Just In
- 6 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 52 min ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಸಿವಿಲ್ಲದಿರುವಿಕೆ, ಈ ಸುಲಭ ಟಿಪ್ಸ್ ಅನ್ನು ಪ್ರಯತ್ನಿಸಿ ನೋಡಿ!
ಹಸಿವಿಲ್ಲದೇ ಇರುವುದು ಒಂದು ಸಾಮಾನ್ಯ ತೊಂದರೆಯಾಗಿದೆ. ಈ ತೊಂದರೆ ಯಾವುದೇ ವಯೋಮಾನದ ವ್ಯಕ್ತಿಗಳಲ್ಲಿ ಕಂಡುಬರಬಹುದು. ಹೆಚ್ಚಿನ ಸಂದರ್ಭದಲ್ಲಿ ಇದು ತಾತ್ಕಾಲಿಕವಾಗಿ ಆವರಿಸಿದರೆ ಉಳಿದವರಲ್ಲಿ ಸತತವಾಗಿ ಕಾಡುವ ತೊಂದರೆಯಾಗಿರಬಹುದು. ಅಸಮರ್ಪಕ ಅಹಾರ ಕ್ರಮ ಇದಕ್ಕೆ ಪ್ರಮುಖ ಕಾರಣವಾಗಿದೆ. ಉಳಿದಂತೆ ಮಾನಸಿಕ ಕಾರಣಗಳಾದ ಉದ್ವೇಗ, ಮಾನಸಿಕ ಒತ್ತಡ, ಖಿನ್ನತೆ ಮೊದಲಾದವುಗಳಿಂದಲೂ ಹಸಿವಿಲ್ಲದೇ ಹೋಗಬಹುದು.
ಕೆಲವೊಮ್ಮೆ ಗಂಭೀರ ಕಾಯಿಲೆಗಳಾದ ಮರೆಗುಳಿತನ, ಮೂತ್ರಪಿಂಡದ ಕಾಯಿಲೆ, ಬ್ಯಾಕ್ಟೀರಿಯಾದ ಸೋಂಕು ಮೊದಲಾದವು ಗಳಿಂದಲೂ ಹಸಿವಿಲ್ಲದೇ ಹೋಗಬಹುದು. ಆದರೆ ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸದೇ ತೂಕ ಅನೈಚ್ಛಿಕವಾಗಿ ಇಳಿಯುತ್ತದೆ ಹಾಗೂ ಇದು ಇನ್ನಷ್ಟು ಅನಾರೋಗ್ಯಗಳಿಗೆ ಕಾರಣವಾಗಬಹುದು. ಈ ತೊಂದರೆಗೆ ಹಲವಾರು ಔಷಧಿಗಳು ಲಭ್ಯವಿವೆ. ಆದರೆ ಇವುಗಳನ್ನು ಪ್ರಯತ್ನಿಸುವ ಮುನ್ನ ಯಾವುದೇ ಅಡ್ಡಪರಿಣಾಮ ಬೀರದ ಹಾಗೂ ಸುರಕ್ಷಿತವಾದ ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸಿ ನೋಡುವುದು ಜಾಣತನದ ಕ್ರಮವಾಗಿದೆ. ಇಂದಿನ ಲೇಖನದಲ್ಲಿ ಕೆಲವು ವಿಧಾನಗಳನ್ನು ವಿವರಿಸಲಾಗಿದ್ದು ಹಸಿವನ್ನು ಖಂಡಿತವಾಗಿಯೂ ಹೆಚ್ಚಿಸುತ್ತವೆ.
ಕಾಳುಮೆಣಸು
ನೂರಾರು ವರ್ಷಗಳಿಂದ ಹಸಿವು ಹೆಚ್ಚಿಸಲು ಕಾಳು ಮೆಣಸನ್ನು ಬಳಸಲಾಗುತ್ತಿದೆ. ಮುಖ್ಯವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಹಾಗೂ ಹೊಟ್ಟೆಯನ್ನು ಚುರುಗುಟ್ಟಿಸಲು ಕಾಳು ಮೆಣಸನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಹೊಟ್ಟೆಯ ಮತ್ತು ಕರುಳಿನಲ್ಲಿ ಎದುರಾಗುವ ತೊಂದರೆಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ. ಇದು ಖಾರವಾಗಿರುವ ಕಾರಣ ನಾಲಿಗೆಯಲ್ಲಿ ಚುರುಕು ಮೂಡಿಸಿ ಬಾಯಿಯಲ್ಲಿ ಹೆಚ್ಚಿನ ಲಾಲಾರಸ ಉತ್ಪತ್ತಿಯಾಗುವಂತೆ ಮಾಡುತ್ತದೆ. ಅಲ್ಲದೇ ಹೊಟ್ಟೆಯಲ್ಲಿಯೂ ಹೆಚ್ಚಿನ ಜೀರ್ಣರಸಗಳು ಸ್ರವಿಸುವಂತೆ ಮಾಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ಹಸಿವನ್ನೂ ಹೆಚ್ಚಿಸುತ್ತದೆ.
ಬಳಕೆಯ ವಿಧಾನ
ಒಂದು ಚಿಕ್ಕಚಮಚ ಅಪ್ಪಟ ಬೆಲ್ಲವನ್ನು (ಕಪ್ಪು ಅಥವಾ ಕೆಂಪು ಬೆಲ್ಲ ಮಾತ್ರ, ಬಿಳಿ ಬೆಲ್ಲ ಅಥವಾ ಹಳದಿಬೆಲ್ಲ ಉಪಯುಕ್ತವಲ್ಲ!) ಅರ್ಧ ಚಿಕ್ಕಚಮಚ ಕಪ್ಪು ಕಾಳುಮೆಣಸಿನೊಂದಿಗೆ ಚೆನ್ನಾಗಿ ಪುಡಿಗಟ್ಟಿಸಬೇಕು. ಈ ಮಿಶ್ರಣವನ್ನು ನಿಯಮಿತವಾಗಿ ದಿನದ ಒಂದೇ ಹೊತ್ತಿನಲ್ಲಿ ಕೆಲವಾರು ದಿನ ಸೇವಿಸುತ್ತಾ ಬಂದರೆ ಕ್ರಮೇಣ ಹಸಿವು ಹೆಚ್ಚತೊಡಗುತ್ತದೆ.
Most Read: ಹೊಟ್ಟೆ ತುಂಬಾ ತಿಂದರೂ, ಮತ್ತೆ, ಮತ್ತೆ ಹಸಿವು ಆಗುತ್ತಿದೆಯೇ?
ಹಸಿಶುಂಠಿ
ನಮ್ಮ ಹಲವು ಬಗೆಯ ಅಡುಗೆಗಳಲ್ಲಿ ಅನಿವಾರ್ಯ ರುಚಿಕಾರಕವಾಗಿ ಬಳಸಲ್ಪಡುವ ಹಸಿಶುಂಠಿ ಉತ್ತಮ ಔಷಧೀಯ ಗುಣಗಳನ್ನೂ ಹೊಂದಿದೆ. ವಿಶೇಷವಾಗಿ ಅಜೀರ್ಣತೆ ಮತ್ತು ಹಸಿವಿಲ್ಲದಿರುವಿಕೆಗೆ ಹಸಿಶುಂಠಿ ಉತ್ತಮ ಪರಿಹಾರವಾಗಿದೆ. ಅಲ್ಲದೇ ಹೊಟ್ಟೆ ನೋವನ್ನೂ ಇಲ್ಲವಾಗಿಸುತ್ತದೆ.
ಬಳಕೆಯ ವಿಧಾನ: ಅರ್ಧ ಚಿಕ್ಕ ಚಮಚದಷ್ಟು ತಾಜಾ ಹಸಿಶುಂಠಿಯ ರಸಕ್ಕೆ ಚಿಟಿಕೆಯಷ್ಟು ಕಲ್ಲುಪ್ಪು ಅಥವಾ ಹಿಮಾಲಯನ್ ಕೆಂಪು ಉಪ್ಪನ್ನು ಬೆರೆಸಿ ಊಟಕ್ಕೂ ಒಂದು ಘಂಟೆ ಮುನ್ನ ಸೇವಿಸಿ. ಈ ವಿಧಾನವನ್ನು ಸತತವಾಗಿ ಹತ್ತು ದಿನ ಅನುಸರಿಸಿ. ಜೊತೆಗೇ ಶುಂಠಿಯ ಟೀ ಯನ್ನೂ ಸೇವಿಸುತ್ತಿದ್ದರೆ ಇನ್ನೂ ಒಳ್ಳೆಯದು.
Most
Read:
ಹೊಟ್ಟೆ
ತುಂಬಾ
ತಿಂದರೂ,
ಮತ್ತೆ
ಹಸಿವು!
ಕಾರಣವೇನು?
ನೆಲ್ಲಿಕಾಯಿ
ಆಮ್ಲಾ ಎಂದೂ ಕರೆಯಲ್ಪಡುವ ನೆಲ್ಲಿಕಾಯಿಯಿ ಜಠರ ಮತ್ತು ಕರುಗಳುಗಳ ತೊಂದರೆಯಿಂದ ಎದುರಾಗಿರುವ ಹಸಿವಿಲ್ಲದಿರುವಿಕೆಗೆ ಅತ್ಯುತ್ತಮ ಪರಿಹಾರವಾಗಿದೆ. ನೆಲ್ಲಿಕಾಯಿ ಜೀರ್ಣಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಯಕೃತ್ ನಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಬಳಕೆಯ ವಿಧಾನ: ತಲಾ ಎರಡು ಚಿಕ್ಕ ಚಮಚದಷ್ಟು ತಾಜಾ ನೆಲ್ಲಿಕಾಯಿಯ ರಸ, ಲಿಂಬೆ ಸರ ಮತ್ತು ಜೇನನ್ನು ಒಂದು ಕಪ್ ನೀರಿಗೆ ಬೆರೆಸಿ. ಈ ನೀರನ್ನು ನಿತ್ಯವೂ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಸೇವಿಸಿ.
ಏಲಕ್ಕಿ
ಏಲಕ್ಕಿ ಜೀರ್ಣಾಂಗಗಳಲ್ಲಿ ಜೀರ್ಣರಸಗಳನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ತನ್ಮೂಲಕ ಹಸಿವನ್ನೂ ಹೆಚ್ಚಿಸುತ್ತದೆ.
ಬಳಕೆಯ ವಿಧಾನ: ಊಟಕ್ಕೂ ಮೊದಲು ಎರಡು ಅಥವಾ ಮೂರು ಏಲಕ್ಕಿಗಳನ್ನು ಚೆನ್ನಾಗಿ ಜಗಿದು ರಸವಾಗಿಸಿ ನುಂಗಬೇಕು. ಜೊತೆಗೇ ನಿತ್ಯವೂ ಕುಡಿಯುವ ಟೀಯಲ್ಲಿ ಕೊಂಚ ಏಲಕ್ಕಿ ಪುಡಿ ಬೆರೆಸಿಯೂ ಸೇವಿಸಬಹುದು.
Most Read: ಹಸಿವು ನೀಗಿಸಲು ಆರೋಗ್ಯಕರ ತಿಂಡಿಗಳು
ಓಮದ ಕಾಳುಗಳು
ಅಜ್ವೈನ್ ಎಂದೂ ಕರೆಯಲ್ಪಡುವ ಈ ಪುಟ್ಟ ಜೀರಿಗೆಯಂತಹ ಕಾಳುಗಳು ಎಲ್ಲಾ ಬಗೆಯ ಹೊಟ್ಟೆಯ ತೊಂದರೆಗಳನ್ನು ನಿವಾರಿಸಲು ಉತ್ತಮವಾಗಿವೆ. ಇದರ ಸೇವನೆಯಿಂದ ಜಠರದಲ್ಲಿ ಅಗತ್ಯ ಜೀರ್ಣರಸಗಳು ಮತ್ತು ಕಿಣ್ವಗಳು ಸ್ರವಿಸಿ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
ಬಳಕೆಯ ವಿಧಾನ: ಸುಮಾರು ಎರಡರಿಂದ ಮೂರು ಚಿಕ್ಕ ಚಮಚದಷ್ಟು ಓಮದ ಕಾಳುಗಳನ್ನು ಕೊಂಚ ಲಿಂಬೆರಸದಲ್ಲಿ ಬೆರೆಸಿ ಒಣ ಪ್ರದೇಶದಲ್ಲಿ ಹಾಗೇ ಒಣಗಲು ಬಿಡಿ. ಲಿಂಬೆಸರಸವನ್ನು ಈ ಕಾಳುಗಳು ಪೂರ್ಣವಾಗಿ ಹೀರಿ ಒಣಗಿದ ಬಳಿಕ ಇದಕ್ಕೆ ಕೊಂಚ ಕಪ್ಪುಪ್ಪನ್ನು ಸೇರಿಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಪ್ರತಿ ದಿನ ಬಳಿಗ್ಗೆ ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಈ ಪ್ರಮಾಣವನ್ನು ಬೆರೆಸಿ ಪ್ರಥಮ ಆಹಾರವಾಗಿ ಸೇವಿಸಿ. ಇಷ್ಟೆಲ್ಲಾ ಮಾಡುವಷ್ಟು ವ್ಯವಧಾನ ಇಲ್ಲದಿದ್ದರೆ ಅರ್ಧ ಚಿಕ್ಕ ಚಮಚದಷ್ಟು ಓಮದ ಕಾಳುಗಳನ್ನು ಊಟಕ್ಕೂ ಮುನ್ನ ಸೇವಿಸಬಹುದು. ಆದರೆ ಇದರ ರುಚಿ ಹೆಚ್ಚಿನವರಿಗೆ ಹಿಡಿಸದೇ ಹೋಗಬಹುದು.