Just In
Don't Miss
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Automobiles ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದೂ ಸಂಸ್ಕೃತಿಯ ಪ್ರತೀಕ -ಹಣೆಯ ಮೇಲಿನ ಸಿಂಧೂರ
ಹಿಂದಿನ ಕಾಲದ ಭಾರತೀಯ ಮಹಿಳೆಯರ ಹಣೆಯನ್ನು ನೋಡಿದರೆ ದೊಡ್ಡದಾದ ಕುಂಕುಮದ ಬೊಟ್ಟು ಕಾಣಸಿಗುವುದು. ಇಂದಿನ ಯುವತಿಯರು ಇದನ್ನು ನೋಡಿ ನಗಬಹುದು. ಆದರೆ ಖಂಡಿತವಾಗಿಯೂ ಮಹಿಳೆಯರು ಭಾರತೀಯ ಸಂಸ್ಕೃತಿ ಪ್ರತೀಕವಾಗಿ ಹಣೆಗೆ ದೊಡ್ಡ ಕುಂಕುಮದ ಬೊಟ್ಟನ್ನಿಡುತ್ತಾರೆ. ಇದು ಇಂದಿನ ಪೀಳಿಗೆಯ ಮಹಿಳೆಯರಲ್ಲಿ ಕಣ್ಮರೆಯಾಗುತ್ತಿದೆ. ಇಂತಹ ಕುಂಕುಮದ ಬೊಟ್ಟನ್ನು ಹಿಂದಿನಿಂದಲೂ ಭಾರತೀಯ ಮಹಿಳೆಯರು ಹಣೆಗೆ ಇಡುತ್ತಲಿದ್ದರು.
ಅದರಲ್ಲೂ ವಿವಾಹಿತ ಮಹಿಳೆಯರು ಇದನ್ನು ಕಡ್ಡಾಯವಾಗಿ ಇಡಲೇಬೇಕಿತ್ತು. ಸಿಂಧೂರ ಅಥವಾ ಕುಂಕುಮದ ಬೊಟ್ಟು ಇಡುವುದು ಕೇವಲ ಭಾರತೀಯ ಸಂಸ್ಕೃತಿ ಮಾತ್ರವಲ್ಲ, ಇದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳು ಕೂಡ ಇದೆ. ಭಾರತದಲ್ಲಿ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಕುಂಕುಮ ಇಡುವಂತಹ ಸಂಸ್ಕೃತಿಯ ಬದಲಾಗುತ್ತಿರುತ್ತದೆ. ಆದರೆ ಪೌರಾಣಿಕವಾಗಿ ಇದಕ್ಕೆ ಕೆಲವು ಕಾರಣಗಳು ಇವೆ. ಭಾರತದಲ್ಲಿ ವಿವಾಹಿತ ಮಹಿಳೆಯರಿಗೆ ಭೂಷಣ ಮಾತ್ರವಲ್ಲದೆ ವೈಜ್ಞಾನಿಕವಾಗಿ ಕೆಲವು ಕಾರಣಗಳನ್ನು ಈ ಲೇಖನ ಮೂಲಕ ತಿಳಿದುಕೊಳ್ಳುವ....
ಫಲವತ್ತತೆಯ ಪ್ರತ
ಭಾರತದಲ್ಲಿ ಸಮಾಜದ ಏಕತೆ ಬರುವುದು ಕುಟುಂಬದಿಂದ. ಅದರಲ್ಲೂ ಕುಟುಂಬದಲ್ಲಿ ಮಹಿಳೆಯ ಫಲವತ್ತತೆಯು ತುಂಬಾ ಮುಖ್ಯವಾಗಿರುವುದು. ಫಲವತ್ತತೆಯ ಸಂಕೇತವು ಋತುಚಕ್ರದ ರಕ್ತದ ಬಣ್ಣದ್ದಾಗಿದೆ. ರಕ್ತದ ಬಣ್ಣವು ಕೆಂಪು. ಇದರಿಂದಾಗಿ ಫಲವತ್ತತೆಯ ಬಣ್ಣ ಕೂಡ ಕೆಂಪು. ಮಹಿಳೆಗೆ ತನ್ನೊಳಗೆ ಮತ್ತೊಂದು ಜೀವವನ್ನು ಹೊಂದುವ ಶಕ್ತಿಯಿದೆ. ಜೀವ ನೀಡುವಂತಹ ತನ್ನ ಪಾತ್ರಕ್ಕೆ ಮಹಿಳೆಯು ಧನ್ಯವಾದ ಅರ್ಪಿಸಲು ಸಿಂಧೂರವಿಡಲಾಗುತ್ತದೆ. ಆಕೆಗೆ ತನ್ನ ಜವಾಬ್ದಾರಿಗಳ ಬಗ್ಗೆ ಕೂಡ ಅರಿವಿರುವುದು.
ಆಜ್ಞ ಚಕ್ರ ರಕ್ಷಿಸುವುದು
ದೇಹದಲ್ಲಿ ಏಳು ಕಡೆಗಳಲ್ಲಿ ಚಕ್ರ ಅಥವಾ ಕೇಂದ್ರವಿದೆಯೆಂದು ನಮ್ಮ ಯೋಗ ಚಿಕಿತ್ಸೆಯು ಹೇಳುತ್ತದೆ. ಈ ಚಕ್ರಗಳು ಶಕ್ತಿಯ ಕೇಂದ್ರಗಳೆಂದು ಪರಿಗಣಿಸಲಾಗಿದೆ ಮತ್ತು ಇದೇ ಕೇಂದ್ರದಲ್ಲಿ ಅಂತಃಸ್ರಾವಕ ಗ್ರಂಥಿಯು ನೆಲೆನಿಂತಿದೆ. ಈ ಚಕ್ರಗಳು ಮೂಲಾಧಾರ ಚಕ್ರ(ಮೂಲ ಚಕ್ರ), ಸ್ವಾಧಿತಾನ್(ತ್ರಿಕಾಸ್ತಿ), ಮನಿಪುರ(ಸೌರ ಪ್ಲೆಕ್ಸಸ್), ಅನಾಹತ್(ಹೃದಯ), ವಿಶುದ್ಧ(ಗಂಟಲು), ಅಜ್ಞಾ(ಹಣೆ) ಮತ್ತು ಸಹಸ್ರರಾ(ಕಿರೀಟ). ಅಜ್ಞಾ ಚಕ್ರವು ತುಂಬಾ ಮಹತ್ವದ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಮುಖವು ತೆರೆದಿರುವ ಕಾರಣದಿಂದ ಸುಲಭವಾಗಿ ಶಕ್ತಿಯು ಹಾಳಾಗುವುದು. ಇದನ್ನು ರಕ್ಷಿಸುವ ಸಲುವಾಗಿ ಸಿಂಧೂರ ಹಚ್ಚಲಾಗುತ್ತದೆ. ಇದು ಮಹಿಳೆಯರು ಹಾಗೂ ಪುರುಷರಿಗೆ ಅನ್ವಯವಾಗುವುದು.
ಆಯುರ್ವೇದ ಪ್ರಕಾರ ಮಹತ್ವ
ಹಲವಾರು ಶತಮಾನಗಳಿಂದಲೂ ಆಯುರ್ವೇದವನ್ನು ಭಾರತದಲ್ಲಿ ಒಂದು ಚಿಕಿತ್ಸೆ ಮತ್ತು ಆರೋಗ್ಯ ಕ್ರಮವಾಗಿ ಅಳವಡಿಸಿಕೊಂಡು ಬರಲಾಗುತ್ತಾ ಇದೆ. ಆಯುರ್ವೇದದ ಪ್ರಕಾರ ಅರಶಿನ, ಲಿಂಬೆ ಮತ್ತು ಪಾದರಸದ ಮಿಶ್ರಣವು ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವುದು ಮತ್ತು ಮಹಿಳೆಯರಲ್ಲಿ ಫಲವತ್ತತೆ ಹೆಚ್ಚಿಸುವುದು. ಈ ಮಿಶ್ರಣವನ್ನೇ ಕುಂಕುಮವೆಂದು ಕರೆಯಲಾಗುತ್ತದೆ. ಇದನ್ನು ಹಣೆಗೆ ಹಚ್ಚಲಾಗುತ್ತದೆ. ಭಾರತೀಯರು, ಅದರಲ್ಲೂ ಉತ್ತರ ಭಾರತ ಮತ್ತು ಬಿಹಾರದ ಮಹಿಳೆಯರು ಕೂದಲು ಇಬ್ಭಾಗವಾಗುವ ಹಣೆಯ ಭಾಗಕ್ಕೆ ದೊಡ್ಡ ಸಿಂಧೂರವನ್ನಿಡುವರು. ಇದನ್ನೇ ಸಹಸ್ರರಾ ಅಥವಾ ಕಿರೀಟ ಚಕ್ರವೆನ್ನುವರು.
ಇದು ಭಾರತೀಯ ಸಂಸ್ಕೃತಿಯ ಪ್ರತೀಕ
ಭಾರತೀಯರು ಒಂದಲ್ಲಾ ಒಂದು ರೀತಿಯಲ್ಲಿ ಹಣೆಗೆ ಸಿಂಧೂರವನ್ನು ಇಟ್ಟುಕೊಳ್ಳುವಂತಹ ಸಂಪ್ರದಾಯವನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಅದರಲ್ಲೂ ವಿವಾಹಿತ ಮಹಿಳೆಯರು ದಿನನಿತ್ಯ ಹಣೆಗೆ ಸಿಂಧೂರವನ್ನಿಡುವರು. ಸಿಂಧೂರವನ್ನಿಡದ ಮಹಿಳೆಯರು ಅಪೂರ್ಣವಾಗುವರು. ವಿವಾಹಿತ ಮಹಿಳೆಯರು ಇನ್ನೊಬ್ಬ ಮಹಿಳೆಗೆ ಸಿಂಧೂರವನ್ನು ನೀಡುವುದು ತುಂಬಾ ಶುಭ ಹಾಗೂ ಅವರಿಗೆ ತೋರಿಸುವ ಗೌರವವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ ಪ್ರತಿಯೊಂದು ಹಬ್ಬದ ವೇಳೆ ವಿವಾಹಿತ ಮಹಿಳೆಯರು ಬೇರೊಂದು ಮನೆಗೆ ಭೇಟಿ ನೀಡುವಾಗ ಅವರಿಗೆ ಕುಂಕುಮ ಹಾಗೂ ಅರಶಿನ ನೀಡಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ವಿಜಯದಶಮಿ ವೇಳೆ ಸಿಂಧೂರ ಖೇಲಾ ಎನ್ನುವ ಆಚರಣೆಯಿದೆ. ಈ ವೇಳೆ ಮಹಿಳೆಯರು ದುರ್ಗಾ ದೇವಿಗೆ ಸಿಂಧೂರ ಹಚ್ಚಲಾಗುತ್ತದೆ ಮತ್ತು ಬಳಿಕ ಇದನ್ನು ಪ್ರತಿಯೊಬ್ಬ ಮಹಿಳೆಗೂ ನೀಡಲಾಗುತ್ತದೆ. ಮಹಿಳೆಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆದಿಶಕ್ತಿ ಎಂದು ಇದರ ಅರ್ಥವಾಗಿದೆ.
ದೇವತೆಗಳಿಗೆ ಅರ್ಪಣೆ
ವಧುವನ್ನು ಪ್ರತಿನಿಧಿಸುವಂತಹ ದುರ್ಗೆ, ತಾಯಿ ಹಾಗೂ ಪತ್ನಿಯೆಂದು ಕರೆಯಲ್ಪಡುವ ಮತ್ತೊಂದು ಆದಿಶಕ್ತಿ ಗೌರಿ, ಧನ ಹಾಗೂ ಸಮೃದ್ಧಿ ನೀಡುವ ಮಾತೆ ಲಕ್ಷ್ಮೀ ದೇವಿಯನ್ನು ಪೂಜಿಸುವ ವೇಳೆ ಕುಂಕುಮವನ್ನು ಅರ್ಪಿಸಲಾಗುತ್ತದೆ. ಇದನ್ನೇ ದೇವಿಯ ಪ್ರಸಾಧವಾಗಿ ನೀಡಲಾಗುತ್ತದೆ. ದೇವಿಗೆ ಅರ್ಪಣೆ ಮಾಡಿದ ಬಳಿಕ ಇತರ ಮಹಿಳೆಯರಿಗೆ ಇದನ್ನು ನೀಡಲಾಗುವುದು. ದುರ್ಗೆ, ಲಕ್ಷ್ಮೀ ಮತ್ತು ವಿಷ್ಣುವನ್ನು ಪೂಜಿಸುವ ದೇವಾಲಯಗಳಲ್ಲಿ ಸಿಂಧೂರ ಅರ್ಪಿಸಲಾಗುತ್ತದೆ ಮತ್ತು ಭಕ್ತರಿಗೆ ನೀಡಲಾಗುತ್ತದೆ.