For Quick Alerts
ALLOW NOTIFICATIONS  
For Daily Alerts

ಅಂದು ಭಗವಾನ್ ಶ್ರೀರಾಮನು ಹನುಮಂತನನ್ನು ಕೊಲ್ಲಲು ಪ್ರಯತ್ನಿಸಿದಾಗ...!

|

ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿದನು. ಆ ಸಂದರ್ಭದಲ್ಲಿ ಸಂತಸಗೊಂಡ ಜನರೆಲ್ಲರೂ ಹರ್ಷವನ್ನು ವ್ಯಕ್ತಪಡಿಸಿದರು. ಜೊತೆಗೆ ಅಯೋಧ್ಯೆಯ ಹೊಸ ರಾಜ ಎಂದು ಘೋಷಿಸಿದರು.

Lord Ramas attempt to kill Hanuman

ಅಲ್ಲದೆ ಅಲ್ಲಿ ನೆರೆದಿದ್ದ ಎಲ್ಲಾ ಗುರು-ಹಿರಿಯರು ಸಂತರು ಹಾಗೂ ಜನರೆಲ್ಲರೂ ರಾಮನ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿ, ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ಭಗವಾನ್ ಹನುಮಂತನು ರಾಮನ ಪರಮ ಭಕ್ತನಾಗಿದ್ದನು. ಅಲ್ಲದೆ ಅವನ ಹೃದಯವೂ ಸಂಪೂರ್ಣವಾಗಿ ಮುಗ್ಧತೆಯಿಂದ ಕೂಡಿತ್ತು.

ನಾರದ ಮುನಿಯ ಚೇಷ್ಟೆ

ನಾರದ ಮುನಿಯ ಚೇಷ್ಟೆ

ನಾರದ ಮುನಿಯು ದೈವ ಸ್ವರೂಪದವನು. ಅವನ ಬುದ್ಧಿಯು ಬಹಳ ತೀಕ್ಷ್ಣ ಮತಿಯದ್ದಾಗಿತ್ತು. ಅಲ್ಲದೆ ತನ್ನ ಚಾಣಾಕ್ಷ ಬುದ್ಧಿಯಿಂದ ಏನನ್ನು ಬೇಕಾದರು ಸಾಧಿಸುವ ಸಾಮಥ್ರ್ಯವಿತ್ತು. ತನ್ನ ಬುದ್ಧಿಯಿಂದಲೇ ಬಹುತೇಕ ಕುಚೇಷ್ಟೆ ಮಾಡಿದ ಕಥೆಗಳನ್ನು ಪುರಾಣ ಇತಿಹಾಸದಲ್ಲಿ ಕಾಣಬಹುದು. ರಾಮನು ರಾಜ್ಯಕ್ಕೆ ಹಿಂತಿರುಗಿದ್ದ ಆ ಸುಸಂದರ್ಭದಲ್ಲಿ ಎಲ್ಲಾ ಋಷಿಮುನಿಗಳನ್ನು ಅತಿಥಿಗಳಾಗಿ ಆಮಂತ್ರಿಸಲಾಗಿತ್ತು. ಆಗ ನಾರದ ಮುನಿಯು ಹನುಂತನಿಗೆ ವಿಶ್ವಾಮಿತ್ರ ಋಷಿಯ ಪಾದವನ್ನು ಮುಟ್ಟಿ ನಮಸ್ಕರಿಸಬಾರದು. ಅವರು ರಾಮನಿಗಿಂತ ಮೊದಲು ರಾಜನಾಗಿ ಇಲ್ಲಿ ಆಡಳಿತ ನಡೆಸಿದ್ದರು ಎಂದು ರಹಸ್ಯವಾಗಿ ಹೇಳಿದರು.

Most Read: ಶ್ರೀರಾಮ ಸೀತೆಗೆ ಏಕೆ ಅಗ್ನಿ ಪರೀಕ್ಷೆ ಮಾಡಲು ಹೇಳಿದ?

ಮುಗ್ಧ ಭಗವಾನ್ ಹನುಮಂತ

ಮುಗ್ಧ ಭಗವಾನ್ ಹನುಮಂತ

ನಾರದ ಮುನಿಯ ಮಾತಿಗೆ ಬೆಲೆ ನೀಡಿದ ಭಗವಾನ್ ಹನುಮಂತನು ವಿಶ್ವಾಮಿತ್ರ ಮುನಿಯ ಪಾದವನ್ನು ಬಿಟ್ಟು, ಉಳಿದ ಎಲ್ಲಾ ಋಷಿಮುನಿಗಳ ಪಾದ ಮುಟ್ಟಿ ನಮಸ್ಕರಿಸಿದನು. ವಿಶ್ವಾಮಿತ್ರ ಋಷಿಗಳು ರಾಮನ ಗುರುವಾಗಿದ್ದರು. ಹಾಗಾಗಿಯೇ ಹನುಂತನ ತಪ್ಪನ್ನು ಲಘುವಾಗಿಯೇ ಪರಿಗಣಿಸಿದರು. ನಾರದ ಮುನಿಯು ನಿರೀಕ್ಷೆಯಂತೆ ಏನೂ ನಡೆಯದೆ ಇದ್ದುದರಿಂದ, ತನ್ನ ಪ್ರಯತ್ನವೆಲ್ಲಾ ನಿರರ್ಥಕವಾಯಿತು ಎಂದು ಸಹಿಸಿಕೊಳ್ಳಲು ಕಷ್ಟವಾಯಿತು. ಆ ಕಾರಣಕ್ಕಾಗಿಯೇ ಮಿಶ್ವಾಮಿತ್ರರ ಬಳಿ ಹೋಗಿ ಹನುಮಂತನು ಉದ್ದೇಶಪೂರ್ವಕವಾಗಿಯೇ ನಿಮಗೆ ಅವಮಾನಿಸಿದ್ದಾನೆ ಎಂದು ಹನುಂತನ ವಿರುದ್ಧ ವಿಶ್ವಾಮಿತ್ರರಿಗೆ ಪ್ರೇರೇಪಣೆ ನೀಡಿದರು.

ಹನುಮಂತನಿಗೆ ಪರೀಕ್ಷೆಯ ಸಮಯವಾಗಿತ್ತು

ಹನುಮಂತನಿಗೆ ಪರೀಕ್ಷೆಯ ಸಮಯವಾಗಿತ್ತು

ನಾರದ ಮುನಿಗಳ ಮಾತನ್ನು ಕೇಳಿದ ವಿಶ್ವಾಮಿತ್ರರಿಗೆ ಕೋಪ ಬಂದಿತು. ಈ ಹಿನ್ನೆಲೆಯಲ್ಲಿಯೇ ರಾಮನಿಗೆ ಹನುಮಂತನನ್ನು ಕೊಲ್ಲಬೇಕು ಎಂದು ಆದೇಶ ನೀಡಿದರು. ಗುರುವಿನ ಮಾತನ್ನು ಅಲ್ಲಗಳೆಯಲು ರಾಮನಿಗೆ ಸಾಧ್ಯವಾಗಲಿಲ್ಲ. ಹನುಮಂತನು ನಿರಂತರ ರಾಮ ನಾಮ ಜಪವನ್ನು ಮಾಡಲು ಪ್ರಾರಂಭಿಸಿದನು. ರಾಮನು ಹನುಮಂತನನ್ನು ಕೊಲ್ಲಲು ಎಷ್ಟೇ ಪ್ರಯತ್ನಿಸಿದರೂ ಹನುಮಂತನಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹನುಂತನ ಮೇಲೆ ನಡೆದ ನಿರಂತರ ದಾಳಿಯಿಂದ ಏನೂ ಪ್ರಭಾವ ಬೀರಲಿಲ್ಲ. ನಂತರ ರಾಮನು ಬ್ರಹ್ಮಾಸ್ತ್ರ ಬಳಸಲು ನಿರ್ಧರಿಸಿದನು. ಆದಾಗ್ಯೂ ಹನುಮಂತ ತನ್ನ ಭಕ್ತಿಯಿಂದ ರಾಮನ ನಾಮವನ್ನು ಜಪಿಸಿತ್ತಿದ್ದುದರ ಪರಿಣಾಮ ಯಾವ ಅಸ್ತ್ರವೂ ಹನುಮಂತನಿಗೆ ಹಾನಿಯುಂಟುಮಾಡಲು ಸಾಧ್ಯವಾಗಲಿಲ್ಲ.

Most Read: ರಾಮ ಮತ್ತು ಹನುಮಂತನ ನಡುವೆ ಇರುವ ಬಂಧನದ ಕಥೆ

ನಾರದ ಮುನಿಯ ಹೃದಯ ಕರಗಿತು

ನಾರದ ಮುನಿಯ ಹೃದಯ ಕರಗಿತು

ಹನುಂತನಿಗೆ ತನ್ನ ರಾಮನ ಮೇಲೆ ಇದ್ದ ಭಕ್ತಿಯನ್ನು ಕಂಡ ನಾರದ ಮುನಿಗೆ ಆಶ್ಚರ್ಯವಾಯಿತು. ಜೊತೆಗೆ ತನ್ನ ದುಷ್ಕೃತ್ಯಕ್ಕೆ ಕ್ಷಮೆಯಾಚಿಸಬೇಕು ಎಂದು ಬಯಸಿದನು. ನಂತರ ವಿಶ್ವಾಮಿತ್ರರಲ್ಲಿ ತನ್ನ ತಪ್ಪುಗಳನ್ನು ಹೇಳಿಕೊಂಡು, ಕ್ಷಮೆಯನ್ನು ಯಾಚಿಸಿದನು. ಜೊತೆಗೆ ರಾಮನಿಂದ ಹುನುಮಂತನಿಗೆ ಯಾವುದೇ ತೊಂದರೆ ಆಗದಂತೆ, ಹನುಮಂತನನ್ನು ರಕ್ಷಿಸಬೇಕೆಂದು ಕೇಳಿಕೊಂಡನು. ಅಂತೆಯೇ ವಿಶ್ವಾಮಿತ್ರರು ತಮ್ಮ ಆದೇಶವನ್ನು ಹಿಂದೆ ತೆಗೆದುಕೊಂಡು ಹನುಮಂತನಿಗೆ ಯಾವುದೇ ಹಾನಿ ಮಾಡಬಾರದು ಎಂದು ರಾಮನಿಗೆ ಹೇಳಿದರು. ತನ್ನ ಮುಗ್ಧತೆ ಮತ್ತು ರಾಮನ ಮೇಲಿರುವ ಭಕ್ತಯಿಯನ್ನು ತೋರುವುದರ ಮೂಲಕ ರಾಮನ ಪ್ರೀತಿಗೆ ಹನುಮಂತ ಪಾತ್ರನಾದನು ಎಂದು ಹೇಳಲಾಗುವುದು.

English summary

do-you-know-that-lord-rama-attempted-to-kill-lord-hanuman

Lord Rama's attempt to kill Hanuman, fight between Rama and Hanuman, why Lord Rama tried to kill Hanuman, why Rama decide to kill hanuman, Rama fight with
Story first published: Tuesday, December 11, 2018, 16:49 [IST]
X
Desktop Bottom Promotion