Just In
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 12 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News Lok Sabha Election 2024: ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯ ಮುಂದೆ ಹೊಸ-ಹೊಸ ಸವಾಲುಗಳು
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಜೀರ್ಣದಿಂದ ಹೊಟ್ಟೆನೋವೇ? ಈ ಮನೆಮದ್ದುಗಳು ಪರಿಣಾಮಕಾರಿ ನೋಡಿ
ಅಜೀರ್ಣ ಸಮಸ್ಯೆ ಯಾವಾಗ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ತಿಂದ ಆಹಾರದಲ್ಲಿ ಗ ಹೆಚ್ಚು ಕಮ್ಮಿಯಾದರೆ ಅಥವಾ ತಿಂದ ಆಹಾರವನ್ನು ಅರಗಿಸಿಕೊಳ್ಳುವ ಸಾಮಾರ್ಥ್ಯ ನಮ್ಮ ದೇಹಕ್ಕೆ ಇಲ್ಲದಿದ್ದರೆ ಅಜೀರ್ಣ ಉಂಟಾಗುವುದು. ಆಗ ಹೊಟ್ಟೆ ನೋವು ಉಂಟಾಗುವುದು.
ಈ ಸಮಸ್ಯೆ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಉಂಟಾಗುತ್ತದೆ. ತುಂಬಾ ತಿನ್ನುವುದು, ಜಗಿಯದೆ ಬೇಗ-ಬೇಗ ತಿನ್ನುವುದು, ಅಧಿಕ ಕೊಬ್ಬಿನ ಅಥವಾ ಖಾರದ ಆಹಾರ ಪದಾರ್ಥ ಸೇವನೆ, ಅತ್ಯಧಿಕ ಮದ್ಯ ಸೇವನೆ, ಮಾನಸಿಕ ಒತ್ತಡ ಈ ಎಲ್ಲಾ ಸಮಸ್ಯೆಗಳಿಂದ ಅಜೀರ್ಣ ಸಮಸ್ಯೆ ಉಂಟಾಗುವುದು.
ಅಜೀರ್ಣ ಸಮಸ್ಯೆಗೆ ಮನೆಮದ್ದು ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಅಜೀರ್ಣಕ್ಕೆಕೆಲ ಮನೆಮದ್ದು ನೀಡಿದ್ದೇವೆ, ಇವುಗಳು ನಿಮ್ಮ ಹೊಟ್ಟೆ ನೋವು ಬೇಗನೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
1. ಶುಂಠಿ
ಇದನ್ನು ಅಜೀರ್ಣ ಸಮಸ್ಯೆಗೆ ಮನೆಮದ್ದಾಗಿ ಹೆಚ್ಚಾಗಿ ಬಳಸಲಾಗುತ್ತಿದೆ. ಆ್ಯಸಿಡ್ ರಿಫ್ಲೆಕ್ಸ್ ಉಂಟಾದಾಗ ಇದನ್ನು ಬಾಯಿಗೆ ಹಾಕಿ ಜಗಿದರೆ ಸಾಕು. ಇಲ್ಲಾಂದರೆ ಊಟದ ಬಳಿಕ ಸ್ವಲ್ಪ ಶುಂಠಿ ಟೀ ಮಾಡಿ ಕುಡಿದರೆ ಸಾಕು ಜೀರ್ಣಕ್ರಿಯೆಗೆ ಸಹಕಾರಿ, ಹೊಟ್ಟೆ ನೋವು ಕಡಿಮೆಯಾಗುವುದು.
2. ಅಜ್ವೈನ್
ಅಜ್ವೈನ್ ಅಜೀರ್ಣ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಇದನ್ನು ಸ್ವಲ್ಪ ಬಾಯಿಗೆ ಹಾಕಿ ಜಗಿದರೆ ಸಾಕು ಹೊಟ್ಟೆ ಉಬ್ಬುವುದು ಕಡಿಮೆಯಾಗುವುದು, ಗ್ಯಾಸ್ ಟ್ರಬಲ್ ಇರುವುದಿಲ್ಲ.
ಊಟ ಸ್ವಲ್ಪ ಅಧಿಕ ಮಾಡಿದ್ದೇನೆ ಅಥವಾ ಜೀರ್ಣವಾಗುತ್ತಿಲ್ಲ, ಹೊಟ್ಟೆಯಲ್ಲಿ ಏನೋ ತಳಮಳ ಉಂಟಾಗುತ್ತಿದೆ ಎಂದು ಅನಿಸಿದಾಗ ಒಂದು ಚಮಚ ಅಜ್ವೈನ್ ಬಾಯಿಗೆ ಹಾಕಿ ಜಗಿದು ನೀರು ಕುಡಿದರೆ ಸಾಕು.
3. ಸೋಂಪು
ಸೋಂಪಿನಲ್ಲಿ ಫೆಂಚೋನೆ, ಅನ್ತೋಲೆ ಎಂಬ ಅಂಶವಿರುವುದರಿಂದ ಇದು ಹೊಟ್ಟೆಯಲ್ಲಿರುವ ಗ್ಯಾಸ್ ಹೊರ ಹಾಕುವಲ್ಲಿ ಸಹಕಾರಿ. ಇದರಿಂದ ಹೊಟ್ಟೆ ಉಬ್ಬುವುದು ಕಡಿಮೆಯಾಗುವುದು, ಇದನ್ನು ಊಟವಾದ ಬಳಿಕ ಸ್ವಲ್ಪ ಬಾಯಿಗೆ ತಿನ್ನಬಹುದು, ಇಲ್ಲಾ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೂ ಸಾಕು.
4. ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿರುವ ಅನೇಕ ಔಷಧೀಯ ಗುಣಗಳಲ್ಲಿ ಅಜೀರ್ಣ ಸಮಸ್ಯೆ ಹೋಗಲಾಡಿಸುವುದು ಕೂಡ ಒಂದು. ಆಗಾಗ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರೆ ಆಮ್ಲ ಜ್ಯೂಸ್ ತುಂಬಾ ಸಹಕಾರಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಮ್ಲ ಜ್ಯೂಸ್ ಕುಡಿದರೆ ಸಾಕು ಈ ಸಮಸ್ಯೆ ಇಲ್ಲವಾಗುವುದು.
5. ನೀರು ಕುಡಿಯಿರಿ
ಜೀರ್ಣವಾಗಲು ನಾವು ನೀರು ಕುಡಿಯಬೇಕು. ಅದರಲ್ಲೂ ಊಟದ ಬಳಿಕ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ದಿನದಲ್ಲಿ 8 ಲೋಟ ನೀರು ಕುಡಿಯಿರಿ. ಊಟವಾದ ಬಳಿಕ ಬಿಸಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು.
6. ಪುದೀನಾ
ಪುದೀನಾದಲ್ಲಿ ಆ್ಯಂಟಿಮೈಕ್ರೋಬಯಲ್ ಮತ್ತು ಗ್ಯಾಸ್ಟ್ರೋಇಂಟನ್ಸ್ಟೈನಲ್ ಅಂಶವಿರುವುದರಿಂದ ಅಜೀರ್ಣ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ. ಊಟದ ಬಳಿಕ ಒಂದು ಎಲೆ ಪುದೀನಾ ಬಾಯಿಗೆ ಹಾಕಿಕೊಳ್ಳಬಹುದು, ಇಲ್ಲಾ ಪುದೀನಾ ಜ್ಯೂಸ್ ಕುಡಿಯಬಹುದು. ಭರ್ಜರಿ ಊಟ ಮಾಡಿದ್ದಾಗ ಈ ರೀತಿ ಮಾಡಿದರೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.
7. ನಿಂಬೆಜ್ಯೂಸ್, ಅಡುಗೆ ಸೋಡಾ ಮತ್ತು ನೀರು
ಒಂದು ಲೋಟ ನೀರಿಗೆ ಚಿಟಕೆಯಷ್ಟು ಅಡುಗೆ ಸೋಡಾ ಹಾಕಿ ಅದಕ್ಕೆ ನಿಂಬೆರಸ ಹಾಕಿ ಕುಡಿದರೆ ಗ್ಯಾಸ್ ಹೊರ ಹೋಗುವುದು, ಹೊಟ್ಟೆಯೂ ನಿರಾಳವಾಗುವುದು. ತುಂಬಾ ಹೊಟ್ಟೆ ನೋವು ಕಾಣಿಸಿದಾಗ ಹೀಗೆ ಮಾಡಿ ಕುಡಿಯಿರಿ, ತಕ್ಷಣ ಕಡಿಮೆಯಾಗುವುದು.
8. ತುಳಸಿ
ತುಳಸಿಯನ್ನು ಅಜೀರ್ಣ ಸಮಸ್ಯೆ ಹೋಗಲಾಡಿಸಲು ಮನೆಮದ್ದಾಗಿ ಬಳಸಬಹುದು. ಒಂದು ಕಪ್ ನೀರಿಗೆ 10 ತುಳಸಿ ಎಲೆ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ಬೆರೆಸಿ ಕುಡಿಯಿರಿ. ಇದರಿಂದ ಅಜೀರ್ಣ ಕಡಿಮೆಯಾಗುವುದು, ಹೊಟ್ಟೆ ನಿರಾಳವಾಗುವುದು.
9. ಲವಂಗ
ಲವಂಗದಲ್ಲಿ ಉರಿಯೂತ ಕಡಿಮೆ ಮಾಡುವ, ಅಲ್ಸರ್ ಸಮಸ್ಯೆ ಕಡಿಮೆ ಮಾಡುವ, ಗ್ಯಾಸ್ಟ್ರೋಪ್ರೊಟೆಕ್ಟಿವ್ ಅಂಶವಿದೆ. ಇದರಿಂದಾಗಿ ಜೀರ್ಣಕ್ರಿಯೆ ಹೋಗಲಾಡಿಸಲು ಸಹಕಾರಿ. ಎರಡು ಲವಂಗ ಬಾಯಿಗೆ ಹಾಕಿ ಜಗಿದು ಅದರ ರಸ ಕುಡಿದರೆ ಕೂಡ ಹೊಟ್ಟೆ ನೋವು ತಕ್ಷಣ ಕಡಿಮೆಯಾಗುವುದು.
10. ಬಾಳೆಹಣ್ಣು
ಊಟವಾದ ಬಳಿಕ ಒಂದು ಬಾಳೆಹಣ್ಣು ತಿನ್ನುವುದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಇದು ಜೀರ್ಣಕ್ರಿಯೆ ಹಾಗೂ ಮಲವಿಸರ್ಜನೆಗೆ ಸಹಕಾರಿ. ಊಟ ಸ್ವಲ್ಪ ಅಧಿಕವಾಯ್ತು, ಇಲ್ಲಾ ಅಜೀರ್ಣ ಉಂಟಾಗಬಹುದು ಎಂದು ಅನಿಸಿದರೆ ಊಟವಾದ ಬಳಿಕ ಒಂದು ಬಾಳೆಹಣ್ಣು ತಿನ್ನಿ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಕಾಡುವುದಿಲ್ಲ.
11. ಬರೀ ಅನ್ನ
ಅಜೀರ್ಣ ಸಮಸ್ಯೆ ಹೋಗಲಡಿಸಲು ಬರೀ ಅನ್ನ ತಿನ್ನುವುದು ಕೂಡ ಒಳ್ಳೆಯದು. ಅನ್ನ ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಮಲವಿಸರ್ಜನೆಯಾಗುವುದು, ಇದರಿಂದ ಹೊಟ್ಟೆ ನಿರಾಳವಾಗುವುದು.
ಸೂಚನೆ: ಈ ಮನೆಮದ್ದುಗಳು ಅಜೀರ್ಣ ಸಮಸ್ಯೆ ಹೋಗಲಾಡಿಸಲು ತುಂಬಾ ಸಹಕಾರಿ. ಆದರೆ ಆಗಾಗ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಇವುಗಳನ್ನೇ ಮಾಡುತ್ತಾ ಇರಬೇಡಿ, ಬೇರೆ ಏನಾದರೂ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.