Just In
- 19 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 2 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 3 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
Don't Miss
- Movies Shrirasthu Shubhamasthu: ಮಹೇಶನ ಎದುರು ಬಯಲಾಯಿತು ಶಾರ್ವರಿ ಎರಡನೇ ಮುಖ; ಮುಂದೇನು?
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಥಿಕ ತೊಂದರೆಯೇ ಹಾಗಾದರೆ, ಪ್ರತಿದಿನ 'ಲಕ್ಷ್ಮಿ ಪೂಜೆ' ಮಾಡಿ
ಜೀವನದಲ್ಲಿ ಯಾವುದು ಇಲ್ಲದಿದ್ದರೂ ಹಣವಿರಬೇಕು. ಹಣವೊಂದಿದ್ದರೆ ಹೇಗೋ ಜೀವನ ನಡೆಸಿಕೊಂಡು ಹೋಗುತ್ತೇವೆ ಎನ್ನುವ ಮನೋಭಾವ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಇದು ಸತ್ಯದ ವಿಚಾರವೂ ಹೌದು. ಹಣವಿಲ್ಲ ಎಂದರೆ ಏನೂ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಲಕ್ಷ್ಮಿ ದೇವಿಯ ಕೃಪೆಗೆ ಒಳಗಾಗಿ ಕೈ ತುಂಬಾ ಹಣ, ಮನೆ ತುಂಬಾ ಶಾಂತಿ-ನೆಮ್ಮದಿ ಇರಲಿ ಎಂದು ಬಯಸುವುಸದು ಸಹಜ. ದುರ್ಗಾ ದೇವಿಯ ಪ್ರಮುಖ ಮೂರು ಅವತಾರದಲ್ಲಿ ಲಕ್ಷ್ಮಿ ದೇವಿಯ ಅವತಾರವೂ ಒಂದು.
ಎಷ್ಟೇ ದೊಡ್ಡ ಕೆಲಸ, ಆಸ್ತಿ ಇದ್ದರೂ ಕೆಲವೊಮ್ಮೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಮುಟ್ಟಿದ್ದೆಲ್ಲಾ ಹಾಳಾಗುವುದು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಉಂಟಾಗುವುದು. ಇಂತಹ ಸಮಸ್ಯೆಗಳಿಂದ ದೂರವಿರಬಬೇಕು ಎಂದರೆ ಲಕ್ಷ್ಮಿ ಪೂಜೆ ಮಾಡಬೇಕು. ಅದಕ್ಕಾಗಿ ಕೆಲವು ನಿಯಮ ಹಾಗೂ ಪದ್ಧತಿಗಳನ್ನು ಅನುಸರಿಸಿದರೆ ಮನೆಯಲ್ಲಿ ಸದಾ ಲಕ್ಷ್ಮಿ ನಲಿಯುತ್ತಿರುತ್ತಾಳೆ. ಎಲ್ಲಾ ದಾರಿದ್ರ್ಯವೂ ನಿವಾರಣೆಯಾಗುತ್ತದೆ. ಈ ವರ್ಷದ ಶ್ರಾವಣ ಮಾಸದಿಂದಲೇ ಲಕ್ಷ್ಮಿ ದೇವಿಯ ಆರಾಧನೆ ಆರಂಭಿಸಿ ಅದೃಷ್ಟವಂತರಾಗಿ...
ಪ್ರತಿ ಶುಕ್ರವಾರ 108 ಬಾರಿ, ಈ ಮಂತ್ರ ಜಪಿಸಿ
ಪ್ರತಿ ಶುಕ್ರವಾರ 108 ಬಾರಿ (ಒಂದು ಮಾಲಾ)ಶುಕ್ರಾ ಬೀಚ್ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮನ್ನು ಕಾಯುತ್ತಾಳೆ. ನೀವು ಹೇಳಬೇಕಾದ ಮಂತ್ರ ಹೀಗಿದೆ ನೋಡಿ... "ಓಂ ಡ್ರಾಮ್ ಡ್ರೀಮ್ ಡ್ರಾಮ್ ಸಹ ಶುಕ್ರೇ ನಮಃ"
ದೇವರ ಕೋಣೆ ಸ್ವಚ್ಛವಾಗಿರಬೇಕು
ದೇವರ ಕೋಣೆಯನ್ನು ಸ್ಚಚ್ಛ ಹಾಗೂ ನೀಟಾಗಿ ಇರುವಂತೆ ಕಾಪಾಡಬೇಕು. ಮಂತ್ರವನ್ನು ಜಪಿಸುವಾಗ ತುಪ್ಪದ ದೀಪ ಹಚ್ಚಿ ಜಪಿಸಬೇಕು. ಹೀಗೆ ಮಾಡುವುದರಿಂದ ಮನೆಗೆ ಶುಭವಾಗುವುದು. ಲಕ್ಷ್ಮಿ ಒಲಿಯುವಳು.
ಮನೆಯಲ್ಲಿ 'ದೇವರ ಕೋಣೆ' ಹೀಗಿರಲಿ, ಎಲ್ಲವೂ ಶುಭವಾಗುವುದು...
ಶ್ರೀ ಯಂತ್ರವನ್ನಿಡಬೇಕು
ಮನೆಯಲ್ಲಿ ಪವಿತ್ರವಾದ ಶ್ರೀ ಯಂತ್ರವನ್ನು ಇಟ್ಟಿರಬೇಕು. ಪುರಾಣದ ಪ್ರಕಾರ ಶ್ರೀ ಯಂತ್ರವು ಬ್ರಹ್ಮ ಮತ್ತು ವಿಷ್ಣು ದೇವರ ಕೃಪೆಗೆ ಒಳಗಾಗಿತ್ತು ಎನ್ನಲಾಗುತ್ತದೆ.
ಆರ್ಥಿಕ ಸುಧಾರಣೆ ಆಗುವುದು
ಶ್ರೀ ಯಂತ್ರವನ್ನು "ಓಂ" ಧ್ವನಿಯ ಕಂಪನ ದೃಶ್ಯ ಚಿತ್ರಣ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ಯಂತ್ರವನ್ನು ಇಟ್ಟರೆ ಓಂ ಎನ್ನುವ ಧ್ವನಿಯಿಂದ ವಿಷ್ಣು ದೇವರ ಕೃಪೆಗೆ ಒಳಗಾಗಬಹುದು. ಈ ಯಂತ್ರದ ಚಿತ್ರವನ್ನು ಪೂರ್ವ ದಿಕ್ಕೆಗೆ ಬರುವಂತೆ ಇಟ್ಟರೆ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದು ಎನ್ನುವ ನಂಬಿಕೆಯಿದೆ.
ಕೌರಿ ಚಿಪ್ಪುಗಳು
ಲಕ್ಷ್ಮಿಯು ಸಮುದ್ರದಲ್ಲಿ ಜನಿಸಿದಾಕೆ ಎನ್ನುತ್ತವೆ ಪುರಾಣಗಳು. ಹೀಗಾಗಿ ಸಮುದ್ರದಲ್ಲಿ ಸಿಗುವಂತಹ ಚಿಪ್ಪುಗಳಲ್ಲಿ ಕೌರಿಯೂ ಜಾತಿಯ ಚಿಪ್ಪನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀಯು ಒಲಿಯುತ್ತಾಳಂತೆ.
ಲಕ್ಷ್ಮಿ-ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಪೂಜೆ ಮಾಡಿ
ಲಕ್ಷ್ಮಿ ಮತ್ತು ಗಣಪತಿ ವಿಗ್ರಹಗಳು ಲಕ್ಷ್ಮಿ ಹಾಗೂ ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಯಾವಾಗಲೂ ಪೂಜೆ ಮಾಡುತ್ತಾ ಇದ್ದರೆ ಆಗ ಲಕ್ಷ್ಮಿಯೂ ಬೇಗನೆ ಒಲಿಯುತ್ತಾಳೆ ಎಂದು ನಂಬಲಾಗಿದೆ. ಮೂರ್ತಿಗಳು ಬೆಳ್ಳಿಯದ್ದಾಗಿದ್ದರೆ ಸಂಪತ್ತು ಯಾವತ್ತೂ ಮನೆಯಿಂದ ಹೊರಹೋಗುವುದಿಲ್ಲ ಎನ್ನುವ ನಂಬಿಕೆಯಿದೆ.
ಲಕ್ಷ್ಮಿಯನ್ನು ಪೂಜಿಸುವ ವಿಧಾನ
ಸಾಕ್ಷಾತ್ ಲಕ್ಷ್ಮೀ ದೇವಿಯು ಕಮಲದ ಹೂವಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲಿ ಮನೆ ಮಾಡಿದೆ. ಅದರಲ್ಲೂ ನೀವು ಕಮಲದ ಬೀಜಗಳ ಜಪಮಾಲೆಯನ್ನು ಮನೆಯಲ್ಲಿ ಇರಿಸುವುದರಿಂದ ಆಕೆಯನ್ನು ಮನೆಗೆ ಆಹ್ವಾನಿಸಬಹುದು ಎಂದು ಹೇಳಲಾಗುತ್ತದೆ.