Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಧ್ಯಯನದ ಪ್ರಕಾರ: ಗ್ರೀನ್ ಟೀಯಿಂದ ಬಾಯಿಯ ಕ್ಯಾನ್ಸರ್ ನಿವಾರಣೆ!
ಇಂದಿನ ದಿನಗಳಲ್ಲಿ ಗ್ರೀನ್ ಟೀ ಅತೀ ಹೆಚ್ಚು ಜನಪ್ರಿಯವಾಗಿರುವಂತಹ ಪಾನೀಯವಾಗಿದೆ. ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ಅದೇ ರೀತಿಯಾಗಿ ಹಲವಾರು ಕಾಯಿಲೆಗಳು ಬರದಂತೆ ತಡೆಯುತ್ತದೆ. ಇದರಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಇರುವ ಕಾರಣದಿಂದಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈಗ ಗ್ರೀನ್ ಟೀ ಬಗ್ಗೆ ಮತ್ತೊಂದು ಅಂಶವು ಬಹಿರಂಗವಾಗಿದೆ. ಅದೇನೆಂದರೆ ಗ್ರೀನ ಟೀಯು ಆರೋಗ್ಯವಂತ ಅಂಗಾಂಶಗಳಿಗೆ ಯಾವುದೇ ರಿತಿಯ ಹಾನಿ ಉಂಟು ಮಾಡದೆ ಬಾಯಿಯ ಕ್ಯಾನ್ಸರ್ನ್ನು ಕೊಲ್ಲಲು ನೆರವಾಗವುದು.
ಇತ್ತೀಚೆಗೆ ನಡೆಸಿರುವ ಅಧ್ಯಯನವೊಂದರ ಪ್ರಕಾರ ಗ್ರೀನ್ ಟೀಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಬಾಯಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಜತೆಗೆ ಇದು ಆರೋಗ್ಯವಂತ ಅಂಗಾಂಶಗಳು ಹಾಗೆ ಉಳಿಯಲು ನೆರವಾಗುವುದು. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಹೇಳುವ ಪ್ರಕಾರ ಈ ಅಧ್ಯಯನದಿಂದ ಬಾಯಿಯ ಕ್ಯಾನ್ಸರ್ ಮತ್ತು ಇತರ ಕೆಲವೊಂದು ವಿಧದ ಕ್ಯಾನ್ಸರ್ ನ ಚಿಕಿತ್ಸೆಗೆ ಇದು ನೆರವಾಗಲಿದೆ ಎಂದು ಹೇಳಲಾಗಿದೆ.

ಗ್ರೀನ್ ಟೀಯಲ್ಲಿ ಕಂಡುಬರುವಂತಹ ಎಪಿಗಲ್ಲೊಕಾಟೆಚಿನ್ -3-ಗ್ಯಾಲೇಟ್ ಎನ್ನುವ ಶವು ಬಾಯಿಯಲ್ಲಿನ ಕ್ಯಾನ್ಸರ್ ಅಂಗಾಂಶಗಳನ್ನು ಕೊಲ್ಲುವುದು ಮತ್ತು ಇದು ಆರೋಗ್ಯವಂತ ಅಂಗಾಂಶಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಜಿಸಿಜಿಯು ಮೆಟೊಕಾಂಡ್ರಿಯಾದಲ್ಲಿ ಉಂಟು ಮಾಡುವಂತಹ ಒಂದು ಪ್ರಕ್ರಿಯೆಯಿಂದ ಕೆಲವೊಂದು ಅಂಗಾಂಶಗಳು ಸಾಯಬಹುದು ಎಂದು ಹೇಳಲಾಗಿದೆ.
ಕ್ಯಾನ್ಸರ್ ಕೋಶಗಳನ್ನು ಅದು ದಾಳಿ ಮಾಡುವುದು ಯಾಕೆ ಎನ್ನುವುದಕ್ಕೆ ಕಾರಣ ಮಾತ್ರ ಅಧ್ಯಯನದಿಂದಲೂ ತಿಳಿದುಬಂದಿಲ್ಲ ದು ಪೆನ್ನ ಸ್ಟೇಟ್ ಸೆಂಟರ್ ಫಾರ್ ಫ್ಲಾಂಟ್ ಆಂಡ್ ಮಶ್ರೂಮ್ ಫುಡ್ ನ ಸಹ ನಿರ್ದೇಶಕರಾಗಿರುವಂತಹ ಜೊಶ್ವಾ ಲಾಂಬೆರ್ಟ್ ಹೇಳಿದ್ದಾರೆ.
ಇಜಿಸಿಜಿಯು ಮೆಟೊಕಾಂಡ್ರಿಯಾವನ್ನು ಹಾನಿ ಮಾಡಲು ಏನಾದರೂ ಮಾಡುತ್ತದೆ ಮತ್ತು ಮೆಟೊಕಾಂಡ್ರಿಯಾದಿಂದ ಆಗುವ ಹಾಇಯು ಇನ್ನು ಹೆಚ್ಚಿನ ಹಾನಿ ಉಂಟು ಮಾಡುವುದು ಮತ್ತು ಅಂಗಾಂಶಗಳು ಒಂದು ಕ್ರಮಬದ್ಧವಾದ ಸಾವಿಗೀಡಾಗುತ್ತದೆ ಎಂದು ಲಾಂಬೆರ್ಟ್ ಅವರು ವಿವರಿಸಿದ್ದಾರೆ.
ಇಜಿಸಿಯು ಕ್ಯಾನ್ಸರ್ ಅಂಗಾಂಶಗಳಲ್ಲಿ ಆಕ್ಸಿಜನ್ ಪ್ರತಿಕ್ರಿಯಾತ್ಮಕತೆ ಉಂಟು ಮಾಡುತ್ತದೆ ಮತ್ತು ಇದರಿಂದಾಗಿ ಮೆಟೊಕಾಂಡ್ರಿಯಾಗೆ ಹಾನಿ ಆಗುತ್ತದೆ. ಮೆಟೊಕಾಂಡ್ರಿಯಾವು ಮತ್ತಷ್ಟು ಆಮ್ಲಜನಕ ಪ್ರತಿಕ್ರಿಯಾತ್ಮಕತೆಯಿಂದ ಪ್ರತಿಕ್ರಿಯಿಸುವುದು ಎಂದು ಅವರು ಹೇಳಿದ್ದಾರೆ.
ಮೆಟೊಕಾಂಡ್ರಿಯಾದ ಅವನತಿಯು ಆಗುತ್ತಿರುವಂತೆ ಕ್ಯಾನ್ಸರ್ ಕೋಶಗಳು ಕೂಡ ಕಡಿಮೆ ಆಗುತ್ತದೆ. ಆಂಟಿಆಕ್ಸಿಡೆಂಟ್ ಜಿನ್ ಗಳು ಇನ್ನಷ್ಟು ಇದನ್ನು ಕುಗ್ಗಿಸುವುದು. ಇದೇ ವೇಳೆ ಇಜಿಸಿಜಿಯು ಆಕ್ಸಿಡೇಟಿವ್ ಒತ್ತಡವನ್ನು ಹಾಕುತ್ತಿರುವಾಗ ಅದು ತಮ್ಮ ಕ್ರಮದಿಂದ ರಕ್ಷಣೆಗೆ ಮುಂದಾಗುವುದು ಎಂದು ಲಾಂಬೆರ್ಟ್ ತಿಳಿಸಿದ್ದಾರೆ. ಇಜಿಸಿಜಿಯು ಈ ಪರಿಣಾಮವನ್ನು ಸಾಮಾನ್ಯ ಅಂಗಾಂಶಗಳ ಮೇಲೆ ಉಂಟು ಮಾಡುವುದಿಲ್ಲ. ಅಧ್ಯಯನಗಳು ಹೇಳಿರುವ ಪ್ರಕಾರ ಇದು ಕೋಶಗಳ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವುದು. ಈ ಅಧ್ಯಯನ ವರದಿಯನ್ನು ಜರ್ನಲ್ ಮೊಲೆಕ್ಯುಲರ್ ನ್ಯೂಟ್ರಿಷನ್ ಆಂಡ್ ಫುಡ್ ರಿಸರ್ಚ್ ನಲ್ಲಿ ಪ್ರಕಟಿಸಲಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

