Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮಗೆ ಗೊತ್ತೇ? ಮೂಳೆಯ ಆರೋಗ್ಯಕ್ಕೂ ಅರಿಶಿನ ಬಹಳ ಒಳ್ಳೆಯದು
ಅರಿಶಿನವನ್ನು ಭಾರತೀಯರು ಹಿಂದಿನಲ್ಲೂ ತಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಇಷ್ಟು ಮಾತ್ರದಲ್ಲಿ ಔಷಧಿಯಾಗಿಯೂ ಅರಶಿನವು ತುಂಬಾ ಜನಪ್ರಿಯತೆ ಪಡೆದುಕೊಂಡಿದೆ. ಆಯುರ್ವೇದದಲ್ಲಿ ಶತಮಾನಗಳಿಂದಲೂ ಅರಶಿನವನ್ನು ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಅರಿಶಿನದ ಬಗ್ಗೆ ನಡೆಸಿರುವಂತಹ ಹಲವಾರು ರೀತಿಯ ಅಧ್ಯಯನಗಳಿಂದ ಇದು ಮೂಳೆಗಳಿಗೆ ತುಂಬಾ ಉಪಯೋಗಕಾರಿ ಎಂದು ಸಾಬೀತು ಆಗಿದೆ.

ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಬಳಸಿಕೊಂಡು ವೈದ್ಯಕೀಯ ಲೋಕವು ಒಂದು ಔಷಧಿಯನ್ನು ಕಂಡುಹಿಡಿದಿದೆ. ಇದು ಪ್ರಮುಖವಾಗಿ ಮೂಳೆಯ ಕ್ಯಾನ್ಸರ್ ಬೆಳೆವಣಿಗೆ ಆಗುವುದನ್ನು ತಡೆಯವುದು ಮತ್ತು ಮೂಳೆಯ ಅಂಗಾಂಶಗಳು ಆರೋಗ್ಯಕಾರಿಯಾಗಿ ಬೆಳೆಯಲು ನೆರವು ನೀಡುವುದು. ಮಕ್ಕಳಲ್ಲಿ ಸಾವಿಗೆ ಕಾರಣವಾಗುವಂತಹ ಎರಡನೇ ಅತೀ ದೊಡ್ಡ ಕಾಯಿಲೆಯಾಗಿರುವಂತಹ ಆಸ್ಟಿಯೊಸಾರ್ಕೊಮಾದಿಂದ ಬಳುತ್ತಿರುವ ಜನರಿಗೆ ಚಿಕಿತ್ಸೆ ಬಳಿಕ ಅರಶಿನವು ತುಂಬಾ ಸಹಕಾರಿಯಾಗಲಿದೆ ಎಂದು ಜರ್ನಲ್ ಆಫ್ ಅಪ್ಲೈಡ್ ಮೆಟಿರಿಯಲ್ಸ್ ಮತ್ತು ಇಂಟರ್ ಫೇಸ್ ಹೇಳಿದೆ.
ತುಂಬಾ ಸಣ್ಣ ವಯಸ್ಸಿನಲ್ಲಿ ಮೂಳೆಯ ಕ್ಯಾನ್ಸರ್ ಗೆ ತುತ್ತಾಗುವಂತಹ ಜನರಿಗೆ ಚಿಕಿತ್ಸೆ ವೇಳೆ ಮತ್ತು ಶಸ್ತ್ರಚಿಕಿತ್ಸೆ ಬಳಿಕ ಕಿಮೋಥೆರಪಿಯ ಹೆಚ್ಚಿನ ಡೋಸ್ ನೀಡಲಾಗುತ್ತದೆ. ಆದರೆ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇವೆ. ಹೀಗಾಗಿ ಮರಳಿ ಕ್ಯಾನ್ಸರ್ ಕೋಶಗಳು ಬೆಳೆಯದೆ ಇರುವಂತೆ ತಡೆಯಲು ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳಿಗೆ ತುಂಬಾ ಉತ್ತಮವಾಗಿರುವಂತಹ ಔಷಧಿಯನ್ನು ಅಧ್ಯಯನಗಳು ಕಂಡುಕೊಂಡಿವೆ.
ಅರಿಶಿನದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ವಿವಿಧ ರೀತಿಯ ಕಾಯಿಲೆಗಳ ನಿವಾರಣೆ ಮಾಡಲು ತುಂಬಾ ಲಾಭಕಾರಿ ಆಗಿರಲಿದೆ. ಅರಿಶಿನದಲ್ಲಿ ಉನ್ನತ ಮಟ್ಟದ ಆಂಟಿ ಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಮೂಳೆ ಬೆಳೆಸುವಂತಹ ಅಂಶಗಳು ಇವೆ. ಅರಶಿನವನ್ನು ಕೆಲವು ಕ್ಯಾನ್ಸರ್ ಬೆಳವಣಿಗೆ ಆಗುವುದನ್ನು ತಡೆಯಲು ಬಳಸಬಹುದು. ಈ ನೈಸರ್ಗಿಕ ಅಂಶದಿಂದ ಸಿಗುವಂತಹ ಲಾಭಗಳ ಬಗ್ಗೆ ಜನರಿಗೆ ತಿಳಿಯಬೇಕು ಎಂದು ನಾನು ಬಯಸಿದ್ದೇನೆ. ಈ ಗಿಡಮೂಲಿಕೆಯಿಂದ ಪಡೆದಿರುವಂತಹ ನೈಸರ್ಗಿಕ ಜೀವಾಣುಗಳು ತುಂಬಾ ಅಗ್ಗ ಮತ್ತು ಬೇರೆ ರೀತಿಯ ಔಷಧಿಗಳಿಗಿಂತ ಇದು ತುಂಬಾ ಪರಿಣಾಮಕಾರಿ ಎಂದು ವೈದ್ಯರಾಗಿರುವ ಬೋಸ್ ಹೇಳುತ್ತಾರೆ. ಅದಾಗ್ಯೂ, ಇದನ್ನು ಬಾಯಿ ಮೂಲಕ ಔಷಧಿಯಾಗಿ ಸೇವನೆ ಮಾಡಿದರೆ ಆಗ ದೇಹವು ಇದನ್ನು ಹೀರಿಕೊಳ್ಳಲು ವಿಫಲವಾಗುತ್ತದೆ. ಇದು ಚಯಾಪಚಯಗೊಳ್ಳುವುದು ಮತ್ತು ಬೇಗನೆ ಹೊರಹೋಗುವುದು ಎಂದು ತಿಳಿದುಕೊಳ್ಳಲಾಗಿದೆ.
ಅಧ್ಯಯನಕ್ಕಾಗಿ ಕ್ಯಾಲ್ಸಿಯಂ ಪೋಸ್ಪೇಟ್ ನಿಂದ ಸ್ಕಾಫೋಲ್ಡ್ ನಿರ್ಮಾಣ ಮಾಡಲಾಯಿತು. ಸಿರಾಮಿಕ್ ಸ್ಕಾಫೋಲ್ಡ್ ಗಳು ಸಂಪೂರ್ಣವಾಗಿ ನೈಜ ಮೂಳೆಯಂತೆ ಪ್ರತಿಕ್ರಿಯಿಸುವಂತೆ ಮಾಡಲಾಯಿತು. ಇದರ ಬಳಿಕ ಅಧ್ಯಯನವು ಕರ್ಕ್ಯುಮಿನ್ ನ್ನು ಚಿಕಿತ್ಸೆಗಾಗಿ ಬಳಸಿಕೊಂಡಿತು. ಅಧ್ಯಯನಗಳು ಕಂಡುಕೊಂಡಿರುವ ವಿಚಾರವೆಂದರೆ ಆಸ್ಟಿಯೊಸಾರ್ಕೊಮಾವನ್ನು ಕೇವಲ 11 ದಿನಗಳಲ್ಲಿ ಶೇ.96ರಷ್ಟು ಬೆಳವಣಿಗೆ ಆಗದಂತೆ ತಡೆದಿದೆ ಎಂದು ಹೇಳಲಾಗಿದೆ. ಇಷ್ಟು ಮಾತ್ರವಲ್ಲದೆ ಇದು ಆರೋಗ್ಯಕಾರಿ ಮೂಳೆಗಳ ಬೆಳವಣಿಗೆಗೂ ಸಹಕಾರಿ ಆಗಿದೆ. ಈ ಸಂಶೋಧನೆಯು ಒಂದು ಹೊಸ ಯುಗವನ್ನು ಆರಂಭಿಸಿದೆ. ಯಾಕೆಂದರೆ ಆಧುನಿಕ 3ಡಿ ಪ್ರಿಟಿಂಗ್ ತಂತ್ರಜ್ಞಾನವು ತುಂಬಾ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ. ಇದು ಮೂಳೆಗಳ ಬೆಳವಣಿಗೆಗೂ ಸಹಕಾರಿ ಆಗಿದೆ ಎಂದು ಬೋಸ್ ತಿಳಿಸಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


