ಇಂತಹ 7 ಬಗೆಯ ಪಾನೀಯಗಳನ್ನು ರಾತ್ರಿ ಊಟದ ನಂತರ ಎಂದಿಗೂ ಸೇವಿಸಬಾರದು!

ಊಟ ಎಂದರೆ ಸಾಮಾನ್ಯವಾಗಿ ಹೊಟ್ಟೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳುವುದು ಎಂದರ್ಥ. ಅತ್ಯುತ್ತಮ ಆರೋಗ್ಯ ಹೊಂದಬೇಕು ಎಂದಾದರೆ ದಿನದಲ್ಲಿ ಎರಡು ಹೊತ್ತಿನ ಊಟವನ್ನು ಚೆನ್ನಾಗಿ ಮಾಡಬೇಕು. ಪೋಷಕಾಂಶ ಭರಿತವಾದ ಊಟವು ವ್ಯಕ್ತಿಯ ಆರೋಗ್ಯಕ್ಕೆ ಬೇಕಾದ ಎಲ್ಲಾ ಬಗೆಯ ಪೋಷಕಾಂಶವನ್ನು ಒದಗಿಸುತ್ತದೆ. ಬೆಳೆಯುವ ಮಕ್ಕಳಿಗೆ ಎರಡು ಹೊತ್ತಿನ ಊಟ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಅದೇ ವಯಸ್ಕರಿಗೆ ಹಾಗೂ ವೃದ್ಧರಿಗೆ ದೇಹದಲ್ಲಿ ಶಕ್ತಿ ಹಾಗೂ ಅಂಗಾಂಗಳ ಆರೋಗ್ಯವನ್ನು ಕಾಪಾಡುತ್ತದೆ.

ನಾವು ಸೇವಿಸುವ ಊಟವು ಆರೋಗ್ಯಕರವಾಗಿಲ್ಲ ಅಥವಾ ಪೋಷಕಾಂಶಗಳ ಕೊರತೆಯಿಂದ ಕೂಡಿರುತ್ತದೆ ಎಂದಾದರೆ ವ್ಯಕ್ತಿಯ ಆರೋಗ್ಯದಲ್ಲಿ ಸಾಕಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಸೇವಿಸುವ ಆಹಾರವು ಶುದ್ಧ ಹಾಗೂ ಪೋಷಕಾಂಶಗಳಿಂದ ಕೂಡಿರಬೇಕು ಎನ್ನಲಾಗುವುದು. ಊಟ ಎಂದರೆ ಸಾಮಾನ್ಯವಾಗಿ ಹೊಟ್ಟೆ ತುಂಬಿಸಿಕೊಳ್ಳುವುದು ಅಥವಾ ಖಾಲಿ ಆದ ಹೊಟ್ಟೆಗೆ ಆಹಾರಗಳಿಂದ ಭರ್ತಿ ಮಾಡುವುದು ಎಂದರ್ಥ. ಹೊಟ್ಟೆ ತುಂಬಿದ ಜೀವಿಗಳು ಸಾಮಾನ್ಯವಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ತೃಪ್ತಿಯ ಭಾವನೆಯನ್ನು ತಾಳುತ್ತಾರೆ. ಜೊತೆಗೆ ಒಂದಿಷ್ಟು ಸಮಯ ನಿದ್ರೆಗೆ ಜಾರಲು ಬಯಸುವರು.

ಹಾಗಾಗಿ ಇಂತಹ ಉತ್ತಮ ಊಟವನ್ನು ಹೊಂದಿದ ಬಳಿಕ ಆದಷ್ಟು ಆರೋಗ್ಯ ಹಾಗೂ ಆರಾಮವನ್ನು ಹೊಂದುವುದು ಸೂಕ್ತ. ಅದೇ ಅನುಚಿತವಾದ ರೀತಿಯಲ್ಲಿ ಒಂದಿಷ್ಟು ಆಹಾರವನ್ನು ಪುನಃ ಪುನಃ ಸೇವಿಸುತ್ತಲೇ ಇರಬಾರದು. ಅದು ಜೀರ್ಣ ಕ್ರಿಯೆಗೆ ಒತ್ತಡವನ್ನು ಉಂಟುಮಾಡುವುದು. ಜೊತೆಗೆ ನಾವು ಸೇವಿಸಿದ ಊಟದ ಪೋಷಕಾಂಶಗಳನ್ನು ಕಡಿಮೆ ಮಾಡಬಹುದು. ಜೊತೆಗೆ ಅಜೀರ್ಣದಂತಹ ಸಮಸ್ಯೆಯನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅದರಲ್ಲೂ ಕೆಲವು ಪಾನೀಯಗಳನ್ನು ಊಟದ ಬಳಿಕ ಸೇವಿಸಬಾರದು ಎಂದು ಹೇಳಲಾಗುವುದು. ಹಾಗಾದರೆ ಆ ಏಳು ಪಾನೀಯಗಳು ಯಾವವು? ಅವುಗಳನ್ನು ಊಟದ ಬಳಿಕ ಏಕೆ ಸೇವಿಸಬಾರದು? ಸೇವಿಸಿದರೆ ಏನಾಗುವ ಸಾಧ್ಯತೆಗಳಿರುತ್ತವೆ? ನಮ್ಮ ಊಟ ಹೇಗಿರಬೇಕು? ಎನ್ನುವಂತಹ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಲೇಖನದ ಮುಂದಿನ ಭಾಗ ವಿವರಣೆಯನ್ನು ನೀಡುವುದು.

ಶುದ್ಧ ಹಾಲು

ಶುದ್ಧ ಹಾಲು

ತಾಜಾ ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹಾಗಾಗಿ ಇದರಿಂದ ಮೂಳೆಗಳು ಹೆಚ್ಚು ಸದೃಢವಾಗಿ ಇರುತ್ತವೆ. ಹೇಗಾದರೂ, ಶುದ್ಧ ಹಸುವಿನ ಹಾಲು ಯಾವಾಗಲೂ ಅಂದುಕೊಂಡಷ್ಟು ಉತ್ತಮವಾಗಿಲ್ಲ. ಏಕೆಂದರೆ ಶುದ್ಧ ಹಸುವಿನ ಹಾಲಿನಲ್ಲಿ ಪ್ರಾಣಿಗಳ ಪ್ರೋಟೀನ್ ಇದ್ದು ಅದು ಮೂಳೆಗಳಲ್ಲಿನ ಕ್ಯಾಲ್ಸಿಯಂ ಅನ್ನು ನಾಶಪಡಿಸುತ್ತದೆ. ಇದಲ್ಲದೆ ಹೆಚ್ಚಿನ ಪ್ರಮಾಣದ ಕ್ಯಾಲೊರಿಗಳು, ಕೊಬ್ಬುಗಳು, ಪ್ರತಿಜೀವಕಗಳು ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗಿರುತ್ತವೆ. ಆದ್ದರಿಂದ ಊಟದ ನಂತರ ಇದನ್ನು ಕುಡಿಯುವುದರಿಂದ ದೇಹದಲ್ಲಿ.

ಹಾಲು ಕುಡಿದ ಬಳಿಕ ಹೊಟ್ಟೆ ತುಂಬಿದಂತಾಗುವುದು ಹಾಗೂ ಹೊಟ್ಟೆ ಹೊರಬರುವುದು ಅಥವಾ ಊದಿಕೊಂಡಂತಿರುವುದು. ಇನ್ನು ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣೀಸಲು ಚಿಕ್ಕಕರುಳು ಲ್ಯಾಕ್ಟೇಸ್ ಎಂಬ ಕಿಣ್ವವನ್ನು ಉತ್ಪಾದಿಸಬೇಕು. ಆದರೆ ಪ್ರಚೋದನೆಯ ಕಾರಣ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿ ಮಾಡದೇ ಅರ್ಧಂಬರ್ಧ ಜೀರ್ಣಿಸುತ್ತದೆ. ಪೂರ್ಣವಾಗಿ ಜೀರ್ಣವಾಗದ ಆಹಾರ ದೊಡ್ಡಕರುಳಿನೊಳಗೆ ಪ್ರವೇಶಿಸುತ್ತದೆ. ಪರಿಣಾಮವಾಗಿ ಉತ್ಪತ್ತಿಯಾದ ಅನಿಲಗಳು ಸಣ್ಣಕರುಳು ಮತ್ತು ಜಠರವನ್ನು ಆವರಿಸುತ್ತವೆ. ಈ ಒತ್ತಡ ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.

ಇನ್ನು ಹಸುವಿನ ಹಾಲಿನಲ್ಲಿ ಸಕ್ಕರೆಯ ಇನ್ನೊಂದು ರೂಪವಾದ ಲ್ಯಾಕ್ಟೋಸ್ ಇದೆ. ಇದು ಕರುಳಿನಲ್ಲಿರುವಾಗ ಕರುಳುಗಳ ಒಳಗಣ ವಿಲ್ಲೈಗಳೆಂಬ ಹೀರುವ ಅಂಗಗಳಿಗೆ ಪ್ರಚೋದನೆ ನೀಡುತ್ತದೆ. ಇದರಿಂದಾಗಿ ಇತರ ಆಹಾರಗಳನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳದೇ ಅನಿಲಗಳನ್ನಾಗಿ ಪರಿವರ್ತಿಸುತ್ತದೆ. ಈ ಅನಿಲಗಳು ಒತ್ತಡ ತಾಳಲಾರದೇ ಹೊರದಬ್ಬಲ್ಪಟ್ಟು ಮುಜುಗರಕ್ಕೆ ಕಾರಣವಾಗುತ್ತವೆ.

ತಾಜಾ ಕೆನೆಯೊಂದಿಗೆ ಕಾಫಿ

ತಾಜಾ ಕೆನೆಯೊಂದಿಗೆ ಕಾಫಿ

ತಾಜಾ ಕೆನೆಯೊಂದಿಗೆ ಒಂದು ಕಪ್ ಬಿಸಿ ಕಾಫಿ ಶೀತ ಅಥವಾ ಚಳಿಗಾಲದ ದಿನಗಳಲ್ಲಿ ನೆಚ್ಚಿನ ಪಾನೀಯವಾಗಿರುತ್ತದೆ. ಇಷ್ಟದ ನೆಪದಲ್ಲಿ ಅಥವಾ ಹವ್ಯಾಸದ ನೆಪದಲ್ಲಿ ಊಟದ ನಂತರ ಅದನ್ನು ಸೇವಿಸಬಾರದು. ಆರೋಗ್ಯದ ಅಪಾಯಗಳನ್ನು ತಪ್ಪಿಸಲು, ನೀವು ಅದನ್ನು ಸಂಜೆ ಕುಡಿಯಬಾರದು. ತಾಜಾ ಕೆನೆ ಮುಖ್ಯವಾಗಿ ಕಾರ್ನ್ ಸಿರಪ್ ಮತ್ತು ಸಸ್ಯಜನ್ಯ ಎಣ್ಣೆಯಿಂದ ಕೂಡಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಮತ್ತು ನಮಗೆ ಅಜೀರ್ಣ, ನಿದ್ರಾಹೀನತೆಯನ್ನು ಉಂಟುಮಾಡುತ್ತದೆ.

ಎಳನೀರು/ತೆಂಗಿನ ನೀರು

ಎಳನೀರು/ತೆಂಗಿನ ನೀರು

ತೆಂಗಿನಕಾಯಿ ಖನಿಜಗಳಲ್ಲಿ ಬಹಳ ಸಮೃದ್ಧವಾಗಿದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಊಟದ ನಂತರ ಇದನ್ನು ಸೇವಿಸಬಾರದು. ಏಕೆಂದರೆ ತೆಂಗಿನಕಾಯಿಯಲ್ಲಿನ ನೀರಿನ ಪ್ರಮಾಣವು ಸಾಮಾನ್ಯವಾಗಿ 200-300 ಮಿಲಿ ನೀರಿಗೆ ಸಮಾನವಾಗಿರುತ್ತದೆ. ಅತಿಯಾದ ನೀರು ಮತ್ತು ಖನಿಜಗಳನ್ನು ಹೊಂದಿದ್ದರೆ ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಮತ್ತು ನಿರಂತರ ನಿದ್ರಾಹೀನತೆ ಉಂಟಾಗುತ್ತದೆ.

ಕಾರ್ಬೊನೇಟೆಡ್ ಪಾನೀಯಗಳು

ಕಾರ್ಬೊನೇಟೆಡ್ ಪಾನೀಯಗಳು

ನಿಮ್ಮ ಹೊಟ್ಟೆ ಅತಿಯಾದ ಕೆಲಸ ಎಂದು ಬಯಸದಿದ್ದರೆ ರಾತ್ರಿಯಲ್ಲಿ ಕಾರ್ಬೊನೇಟೆಡ್ ನೀರನ್ನು ಕುಡಿಯಬೇಡಿ. ಮಲಬದ್ಧತೆ ಅಥವಾ ಆಸಿಡ್ ರಿಫ್ಲಕ್ಸ್ ಇರುವ ಜನರು ಈ ಪಾನೀಯದಿಂದ ದೂರವಿರಬೇಕು. ಇಲ್ಲವಾದರೆ ಈ ಸಮಸ್ಯೆಗಳು ದ್ವಿಗುಣವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಗ್ರೀನ್ ಟೀ/ ಗಿಡಮೂಲಿಕೆಯ ಚಹಾ

ಗ್ರೀನ್ ಟೀ/ ಗಿಡಮೂಲಿಕೆಯ ಚಹಾ

ಕೆಲವು ಗಿಡಮೂಲಿಕೆ ಚಹಾಗಳು ನಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡಿದರೂ, ಜನರು ಸಂಜೆ ಜಿನ್ಸೆಂಗ್ ಚಹಾವನ್ನು ಬಳಸಬಾರದು. ಇದು ರಕ್ತದೊತ್ತಡ ಮತ್ತು ನಿದ್ದೆಯಿಲ್ಲದ ಹೆಚ್ಚಳಕ್ಕೆ ಕಾರಣವಾಗಬಹುದು.

*ಹಸಿರು ಟೀಯಲ್ಲಿರುವ ಕೆಫೀನ್ ಪ್ರಮಾಣ ಚಿಕ್ಕದೇ ಆಗಿದ್ದರೂ, ಈ ಚಿಕ್ಕ ಪ್ರಮಾಣವೇ ಹೊಟ್ಟೆಯನ್ನು ಕೆಡಿಸಲು ಸಾಕಾಗುತ್ತದೆ. ಏಕೆಂದರೆ ಕೆಫೀನ್ ಹೊಟ್ಟೆಗೆ ತಲುಪಿದ ಬಳಿಕ ಜೀರ್ಣರಸದ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ಜಠರದ ತೊಂದರೆಗೆ ನಾಂದಿ ಹಾಡುತ್ತದೆ. ಇದರ ಅಡ್ಡಪರಿಣಾಮವಾಗಿ ನೋವು ಅಥವಾ ವಾಕರಿಕೆಯೂ ಎದುರಾಗಬಹುದು.

*ಇನ್ನು ಹಸಿರು ಟೀ ಸೇವನೆಯಿಂದ ಲಘುವಿನಿಂದ ಹಿಡಿದು ಭಾರೀ ಎನ್ನುವಷ್ಟು ತಲೆನೋವು ಆವರಿಸಬಹುದು. ಇದಕ್ಕೆಲ್ಲಾ ಇದರಲ್ಲಿರುವ ಕೆಫೀನ್ ಕಾರಣ. ಒಂದು ವೇಳೆ ಅತಿಯಾದ ತಲೆನೋವಿನಿಂದ ಬಳಲುತ್ತಿರುವ ವ್ಯಕ್ತಿಗಳು ಹಸಿರು ಟೀ ಸೇವಿಸಿದರೆ ತಲೆತಿರುಗುವಿಕೆ ಎದುರಾಗಬಹುದು. ಅದರಲ್ಲೂ ಮೈಗ್ರೇನ್ ತಲೆನೋವಿನ ರೋಗಿಗಳು ಹಸಿರು ಟೀ ಸೇವಿಸಿದರೆ ತಲೆನೋವು ಇನ್ನಷ್ಟು ಉಲ್ಬಣಗೊಳಿಸುವುದರಿಂದ ಈ ರೋಗಿಗಳಿಗೆ ಹಸಿರು ಟೀ ಸಲ್ಲದು. ಆದರೆ ಮೈಗ್ರೇನ್ ಲಘುವಾಗಿದ್ದರೆ ಹಾಗೂ ಹಸಿರು ಟೀ ಇಲ್ಲದೇ ಆಗುವುದಿಲ್ಲ ಎನ್ನುವಂತಿದ್ದರೆ ಮಾತ್ರ ಕೊಂಚ ಪ್ರಮಾಣದಲ್ಲಿ ಸೇವಿಸಬಹುದು.

*ಹಸಿರು ಟೀ ಯನ್ನು ಸಂಜೆಯ ಬಳಿಕ ಸರ್ವಥಾ ಸೇವಿಸಬಾರದು. ಏಕೆಂದರೆ ಇದರ ಸೇವನೆಯಿಂದ ನರವ್ಯವಸ್ಥೆಯ ಮೇಲೆ ಪ್ರಚೋದನೆಯುಂಟಾಗಿ ನಿದ್ದೆ ಆವರಿಸಲು ತೊಂದರೆಯಾಗಬಹುದು ಹಾಗೂ ರಾತ್ರಿ ಬಲುಹೊತ್ತಿನವರೆಗೆ ನಿದ್ದೆ ಬಾರದೇ ಹೋಗಬಹುದು. ಇದರಲ್ಲಿರುವ ಕೆಫೇನ್ ನಿದ್ದೆ ಆವರಿಸಲು ಅಗತ್ಯವಾದ ರಾಸಾಯನಿಕಗಳು ಮೆದುಳನ್ನು ತಲುಪದಂತೆ ತಡೆಗಟ್ಟುತ್ತದೆ ಹಾಗೂ ಉದ್ವೇಗಕ್ಕೆ ಕಾರಣವಾಗುವ ಅಡ್ರಿನಲಿನ್ ಉತ್ಪತ್ತಿಗೆ ಪ್ರಚೋದನೆ ನೀಡುತ್ತದೆ.

*ಒಂದು ನಂಬಲರ್ಹ ಅಧ್ಯಯನದ ಪ್ರಕಾರ ಹಸಿರು ಟೀ ಸೇವನೆ ಹೆಚ್ಚಾದರೆ ರಕ್ತಹೀನತೆಯೂ ಹೆಚ್ಚಾಗಬಹುದು. ಅಲ್ಲದೇ ಅಹಾರದ ಮೂಲಕ ಲಭಿಸುವ ಕಬ್ಬಿಣವನ್ನು ದೇಹ ಬಳಸಿಕೊಳ್ಳಲು ವಿಫಲವಾಗಿಸಬಹುದು. ಈ ಟೀಯಲ್ಲಿರುವ ಟ್ಯಾನಿನ್ ಹಾಗೂ ಪಾಲಿಫಿನಾಲ್ ಗಳು ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತವೆ. ಈ ಕಣಗಳು ಕಬ್ಬಿಣದ ಕಣಗಳೊಂದಿಗೆ ಮಿಳಿತಗೊಂಡು ದೇಹ ಹೀರಿಕೊಳ್ಳುವುದಕ್ಕಿಂತಲೂ ದೊಡ್ಡ ಕಣಗಳಾಗುವ ಮೂಲಕ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಪಡಿಸುತ್ತದೆ.

ಸೋಡಾ

ಸೋಡಾ

ಪಾನೀಯಗಳಲ್ಲಿ ಸೋಡಾ ಕೂಡ ಹೆಚ್ಚಿನ ಆಮ್ಲವನ್ನು ಹೊಂದಿರುತ್ತದೆ. ಸೋಡಾ ವಾಸ್ತವವಾಗಿ ಇತರ ಪಾನೀಯಗಳಿಗಿಂತ ಹೆಚ್ಚಿನ ಆಮ್ಲೀಯತೆಯನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ. ಆಮ್ಲೀಯತೆಯು ಹೊಟ್ಟೆ ಮತ್ತು ಅನ್ನನಾಳವನ್ನು ಸಂಪರ್ಕಿಸುವ ಕವಾಟಗಳನ್ನು ಹಾನಿಗೊಳಿಸುತ್ತದೆ. ಇದಲ್ಲದೆ, ಕಾರ್ಬೊನೇಷನ್ ಹೊಟ್ಟೆಯ ಒತ್ತಡವನ್ನು ಹೆಚ್ಚಿಸುತ್ತದೆ.

*ಅಮೆರಿಕ ಡಯಾಬಿಟಿಸ್ ಸಂಘದವರು ನಡೆಸಿದ ಮೀಟಿಂಗ್ ನಲ್ಲಿ ಸೋಡಾ ಕುಡಿಯುವುದರಿಂದ ದೇಹದಲ್ಲಿರುವ ಕೊಬ್ಬನಂಶವನ್ನು ಕರಗಿಸುವುದಾದರೂ ದಪ್ಪಗಾಗಿಸುತ್ತೆ ಎಂಬ ಅಂಶವನ್ನು ಹೇಳಲಾಗಿದೆ.

ಡಯಟ್ ಸೋಡಾ ದೇಹದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

*ಸೋಡಾದಲ್ಲಿರುವ ಕೃತಕ ಸಿಹಿಯಿಂದಾಗಿ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ವಯಸ್ಸಾದಾಗ ಮಧುಮೇಹ ಕಾಣಿಸಿಕೊಳ್ಳಬಹುದು.

*ಸೋಡಾದಲ್ಲಿ ಸಕ್ಕರೆ ಅಂಶವಿರುವುದರಿಂದ ದಪ್ಪ ಕಡಿಮೆಯಾಗುವ ಬದಲು ಮತ್ತಷ್ಟು ದಪ್ಪಗಾಗಿಸುತ್ತೆ. ಸೋಡಾ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ.

ಕಿತ್ತಳೆ ರಸ

ಕಿತ್ತಳೆ ರಸ

ಕಿತ್ತಳೆ ರಸವನ್ನು ಸೇವಿಸಬೇಡಿ ಮತ್ತು ಸಂಜೆ ಕಿತ್ತಳೆ ರಸವನ್ನು ಕುಡಿಯಬೇಡಿ. ಏಕೆಂದರೆ ಕಿತ್ತಳೆ ರಸವು ದ್ರವ ಮತ್ತು ಮೂತ್ರವರ್ಧಕವನ್ನು ಉತ್ಪಾದಿಸುವ ಪರಿಣಾಮವನ್ನು ಹೊಂದಿರುತ್ತದೆ. ಇದು ನಿದ್ದೆಯಿಲ್ಲದಂತೆ ಮಾಡುತ್ತದೆ. ಅಲ್ಲದೆ, ನೀವು ಮಲಗುವ ಮುನ್ನ ಕಿತ್ತಳೆ ರಸವನ್ನು ಸೇವಿಸಿದರೆ, ಆಮ್ಲದ ಪ್ರಮಾಣವು ಹಲ್ಲುಗಳ ಮೇಲೆ ದಾಳಿ ಮಾಡುತ್ತದೆ. ಕಿತ್ತಳೆ ರಸವನ್ನು ತಿನ್ನಲು ಮತ್ತು ಕುಡಿಯಲು ಉತ್ತಮ ಸಮಯವೆಂದರೆ ಹೊಟ್ಟೆ ಖಾಲಿಯಾಗಿರುವಾಗ (ಬೆಳಗಿನ ಉಪಾಹಾರವನ್ನು ತಿನ್ನುವಾಗ) ಇದರಿಂದ ಹೊಟ್ಟೆಯು ಹೆಚ್ಚಿನ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.

English summary

Types of drinks that should never consume after dinner

Not every drink can be consumed whenever we want. Here are some drinks that had after dinner can be harmful to the body.
Story first published: Friday, August 2, 2019, 10:01 [IST]
X
Desktop Bottom Promotion