Just In
Don't Miss
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ವಿಸರ್ಜನೆ 2021: ಯಾವ ದಿನ ಮಾಡಬಹುದು? ಶುಭ ಸಮಯ ಯಾವಾಗ?
ಗಣೇಶನ ಕೂರಿಸಿದ ಮೇಲೆ ಗಣೇಶ ವಿಸರ್ಜನೆ ಕುಡ ಅಷ್ಟೇ ಮುಖ್ಯವಾಗಿದೆ. ಗಣೇಶ ವಿಸರ್ಜನೆ ಹುಟ್ಟು, ಬದುಕು, ಸಾವಿನ ನಮ್ಮ ಜೀವನ ಚಕ್ರವನ್ನು ಸೂಚಿಸುತ್ತದೆ. ಗಣೇಶನ ಕೂರಿಸಿದ ಮೇಲೆ ಆ ದಿನ ಅಥವಾ 3, ದಿನವಾದ ಮೇಲೆ, 7 ದಿನವಾದ ಮೇಲೆ ಗಣೇಶ ವಿಸರ್ಜನೆ ಮಾಡಲಾಗುವುದು.
ಗಣೇಶ ವಿಸರ್ಜನೆಯನ್ನು ಗಣೇಶನ ಕೂರಿಸಿದ ಒಂದೂವರೆ ದಿನದ ನಂತರ ವಿಸರ್ಜನೆ ಮಾಡಬಹುದು. ಮೂರನೇ ದಿನ, ಐದನೇ ದಿನ, ಏಳನೇ ದಿನ ಹೀಗೆ ವಿಸರ್ಜನೆ ಮಾಡಲಾಗುವುದು.
ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗ್ಗೆ ಶುಭ ಮುಹೂರ್ತ (ಶುಭ):06:16ರಿಂದ 07:48ರವರೆಗೆ
ಬೆಳಗ್ಗೆ ಮುಹೂರ್ತ (ಅಮೃತ):10:50ರಿಂದ 03:25ರವರೆಗೆ
ಮಧ್ಯಾಹ್ನದ ಮುಹೂರ್ತ (ಶುಭ): ಸಂಜೆ 04:56ರಿಂದ 06:27ರವರೆಗೆ
ಸಂಜೆ ಮುಹೂರ್ತ(ಅಮೃತ): ಸಂಜೆ 06:27ರಿಂದ 09:27ರವರೆಗೆ
ರಾತ್ರಿ ಮುಹೂರ್ತ: ರಾತ್ರಿ 12:22ರಿಂದ 01:50ರವರೆಗೆ
ಒಂದೂವರೆ ದಿನದ ಬಳಿಕ ಗಣೇಶ ವಿಸರ್ಜನೆ
ಗಣೇಶ ಕೂರಿಸಿ ಮಾರನೇಯ ದಿನ ಮಧ್ಯಾಹ್ನದ ಮೇಲೆ ಕೆಲವು ಕಡೆ ವಿಸರ್ಜನೆ ಮಾಡಲಾಗುವುದು. ಮಧ್ಯಾಹ್ನ ಹೊತ್ತು ಗಣೇಶನಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನದ ನಂತರ ಗಣೇಶನನ್ನು ತೆಗೆದುಕೊಂಡು ಹೋಗಿ ಗಣೇಶನ ವಿಸರ್ಜನೆ ಮಾಡಲಾಗುವುದು.
3ನೇ, 5ನೇ, 7ನೇ ದಿನ ಗಣೇಶ ವಿಸರ್ಜನೆ
ಅನಂತ ಚತುರ್ಧಶಿಗೆ ಗಣೇಶನ ವಿಸರ್ಜನೆ ಮಾಡುವುದು ತುಂಬಾ ಮಹತ್ವವಾದರೂ 3ನೇ, 5ನೇ, 7ನೇ ದಿನ ಕೂಡ ಗಣೇಶನ ವಿಸರ್ಜನೆ ಮಾಡಬಹುದು. ಗಣೇಶ ವಿಸರ್ಜನೆಯನ್ನು ಬೆಸ ಸಂಖ್ಯೆಯಲ್ಲಿ ಮಾಡಬೇಕು. ಗಣೇಶನ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವೆಂದರೆ 11ನೇ ದಿನವಾದ ಗಣೇಶ ಚತುರ್ಧಶಿಯಾಗಿದೆ.
ಅನಂತ ಚತುರ್ಧಶಿಯಂದು ಗಣೇಶನ ವಿಸರ್ಜನೆ
ಗಣೇಶನ ವಿಸರ್ಜನೆಗೆ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ. ಗಣೇಶನ ವಿಸರ್ಜನೆಗೆ ಮಾತ್ರವಲ್ಲ ವಿಷ್ಣು ಭಕ್ತರಿಗೂ ಈ ದಿನ ತುಂಬಾ ಮಹತ್ವದ್ದಾಗಿದೆ. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು ಹಾಗೂ ಕೈಗೆ ಪವಿತ್ರ ದಾರವನ್ನು ಕಟ್ಟಲಾಗುವುದು. ಈ ದಾರ ಎಲ್ಲಾ ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುವುದು ಎಂಬ ನಂಬಿಕೆ ಇದೆ.
11ನೇ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು. ಸಾಮಾನ್ಯವಾಗಿ ನದಿ, ಕೆರೆ ಅಥವಾ ಕೊಳದಲ್ಲಿ ವಿಸರ್ಜನೆ ಮಾಡಲಾಗುವುದು. ಇದೀಗ ಪರಿಸರ ಉಳಿಸಲು ದೊಡ್ಡ ಡ್ರಮ್ ಅಥವಾ ಬಕೆಟ್ನಲ್ಲಿ ಮುಳುಗಿಸಲಾಗುವುದು. ಅಲ್ಲದೆ ಮಣ್ಣಿನ ಗಣಪನ ಬಳಕೆ ಹೆಚ್ಚಾಗಿದೆ. ಗಣೇಶನನನ್ನು ವಿಸರ್ಜನೆ ಮಾಡುವಾಗ ಜೈ ಗಣೇಶ.. ಎಂದು ಹಾಡಿ ಕುಣಿಯುತ್ತಾ ವಿಸರ್ಜನೆ ಮಾಡಲಾಗುವುದು. ಈ ವರ್ಷ ಅನಂತ ಚತುರ್ಧಶಿ ಸೆಪ್ಟೆಂಬರ್ 19ಕ್ಕೆ ಇದೆ.