Just In
- 18 min ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 37 min ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- 1 hr ago ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
Don't Miss
- Movies Nannamma Superstar: ಬಿಗ್ ಬಾಸ್ ಸಂಗೀತಾ ಹೊಟ್ಟೆಗೆ ಏನ್ ತಿಂತಾರೆ? ಮೃದಿನಿಗೆ ಕಾಡಿದ ದೊಡ್ಡ ಪ್ರಶ್ನೆ
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮಗೆ ಗೊತ್ತೇ? ಮೂಳೆಯ ಆರೋಗ್ಯಕ್ಕೂ ಅರಿಶಿನ ಬಹಳ ಒಳ್ಳೆಯದು
ಅರಿಶಿನವನ್ನು ಭಾರತೀಯರು ಹಿಂದಿನಲ್ಲೂ ತಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಇಷ್ಟು ಮಾತ್ರದಲ್ಲಿ ಔಷಧಿಯಾಗಿಯೂ ಅರಶಿನವು ತುಂಬಾ ಜನಪ್ರಿಯತೆ ಪಡೆದುಕೊಂಡಿದೆ. ಆಯುರ್ವೇದದಲ್ಲಿ ಶತಮಾನಗಳಿಂದಲೂ ಅರಶಿನವನ್ನು ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಅರಿಶಿನದ ಬಗ್ಗೆ ನಡೆಸಿರುವಂತಹ ಹಲವಾರು ರೀತಿಯ ಅಧ್ಯಯನಗಳಿಂದ ಇದು ಮೂಳೆಗಳಿಗೆ ತುಂಬಾ ಉಪಯೋಗಕಾರಿ ಎಂದು ಸಾಬೀತು ಆಗಿದೆ.
ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಬಳಸಿಕೊಂಡು ವೈದ್ಯಕೀಯ ಲೋಕವು ಒಂದು ಔಷಧಿಯನ್ನು ಕಂಡುಹಿಡಿದಿದೆ. ಇದು ಪ್ರಮುಖವಾಗಿ ಮೂಳೆಯ ಕ್ಯಾನ್ಸರ್ ಬೆಳೆವಣಿಗೆ ಆಗುವುದನ್ನು ತಡೆಯವುದು ಮತ್ತು ಮೂಳೆಯ ಅಂಗಾಂಶಗಳು ಆರೋಗ್ಯಕಾರಿಯಾಗಿ ಬೆಳೆಯಲು ನೆರವು ನೀಡುವುದು. ಮಕ್ಕಳಲ್ಲಿ ಸಾವಿಗೆ ಕಾರಣವಾಗುವಂತಹ ಎರಡನೇ ಅತೀ ದೊಡ್ಡ ಕಾಯಿಲೆಯಾಗಿರುವಂತಹ ಆಸ್ಟಿಯೊಸಾರ್ಕೊಮಾದಿಂದ ಬಳುತ್ತಿರುವ ಜನರಿಗೆ ಚಿಕಿತ್ಸೆ ಬಳಿಕ ಅರಶಿನವು ತುಂಬಾ ಸಹಕಾರಿಯಾಗಲಿದೆ ಎಂದು ಜರ್ನಲ್ ಆಫ್ ಅಪ್ಲೈಡ್ ಮೆಟಿರಿಯಲ್ಸ್ ಮತ್ತು ಇಂಟರ್ ಫೇಸ್ ಹೇಳಿದೆ.
ತುಂಬಾ ಸಣ್ಣ ವಯಸ್ಸಿನಲ್ಲಿ ಮೂಳೆಯ ಕ್ಯಾನ್ಸರ್ ಗೆ ತುತ್ತಾಗುವಂತಹ ಜನರಿಗೆ ಚಿಕಿತ್ಸೆ ವೇಳೆ ಮತ್ತು ಶಸ್ತ್ರಚಿಕಿತ್ಸೆ ಬಳಿಕ ಕಿಮೋಥೆರಪಿಯ ಹೆಚ್ಚಿನ ಡೋಸ್ ನೀಡಲಾಗುತ್ತದೆ. ಆದರೆ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇವೆ. ಹೀಗಾಗಿ ಮರಳಿ ಕ್ಯಾನ್ಸರ್ ಕೋಶಗಳು ಬೆಳೆಯದೆ ಇರುವಂತೆ ತಡೆಯಲು ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳಿಗೆ ತುಂಬಾ ಉತ್ತಮವಾಗಿರುವಂತಹ ಔಷಧಿಯನ್ನು ಅಧ್ಯಯನಗಳು ಕಂಡುಕೊಂಡಿವೆ.
ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ವಿವಿಧ ರೀತಿಯ ಕಾಯಿಲೆಗಳ ನಿವಾರಣೆ ಮಾಡಲು ತುಂಬಾ ಲಾಭಕಾರಿ ಆಗಿರಲಿದೆ. ಅರಿಶಿನದಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಮೂಳೆ ಬೆಳೆಸುವಂತಹ ಅಂಶಗಳು ಇವೆ. ಅರಶಿನವನ್ನು ಕೆಲವು ಕ್ಯಾನ್ಸರ್ ಬೆಳವಣಿಗೆ ಆಗುವುದನ್ನು ತಡೆಯಲು ಬಳಸಬಹುದು. ಈ ನೈಸರ್ಗಿಕ ಅಂಶದಿಂದ ಸಿಗುವಂತಹ ಲಾಭಗಳ ಬಗ್ಗೆ ಜನರಿಗೆ ತಿಳಿಯಬೇಕು ಎಂದು ನಾನು ಬಯಸಿದ್ದೇನೆ. ಈ ಗಿಡಮೂಲಿಕೆಯಿಂದ ಪಡೆದಿರುವಂತಹ ನೈಸರ್ಗಿಕ ಜೀವಾಣುಗಳು ತುಂಬಾ ಅಗ್ಗ ಮತ್ತು ಬೇರೆ ರೀತಿಯ ಔಷಧಿಗಳಿಗಿಂತ ಇದು ತುಂಬಾ ಪರಿಣಾಮಕಾರಿ ಎಂದು ವೈದ್ಯರಾಗಿರುವ ಬೋಸ್ ಹೇಳುತ್ತಾರೆ. ಅದಾಗ್ಯೂ, ಇದನ್ನು ಬಾಯಿ ಮೂಲಕ ಔಷಧಿಯಾಗಿ ಸೇವನೆ ಮಾಡಿದರೆ ಆಗ ದೇಹವು ಇದನ್ನು ಹೀರಿಕೊಳ್ಳಲು ವಿಫಲವಾಗುತ್ತದೆ. ಇದು ಚಯಾಪಚಯಗೊಳ್ಳುವುದು ಮತ್ತು ಬೇಗನೆ ಹೊರಹೋಗುವುದು ಎಂದು ತಿಳಿದುಕೊಳ್ಳಲಾಗಿದೆ.
ಅಧ್ಯಯನಕ್ಕಾಗಿ ಕ್ಯಾಲ್ಸಿಯಂ ಪೋಸ್ಪೇಟ್ ನಿಂದ ಸ್ಕಾಫೋಲ್ಡ್ ನಿರ್ಮಾಣ ಮಾಡಲಾಯಿತು. ಸಿರಾಮಿಕ್ ಸ್ಕಾಫೋಲ್ಡ್ ಗಳು ಸಂಪೂರ್ಣವಾಗಿ ನೈಜ ಮೂಳೆಯಂತೆ ಪ್ರತಿಕ್ರಿಯಿಸುವಂತೆ ಮಾಡಲಾಯಿತು. ಇದರ ಬಳಿಕ ಅಧ್ಯಯನವು ಕರ್ಕ್ಯುಮಿನ್ ನ್ನು ಚಿಕಿತ್ಸೆಗಾಗಿ ಬಳಸಿಕೊಂಡಿತು. ಅಧ್ಯಯನಗಳು ಕಂಡುಕೊಂಡಿರುವ ವಿಚಾರವೆಂದರೆ ಆಸ್ಟಿಯೊಸಾರ್ಕೊಮಾವನ್ನು ಕೇವಲ 11 ದಿನಗಳಲ್ಲಿ ಶೇ.96ರಷ್ಟು ಬೆಳವಣಿಗೆ ಆಗದಂತೆ ತಡೆದಿದೆ ಎಂದು ಹೇಳಲಾಗಿದೆ. ಇಷ್ಟು ಮಾತ್ರವಲ್ಲದೆ ಇದು ಆರೋಗ್ಯಕಾರಿ ಮೂಳೆಗಳ ಬೆಳವಣಿಗೆಗೂ ಸಹಕಾರಿ ಆಗಿದೆ. ಈ ಸಂಶೋಧನೆಯು ಒಂದು ಹೊಸ ಯುಗವನ್ನು ಆರಂಭಿಸಿದೆ. ಯಾಕೆಂದರೆ ಆಧುನಿಕ 3ಡಿ ಪ್ರಿಟಿಂಗ್ ತಂತ್ರಜ್ಞಾನವು ತುಂಬಾ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ. ಇದು ಮೂಳೆಗಳ ಬೆಳವಣಿಗೆಗೂ ಸಹಕಾರಿ ಆಗಿದೆ ಎಂದು ಬೋಸ್ ತಿಳಿಸಿದ್ದಾರೆ.