Latest Updates
-
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ
ಸುಡುವ ಬಿಸಿಲಿನ ಆಘಾತ ತಪ್ಪಿಸಲು ಕೆಲವು ಮನೆಮದ್ದುಗಳು
ಬಿಸಿಲಿನ ಝಳ ತಾಳಲಾರದೆ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಬಿಸಿಲಿನ ತಾಪ, ನೀರಿಗಾಗಿ ಹಾಹಾಕಾರ ಕಾಣಿಸುತ್ತಿದೆ. ಇಂತಹ ಸಮಯದಲ್ಲಿ ಬಿಸಿಲಿನಿಂದಾಗಿ ಕೆಲವೊಂದು ಸಲ ಆಘಾತವಾಗುವುದು ಸಹಜ. ಯಾಕೆಂದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ಆಘಾತವು ಆಗಬಹುದು. ಮುಖ್ಯವಾಗಿ ಬಿಸಿಲಿನಲ್ಲಿ ಹೊರಗಡೆ ಸುತ್ತಾಡುವುದು ಮತ್ತು ಕೆಲಸ ಮಾಡುವಂತಹ ಜನರಿಗೆ ಇಂತಹ ಆಘಾತ ಆಗುವುದು ಸಹಜ ಇದಕ್ಕಾಗಿ ಸರಿಯಾಗಿ ನೀರು ಕುಡಿಯಬೇಕು.

ನೀರಿನೊಂದಿಗೆ ಬೇಸಗೆಯಲ್ಲಿ ಬಿಸಿಲಿನ ಆಘಾತ ತಪ್ಪಿಸಲು ಕೆಲವೊಂದು ಪಾನೀಯ ಸೇವನೆ ಮಾಡುವುದು ಕೂಡ ಅತೀ ಅಗತ್ಯವಾಗಿರುವುದು. ಬಿಸಿಲಿನಿಂದಾಗಿ ತುಂಬಾ ಬಳಲಿಕೆ ಮತ್ತು ನಿಶ್ಯಕ್ತಿ ಕಂಡುರುವುದು. ಅತಿಯಾಗಿ ನಿರ್ಜಲೀಕರಣವಾದ ಸಂದರ್ಭದಲ್ಲಿ ಬಿಸಿಲಿನ ಆಘಾತವು ಉಂಟಾಗುವುದು. ಇದರಿಂದ ಪಾರಾಗಲು ಏನು ಮಾಡಬೇಕು ಎಂದು ನೀವು ಈ ಲೇಖನದ ಮೂಲಕ ತಿಳಿಯಿರಿ.

ಮಜ್ಜಿಗೆ
ಮಜ್ಜಿಗೆ ತುಂಬಾ ತಾಜಾತನ ಉಂಟು ಮಾಡುವ ಪಾನೀಯವಾಗಿದೆ ಮತ್ತು ಇದು ದೇಹವನ್ನು ತಂಪಾಗಿ ಇಡುವುದು. ಇದರಲ್ಲಿ ಪ್ರೊಬಯೋಟಿಕ್, ಪ್ರೋಟೀನ್ ಮತ್ತು ವಿಟಮಿನ್ ಗಳು ಇದೆ ಮತ್ತು ಇದು ದೇಹದಲ್ಲಿ ತಾಪಮಾನವನ್ನು ಸಮತೋಲನದಲ್ಲಿ ಇಡುವುದು.
ತಯಾರಿಸುವುದು ಹೇಗೆ: ಎರಡು ಚಮಚ ಮೊಸರನ್ನು ಒಂದು ಲೋಟ ನೀರಿಗೆ ಸೇರಿಸಿ ಸರಿಯಾಗಿ ಕಲಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಮತ್ತು ಜೀರಿಗೆ ಹುಡಿ ಹಾಕಿ. ಇದು ರುಚಿ ಹೆಚ್ಚಿಸುವುದು. ಬೇಸಿಗೆಯಲ್ಲಿ 1-2 ಲೋಟ ಮಜ್ಜಿಗೆ ಕುಡಿಯಲು ಮರೆಯಬೇಡಿ.

ಹೆಸರು ಕಾಳಿನ ಪಾನೀಯ
ಚೀನಾದ ಸಾಂಪ್ರದಾಯಿಕ ಔಷಧಿಯ ಪ್ರಕಾರ ಹೆಸರು ಕಾಳಿನ ಪಾನೀಯವು ಬಿಸಿಲಿನ ಆಘಾತ ತಪ್ಪಿಸಲು ಪ್ರಮುಖ ಪಾತ್ರ ವಹಿಸುವುದು. ಬೇಯಿಸಿದ ಹೆಸರು ಕಾಳೂಗಳು ದೇಹಕ್ಕೆ ತೇವಾಂಶ ನೀಡುವುದು ಮತ್ತು ದೇಹದ ಉಷ್ಣತೆ ಕಡಿಮೆ ಮಾಡಲು ಇದು ನೆರವಾಗುವುದು.
ತಯಾರಿಸುವುದು ಹೇಗೆ? ಮೂರು ಕಪ್ ಹೆಸರು ಕಾಳು ಮತ್ತು ಮೂರು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ ಮತ್ತು ಇದನ್ನು ಬೇಯಿಸಿ. ಬೇಯಿಸಿದ ಬಳಿಕ ನೀರನ್ನು ಬೇರೆ ತೆಗೆದಿಡಿ ಮತ್ತು ಅದು ತಣ್ಣಗಾಗಲಿ. ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿಯಿರಿ.

ಬಿಸಿಲಿನ ಆಘಾತ ತಪ್ಪಿಸಲು ಕೆಲವು ಸಾರಭೂತ ತೈಲಗಳು
ಬಿಸಿಲಿನ ಆಘಾತ ತಡೆಯಲು ಕೆಲವೊಂದು ಸಾರಭೂತ ತೈಲಗಳು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಲ್ಯಾವೆಂಡರ್ ತೈಲವು ಚರ್ಮ ಹಾಗೂ ನರಗಳಿಗೆ ಶಮನ ನೀಡುವುದು. ಪುದೀನಾ ಎಣ್ಣೆಯು ದೇಹದ ಉಷ್ಣತೆ ಕಡಿಮೆ ಮಾಡಲು ನೆರವಾಗುವುದು. ಬಳಸುವ ವಿಧಾನ: 2-3 ಹನಿ ಪುದೀನಾ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು 1-2 ಹನಿ ಲ್ಯಾವೆಂಡರ್ ಎಣ್ಣೆಯ ಜತೆಗೆ ಇದರ ಮಿಶ್ರಣ ಮಾಡಿ. ಇದಕ್ಕೆ ಎರಡು ಚಮಚ ಆಲಿವ್ ಎಣ್ಣೆ ಹಾಕಿ. ಈ ಮಿಶ್ರಣವನ್ನು ಕುತ್ತಿಗೆಯ ಹಿಂಭಾಗ, ಪಾದದ ಅಡಿ ಮತ್ತು ಮಣಿಕಟ್ಟಿಗೆ ಹಚ್ಚಿಕೊಳ್ಳಿ.

ಈರುಳ್ಳಿ ರಸ
ಬಿಸಿಲಿನ ಆಘಾತ ತಡೆಯಲು ಈರುಳ್ಳಿ ರಸವು ಅತ್ಯುತ್ತಮ ಮನೆಮದ್ದು ಆಗಿದೆ. ಆಯುರ್ವೇದ ಪ್ರಕಾರ ಬಿಸಿಲಿನ ಆಘಾತದ ಲಕ್ಷಣಗಳು ಕಂಡುಬಂದಾಗ ಈರುಳ್ಳಿ ರಸವನ್ನು ಬಳಸಬೇಕು ಎಂದು ಆಯುರ್ವೇದವು ಹೇಳುತ್ತದೆ. ಬಳಸುವ ವಿಧಾನ: ಈರುಳ್ಳೀ ರಸವನ್ನು ಕಿವಿಯ ಹಿಂದುಗಡೆ, ಪಾದದ ಕೆಳಗೆ ಮತ್ತು ಎದೆಗೆ ಹಚ್ಚಿಕೊಳ್ಳಬೇಕು ಮತ್ತು ಸ್ವಲ್ಪ ಸಮಯ ಹಾಗೆ ಬಿಡಬೇಕು. ಜೇನುತುಪ್ಪ ಬೆರೆಸಿಕೊಂಡು ಒಂದು ಚಮಚ ಈರುಳ್ಳಿ ರಸವನ್ನು ಕುಡಿಯಬಹುದು.

ಹುಣಸೆ ಹುಳಿ ರಸ
ಹುಣಸೆ ಹುಳಿಯಲ್ಲಿ ಉನ್ನತ ಮಟ್ಟದ ವಿಟಮಿನ್ ಗಳು, ಖನಿಜಾಂಶಗಳು ಮತ್ತು ವಿದ್ಯುದ್ವಿಚ್ಛೇದಗಳು ಇವೆ. ಇದು ದೇಹಕ್ಕೆ ತುಂಬಾ ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ನಿರ್ಜಲೀಕರಣದ ಸಮಸ್ಯೆಯಿಂದ ಇದು ದೂರ ಮಾಡುತ್ತದೆ.
ಬಳಸುವುದು ಹೇಗೆ: ಸ್ವಲ್ಪ ಹುಣಸೆ ಹುಳಿಯನ್ನು ಕುದಿಯು ನೀರಿಗೆ ಹಾಕಿಕೊಳ್ಳಿ. ಇದನ್ನು ಸೋಸಿಕೊಂಡು ರಸ ತೆಗೆಯಿರಿ ಮತ್ತು ಇದಕ್ಕೆ ಸಕ್ಕರೆ ಅಥವಾ ಜೇನುತುಪ್ಪ ಹಾಕಿ ಕುಡಿಯಿರಿ. ಇದು ತಂಪಾದ ಬಳಿಕ ಕುಡಿಯಿರಿ.

ಮಾವಿನ ಜ್ಯೂಸ್
ಬಿಸಿಲಿನ ಆಘಾತದಿಂದ ತಡೆಯಲು ಹಸಿ ಮಾವುಗಳು ತುಂಬಾ ಪರಿಣಾಮಕಾರಿ. ಇದು ತುಂಬಾ ತಾಜಾತನ ಉಂಟು ಮಾಡುವ ಪಾನೀಯ ಮತ್ತು ಆರೋಗ್ಯಕಾರಿ ಪಾನೀಯ. ಬಳಸುವುದು ಹೇಗೆ: ನೀರಿಗೆ ಹಾಕಿ ಹಸಿ ಮಾವಿನ ಕಾಯಿಯನ್ನು ಬೇಯಿಸಿ. ಕಾಯಿ ಬೆಂದ ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪ ನೀರು, ಜೀರಿಗೆ ಮತ್ತು ಸಕ್ಕರೆ ಹಾಕಿಕೊಳ್ಳಿ.

ಎಳನೀರು
ಬಿಸಿಲಿನಿಂದ ದೇಹದಿಂದ ಹೆಚ್ಚಿನ ಪ್ರಮಾಣದ ನೀರು ಬೆವರಿನ ಮೂಲಕ ಆವಿಯಾಗುತ್ತದೆ. ಇದನ್ನು ಮರುತುಂಬಿಕೊಳ್ಳಲು ಎಳನೀರು ಮತ್ತು ಮಜ್ಜಿಗೆಯನ್ನು ಕುಡಿದಷ್ಟೂ ಉತ್ತಮ. ಇದು ದೇಹ ಕಳೆದುಕೊಂಡಿದ್ದ ನೀರನ್ನು ಮತ್ತೆ ತುಂಬಿಸಿ ದೇಹ ಕಳೆದುಕೊಂಡಿದ್ದ ಖನಿಜಗಳನ್ನು ಮತ್ತೆ ಒದಗಿಸುತ್ತವೆ.ಎಳನೀರಿನಲ್ಲಿಯೂ ಉತ್ತಮ ಪ್ರಮಾಣದ ಎಲೆಕ್ಟ್ರೋಲೈಟುಗಳಿವೆ.



Click it and Unblock the Notifications