Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಇದು ಸರಳ ಶೀತ ಎಂದು ನಿರ್ಲಕ್ಷಿಸಬೇಡಿ! ಇದರಿಂದ ಸೈನಸ್ ಸೋಂಕು ಬರಬಹುದು!!
ಚಳಿಗಾಲದಲ್ಲಿ ಶೀತ ಆವರಿಸದಿರುವ ವ್ಯಕ್ತಿಗಳೇ ಇಲ್ಲ ಎನ್ನಬಹುದು. ಏಕೆಂದರೆ ಇನ್ನೂ ನಮ್ಮ ಭಾರತದಲ್ಲಿ, ಸೀನುವಾಗ ಕೆಮ್ಮುವಾಗ ಮುಖಕ್ಕೆ ಏನಾದರೂ ಅಡ್ಡವಿಟ್ಟುಕೊಳ್ಳಬೇಕೆಂದೇ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾಗಿ ಇವರ ಸೀನಿನ ಮೂಲಕ ಸಿಡಿಯುವ ತುಂತುರುವಿನ ಮೂಲಕ ಶೀತದ ವೈರಸ್ಸುಗಳು ಗಾಳಿಯಲ್ಲಿ ತೇಲಾಡುತ್ತಾ, ಈ ವಾಯುವನ್ನು ಉಸಿರಾಡಿದವರಿಗೆಲ್ಲಾ ಶೀತ ಹಬ್ಬಿಸುತ್ತಾ ಹೋಗುತ್ತವೆ. ಪರಿಣಾಮ, ಗಂಟಲ ಕೆರೆತ, ಕೆಮ್ಮು, ಸೋರುವ ಮೂಗು, ಕಟ್ಟಿಕೊಂಡ ಮೂಗಿನ ಮೇಲ್ಭಾಗ ಇತ್ಯಾದಿ.
ಇದೆಲ್ಲಾ ಶೀತ ಆವರಿಸಿದ ಯಾರಿಗೂ ಆಗುವ ಅನುಭವಗಳೇ ಹೌದು. ಆದರೆ ಶೀತ ಎದುರಾದ ಬಳಿಕ ಇದನ್ನು ವಾಸಿಮಾಡಲು ಮನೆಮದ್ದೇ ಸಾಕಾಗುವ ಕಾರಣ ಹೆಚ್ಚಿನವರು ಶೀತವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಚಿಕನ್ ಸೂಪ್, ಕಷಾಯ, ವಿಟಮಿನ್ ಸಿ ಗುಳಿಗೆ, ಸಾಕಷ್ಟು ನಿದ್ದೆ ಮೊದಲಾದವುಗಳೇ ಶೀತಕ್ಕೆ ಸಾಕಾಗುತ್ತವೆ. ಆದರೆ ಕೆಲವೊಮ್ಮೆ ಶೀತ ಈ ಬಡಪೆಟ್ಟುಗಳಿಗೆಲ್ಲಾ ಬಗ್ಗದೇ ಉಲ್ಬಣಗೊಳ್ಳುತ್ತಲೇ ಹೋದರೆ, ಇದು ಕುಹರ ಅಥವಾ ಸೈನಸ್ ಸೋಂಕಿಗೆ ಪರಿವರ್ತಿತವಾಗಿರುವ ಸಾಧ್ಯತೆ ಅಧಿಕವಾಗಿರುತ್ತದೆ.

ಏನಿದು ಸೈನಸ್ ಸೋಂಕು? (Sinus infection)
ನಮ್ಮ ಮೂಗಿನ ಮೇಲೆ, ಹಣೆಯ ನಡುವಣ ಭಾಗದ ಹಿಂದೆ ಒಂದು ಟೊಳ್ಳುಭಾಗವಿದೆ,. ಇದನ್ನೇ ಕುಹರ ಅಥವಾ ಸೈನಸ್ ಎಂದು ಕರೆಯುತ್ತಾರೆ. ಇಲ್ಲಿ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳು ಸಂಗ್ರಹಗೊಂಡರೆ ಸೋಂಕು ಎದುರಾಗುತ್ತದೆ. ಈ ಸೋಂಕೇ ಕುಹರದ ಸೋಂಕು. ಈ ಭಾಗದ ಪದರಗಳು ಸೋಂಕಿಗೊಳಗಾಗಿ ಭಾರೀ ಉರಿಯೂತಕ್ಕೆ ಒಳಗಾಗುತ್ತವೆ ಹಾಗೂ ಊದಿಕೊಳ್ಳುತ್ತವೆ ಹಾಗೂ ಇದನ್ನು ತಡೆಯಲು ರೋಗ ನಿರೋಧಕ ವ್ಯವಸ್ಥೆ ಅತಿ ಪ್ರಮಾಣದಲ್ಲಿ ಕಫವನ್ನು ಉತ್ಪಾದಿಸುತ್ತದೆ. ಹೆಚ್ಚಿನ ಸೂಚನೆಗಳೆಲ್ಲಾ ಸಾಮಾನ್ಯ ಶೀತದಂತೆಯೇ ಇರುತ್ತವೆ.

ಕುಹರ ಒಂದೇ ಭಾಗವೆನ್ನಿಸಿದರೂ ವಾಸ್ತವದಲ್ಲಿ ನಾಲ್ಕು ಭಾಗಗಳಿವೆ.
ಹೌದು ಕುಹರ ಒಂದೇ ಭಾಗವೆನ್ನಿಸಿದರೂ ವಾಸ್ತವದಲ್ಲಿ ನಾಲ್ಕು ಭಾಗಗಳಿವೆ. ಸೋಂಕು ಇವುಗಳಲ್ಲೊಂದರಲ್ಲಿಯೂ ಎದುರಾಗಬಹುದು ಅಥವಾ ಎರಡು ಮೂರು ಅಥವಾ ನಾಲ್ಕೂ ಭಾಗಗಳಿಗೂ ಆವರಿಸಬಹುದು. ಯಾವ ಭಾಗಕ್ಕೆ ಸೋಂಕು ತಗುಲಿದೆಯೋ ಆ ಪ್ರಕಾರ ಲಕ್ಷಣಗಳೂ ಭಿನ್ನವಾಗಿರುತ್ತವೆ. ಕೆನ್ನೆಯ ಮೇಲ್ಭಾಗದಲ್ಲಿರುವ ಭಾಗಕ್ಕೆ ತಗುಲಿದ್ದರೆ ದವಡೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಇತ್ಯಾದಿ.

ಕುಹರದ ಸೋಂಕು ಸಾಂಕ್ರಾಮಿಕವೇ?
ಈ ಸೋಂಕು ಬ್ಯಾಕ್ಟೀರಿಯಾ ಮತ್ತು ವೈರಸ್ ಎರಡರಿಂದಲೂ ಎದುರಾಗಬಹುದು. ಹಾಗಾಗಿ, ಈ ಸೋಂಕು ಬ್ಯಾಕ್ಟೀರಿಯಾದಿಂದ ಎದುರಾಗಿದ್ದರೆ ಇದು ಸಾಂಕ್ರಾಮಿಕವಾಗಬಹುದು. ಆದರೆ ವೈರಸ್ ನಿಂದ ಎದುರಾಗಿದ್ದರೆ ಇದು ಸಾಂಕ್ರಾಮಿಕವಾಗುವ ಸಾಧ್ಯತೆ ಕಡಿಮೆ. ಈ ಸೋಂಕು ವಾಸ್ತವವಾಗಿ ಸಾಮಾನ್ಯ ಶೀತದಿಂದಲೇ ಎದುರಾಗಿರುತ್ತದೆ ಹಾಗೂ ಶೀತಕ್ಕೆ ಸೂಕ್ತ ಆರೈಕೆ ಒದಗಿಸದೇ ಈ ಬ್ಯಾಕ್ಟೀರಿಯಾಗಳು ಕುಹರದವರೆಗೂ ತಲುಪುತ್ತವೆ. ಹಾಗಾಗಿ, ಶೀತ ಸಾಂಕ್ರಾಮಿಕವಾದರೂ ಈ ಶೀತದಿಂದಲೇ ಕುಹರದ ಸೋಂಕು ಸಹಾ ಆಗುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ, ಅಂತೆಯೇ ಪೂರ್ಣವಾಗಿ ಅಲ್ಲಗಳೆಯಲೂ ಆಗುವುದಿಲ್ಲ.

ತಪಾಸಣೆ
ಈ ಸೋಂಕಿನ ಲಕ್ಷಣಗಳು ಸಾಮಾನ್ಯ ಫ್ಲೂ ಹಾಗೂ ಶೀತದಂತೆಯೇ ಇರುವ ಕಾರಣ ತಜ್ಞ ವೈದ್ಯರಿಗೂ ಇದರ ಇರುವಿಕೆಯನ್ನು ಖಚಿತವಾಗಿ ಒಮ್ಮೆಲೇ ಹೇಳಲು ಸಾಧ್ಯವಿಲ್ಲ. ಅಲ್ಲದೇ ಪ್ರಯೋಗಾಲಯದಲ್ಲಿಯೂ ಈ ಸೋಂಕನ್ನು ಖಚಿತಪಡಿಸಲು ಸಾಧ್ಯವಿಲ್ಲ. ಹಾಗಾಗಿ ಏನಿದ್ದರೂ ಈ ಸೋಂಕು ಕೊಂಚ ಉಲ್ಬಣಗೊಂಡು ತನ್ನ ಇರುವಿಕೆಯ ಸೂಚನೆಗಳನ್ನು ತೋರಿಸತೊಡಗಿದ ಬಳಿಕವಷ್ಟೇ ವೈದ್ಯರು ತಮ್ಮ ಅನುಭವದ ಮೂಲಕ ಹೇಳಬಲ್ಲರು. ಏನೇ ಆದರೂ ಈ ಸೋಂಕನ್ನು ಕಂಡುಹಿಡಿಯುವುದು ತ್ರಾಸಕರ ಹಾಗೂ ಗೊಂದಲಕಾರಿಯೂ ಆಗಿದೆ.

ಕುಹರದ ಸೋಂಕಿನ ಲಕ್ಷಣಗಳು
ಶೀತಕ್ಕೆ ಮದ್ದು ತೆಗೆದುಕೊಂಡರೆ ಏಳು ದಿನ ಸಾಕಂತೆ, ಮದ್ದು ತೆಗೆದುಕೊಳ್ಳದೇ ಇದ್ದರೆ ವಾಸಿಯಾಗಲು ಏಳು ದಿನಗಳೇ ಬೇಕಂತೆ! ಹೀಗೊಂದು ಮಾತು ಮಲೆನಾಡಿನಲ್ಲಿ ಪ್ರಚಲಿತವಾಗಿದೆ. ಹಾಗಾಗಿ ನಿಮ್ಮ ಶೀತ ಆರೈಕೆ ಪಡೆದರೂ ಪಡೆಯದಿದ್ದರೂ ಒಂದು ವಾರಕ್ಕೂ ಮೀರಿ ಮುಂದುವರೆದರೆ ತಕ್ಷಣ ಮನೆಮದ್ದನ್ನು ನಿಲ್ಲಿಸಿ ವೈದ್ಯರನ್ನು ಕಾಣಬೇಕು ಹಾಗೂ ಕುಹರದ ಸೋಂಕಿನ ಇರುವಿಕೆಯ ಬಗ್ಗೆ ತಪಾಸಿಸಿಕೊಳ್ಳಬೇಕು. ಈ ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ:

ಕಣ್ಣುಗಳ ಭಾಗದಲ್ಲಿ ನೋವು
ಕಡಿಮೆಯಾಗಬೇಕಾಗಿದ್ದ ಶೀತ ಮುಂದುವರೆದ ಬಳಿಕ ಕಣ್ಣುಗಳ ಹಿಂಭಾಗದಲ್ಲಿ, ವಿಶೇಷವಾಗಿ ಹಣೆಯ ನಡುವಣ ಭಾಗದಲ್ಲಿ ನೋವು ಎನ್ನಿಸುತ್ತಿದ್ದರೆ ಕುಹರದ ಸೋಂಕು ಎದುರಾಗಿರುವ ಸಾಧ್ಯತೆ ದಟ್ಟವಾಗಿರುತ್ತದೆ. ಎಕೆಂದರೆ ಕುಹರದ ಟೊಳ್ಳು ಈ ಭಾಗದಲ್ಲಿದ್ದು ಇಲ್ಲಿ ಎದುರಾಗಿರುವ ಸೋಂಕಿನಿಂದ ಊದಿಕೊಂಡ ಭಾಗ ಪಕ್ಕದಲ್ಲಿಯೇ ಇರುವ ಕಣ್ಣುಗುಡ್ಡೆಗಳನ್ನು ಒತ್ತುತ್ತದೆ. ಇದೇ ಕಣ್ಣುಗಳಿಗೆ ನೋವು ಆಗಲು ಕಾರಣ. ಸಾಮಾನ್ಯವಾಗಿ ಕಣ್ಣುಗಳಿಗೆ ಈ ಕಾರಣದಿಂದ ನೋವಾದಾಗ ಹೆಚ್ಚಿನವರು ಕುಹರದ ಸೋಂಕಿನ ಬಗ್ಗೆ ಅರಿವಿಲ್ಲದೇ ತಮ್ಮ ಕಣ್ಣುಗಳಿಗೇ ಏನೋ ಆಗಿರಬೇಕೆಂಬ ದುಗುಡಕ್ಕೆ ಒಳಗಾಗುತ್ತಾರೆ.

ರಾತ್ರಿಯಿಡೀ ಕೆಮ್ಮು
ಸತತ ಕೆಮ್ಮಿನಿಂದ ರಾತ್ರಿಯಿಡೀ ನಿದ್ದೆ ಬರದೇ ಇದ್ದರೆ ಇದರ ಹಿಂಸೆಯನ್ನು ಅನುಭವಿಸಿದವರೇ ಬಲ್ಲರು. ಏಕೆಂದರೆ ಮಲಗಿರುವ ಭಂಗಿಯಲ್ಲಿ ಕುಹರದ ಭಾಗದಲ್ಲಿ ಉತ್ಪತ್ತಿಯಾಗಿದ್ದ ಸ್ನಿಗ್ಧ ಕಫ ನಿಧಾನವಾಗಿ ಇಳಿದು ಗಂಟಲ ಹಿಂಭಾಗಕ್ಕೆ ಬರುತ್ತದೆ ಹಾಗೂ ಇಲ್ಲಿ ಕಚಗುಳಿಯಿಟ್ಟಂತಾಗಿ ಕೆಮ್ಮು ಅನವರತವಾಗುತ್ತದೆ.

ಹಲ್ಲು ನೋವು
ಹಲ್ಲು ನೋವು ಎದುರಾದರೆ ಒಸಡಿನಲ್ಲಿ ಆಗಿರುವ ಸೋಂಕು ಎಂದೇ ಹೆಚ್ಚಿನ ಸಮಯದಲ್ಲಿ ಪರಿಗಣಿಸಲಾಗುತ್ತದೆ. ಆದರೆ ಇದು ಕುಹರದ ಸೋಂಕಿನಿಂದಲೂ ಎದುರಾಗಿರಬಹುದು. ಆದರೆ ಕುಹರದ ಸೋಂಕಿನ ಇರುವಿಕೆಯನ್ನು ಪ್ರಕಟಿಸುವ ಈ ಸೂಚನೆ ಅತಿ ಅಸಾಮಾನ್ಯವಾಗಿದೆ.

ತಲೆನೋವು
ಒಂದು ವೇಳೆ ಹಣೆಯ ಹಿಂಭಾಗದಲ್ಲಿ, ಹುಬ್ಬುಗಳ ಮೇಲೆ ತಲೆಯ ಕೇಂದ್ರದ ಮುಂಭಾಗದಲ್ಲಿ ಕೇಂದ್ರೀಕೃತವಾಗಿರುವಂತೆ ತಲೆನೋವು ಎದುರಾಗಿ ಸತತವಾಗಿ ಕಾಡುತ್ತಿದ್ದರೆ ಇದು ಕುಹರದ ಸೋಂಕಿನ ಪರಿಣಾಮವಾಗಿರಬಹುದು. ಈ ಸೋಂಕು ಇರುವ ವ್ಯಕ್ತಿಗಳು ಮುಂದಕ್ಕೆ ಬಾಗಿದಾಗ ಕಫ ಇನ್ನಷ್ಟು ಒಳಭಾಗಕ್ಕೆ ಸರಿದು ಸೋಂಕನ್ನು ಹೆಚ್ಚಿಸಿ ನೋವನ್ನೂ ಉಲ್ಬಣಗೊಳಿಸುತ್ತದೆ.

ಉಸಿರಿನ ದುರ್ವಾಸನೆ
ಈ ಸೋಂಕಿನಿಂದ ಅತಿಸ್ನಿಗ್ಧ, ಹಳದಿಮಿಶ್ರಿತ ಹಾಗೂ ಅತಿ ಕಟು ವಾಸನೆಯುಳ್ಳ ಕಫ ಉತ್ಪತ್ತಿಯಾಗುತ್ತದೆ. ಈ ಕಫ ಇಳಿದು ಗಂಟಲಿಗೆ ಇಳಿದಾಗ, ಇದರ ಮೂಲಕ ಹಾದುಹೋಗುವ ಉಸಿರು ಸಹಾ ದುರ್ವಾಸನೆ ಪಡೆಯುತ್ತದೆ. ಈ ವಾಸನೆ ಎದುರಿನವರಿಗೆ ಅಸಹ್ಯವಾಗಿರುತ್ತದೆ.

ಕಡಿಮೆಯೇ ಆಗದ ಶೀತದ ಲಕ್ಷಣಗಳು
ಸಾಮಾನ್ಯವಾಗಿ ವಾರದೊಳಗೇ ಇಲ್ಲವಾಗಬೇಕಾಗಿದ್ದ ಶೀತದ ಲಕ್ಷಣಗಳು ವಾರಕ್ಕೂ ಹೆಚ್ಚು ದಿನಗಳಿಗೆ ಮುಂದುವರೆದರೆ ಈ ಸೋಂಕು ತಗಲಿರುವ ಸಾಧ್ಯತೆ ಹೆಚ್ಚಿರುತ್ತದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

ದಿನಕ್ಕೆರಡು ಬಾರಿ ನೀರಿನ ಹಬೆ
ತಜ್ಞರ ಪ್ರಕಾರ, ದಿನಕ್ಕೆರಡು ಬಾರಿ ನೀರಿನ ಹಬೆಯನ್ನು ಉಸಿರಿನ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಎಳೆದುಕೊಳ್ಳುವುದರಿಂದ ಕಫ ನೀರಾಗಿ ಹರಿದು ಹೋಗಲು ಸಾಧ್ಯವಾಗುತ್ತದೆ ಹಾಗೂ ಸೋಂಕು ಶೀಘ್ರವಾಗಿ ತಹಬಂದಿಗೆ ಬರುತ್ತದೆ.



Click it and Unblock the Notifications