯನ್ನು ಹಿಂದೆ ಇಟ್ಟಿತು. ಇಲಿಯ ಭಯದಿಂದಾಗಿ ಗಣೇಶನು ಎಡವಿ ಬಿದ್ದನು. ಆಗ ಗಣೇಶನ ಹೊಟ್ಟೆ ಒಡೆದು, ತಿಂಡಿಗಳೆಲ್ಲಾ ಹೊರ ಬಿದ್ದವು. ಗಣೇಶ ಬೇಸರದಿಂದ ತಿಂಡಿಯನ್ನು ಪುನಃ ತುಂಬಿಕೊಂಡು, ಹಾವನ್ನು ಹೊಟ್ಟೆಗೆ ಬಿಗಿದುಕೊಂಡನು.

ಕಥೆ-2

ಕಥೆ-2

ಇದನ್ನು ಗಮನಿಸುತ್ತಿದ್ದ ಚಂದ್ರನು ಗಣಪತಿಯ ಸ್ಥಿತಿಗೆ ಅಪಹಾಸ್ಯ ಮಾಡುತ್ತಾ ನಗಲಾರಂಭಿಸಿದನು. ಬೇಸರ ಹಾಗೂ ಕೋಪಗೊಂಡ ಗಣೇಶ ತನ್ನ ದಂತದ ತುದಿಯನ್ನು ಮುರಿದು, ಶಕ್ತಿಯಿಂದ ಚಂದ್ರನೆಡೆಗೆ ಎಸೆದನು.

ಕಥೆ-3

ಕಥೆ-3

ಹೀಗೆ ಚಂದ್ರನಿಗೆ ತನ್ನ ಹಲ್ಲನ್ನು ಮುರಿದು ಹೊಡೆದ ಕಥೆಯು ಒಂದು ದಂತಕಥೆಯಲ್ಲಿ ಒಂದಾಯಿತು. ಚಂದ್ರನ ಸೌಂದರ್ಯ ಹಾಗೂ ಅಹಂಕಾರವನ್ನು ಖಂಡಿಸಿ, ಆಕಾಶದಲ್ಲಿ ಒಮ್ಮೆ ಸಂಪೂರ್ಣವಾಗಿ ಕಣ್ಮರೆಯಾಗಬೇಕು ಎಂದು ಶಾಪ ನೀಡಿದನು.

ಕಥೆ-4

ಕಥೆ-4

ಗಣೇಶನ ಕೋಪಕ್ಕೆ ಗುರಿಯಾದ ಚಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಜೊತೆಗೆ ಗಣೇಶನಲ್ಲಿ ಕ್ಷಮೆ ಯಾಚಿಸಿ ಶಾಪದಿಂದ ಮುಕ್ತಿ ಹೊಂದಲು ಕೇಳಿಕೊಂಡನು. ಆಗ ಗಣೇಶ ಒಮ್ಮೆ ಶಾಪ ನೀಡಿದ ಮೇಲೆ ಪುನಃ ಹಿಂದೆ ಪಡೆಯಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದನು. ತಿಂಗಳಲ್ಲಿ ಒಮ್ಮೆ ಮಾತ್ರ ಪೂರ್ಣ ಚಂದ್ರನಾಗಿ ಸುಂದರವಾಗಿ ಕಾಣಬಹುದು. ನಂತರ ಪುನಃ ಮರೆಯಾಗುತ್ತಾ ಹೋಗಬೇಕು ಎಂದು ಹೇಳಿದನು.

ಕಥೆ-5

ಕಥೆ-5

ಹಾಗಾಗಿಯೇ ನಾವು ಚಂದ್ರನನ್ನು ತಿಂಗಳಲ್ಲಿ ಪೂರ್ಣಿಮೆ/ಹುಣ್ಣಿಮೆಯ ದಿನ ಪೂರ್ಣವಾಗಿ ನೋಡಲು ಸಾಧ್ಯ. ಉಳಿದ ದಿನಗಳಲ್ಲಿ ಕ್ಷೀಣಿಸುತ್ತಾ ಹೋಗುತ್ತಾನೆ. ಅಮವಾಸ್ಯೆಯ ದಿನ ಸಂಪೂರ್ಣವಾಗಿ ಮಾಯವಾಗುತ್ತಾನೆ.

English summary

Story behind Ganesha's Left Tusk Is Depicted As Broken

Lord Ganesha toppled and fell flat on the ground. All the modaks he had eaten also came out of his body. Lord Ganesha gathered the sweets and stuffed them back into his stomach. In the gust of anger and frustration he caught the snake that caused his rat to stumble and tied it around his belly.
X
Desktop Bottom Promotion