Just In
Don't Miss
- News ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಟ್ಟೆಯುಬ್ಬರಿಕೆ ಸಮಸ್ಯೆ ಇದ್ದರೆ, ಊಟಕ್ಕೆ ಮೊದಲು ಇಂತಹ ಪಾನೀಯ ಕುಡಿಯಿರಿ
ಹೊಟ್ಟೆಯುಬ್ಬರಿಕೆಯನ್ನು ಸರಳ ಪದಗಳಲ್ಲಿ ವಿವರಿಸಬಹುದೆಂದರೆ ಊಟದ ಬಳಿಕ ಹೊಟ್ಟೆಯ ಭಾಗ ಊದಿಕೊಳ್ಳುವುದು. ಹೊಟ್ಟೆ ಉಬ್ಬಿದ್ದಾಗ ಅಸಹನೆ, ವಾಕರಿಕೆ ಮತ್ತು ಅಸಮಾಧಾನಕರ ಅನುಭವ ಎದುರಾಗುತ್ತದೆ ಹಾಗೂ ನಿತ್ಯದ ಕಾರ್ಯಗಳನ್ನು ನಿರ್ವಹಿಸಲು ತೊಡಕಾಗುತ್ತದೆ.
ಹೊಟ್ಟೆಯುಬ್ಬರಿಕೆಗೆ ಏಕೆ ಎದುರಾಗುತ್ತದೆ?
ಜಠರದಲ್ಲಿ ಉತ್ಪತ್ತಿಯಾದ ಅಧಿಕ ಪ್ರಮಾಣದ ವಾಯು ಅಥವಾ ಜೀರ್ಣಕ್ರಿಯೆಗೆ ಬಳಸಲ್ಲಡುವ ಸ್ನಾಯುಗಳ ಚಲನೆಯಲ್ಲಿ ಏನಾದರೂ ತೊಂದರೆಯಾದರೆ ಹೊಟ್ಟೆಯುಬ್ಬರಿಕೆ ಎದುರಾಗುತ್ತದೆ. ಪರಿಣಾಮವಾಗಿ ಹೊಟ್ಟೆಯ ಭಾಗದಲ್ಲಿ ನೋವು, ಹೊಟ್ಟೆ ಸಾಮರ್ಥ್ಯಕ್ಕೂ ಮೀರಿ ತುಂಬಿದ ಭಾವನೆ ಮೂಡಿ ಕಿರಿಕಿರಿ ಎದುರಾಗುತ್ತದೆ.
ಹೊಟ್ಟೆಯುಬ್ಬರಿಕೆಗೆ ಎದುರಾಗಿದೆ ಎಂದರೆ ಜಠರ ಹಾಗೂ ಜೀರ್ಣಾಂಗಗಳಲ್ಲಿ ಹೆಚ್ಚಿನ ಪ್ರಮಾಣದ ಘನ, ದ್ರವ ಮತ್ತು ಅನಿಲದ ಪ್ರಮಾಣ ಹೆಚ್ಚಿದೆ ಎಂದು ಅರ್ಥ. ಯಾವುದೇ ಸಮಯದಲ್ಲಿ ಈ ತೊಂದರೆ ಸುಮಾರು 16-30 ಶೇಖಡಾ ವ್ಯಕ್ತಿಗಳಿಗೆ ಸದಾ ಎದುರಾಗುತ್ತದೆ. ಇದೇ ಕಾರಣಕ್ಕೆ ಈ ತೊಂದರೆಯನ್ನು ವೈದ್ಯರು ಸಾಮಾನ್ಯವಾಗಿ ಎದುರಾಗುವ ಕಾಯಿಲೆ ಎಂದು ಪರಿಗಣಿಸುತ್ತಾರೆ.
ಖ್ಯಾತ ಆಹಾರತಜ್ಞ ಲ್ಯೂಕ್ ಕುಟಿನ್ಹೋರವರು ಈ ತೊಂದರೆಯಿಂದ ರಕ್ಷಿಸಲು ಕೆಲವು ಸುಲಭ ಮನೆಮದ್ದುಗಳನ್ನು ಪ್ರಸ್ತುತಪಡಿಸುತ್ತಿದ್ದು ಈ ಸರಳ ವಿಧಾನಗಳನ್ನು ಅನುಸರಿಸಿದ ಎರಡರಿಂದ ಮೂರು ವಾರಗಳಲ್ಲಿಯೇ ಹೊಟ್ಟೆಯುಬ್ಬರಿಕೆ ಇಲ್ಲವಾಗುತ್ತದೆ. ಇವರ ವಿಧಾನ ಹೀಗಿದೆ:
ಅಗತ್ಯವಿರುವ ವಸ್ತುಗಳು
- ಒಂದು ಚಿಕ್ಕ ಚಮಚ ಇಸಬ್ಗೋಲ್ (psyllium husk)
- ಒಂದು ಲೋಟ (200-250 ಮಿಲೀ) ನೀರು
- ಎರಡು ದೊಡ್ಡ ಚಮಚ ಸೇಬಿನ ಶಿರ್ಕಾ
ತಯಾರಿಕಾ ವಿಧಾನ:
ಒಂದು
ಲೋಟ
ನೀರಿನಲ್ಲಿ
ಇವೆರಡೂ
ಸಾಮಾಗ್ರಿಗಳನ್ನು
ಹಾಕಿ
ಚೆನ್ನಾಗಿ
ಕಲಕಿ
ಊಟಕ್ಕೂ
ಮುನ್ನ
ಸೇವಿಸಬೇಕು.
ಒಂದು
ವೇಳೆ
ಶಿರ್ಕಾದ
ರುಚಿ
ನಿಮಗೆ
ಹಿಡಿಸದೇ
ಇದ್ದರೆ
ಇದರ
ಪ್ರಮಾಣವನ್ನು
ಒಂದು
ಚಮಚಕ್ಕಿಳಿಸಬಹುದು.
ಇದೂ
ಇಷ್ಟವಾಗದಿದ್ದರೆ
ಶಿರ್ಕಾ
ಇಲ್ಲದಿದ್ದರೂ
ಸರಿ.
ಬರೆಯ
ಇಸಬ್ಗೋಲ್
ಸಹಾ
ಆಗಬಹುದು.
ಈ ದ್ರವಾಹಾರವನ್ನು ಊಟಕ್ಕೂ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಮೊದಲು ಸೇವಿಸಬೇಕು. ಉತ್ತಮ ಪರಿಣಾಮಕ್ಕಾಗಿ ದಿನದ ಮೂರೂ ಹೊತ್ತಿನ ಊಟಗಳ ಮುನ್ನ ಕುಡಿಯಬೇಕು.
ಈ ಶಿರ್ಕಾ ಸಾಂಪ್ರಾದಾಯಿಕ ವಿಧಾನದಲ್ಲಿ ತಯಾರಿಸಲ್ಪಟ್ಟಿರಬೇಕು. ಕಾರ್ಖಾನೆಯಲ್ಲಿ ತಯಾರಾದ ಶಿರ್ಕಾ ಉಪಯೋಗವಿಲ್ಲ. ಸಾವಯವ ಶಿರ್ಕಾ ಜೀರ್ಣಾಂಗಗಳಲ್ಲಿರುವ ಆರೊಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುವ ಮೂಲಕ ಹೊಟ್ಟೆಯುಬ್ಬರಿಕೆಯಾಗದಂತೆ ತಡೆಯುತ್ತದೆ.
ಈ ದ್ರವ ಹೇಗೆ ಕೆಲಸ ಮಾಡುತ್ತದೆ?
ಈ ದ್ರವ ಹೊಟ್ಟೆಯಲ್ಲಿ ಉಬ್ಬರಿಕೆಯಾಗದಂತೆ, ವಾಯು ತುಂಬಿಕೊಳ್ಳದಂತೆ ಹಾಗೂ ಹೊಟ್ಟೆಯ ಒತ್ತಡ ಬಾಯಿಯ ಮೂಲಕ ಹೊರಬರುವಂತಹ ಅನುಭವಗಳನ್ನು ಇಲ್ಲವಾಗಿಸುತ್ತದೆ. ಈ ದ್ರವದ ಸೇವನೆಯ ಬಳಿಕ ಜಠರದ ಒಳಪದರದಲ್ಲಿ ಕೊಂಚ ಹೆಚ್ಚು ಜಠರ ರಸ ಸ್ರವಿಸಲು ಪ್ರಚೋದನೆ ನೀಡುತ್ತದೆ ಹಾಗೂ ತನ್ಮೂಲಕ ಜಠರರಸ ಕೊಂಚ ಹೆಚ್ಚು ಆಮ್ಲೀಯವಾಗುತ್ತದೆ. ಈ ಜೀರ್ಣರಸ ನಮ್ಮ ಆಹಾರದಲ್ಲಿರುವ ಪ್ರೋಟೀನ್ ಮತ್ತು ಬ್ಯಾಕ್ಟೀರಿಯಾಗಳನ್ನು ಒಡೆಯಲು ನೆರವಾಗುತ್ತದೆ. ಹಾಗಾಗಿ ಆಹಾರ ಯಾವುದೇ ಅನಗತ್ಯ ವಾಯುವಿನ ಉತ್ಪನ್ನವಿಲ್ಲದೇ ಅಪಾನವಾಯುವಾಗದೇ ಹೊಟ್ಟೆಯುಬ್ಬರಿಕೆಯಿಂದ ರಕ್ಷಣೆ ದೊರಕುತ್ತದೆ. ಈ ದ್ರವ ಕೇವಲ ಜಠರ ಮಾತ್ರವಲ್ಲ, ಇಡಿಯ ಜೀರ್ಣವ್ಯವಸ್ಥೆಗೇ ಒಳ್ಳೆಯದಾಗಿದೆ.
ಈ ವಿಧಾನವನ್ನೂ ನೀವು ಪ್ರಯತ್ನಿಸಬಹುದು.
ಒಂದು ವೇಳೆ ನೀವು ಈ ದ್ರವವನ್ನು ದಿನಕ್ಕೆರಡು ಬಾರಿ ಕುಡಿಯುವವರಾದರೆ ಒಂದು ಹೊತ್ತಿನಲ್ಲಿ ಕೊಂಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಸೇವಿಸಬಹುದು. ಈ ಮೂಲಕ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುವುದನ್ನು ತಡೆಯಬಹುದು. ಸಾಮಾನ್ಯವಾಗಿ ಊಟದ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಶೀಘ್ರವಾಗಿ ಏರುತ್ತದೆ.
ಅಲ್ಲದೇ, ಈ ದ್ರವ ಎಲ್ಲರಿಗೂ ಒಗ್ಗದೇ ಇರಬಹುದು. ಒಂದು ವೇಳೆ ಈ ದ್ರವ ನಿಮಗೆ ಒಗ್ಗದೇ ಇದ್ದರೆ ಈ ವಿಧಾನವನ್ನು ಮುಂದುವರೆಸದಿರಿ. ಏಕೆಂದರೆ ಪ್ರತಿಯೊಬ್ಬರ ಶಾರೀರವೂ ಬೇರೆಬೇರೆಯಾಗಿದ್ದು ಬೇರೆ ಬೇರೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ವಿಧಾನ ಪೂರ್ಣವಾಗಿ ಕಾರ್ಯನಿರ್ವಹಿಸಬೇಕಾದಾದರೆ ಸತತವಾಗಿ ಸುಮಾರು ಕನಿಷ್ಟ ಎರಡರಿಂದ ಮೂರು ವಾರವಾದರೂ ಸೇವಿಸಬೇಕು.