Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Ganesh Visarjan 2022: ಗಣೇಶ ವಿಸರ್ಜನೆ ಯಾವೆಲ್ಲಾ ದಿನಗಳು ಮಾಡಬಹುದು? ಶುಭ ಮುಹೂರ್ತ ಯಾವುದು?
ಗಣೇಶ ಬಂದ ಕಾಯಿ ಕಡುಬು ತಿಂದ, ಚಿಕ್ಕ ಕರೆಲಿ ಎದ್ದ, ದೊಡ್ಡ ಕರೇಲಿ ಬಿದ್ದ ಇದು ಗಣೇಶನನ್ನು ವಿಸರ್ಜನೆ ಮಾಡುವಾಗ ಹೇಳುವ ಬಹಳ ಫೇಮಸ್ ಘೋಷಣೆಯಾಗಿದೆ. ಗಣೇಶ ಬಂದಾಗ ಆರಂಭವಾಗುವ ಸಂಭ್ರಮ-ಸಡಗರ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ಅವನ ಪ್ರಸಾದ ಸೇವಿಸುವವರೆಗೂ ಇರುತ್ತದೆ. ಇದೊಂಥರ ಇಡೀ ಊರು ದೇಶಕ್ಕೆ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ.

ಗಣೇಶನನ್ನು ಇಟ್ಟು ಪೂಜಿಸಲು ಹೇಗೆ ಶೂಭ ಮುಹೂರ್ತ ಇದೆಯೋ ಅಂತೆಯೇ ಗಣೇಶನನ್ನು ವಿಸರ್ಜಿಸಲು ಸಹ ಶೂಭ ಮುಹೂರ್ತ ಅಥವಾ ದಿನಗಳನ್ನು ನೋಡಲಾಗುತ್ತದೆ. ಗಣೇಶನನ್ನು ಗಣೇಶ ಚತುರ್ಥಿಯ ದಿನದಿಂದ 11ನೇ ದಿನ ಅನಂತ ಚತುರ್ದಶಿಯವರೆಗೆ ನಿಯಮಿತ ದಿನಗಳು ವಿಸರ್ಜನೆ ಮಾಡಬಹುದಾಗಿದೆ.
2022ನೇ ಸಾಲಿನಲ್ಲಿ ಆಗಸ್ಟ್ 31ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ, ಈ ವರ್ಷ ಗಣೇಶ ವಿಸರ್ಜನೆಯನ್ನು ಯಾವೆಲ್ಲಾ ದಿನ ಮಾಡಬಹುದು, ಶುಭ ಮುಹೂರ್ತ ಯಾವುದು ಮುಂದೆ ನೋಡೋಣ:

1. ಅನಂತ ಚತುರ್ದಶಿಯಂದು ವಿಸರ್ಜನೆಗೆ ಶುಭ ಮುಹೂರ್ತ
ಶುಕ್ರವಾರ, ಸೆಪ್ಟೆಂಬರ್ 9, 2022 ರಂದು ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
* ಅನಂತ ಚತುರ್ದಶಿ ತಿಥಿ ಆರಂಭ - ಸೆಪ್ಟೆಂಬರ್ 08, 2022 ರಂದು ರಾತ್ರಿ 09:02 ರಿಂದ
* ಅನಂತ ಚತುರ್ದಶಿ ತಿಥಿ ಕೊನೆಗೊಳ್ಳುವ ಸಮಯ - ಸೆಪ್ಟೆಂಬರ್ 09, 2022 ರಂದು ಸಂಜೆ 06:07 ರವರೆಗೆ
* ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 06:09 ರಿಂದ 10:45 ರವರೆಗೆ
* ಮಧ್ಯಾಹ್ನ ಮುಹೂರ್ತ (ಚರ) - ಸಂಜೆ 04:53 ರಿಂದ 06:25 ರವರೆಗೆ
* ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 12:17 ರಿಂದ 01:49 ರವರೆಗೆ
* ರಾತ್ರಿ ಮುಹೂರ್ತ (ಲಾಭಾ) - ರಾತ್ರಿ 09:21 ರಿಂದ 10:49 ರವರೆಗೆ
* ರಾತ್ರಿ ಮುಹೂರ್ತ (ಶುಭ, ಅಮೃತ, ಚರ) - ಮಧ್ಯಾಹ್ನ 12:17 ರಿಂದ 04:41 ರವರೆಗೆ

2. ಗಣೇಶ ಚತುರ್ಥಿಯಂದು ವಿಸರ್ಜನೆ
ಆಗಸ್ಟ್ 31, 2022 ಬುಧವಾರದಂದು ಗಣೇಶ ಚತುರ್ಥಿಯಂದು ಗಣೇಶ ವಿಸರ್ಜನೆ
ಮಧ್ಯಾಹ್ನ ಮುಹೂರ್ತ (ಚರ, ಲಾಭ) - ಮಧ್ಯಾಹ್ನ 03:26 ರಿಂದ 06:31 ರವರೆಗೆ
ಸಂಜೆ ಮುಹೂರ್ತ (ಶುಭ, ಅಮೃತ, ಚರ) - ಸಂಜೆ 07:58 ರಿಂದ 12:20 ರವರೆಗೆ, ಸೆಪ್ಟೆಂಬರ್ 01
ಮುಂಜಾನೆಯ ಮುಹೂರ್ತ (ಲಾಭಾ) - ತಡರಾತ್ರಿ 03:14 ರಿಂದ 04:41 ರವರೆಗೆ, ಸೆಪ್ಟೆಂಬರ್ 01

3. ಒಂದೂವರೆ ದಿನದ ನಂತರ ಗಣೇಶ ವಿಸರ್ಜನೆ
ಸೆಪ್ಟೆಂಬರ್ 1, 2022 ರಂದು ಗುರುವಾರ ಒಂದೂವರೆ ದಿನದ ನಂತರ ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಮಧ್ಯಾಹ್ನ 12:20 ರಿಂದ 03:25 ರವರೆಗೆ
ಮಧ್ಯಾಹ್ನ ಮುಹೂರ್ತ (ಶುಭಾ) - ಸಂಜೆ 04:58 ರಿಂದ 06:31 ರವರೆಗೆ
ಸಂಜೆ ಮುಹೂರ್ತ (ಅಮೃತ, ಚರ) - ಸಂಜೆ 06:31 ರಿಂದ 09:25 ರವರೆಗೆ
ರಾತ್ರಿ ಮುಹೂರ್ತ (ಲಾಭಾ) - ತಡರಾತ್ರಿ 12:20 ರಿಂದ 01:47 ರವರೆಗೆ, ಸೆಪ್ಟೆಂಬರ್ 02
ಮುಂಜಾನೆಯ ಮುಹೂರ್ತ (ಶುಭಾ, ಅಮೃತ) - ತಡರಾತ್ರಿ 03:14 ರಿಂದ 06:09 ರವರೆಗೆ, ಸೆಪ್ಟೆಂಬರ್ 02

4. 3ನೇ ದಿನ ಗಣೇಶ ವಿಸರ್ಜನೆ
ಸೆಪ್ಟೆಂಬರ್ 2, 2022 ರಂದು ಶುಕ್ರವಾರದಂದು 3ನೇ ದಿನದಂದು ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 06:09 ರಿಂದ 10:47 ರವರೆಗೆ
ಮಧ್ಯಾಹ್ನ ಮುಹೂರ್ತ (ಚರ) - ಸಂಜೆ 04:57 ರಿಂದ 06:30 ರವರೆಗೆ
ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 12:19 ರಿಂದ 01:52 ರವರೆಗೆ
ರಾತ್ರಿ ಮುಹೂರ್ತ (ಲಾಭಾ) - ರಾತ್ರಿ 09:25 ರಿಂದ 10:52 ರವರೆಗೆ
ರಾತ್ರಿ ಮುಹೂರ್ತ (ಶುಭ, ಅಮೃತ, ಚರ) - ತಡರಾತ್ರಿ 12:19 ರಿಂದ 04:41 ರವರೆಗೆ, ಸೆಪ್ಟೆಂಬರ್ 03

5. 5ನೇ ದಿನ ಗಣೇಶ ವಿಸರ್ಜನೆ
ಸೆಪ್ಟೆಂಬರ್ 4, 2022 ರ ಭಾನುವಾರದಂದು 5 ನೇ ದಿನದಂದು ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 07:41 ರಿಂದ ಮಧ್ಯಾಹ್ನ 12:19 ರವರೆಗೆ
ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 01:51 ರಿಂದ 03:24 ರವರೆಗೆ
ಸಂಜೆ ಮುಹೂರ್ತ (ಶುಭ, ಅಮೃತ, ಚರ) - ಸಂಜೆ 06:29 ರಿಂದ ರಾತ್ರಿ 10:51 ರವರೆಗೆ
ರಾತ್ರಿ ಮುಹೂರ್ತ (ಲಾಭ) - ತಡರಾತ್ರಿ 01:46 ರಿಂದ 03:14 ರವರೆಗೆ, ಸೆಪ್ಟೆಂಬರ್ 05
ಮುಂಜಾನೆಯ ಮುಹೂರ್ತ (ಶುಭಾ) - ಮುಂಜಾನೆ 04:41 ರಿಂದ 06:09 ರವರೆಗೆ, ಸೆಪ್ಟೆಂಬರ್ 05

6. 7ನೇ ದಿನ ಗಣೇಶ ವಿಸರ್ಜನೆ
ಸೆಪ್ಟೆಂಬರ್ 6, 2022, ಮಂಗಳವಾರದಂದು 7ನೇ ದಿನದಂದು ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗಿನ ಮುಹೂರ್ತ (ಚರ, ಲಾಭ, ಅಮೃತ) - ಬೆಳಗ್ಗೆ 09:13 ನಿಂದ 01:50 ರವರೆಗೆ
ಮಧ್ಯಾಹ್ನ ಮುಹೂರ್ತ (ಶುಭಾ) - ಮಧ್ಯಾಹ್ನ 03:23 ರಿಂದ 04:55 ರವರೆಗೆ
ಸಂಜೆ ಮುಹೂರ್ತ (ಲಾಭಾ) - ಸಂಜೆ 07:55 ರಿಂದ 09:23 ರವರೆಗೆ
ರಾತ್ರಿ ಮುಹೂರ್ತ (ಶುಭ, ಅಮೃತ, ಚರ) - ರಾತ್ರಿ 10:50 ರಿಂದ ಮುಂಜಾನೆ 03:13 ರವರೆಗೆ, ಸೆಪ್ಟೆಂಬರ್ 07

7. ಯಾವ ದಿನ ಗಣೇಶ ವಿಸರ್ಜನೆ ಮಾಡಿದರೆ ಏನರ್ಥ?
ಗಣೇಶ ಚತುರ್ಥಿಯಂದು ಗಣೇಶ ವಿಸರ್ಜನ
ಗಣೇಶನ ಪೂಜೆಯ ನಂತರ ಗಣೇಶ ಚತುರ್ಥಿಯ ಅದೇ ದಿನದಂದು ಗಣೇಶ ವಿಸರ್ಜನೆಯನ್ನು ಮಾಡಬಹುದು. ಹಿಂದೂ ದೇವತೆಗಳ ಹೆಚ್ಚಿನ ಪೂಜಾ ವಿಧಿ(ಗಳು) ಪೂಜೆಯ ಕೊನೆಯಲ್ಲಿ ವಿಸರ್ಜನೆ ಅಥವಾ ಉತ್ಥಾಪನನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಗಣೇಶ ಚತುರ್ಥಿಯ ಅದೇ ದಿನದಂದು ಗಣೇಶ ವಿಸರ್ಜನೆ ಕಡಿಮೆ ಜನಪ್ರಿಯವಾಗಿದೆ.

8. ಒಂದೂವರೆ ದಿನದ ಗಣೇಶ ವಿಸರ್ಜನೆ
ಗಣೇಶ ಚತುರ್ಥಿಯ ಮರುದಿನ ಮಾಡುವ ಗಣೇಶ ವಿಸರ್ಜನೆಯನ್ನು ಒಂದೂವರೆ ದಿನದ ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ. ಗಣೇಶ ವಿಸರ್ಜನೆ ಮಾಡುವ ಜನಪ್ರಿಯ ದಿನಗಳಲ್ಲಿ ಇದು ಕೂಡ ಒಂದು.
ಗಣೇಶ ಚತುರ್ಥಿಯ ಮರುದಿನ ವಿಸರ್ಜನೆ ಮಾಡುವ ಗಣೇಶ ಭಕ್ತರು ಮಧ್ಯಾಹ್ನದ ಸಮಯದಲ್ಲಿ ಗಣೇಶನ ಪೂಜೆಯನ್ನು ಮಾಡುತ್ತಾರೆ ಮತ್ತು ದಿನದ ಹಿಂದೂ ಪದ್ಧತಿಯ ಪ್ರಕಾರ ಮಧ್ಯಾಹ್ನದ ನಂತರ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಾರೆ.
ಹಿಂದಿನ ದಿನ ಮಧ್ಯಾಹ್ನದ ಸಮಯದಲ್ಲಿ ಗಣೇಶನ ಮೂರ್ತಿಯ ಪ್ರತಿಷ್ಠಾಪನೆಯನ್ನು ಮಾಡಲಾಯಿತು ಮತ್ತು ಮರುದಿನದ ಉತ್ತರಾರ್ಧದಲ್ಲಿ ವಿಸರ್ಜನೆಗಾಗಿ ಹೊರತೆಗೆಯಲಾಗುತ್ತದೆ, ಈ ರೀತಿಯ ವಿಸರ್ಜನೆಯನ್ನು ಒಂದೂವರೆ ದಿನದ ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ.

9. 3ನೇ ದಿನದ ವಿಸರ್ಜನೆ, 5ನೇ ದಿನದ ವಿಸರ್ಜನೆ ಮತ್ತು 7ನೇ ದಿನ ಗಣೇಶ ವಿಸರ್ಜನೆ
ಅನಂತ ಚತುರ್ದಶಿಯ ದಿನವು ಗಣೇಶ ವಿಸರ್ಜನೆಗೆ ಅತ್ಯಂತ ಮಹತ್ವದ ದಿನವಾಗಿದ್ದರೂ, ಅನೇಕ ಕುಟುಂಬಗಳು ಗಣೇಶ ಚತುರ್ಥಿಯ ದಿನದಿಂದ 3, 5 ಅಥವಾ 7ನೇ ದಿನದಂದು ಗಣೇಶ ವಿಸರ್ಜನೆ ಮಾಡುತ್ತಾರೆ. ಈ ಎಲ್ಲಾ ದಿನಗಳು ಬೆಸ ಸಂಖ್ಯೆಯಲ್ಲಿವೆ ಎಂಬುದನ್ನು ಗಮನಿಸುವುದು ಮುಖ್ಯ. ಅನಂತ ಚತುರ್ದಶಿಯ ದಿನದಂದು ಬರುವ ಗಣೇಶ ವಿಸರ್ಜನೆಯ ಪ್ರಮುಖ ದಿನವೂ ಸಹ ಗಣೇಶ ಚತುರ್ಥಿಯ ದಿನದಿಂದ 11ನೇ ದಿನವಾಗಿದೆ, ಅದೂ ಸಹ ಬೆಸ ಸಂಖ್ಯೆ.

10. ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆ
ಗಣೇಶನಿಗೆ ಅನಂತ ಚತುರ್ದಶಿ ಅತ್ಯಂತ ಮಹತ್ವದ ದಿನ. ಗಣೇಶ ವಿಸರ್ಜನೆಯ ಹೊರತಾಗಿ, ಅನಂತ ಚತುರ್ದಶಿಯು ಭಗವಾನ್ ವಿಷ್ಣುವನ್ನು ಅನಂತ ರೂಪದಲ್ಲಿ ಪೂಜಿಸಲು ಬಹಳ ಮಹತ್ವದ ದಿನವಾಗಿದೆ. ಭಗವಾನ್ ವಿಷ್ಣುವಿನ ಭಕ್ತರು ಒಂದು ದಿನದ ಉಪವಾಸವನ್ನು ಆಚರಿಸುತ್ತಾರೆ ಮತ್ತು ಪೂಜೆಯ ಸಮಯದಲ್ಲಿ ಪವಿತ್ರ ದಾರವನ್ನು ಕಟ್ಟುತ್ತಾರೆ. ಪವಿತ್ರ ದಾರವು ಭಕ್ತರನ್ನು ಎಲ್ಲಾ ರೀತಿಯ ತೊಂದರೆಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಗಣೇಶ ಚತುರ್ಥಿಯಂದು ಪ್ರಾರಂಭವಾಗುವ ಗಣೇಶೋತ್ಸವವು ಅನಂತ ಚತುರ್ದಶಿಯಂದು ಮುಕ್ತಾಯಗೊಳ್ಳುತ್ತದೆ. ಆದ್ದರಿಂದ ಭಾದ್ರಪದ ಮಾಸದಲ್ಲಿ ಗಣೇಶೋತ್ಸವವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬದ ಕೊನೆಯ ದಿನವನ್ನು ಗಣೇಶ ವಿಸರ್ಜನೆ ಎಂದು ಕರೆಯಲಾಗುತ್ತದೆ.
ಹನ್ನೊಂದನೇ ದಿನದಂದು ಗಣೇಶನ ಪ್ರತಿಮೆಯನ್ನು ನದಿ, ಸರೋವರ ಅಥವಾ ಸಮುದ್ರದಲ್ಲಿ ನೀರಿನಲ್ಲಿ ಮುಳುಗಿಸಲಾಗುತ್ತದೆ. ತೆಂಗಿನಕಾಯಿ, ಹೂವು ಮತ್ತು ಸಿಹಿತಿಂಡಿಗಳ ಅಂತಿಮ ನೈವೇದ್ಯದ ನಂತರ, ಗಣೇಶನ ಮೂರ್ತಿಗಳನ್ನು ಬೀದಿ ಮೆರವಣಿಗೆಯ ಮೂಲಕ ಸಡಗರದಿಂದ ಜಲಾನಯನಕ್ಕೆ ಕೊಂಡೊಯ್ಯಲಾಗುತ್ತದೆ. ಸಹಸ್ರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಇಡೀ ವಾತಾವರಣವನ್ನು ಗಣೇಶನ ಜಪದಿಂದ ತುಂಬುತ್ತಾರೆ. "ಗಣಪತಿ ಬಪ್ಪಾ ಮೋರ್ಯಾ" ಮತ್ತು "ಗಣೇಶ್ ಮಹಾರಾಜ್ ಕಿ, ಜೈ" ಇವುಗಳು ಮೆರವಣಿಗೆಯ ಉದ್ದಕ್ಕೂ ಮೊಳಗುವ ಕೆಲವು ಪ್ರಸಿದ್ಧ ಘೋಷಣೆಗಳಾಗಿವೆ.



Click it and Unblock the Notifications











