Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಅಂದು ಭಗವಾನ್ ಶ್ರೀರಾಮನು ಹನುಮಂತನನ್ನು ಕೊಲ್ಲಲು ಪ್ರಯತ್ನಿಸಿದಾಗ...!
ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿದನು. ಆ ಸಂದರ್ಭದಲ್ಲಿ ಸಂತಸಗೊಂಡ ಜನರೆಲ್ಲರೂ ಹರ್ಷವನ್ನು ವ್ಯಕ್ತಪಡಿಸಿದರು. ಜೊತೆಗೆ ಅಯೋಧ್ಯೆಯ ಹೊಸ ರಾಜ ಎಂದು ಘೋಷಿಸಿದರು.

ಅಲ್ಲದೆ ಅಲ್ಲಿ ನೆರೆದಿದ್ದ ಎಲ್ಲಾ ಗುರು-ಹಿರಿಯರು ಸಂತರು ಹಾಗೂ ಜನರೆಲ್ಲರೂ ರಾಮನ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿ, ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ಭಗವಾನ್ ಹನುಮಂತನು ರಾಮನ ಪರಮ ಭಕ್ತನಾಗಿದ್ದನು. ಅಲ್ಲದೆ ಅವನ ಹೃದಯವೂ ಸಂಪೂರ್ಣವಾಗಿ ಮುಗ್ಧತೆಯಿಂದ ಕೂಡಿತ್ತು.

ನಾರದ ಮುನಿಯ ಚೇಷ್ಟೆ
ನಾರದ ಮುನಿಯು ದೈವ ಸ್ವರೂಪದವನು. ಅವನ ಬುದ್ಧಿಯು ಬಹಳ ತೀಕ್ಷ್ಣ ಮತಿಯದ್ದಾಗಿತ್ತು. ಅಲ್ಲದೆ ತನ್ನ ಚಾಣಾಕ್ಷ ಬುದ್ಧಿಯಿಂದ ಏನನ್ನು ಬೇಕಾದರು ಸಾಧಿಸುವ ಸಾಮಥ್ರ್ಯವಿತ್ತು. ತನ್ನ ಬುದ್ಧಿಯಿಂದಲೇ ಬಹುತೇಕ ಕುಚೇಷ್ಟೆ ಮಾಡಿದ ಕಥೆಗಳನ್ನು ಪುರಾಣ ಇತಿಹಾಸದಲ್ಲಿ ಕಾಣಬಹುದು. ರಾಮನು ರಾಜ್ಯಕ್ಕೆ ಹಿಂತಿರುಗಿದ್ದ ಆ ಸುಸಂದರ್ಭದಲ್ಲಿ ಎಲ್ಲಾ ಋಷಿಮುನಿಗಳನ್ನು ಅತಿಥಿಗಳಾಗಿ ಆಮಂತ್ರಿಸಲಾಗಿತ್ತು. ಆಗ ನಾರದ ಮುನಿಯು ಹನುಂತನಿಗೆ ವಿಶ್ವಾಮಿತ್ರ ಋಷಿಯ ಪಾದವನ್ನು ಮುಟ್ಟಿ ನಮಸ್ಕರಿಸಬಾರದು. ಅವರು ರಾಮನಿಗಿಂತ ಮೊದಲು ರಾಜನಾಗಿ ಇಲ್ಲಿ ಆಡಳಿತ ನಡೆಸಿದ್ದರು ಎಂದು ರಹಸ್ಯವಾಗಿ ಹೇಳಿದರು.
Most Read: ಶ್ರೀರಾಮ ಸೀತೆಗೆ ಏಕೆ ಅಗ್ನಿ ಪರೀಕ್ಷೆ ಮಾಡಲು ಹೇಳಿದ?

ಮುಗ್ಧ ಭಗವಾನ್ ಹನುಮಂತ
ನಾರದ ಮುನಿಯ ಮಾತಿಗೆ ಬೆಲೆ ನೀಡಿದ ಭಗವಾನ್ ಹನುಮಂತನು ವಿಶ್ವಾಮಿತ್ರ ಮುನಿಯ ಪಾದವನ್ನು ಬಿಟ್ಟು, ಉಳಿದ ಎಲ್ಲಾ ಋಷಿಮುನಿಗಳ ಪಾದ ಮುಟ್ಟಿ ನಮಸ್ಕರಿಸಿದನು. ವಿಶ್ವಾಮಿತ್ರ ಋಷಿಗಳು ರಾಮನ ಗುರುವಾಗಿದ್ದರು. ಹಾಗಾಗಿಯೇ ಹನುಂತನ ತಪ್ಪನ್ನು ಲಘುವಾಗಿಯೇ ಪರಿಗಣಿಸಿದರು. ನಾರದ ಮುನಿಯು ನಿರೀಕ್ಷೆಯಂತೆ ಏನೂ ನಡೆಯದೆ ಇದ್ದುದರಿಂದ, ತನ್ನ ಪ್ರಯತ್ನವೆಲ್ಲಾ ನಿರರ್ಥಕವಾಯಿತು ಎಂದು ಸಹಿಸಿಕೊಳ್ಳಲು ಕಷ್ಟವಾಯಿತು. ಆ ಕಾರಣಕ್ಕಾಗಿಯೇ ಮಿಶ್ವಾಮಿತ್ರರ ಬಳಿ ಹೋಗಿ ಹನುಮಂತನು ಉದ್ದೇಶಪೂರ್ವಕವಾಗಿಯೇ ನಿಮಗೆ ಅವಮಾನಿಸಿದ್ದಾನೆ ಎಂದು ಹನುಂತನ ವಿರುದ್ಧ ವಿಶ್ವಾಮಿತ್ರರಿಗೆ ಪ್ರೇರೇಪಣೆ ನೀಡಿದರು.

ಹನುಮಂತನಿಗೆ ಪರೀಕ್ಷೆಯ ಸಮಯವಾಗಿತ್ತು
ನಾರದ ಮುನಿಗಳ ಮಾತನ್ನು ಕೇಳಿದ ವಿಶ್ವಾಮಿತ್ರರಿಗೆ ಕೋಪ ಬಂದಿತು. ಈ ಹಿನ್ನೆಲೆಯಲ್ಲಿಯೇ ರಾಮನಿಗೆ ಹನುಮಂತನನ್ನು ಕೊಲ್ಲಬೇಕು ಎಂದು ಆದೇಶ ನೀಡಿದರು. ಗುರುವಿನ ಮಾತನ್ನು ಅಲ್ಲಗಳೆಯಲು ರಾಮನಿಗೆ ಸಾಧ್ಯವಾಗಲಿಲ್ಲ. ಹನುಮಂತನು ನಿರಂತರ ರಾಮ ನಾಮ ಜಪವನ್ನು ಮಾಡಲು ಪ್ರಾರಂಭಿಸಿದನು. ರಾಮನು ಹನುಮಂತನನ್ನು ಕೊಲ್ಲಲು ಎಷ್ಟೇ ಪ್ರಯತ್ನಿಸಿದರೂ ಹನುಮಂತನಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಹನುಂತನ ಮೇಲೆ ನಡೆದ ನಿರಂತರ ದಾಳಿಯಿಂದ ಏನೂ ಪ್ರಭಾವ ಬೀರಲಿಲ್ಲ. ನಂತರ ರಾಮನು ಬ್ರಹ್ಮಾಸ್ತ್ರ ಬಳಸಲು ನಿರ್ಧರಿಸಿದನು. ಆದಾಗ್ಯೂ ಹನುಮಂತ ತನ್ನ ಭಕ್ತಿಯಿಂದ ರಾಮನ ನಾಮವನ್ನು ಜಪಿಸಿತ್ತಿದ್ದುದರ ಪರಿಣಾಮ ಯಾವ ಅಸ್ತ್ರವೂ ಹನುಮಂತನಿಗೆ ಹಾನಿಯುಂಟುಮಾಡಲು ಸಾಧ್ಯವಾಗಲಿಲ್ಲ.

ನಾರದ ಮುನಿಯ ಹೃದಯ ಕರಗಿತು
ಹನುಂತನಿಗೆ ತನ್ನ ರಾಮನ ಮೇಲೆ ಇದ್ದ ಭಕ್ತಿಯನ್ನು ಕಂಡ ನಾರದ ಮುನಿಗೆ ಆಶ್ಚರ್ಯವಾಯಿತು. ಜೊತೆಗೆ ತನ್ನ ದುಷ್ಕೃತ್ಯಕ್ಕೆ ಕ್ಷಮೆಯಾಚಿಸಬೇಕು ಎಂದು ಬಯಸಿದನು. ನಂತರ ವಿಶ್ವಾಮಿತ್ರರಲ್ಲಿ ತನ್ನ ತಪ್ಪುಗಳನ್ನು ಹೇಳಿಕೊಂಡು, ಕ್ಷಮೆಯನ್ನು ಯಾಚಿಸಿದನು. ಜೊತೆಗೆ ರಾಮನಿಂದ ಹುನುಮಂತನಿಗೆ ಯಾವುದೇ ತೊಂದರೆ ಆಗದಂತೆ, ಹನುಮಂತನನ್ನು ರಕ್ಷಿಸಬೇಕೆಂದು ಕೇಳಿಕೊಂಡನು. ಅಂತೆಯೇ ವಿಶ್ವಾಮಿತ್ರರು ತಮ್ಮ ಆದೇಶವನ್ನು ಹಿಂದೆ ತೆಗೆದುಕೊಂಡು ಹನುಮಂತನಿಗೆ ಯಾವುದೇ ಹಾನಿ ಮಾಡಬಾರದು ಎಂದು ರಾಮನಿಗೆ ಹೇಳಿದರು. ತನ್ನ ಮುಗ್ಧತೆ ಮತ್ತು ರಾಮನ ಮೇಲಿರುವ ಭಕ್ತಯಿಯನ್ನು ತೋರುವುದರ ಮೂಲಕ ರಾಮನ ಪ್ರೀತಿಗೆ ಹನುಮಂತ ಪಾತ್ರನಾದನು ಎಂದು ಹೇಳಲಾಗುವುದು.



Click it and Unblock the Notifications