For Quick Alerts
ALLOW NOTIFICATIONS  
For Daily Alerts

ಯಮಸ್ವರೂಪಿ ಸಾವಿಗೆ 10 ಕಾರಣಗಳು ಮತ್ತು ಪರಿಹಾರಗಳು

|

ಮನುಷ್ಯನಿಗೆ ಹುಟ್ಟು ಸಾವು ಎರಡೂ ಅವನ ಕೈಯಲ್ಲಿರುವುದಿಲ್ಲ . ಹುಟ್ಟು ಸಾವು ಎರಡೂ ಆಕಸ್ಮಿಕವೇ . ಎಲ್ಲೋ ಹುಟ್ಟುತ್ತಾನೆ , ಮತ್ತೆಲ್ಲೋ ಬೆಳೆಯುತ್ತಾನೆ , ಇನ್ನೆಲ್ಲೋ ಜೀವನ ನಡೆಸುತ್ತಾನೆ ಹಾಗೆ ಬೇರೆ ಎಲ್ಲೋ ಯಾವ ರೀತಿಯಲ್ಲೋ ಸಾಯುತ್ತಾನೆ . ಪ್ಲೇನ್ ಕ್ರ್ಯಾಶ್ ಆಗಿಯೋ , ವಿಷ ಸರ್ಪ ಕಚ್ಚಿಯೋ ಅಥವಾ ಯಾವುದಾದರೂ ಭಯಾನಕ ಖಾಯಿಲೆ ಬಂದೊದಗಿಯೋ ಹೀಗೆ ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಮತ್ತು ಯಾವ ಸಮಯದಲ್ಲಿ ಬೇಕಾದರೂ ಬರಬಹುದು . ಏಕೆಂದರೆ ಜೀವನ ಎನ್ನುವುದು ನೀರಿನ ಮೇಲಿನ ಗುಳ್ಳೆಯಂತೆ . ಯಾವಾಗ ಬೇಕಾದರೂ ಒಡೆಯಬಹುದು . ಎಷ್ಟೇ ಆಸೆ ಕನಸುಗಳಿದ್ದರೂ ಯಮನ ಕರೆ ಬಂದಾಗ ಎಲ್ಲವನ್ನೂ ಬಿಟ್ಟು ಸದ್ದಿಲ್ಲದಂತೆ ನಡೆಯುತ್ತಿರಬೇಕು .

The Most Ten Common Causes of Death

ಹುಟ್ಟಿದ ಮನುಷ್ಯ ಸಾಯಲೇಬೇಕು . ಹಣ್ಣೆಲೆ ಮರದಿಂದ ಉದುರುವ ಹಾಗೆ . ಅದು ಅನಿವಾರ್ಯ ಮತ್ತು ಜಗತ್ತಿನ ನಿಯಮ ಕೂಡ . ಬೇರೆ ಯಾವ ರೀತಿಯಲ್ಲಾದರೂ ಸಾವು ಬಂದರೆ ಅದು ನಮ್ಮ ಕೈಯಲ್ಲಿ ಇರುವುದಿಲ್ಲ . ಅದನ್ನು ತಪ್ಪಿಸಲಿಕ್ಕೂ ಆಗುವುದಿಲ್ಲ . ಆದರೆ ದೇಹಕ್ಕೆ ಖಾಯಿಲೆ ಬಂದು ಸತ್ತರೆ ಅದು ಒಂದು ಕ್ಷಣ ನಮ್ಮನ್ನು ಗೊಂದಲಕ್ಕೆ ನೂಕಿದಂತಾಗುತ್ತದೆ . ಏಕೆಂದರೆ ಜೀವ ಮತ್ತ್ತು ಜೀವನ ಎರಡೂ ಅಮೂಲ್ಯವಲ್ಲವೇ ? ಹೋದ ಜೀವವನ್ನು ಮತ್ತು ಜೀವನವನ್ನು ಯಾರೂ ಹಿಂದಿರುಗಿ ತರಲಾಲರು . ಆಗ ಅರೆ ಹೀಗೆ ಮಾಡಿದ್ದಾರೆ ಬದುಕಬಹುದಿತ್ತೇನೋ ಅಲ್ಲವೇ ಎನ್ನುವ ಅಪರಾಧಿ ಮನೋಭಾವ ಸದಾ ಕಾಡುತ್ತಿರುತ್ತದೆ . ಆದರೆ ಏನೂ ಮಾಡುವುದಕ್ಕೆ ಆಗುವುದಿಲ್ಲ . ಏಕೆಂದರೆ ಜೀವನದ ಕಥೆಯೇ ಮುಗಿದು ಹೋಗಿರುತ್ತದೆ . ನಾವು ಇಲ್ಲಿ ಇಂತಹದೇ ಸಂದರ್ಭ ಎದುರಾದಾಗ ಧೈರ್ಯ ಕೆಡದೆ ಹೇಗೆ ಬರುವ ಸಾವಿನಿಂದ ಬಚಾವಾಗಬಹುದು ಎಂಬುದರ ಕೆಲವೊಂದು ನಿರ್ದೇಶನಗಳನ್ನು ಕೊಡಲು ಬಯಸುತ್ತೇವೆ . ಸಾಧ್ಯವಾದಷ್ಟು ಇದು ನಿಮಗೆ ಸಹಾಯಕವಾದರೆ ಅಷ್ಟೇ ಸಾಕು .

ಸ್ಟ್ರೋಕ್ ಅಥವಾ ಪ್ಯಾರಾಲಿಸಿಸ್ ಅಥವಾ ಲಕ್ವ ಹೊಡೆಯುವುದು

ಸ್ಟ್ರೋಕ್ ಅಥವಾ ಪ್ಯಾರಾಲಿಸಿಸ್ ಅಥವಾ ಲಕ್ವ ಹೊಡೆಯುವುದು

ಹಿಂದಿನ ಕಾಲಕ್ಕಿಂತ ಈ ಆಧುನಿಕ ಕಲಿಗಾಲದಲ್ಲಿ ಇದರ ಚದುರಂಗದಾಟ ಸ್ವಲ್ಪ ಜೋರಾಗಿಯೇ ಇರುವಂತೆ ಕಾಣುತ್ತದೆ . ಇದಕ್ಕೆ ಕಾರಣ ನಮ್ಮ ಬದಲಾದ ಜೀವನ ಶೈಲಿ ಎಂದರೂ ತಪ್ಪಾಗಲಿಕ್ಕಿಲ್ಲ . ವರ್ಷಕ್ಕೆ ಹೋಲಿಸಿದರೆ ಸರಿಸುಮಾರು 135 ಸಾವಿರ ಮಂದಿ ಈ ಕಾಯಿಲೆಯಿಂದ ವಿಶ್ವದಾದ್ಯಂತ ಅಸುನೀಗುತ್ತಿದ್ದಾರೆ . ಮನುಷ್ಯನಿಗೆ ಲಕ್ವ ಹೊಡೆಯಲು ಕಾರಣ ಆತನ ಮೆದುಳಿನ ರಕ್ತ ನಾಳ ಒಡೆದು ಹೋಗಿರುವುದು ಒಂದು ಕಾರಣ . ಇದರಿಂದ ಮೆದುಳಿನಲ್ಲಿ ಸರಿಯಾದ ಜಾಗಕ್ಕೆ ರಕ್ತ ಸಂಚಾರ ಆಗುತ್ತಿರುವುದಿಲ್ಲ . ಇನ್ನೊಂದು ಕಾರಣ ಏನೆಂದರೆ ಹೃದಯದಿಂದ ಮೆದುಳಿಗೆ ರಕ್ತ ಸಂಚಾರ ನಿಂತು ಹೋಗಿರುತ್ತದೆ . ಇದಕ್ಕೆ ರಕ್ತ ನಾಳಗಳಲ್ಲಿ ಶೇಖರಣೆಯಾದ ಅತಿಯಾದ ಬ್ಯಾಡ್ ಕೊಲೆಸ್ಟರಾಲ್ ರಕ್ತವನ್ನು ಮುಂದಕ್ಕೆ ಹೋಗದಂತೆ ತಡೆದಿರುತ್ತದೆ . ಸ್ಟ್ರೋಕ್ ನಿಂದ ಸಾವೇ ಸಂಭವಿಸಬೇಕೆಂದೇನೂ ಇಲ್ಲ . ದೇಹದ ಒಂದು ಕಡೆಯ ಭಾಗ ಸಂಪೂರ್ಣ ನಿಶ್ಚಲವಾಗಿರುತ್ತದೆ . ಮಾತು ಬಿದ್ದು ಹೋಗಿರುತ್ತದೆ ಅಂದರೆ ಮಾತನಾಡಲು ಆಗುವುದಿಲ್ಲ . ಒಟ್ಟಿನಲ್ಲಿ ಬದುಕಿದ್ದರೂ ಸತ್ತ ಹಾಗೆ ಜೀವಂತ ಶವ ಮಾಡುತ್ತದೆ .

ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ?

ಇಲ್ಲಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ .

* ದಯವಿಟ್ಟು ಧೂಮಪಾನ ತ್ಯಜಿಸಿ .

* ಮದ್ಯಪಾನ ಸಂಪೂರ್ಣವಾಗಿ ಬಿಡಲು ಮನಸ್ಸಿಲ್ಲದವರು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ .

* ಆರೋಗ್ಯಕರ ಮತ್ತು ಮಿತ ಉಪಹಾರ ಮತ್ತು ನಿಗದಿತ ಸಮಯಕ್ಕೆ ಪ್ರತಿದಿನ ವ್ಯಾಯಾಮ ಮಾಡಿ .

* ನಿಮ್ಮ ಕೊಲೆಸ್ಟರಾಲ್ ಅಂಶವನ್ನು ಆಗಾಗ ವೈದ್ಯರ ಬಳಿ ಪರೀಕ್ಷಿಸಿ .

* ನಿಮ್ಮ ರಕ್ತದ ಒತ್ತಡದ ಮೇಲೆ ಗಮನವಿಡಿ .

* ನಿಮಗೆ ಮಧುಮೇಹ ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳಿ ಮತ್ತು ಇದ್ದರೆ ಯಾವ ಮಟ್ಟದಲ್ಲಿದೆ ಎಂದು ತಿಳಿಯಿರಿ.ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ಈ ಎಲ್ಲಾ ಕ್ರಮಗಳನ್ನು ಕೈಗೊಂಡು ನಿಮ್ಮ ದೇಹ ಸ್ಟ್ರೋಕ್ ಗೆ ಗುರಿಯಾಗುವುದನ್ನು ತಪ್ಪಿಸಿ .

ಮೈಯೊಳಗಿನ ರಕ್ತವೇ ವಿಷಮಯ,ಎಂತಹ ವಿಸ್ಮಯ!

ಮೈಯೊಳಗಿನ ರಕ್ತವೇ ವಿಷಮಯ,ಎಂತಹ ವಿಸ್ಮಯ!

ಬ್ಯಾಕ್ಟೀರಿಯಾ ಗಳು ಮೈ ಒಳಗಿನ ರಕ್ತಕ್ಕೆ ನುಗ್ಗಿದ್ದೇ ಆದರೆ ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿತು ಎಂಬಂತೆ ಇಡೀ ಮನುಷ್ಯನ ದೇಹದ ರಕ್ತವನ್ನೆಲ್ಲಾ ವಿಷವಾಗಿ ಪರಿವರ್ತಿಸುತ್ತದೆ . ಇದಕ್ಕೆ ವೈದ್ಯರ ಭಾಷೆಯಲ್ಲಿ " ಸೆಪ್ಟಿಸಿಮಿಯಾ " ಎಂದು ಕರೆಯುತ್ತಾರೆ . ಇದರಿಂದ ರಕ್ತದ ಒತ್ತಡ ಕಡಿಮೆಯಾಗಿ ಮನುಷ್ಯ ಬಹು ಅಂಗಾಂಗ ವೈಫಲ್ಯದಿಂದ ಕೊನೆಗೆ ಸಾವನ್ನಪ್ಪುತ್ತಾನೆ . ಅಮೇರಿಕಾ ದಲ್ಲಿ ಒಂದು ವರ್ಷಕ್ಕೆ ಸರಿ ಸುಮಾರು 30,000 ಜನರು ಈ ಸೆಪ್ಟಿಸಿಮಿಯಾ ದಿಂದ ಸಾವನ್ನಪ್ಪುತ್ತಾರೆ . ಮೈ ಮೇಲೆ ಸಣ್ಣ ಗಾಯವಾದರೂ ಸರಿ ಅದು ಇನ್ಫೆಕ್ಷನ್ ಆಗದಂತೆ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ .ಹಾಗೊಂದು ವೇಳೆ ನಮ್ಮ ಗಮನಕ್ಕೆ ಬರದೇ ಇನ್ಫೆಕ್ಷನ್ ಆಗಿ ರಕ್ತದ ಒತ್ತಡ ನಿಯಂತ್ರಣಕ್ಕೆ ಬರದೇ , ಮೂತ್ರ ವಿಸರ್ಜನೆ ಕಡಿಮೆಯಾಗಿ ಜ್ವರ ಜಾಸ್ತಿ ಇದ್ದರೆ ಅದು ಸೆಪ್ಟಿಸಿಮಿಯಾ ಆಗಿದ್ದರೂ ಆಗಿರಬಹುದು . ಆದ್ದರಿಂದ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ .

ಅಲ್ಝಿಮಾರ್ ಡಿಸೀಸ್

ಅಲ್ಝಿಮಾರ್ ಡಿಸೀಸ್

ಅಲ್ಝಿಮಾರ್ ಖಾಯಿಲೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡು ಬರುತ್ತದೆ ಅದು ಸುಮಾರು ಅರವತ್ತು ವರ್ಷವಾದ ಮೇಲೆ . ಎಲ್ಲವನ್ನೂ ಮರೆಯುವುದು , ಮಾತಿನಲ್ಲಿ ತೊದಲು ಮತ್ತು ಏನೇನೋ ಆಲೋಚನೆ ತಲೆಗೆ ಬರುವುದು ಜೊತೆಗೆ ತಮ್ಮ ಸ್ವಂತ ಕೆಲಸ ಕಾರ್ಯ ಗಳನ್ನೂ ಮಾಡಿಕೊಳ್ಳಲು ಅಸಮರ್ಥರಾಗುವುದು ಈ ಖಾಯಿಲೆಯ ಗುಣ ಲಕ್ಷಣಗಳು . ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದರಿಂದ ಈ ಖಾಯಿಲೆ ಬಂತೆಂದರೆ ಸಾವು ಖಚಿತ . ಇನ್ಫೆಕ್ಷನ್ ನ ವಿರುದ್ಧ ಹೋರಾಡುವುದಕ್ಕೆ ಸಾಧ್ಯವಾಗದೆ , ಏನನ್ನೂ ತಿನ್ನಲೂ ಆಗದೆ ಕಷ್ಟ ಪಡುತ್ತಾರೆ . ಮತ್ತು ದೇಹದ ಒಳಗಡೆ ಹೃದಯದಲ್ಲಿ ಮತ್ತು ಶ್ವಾಸಕೋಶದಲ್ಲಿ ರಕ್ತ ಹೆಪ್ಪು ಗಟ್ಟುವ ಸಾಧ್ಯತೆ ಬಹಳ ಜಾಸ್ತಿ ಇರುತ್ತದೆ . ಆದ್ದರಿಂದ ಈ ಖಾಯಿಲೆಯಿಂದ ತಪ್ಪಿಸಿಕೊಳ್ಳಬೇಕಾದರೆ ಒಳ್ಳೆಯ ವ್ಯಾಯಾಮ , ಮಿತವಾದ ಆರೋಗ್ಯಕರ ಆಹಾರ ಮತ್ತು ಯಾವಾಗಲೂ ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳುವುದು ಒಳ್ಳೆಯದು .

ಕಿಡ್ನಿಯ ಅಥವಾ ಮೂತ್ರಪಿಂಡದ ಸಮಸ್ಯೆಗಳು

ಕಿಡ್ನಿಯ ಅಥವಾ ಮೂತ್ರಪಿಂಡದ ಸಮಸ್ಯೆಗಳು

ಮನುಷ್ಯನ ಸಾವಿಗೆ ಇನ್ನೊಂದು ಪ್ರಮುಖ ಕಾರಣ ಅವನ ಕಿಡ್ನಿ ಫೇಲ್ ಆಗುವುದು . ಕಿಡ್ನಿ ಹೇಗೆಲ್ಲಾ ಫೇಲ್ ಆಗುತ್ತದೆ ಗೊತ್ತಾ ? ಅತಿಯಾದ ಔಷಧಿಗಳ ಸೇವನೆ , ಆರ್ಥ್ರೈಟಿಸ್ , ಏಡ್ಸ್ ಮತ್ತು ಲ್ಯೂಪಸ್ ಮನುಷ್ಯನ ಕಿಡ್ನಿಗಳನ್ನು ಹಾಳು ಮಾಡುತ್ತವೆ . ಒಮ್ಮೆ ಕಿಡ್ನಿ ಹಾಳಾದರೆ ಮೂತ್ರದಲ್ಲಿ ಪ್ರೋಟೀನ್ ಅಂಶ ಸೇರುತ್ತಾ ಹೋಗುತ್ತದೆ . ಇದಕ್ಕೆ " nನೆಫ್ರಯೋಟಿಕ್ ಸಿಂಡ್ರೋಮ್ " ಎಂದು ಕರೆಯುತ್ತಾರೆ . ಈ ರೀತಿಯ ಸಮಸ್ಯೆಗಳೇನಾದರೂ ಕಂಡು ಬಂದರೆ ಯಾವುದೇ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಭೇಟಿ ಆಗಿ . ನೆಫ್ರೋಸಿಸ್ ಎನ್ನುವುದು ಕಿಡ್ನಿ ಹಾಳುಮಾಡುವ ಇನ್ನೊಂದು ಖಾಯಿಲೆ . ಇದರಿಂದ ಮಧುಮೇಹ , ನಿಯಂತ್ರಣಕ್ಕೆ ಬಾರದ ರಕ್ತದ ಒತ್ತಡ ಮತ್ತು ಲ್ಯೂಪಸ್ ನಂತಹ ಸಮಸ್ಯೆ ಎದುರಾಗುತ್ತದೆ . ಯಾವಾಗ ಮನುಷ್ಯ ನೋವು ನಿವಾರಕ ಔಷಧಿಗಳನ್ನು ಯಥೇಚ್ಛವಾಗಿ ತೆಗೆದುಕೊಳ್ಳುತ್ತಾನೋ ಆತನಿಗೆ ಕಿಡ್ನಿಯ ಸಮಸ್ಯೆ ಕಟ್ಟಿಟ್ಟ ಬುತ್ತಿ . ಆದ್ದರಿಂದ ಇದರಿಂದ ಪಾರಾಗಬೇಕಾದರೆ ಇಂತಹ ಔಷಧಿಗಳನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವುದು ಒಳ್ಳೆಯದು .

ಹೃದಯ ಸಂಬಂಧಿ ಕಾಯಿಲೆ

ಹೃದಯ ಸಂಬಂಧಿ ಕಾಯಿಲೆ

ಹೃದಯದ ಖಾಯಿಲೆ ಮೇಲಿರುವ ಸ್ವರ್ಗಕ್ಕೆ ತನ್ನದೇ ಆದ ಕೊಡುಗೆ ನೀಡಿದೆ . ವರ್ಷಕ್ಕೆ ಏನಿಲ್ಲಾ ಅಂದರೂ ಸುಮಾರು 600 ಸಾವಿರ ಜನರನ್ನು ಯಾವುದೇ ಮುಲಾಜಿಲ್ಲದೆ ಸ್ವರ್ಗಕ್ಕೆ ಪಾರ್ಸೆಲ್ ಮಾಡುತ್ತದೆ ಎಂದು 2011 ರ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ . ಇದನ್ನು " ಕೊರೋನರಿ ಆರ್ಟರಿ ಡಿಸೀಸ್ " ಎಂದೂ ಕರೆಯುತ್ತಾರೆ . ಹೃದಯದಿಂದ ಪ್ರಾರಂಭವಾಗಿರುವ ರಕ್ತ ನಾಳಗಳನ್ನು ಕಿರಿದು ಮಾಡಿ ಎದೆಯಲ್ಲಿ ಒಂದು ರೀತಿಯ ಬಿಗಿಯಾದಂತೆ ಮಾಡಿ ಉಸಿರಾಟಕ್ಕೂ ತೊಂದರೆ ಕೊಡುತ್ತದೆ . ಅದರಲ್ಲೂ ಮನಸ್ಸಿಗೆ ಯಾವುದಾದರೂ ಯೋಚನೆ ತುಂಬಿಕೊಂಡು ಕೊರಗುವುದಕ್ಕೆ ಶುರು ಮಾಡಿದರಂತೂ ಕಥೆ ಮುಗಿಯಿತು . ಇಂತಹ ಭಯಾನಕ ಕಾಯಿಲೆಯಿಂದ ನೀವು ಪಾರಾಗಬೇಕಾದರೆ ಮೊದಲು ಧೂಮಪಾನ ನಿಲ್ಲಿಸಿ ಮತ್ತು ನಲವತ್ತು ವರ್ಷ ವಯಸ್ಸಾದ ಬಳಿಕ ಆಗಾಗ ಕೊಲೆಸ್ಟರಾಲ್ ಅನ್ನು ಪರೀಕ್ಷೆ ಮಾಡಿಸುತ್ತಿರಿ .

ಇನ್ಫ್ಲುಯೆಂಜಾ

ಇನ್ಫ್ಲುಯೆಂಜಾ

ಇದು ಒಂದು ರೀತಿಯ ಫ್ಲೂ . ಈ ಜ್ವರ ಮಾರಣಾಂತಿಕ . ತೀರಾ ಎಳೆ ಮಕ್ಕಳಿಗೆ ಮತ್ತು ತೀರಾ ವಯಸ್ಸಾದವರ ಮೇಲೆ ಇದರ ಕಣ್ಣು .ನ್ಯೂಮೋನಿಯಾ ವೈರಸ್ ಗೂ ಈ ಫ್ಲೂ ಜ್ವರಕ್ಕೂ ಬಹಳ ಹತ್ತಿರದ ನಂಟಿದೆ . ನ್ಯೂಮೋನಿಯಾ ದ ಲಕ್ಷಣವೆಂದರೆ ಶ್ವಾಸಕೋಶದಲ್ಲಿನ ಅಲ್ವೇಒಲಿ ಗಳನ್ನು ಊದಿಕೊಳ್ಳುವಂತೆ ಮಾಡಿ ದೇಹದ ಉಸಿರಾಟದ ವ್ಯವಸ್ಥೆಯನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡು ಸಾವಿನ ಮನೆಗೆ ಕರೆದೊಯ್ಯುತ್ತದೆ . ನೀವು ಈ ಫ್ಲೂ ಜ್ವರದಿಂದ ಉಳಿಯಬೇಕಾದರೆ ಕಾಲಕ್ಕೆ ತಕ್ಕಂತೆ ಲಸಿಕೆ ಹಾಕಿಸಿಕೊಂಡು ಫ್ಲೂ ಜ್ವರ ಬರದಂತೆ ತಡೆಗಟ್ಟಬಹುದು .

ಸಕ್ಕರೆಕಾಯಿಲೆ ಅಥವಾ ಮಧುಮೇಹ

ಸಕ್ಕರೆಕಾಯಿಲೆ ಅಥವಾ ಮಧುಮೇಹ

ದೇಹದಲ್ಲಿನ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣಕ್ಕೆ ಬಾರದೆ ಜಾಸ್ತಿ ಆದರೆ ಖಂಡಿತಾ ಹೃದಯ ಅಥವಾ ಕಿಡ್ನಿ ಫೇಲ್ ಆಗುವ ಅವಕಾಶ ಬಹಳಷ್ಟಿದೆ . ವಿಪರೀತ ಬಾಯಾರಿಕೆ , ವಿಪರೀತ ಮೂತ್ರ ವಿಸರ್ಜನೆ ಮತ್ತು ಸುಸ್ತು ಇದರ ಗುಣ ಲಕ್ಷಣಗಳು . ಆದರೆ ಖುಷಿಯ ವಿಷಯವೆಂದರೆ ಟೈಪ್ 2 ಮಧುಮೇಹಕ್ಕೆ ದೇಹ ಗುರಿಯಾಗುವುದನ್ನು ತಪ್ಪಿಸಲು ಅನೇಕ ದಾರಿಗಳಿವೆ ಎಂಬುದು . ಅದರಲ್ಲೂ ನಿಮ್ಮ ಕುಟುಂಬದಲ್ಲಿ ಸಕ್ಕರೆ ಖಾಯಿಲೆಯ ಚರಿತ್ರೆ ಹೊಂದಿದ್ದರೆ ನೀವು ಬಹಳ ಜಾಗರೂಕರಾಗಿದ್ದು ನಿಮ್ಮ ದೇಹದ ತೂಕದ ಬಗ್ಗೆ ಹೆಚ್ಚು ಗಮನ ವಹಿಸಬೇಕು . ತೂಕ ಹೆಚ್ಚು ಮಾಡಿಕೊಳ್ಳದೆ ಪ್ರತಿ ದಿನ ವ್ಯಾಯಾಮ ಮಾಡುತ್ತಾ ಆಗಾಗ ಬ್ಲಡ್ ಶುಗರ್ ಚೆಕ್ ಅಪ್ ಮಾಡಿಸುತ್ತಿದ್ದರೆ , ಖಂಡಿತ ಈ ಮಧುಮೇಹದಿಂದ ಮುಕ್ತಿ ಪಡೆಯಬಹುದು . ಅದರಲ್ಲೂ ಮಹಿಳೆಯರು ಪೋಲಿಸಿಸ್ಟಿಕ್ ಓವರಿ ಸಿಂಡ್ರೋಮ್ ನಿಂದ ಬಳಲುತ್ತಿದ್ದರೆ ಮಧುಮೇಹ ಮತ್ತು ಇನ್ಸುಲಿನ್ ನ ಬಗ್ಗೆ ವಿಶೇಷ ಗಮನ ಕೊಡಬೇಕಾಗುತ್ತದೆ ಮತ್ತು ಮೇಲೆ ಹೇಳಿದ ಎಲ್ಲಾ ಕಾರ್ಯಗಳನ್ನೂ ಮಾಡಬೇಕಾಗುತ್ತದೆ .

ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ಅಥವಾ ಸಿ ಓ ಪಿ ಡಿ ಎಂದೂ ಕರೆಯುತ್ತಾರೆ

ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ಅಥವಾ ಸಿ ಓ ಪಿ ಡಿ ಎಂದೂ ಕರೆಯುತ್ತಾರೆ

ಸಿ ಓ ಪಿ ಡಿ ಸಾಮಾನ್ಯವಾಗಿ ಅತಿಯಾದ ಧೂಮ ಪಾನದಿಂದ ಬರುತ್ತದೆ . ಬ್ರಾಂಕೈಟಿಸ್ ಮತ್ತು ಎಫಿಸೆಮಾ ಹೊಂದಿರುವ ರೋಗಿಗೆ ಉಸಿರಾಟದ ತೊಂದರೆ ಜಾಸ್ತಿ ಇರುತ್ತದೆ . ಏಕೆಂದರೆ ಶ್ವಾಸಕೋಶ ದಲ್ಲಿನ ಏರ್ ಬ್ಯಾಗ್ ಗಳು ಮುಚ್ಚಿ ಹೋಗಿರುತ್ತವೆ ಧೂಮಪಾನದಿಂದ . ಶೇಖಡಾ ೯೦ ರಷ್ಟು ಜನರು ಸಿಗರೇಟ್ ಸೇವನೆಯಿಂದ ಈ ಸಿ ಓ ಪಿ ಡಿ ಎಂಬ ಮಹಾಮಾರಿಯನ್ನು ಮೈ ಮೇಲೆ ಎಳೆದುಕೊಂಡಿರುತ್ತಾರೆ . ಇದರಿಂದ ಪಾರಾಗಲು ಧೂಮ ಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು .

ಕ್ಯಾನ್ಸರ್

ಕ್ಯಾನ್ಸರ್

ಇತ್ತೀಚಿಗೆ ಈ ಕಾನ್ಸರ್ ಮಹಾಮಾರಿ ಬಹು ದೊಡ್ಡ ರೋಗ ಎಂಬಂತಾಗಿದೆ . ಈ ಖಾಯಿಲೆ ಇದೆ ಎಂದು ತಿಳಿದರೆ ಸಾಕು ಮನುಷ್ಯ ಅರ್ಧ ಸತ್ತು ಹೋಗುತ್ತಾನೆ . ಅಷ್ಟು ಭಯ ಹುಟ್ಟು ಹಾಕಿದೆ ಈ ಕಾನ್ಸರ್ . ಮನುಷ್ಯನ ದೇಹದಲ್ಲಿ ಯಾವುದಾದರೂ ಒಂದು ಭಾಗದಲ್ಲಿ ಅನಿಯಮಿತವಾಗಿ ಮತ್ತು ನಿಯಂತ್ರಣಕ್ಕೆ ಬರದೇ ಬೆಳೆಯುವ ಮಾಂಸಖಂಡವೇ ಮುಂದೊಂದು ದಿನ ಕ್ಯಾನ್ಸರ್ ಆಗಿ ಬದಲಾಗುತ್ತದೆ . ಕೊನೆಗೆ ಮೈಯೆಲ್ಲಾ ಹರಡಲು ಪ್ರಯತ್ನಿಸುತ್ತದೆ . ಯಾವ ಮಟ್ಟಕ್ಕೆಂದರೆ ಸುಮಾರು 567,628 ಅಮೆರಿಕಾದ ಜನರನ್ನು 2011 ಇಸವಿಯಲ್ಲಿ ಬಲಿ ಪಡೆದಷ್ಟು . ಸಾಮಾನ್ಯವಾಗಿ ಗಂಡಸರಿಗೆ ಪ್ರಾಸ್ಟೇಟ್ , ಶ್ವಾಸಕೋಶ ,ಮತ್ತು ಕೋಲನ್ ನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಹೆಂಗಸರಿಗೆ ಕೋಲನ್ , ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಜಾಸ್ತಿ ಪ್ರಮಾಣದಲ್ಲಿದೆ ಎಂದು ವೈದ್ಯಲೋಕ ನಂಬಿದೆ ಮತ್ತು ಇದಕ್ಕೆಲ್ಲಾ ಕಾರಣ ಧೂಮ ಪಾನ ಮತ್ತು ತಂಬಾಕಿನ ಪದಾರ್ಥಗಳ ಸೇವನೆ ಎಂಬುದೂ ದೃಢಪಟ್ಟಿದೆ .ಹಾಗೆಂದು ಭಯ ಪಡುವ ಅಗತ್ಯವಿಲ್ಲ . ನೀವು ಆದಷ್ಟು ಒಳ್ಳೆಯ ಶುದ್ಧ ವಾದ ತರಕಾರಿ ಹಣ್ಣುಗಳ ಸೇವನೆ , ನಿತ್ಯ ವ್ಯಾಯಾಮ ಮತ್ತು ಧೂಮಪಾನ ದುಷ್ಟಗಳಿಂದ ದೂರವಾಗಿ ಒಂದು ಆರೋಗ್ಯಕರ ಬದುಕನ್ನು ನಿಮ್ಮದಾಗಿಸಿಕೊಂಡರೆ ಖಂಡಿತ ಕ್ಯಾನ್ಸರ್ ಅನ್ನು ಒದ್ದೋಡಿಸಬಹುದು . ಹಾಗೊಂದು ವೇಳೆ ನಿಮ್ಮ ದೇಹದಲ್ಲಿ ಎಲ್ಲಿಯಾದರೂ ಗಂಟಿನ ರೂಪದಲ್ಲಿ ಏನಾದರೂ ಬೆಳೆವಣಿಗೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಕಂಡು ಅದು ಕ್ಯಾನ್ಸರ್ ಹೌದೋ ಅಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ .

ಸುಯಿಸೈಡ್

ಸುಯಿಸೈಡ್

ಇದು ಇತ್ತೀಚಿನ ಯುವ ಜನತೆಯಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿದೆ . ಸ್ವಲ್ಪ ಯಡವಟ್ಟಾದರೂ ಜನರು ಹಿಡಿಯುವುದು ಈ ಕೆಟ್ಟ ಮಾರ್ಗವನ್ನು . ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂತಲೋ , ಮನೆಯಲ್ಲಿ ಅಪ್ಪ ಹೊಡೆದರೆಂತಲೂ ,ಕೆಲಸದ ಒತ್ತಡದಿಂದಲೋ , ಬೀದಿಯಲ್ಲಿ ಕಾಮುಕರ ಕಾಟ ಸಹಿಸಲಾರದೆಯೊ ಹೀಗೆ ಪ್ರತಿನಿತ್ಯ ಟಿವಿ ಯಲ್ಲಿ ಪತ್ರಿಕೆಯಲ್ಲಿ ಒಂದಿಲ್ಲೊಂದು ಸುದ್ದಿ ಇದ್ದೆ ಇರುತ್ತದೆ . ಏಕೆಂದರೆ ಇತ್ತೀಚಿನ ಜನತೆ ಅಷ್ಟೊಂದು ಸೆನ್ಸಿಟಿವ್ . ಇದಕ್ಕೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಬ ಸಂಸ್ಥೆ ಸುಯಿಸೈಡ್ ಅನ್ನೂ ಕೂಡ 2011 ರಲ್ಲಿ ಸಾವಿಗೆ ಕಾರಣ ಎಂದು ಘೋಷಿಸಿ ಆಗಿದೆ . ನಿಮಗೆ ಜೀವನದಲ್ಲಿ ಬೇಜಾರಾಗಿ ನಮಗೆ ಜೀವನವೇ ಬೇಡ ಅನ್ನಿಸಿದಂತಾಗಿ ಮಾನಸಿಕ ಖಿನ್ನತೆಗೆ ಒಳಗಾದರೆ ದಯವಿಟ್ಟು ಮಾನಸಿಕ ತಜ್ಞರ ಬಳಿ ಭೇಟಿ ಕೊಡಿ . ಅವರು ನಿಮ್ಮನ್ನು ಕೋನ್ಸೆಲ್ಲಿಂಗ್ ಮಾಡಿ ನಿಮಗೆ ಸೂಕ್ತ ಸಲಹೆಗಳನ್ನು ಕೊಟ್ಟು ಈ ಮಾನಸಿಕ ಖಾಯಿಲೆಗೆ ಔಷಧಗಳನ್ನೂ ಕೊಡುತ್ತಾರೆ . ಬೇಸರಕ್ಕೆ ಸಾವೇ ಪರಿಹಾರ ಅಲ್ಲ ಅಲ್ಲವೇ ?

English summary

The Most Ten Common Causes of Death

You may fear dying in a plane crash or you might suffer from a paralyzing fear of poisonous snakes, but in truth you are much more likely to fall victim to one of ten widespread health problems. Although death is inevitable, there are plenty of things you can do in order to dramatically reduce your chances of dying from the leading causes of death. Read on to learn about ways in which you can extend your lifespan.
X
Desktop Bottom Promotion