Just In
Don't Miss
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರೋಗ್ಯ ಟಿಪ್ಸ್: ಸಕ್ಕರೆಗೆ ಅತ್ಯುತ್ತಮ ಪರ್ಯಾಯ ಖರ್ಜೂರ
ಮರುಭೂಮಿ ಬಂಗಾರ ಎಂದೇ ಕರೆಯಬಹುದಾದ ಖರ್ಜೂರದಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇದೆ. ಇದರಿಂದ ಖರ್ಜೂರವನ್ನು ಪ್ರತಿಯೊಬ್ಬರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಆರೋಗ್ಯವು ಚೆನ್ನಾಗಿರುವುದು. ಖರ್ಜೂರವನ್ನು ನೀವು ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಬದಲಿಗೆ ಬಳಸಿಕೊಳ್ಳಬಹುದು. ಇದು ತುಂಬಾ ಆರೋಗ್ಯಕಾರಿ ವಿಧಾನವಾಗಿದೆ. ಪ್ರಕೃತಿಯಲ್ಲಿ ಸಿಗುವಂತಹ ಪ್ರತಿಯೊಂದು ಹಣ್ಣು ಹಂಪಲು ಹಾಗೂ ತರಕಾರಿಗಳು ನಮ್ಮ ದೇಹಕ್ಕೆ ತುಂಬಾ ಆರೋಗ್ಯಕಾರಿ ಎನ್ನುವುದನ್ನು ಇಂದಿನ ದಿನಗಳಲ್ಲಿ ಮರೆತುಬಿಟ್ಟಿದ್ದೇವೆ. ಹೀಗಾಗಿ ನಾವು ಕೃತಕ ಆಹಾರ ಸೇವನೆಯಲ್ಲಿ ತೊಡಗಿಕೊಳ್ಳುತ್ತೇವೆ.
ವೇಗವಾಗಿ, ಸಂಸ್ಕರಿತ ಆಹಾರ ಸೇವನೆಯಿಂದಾಗಿ ಹಲವಾರು ರೀತಿಯ ಅನಾರೋಗ್ಯಗಳು ಬರುವುದು. ಇಂತಹ ಆಹಾರದಲ್ಲಿ ಅತೀ ಹೆಚ್ಚಿನ ಸಕ್ಕರೆ, ಸಂಸ್ಕರಣ ಮತ್ತು ಇತರ ಕೆಲವೊಂದು ಅನಾರೋಗ್ಯಕರ ಅಂಶಗಳನ್ನು ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೂ ಹಾನಿಕರ. ಇಂತಹ ಆಹಾರಗಳು ಬಾಯಿಗೆ ರುಚಿ ನೀಡಿದರೂ ಅದರಿಂದ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ನಾವು ಸೇವಿಸುವ ಆಹಾರದಲ್ಲಿ ಸಕ್ಕರೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಇದು ನಮ್ಮ ಆರೋಗ್ಯಕ್ಕೂ ಮಾರಕ. ನಮ್ಮ ಆಹಾರ ಕ್ರಮದಿಂದ ಸಕ್ಕರೆಯನ್ನು ಕೈಡಬಿಡಬೇಕೇ? ಅಥವಾ ಅದರಕ್ಕೆ ಪರ್ಯಾಯ ಹುಡುಕಬೇಕೇ?
ಈಗಾಗಲೇ ನಿಮಗೆ ಹೇಳಿರುವಂತಹ ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಅಂಶವು ಇರುವ ಕಾರಣದಿಂದಾಗಿ ಇದು ಸಕ್ಕರೆಗೆ ಪರ್ಯಾಯವಾಗಿ ಬಳಸಿಕೊಳ್ಳಬಹುದು. ಅದೇ ರೀತಿಯಾಗಿ ತೆಂಗಿನಕಾಯಿ ಸಕ್ಕರೆ, ಬೆಲ್ಲ ಇತ್ಯಾದಿಗಳು. ಅದರಲ್ಲೂ ಖರ್ಜೂರವೂ ಸಕ್ಕರೆಗೆ ಅತ್ಯುತ್ತಮ ಪರ್ಯಾಯವಾಗಿದೆ. ಖರ್ಜೂರನ್ನು ಉನ್ನತ ಮಟ್ಟದ ಫ್ರಕ್ಟೋಸ್ ಅಂಶವಿದೆ. ಇದು ನೈಸರ್ಗಿಕವಾಗಿ ಹಣ್ಣುಗಳಲ್ಲಿ ಲಭ್ಯವಿದೆ ಮತ್ತು ಇದು ಹಾನಿಕಾರಕವಲ್ಲ. ವಿಶ್ವದೆಲ್ಲೆಡೆಯಲ್ಲಿ ಉಷ್ಣವಲಯದಲ್ಲಿ ಖರ್ಜೂರವನ್ನು ಬೆಳೆಸಲಾಗುತ್ತದೆ. ಖರ್ಜೂರದ ಲಾಭಗಳ ಬಗ್ಗೆ ಇಲ್ಲಿ ತಿಳಿಯಿರಿ.
ಉತ್ತಮ ಅರಿವು
ಮೆದುಳಿನ ಅಂಗಾಂಶಗಳಿಗೆ ಹಾನಿ ಉಂಟು ಮಾಡುವಂತಹ ಉರಿಯೂತವನ್ನು ಖರ್ಜೂರವು ಕಡಿಮೆ ಮಾಡುವುದು. ಸಾಮಾನ್ಯ ಸಕ್ಕರೆಗೆ ಬದಲು ಖರ್ಜೂರದ ಸಕ್ಕರೆ ಬಳಕೆ ಮಾಡಿದರೆ ಆಗ ನಿಮಗೆ ಒಳ್ಳೆಯ ಅರಿವು, ತೀಕ್ಷ್ಣ ನೆನಪು, ಕಡಿಮೆ ನಿಶ್ಯಕ್ತಿ, ಚುರುಕಾದ ಮೆದುಳು ಮತ್ತು ಇತರ ಹಲವಾರು ರೀತಿಯ ಲಾಭಗಳು ಸಿಗಲಿದೆ.
ಜೀರ್ಣಕ್ರಿಯೆ ಸುಧಾರಿಸುವುದು
ಹೊಟ್ಟೆಗೆ ಸಕ್ಕರೆಯು ಒಳ್ಳೆಯದು ಎಂದು ನಿಮಗೆ ತಿಳಿದಿದೆಯಾ? ಹೌದು, ಖರ್ಜೂರದ ಸಕ್ಕರೆಯಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದೆ ಮತ್ತು ಇದು ಕರುಳಿನ ಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ನಿವಾರಣೆ ಮಾಡುವುದು. ಇದರಿಂದ ಹೊಟ್ಟೆಯು ಆರೋಗ್ಯವಾಗಿ ಇರುತ್ತದೆ. ಹೊಟ್ಟೆಯು ಆರೋಗ್ಯವಾಗಿ ಇದ್ದರೆ ಆಗ ನಿಮ್ಮ ಅರ್ಧ ಸಮಸ್ಯೆಯು ನಿವಾರಣೆ ಆದಂತೆ.
Most Read: ಖರ್ಜೂರ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು
ಕಾಯಿಲೆಗಳ ವಿರುದ್ಧ ಹೋರಾಡುವುದು
ಖರ್ಜೂರದಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಿನ ಮಟ್ಟದಲ್ಲಿದೆ ಮತ್ತು ಇದರಿಂದ ಫ್ರೀ ರ್ಯಾಡಿಕಲ್ ನಿಂದ ದೇಹದ ಅಂಗಾಂಶಗಳಿಗೆ ಆಗುವ ಹಾನಿಯನ್ನು ಇದು ತಡೆಯುತ್ತದೆ. ಖರ್ಜೂರದಲ್ಲಿ ಕಂಡುಬರುವ ಪ್ರಮುಖ ಮೂರು ಆಂಟಿಆಕ್ಸಿಡೆಂಟ್ ಗಳೆಂದರೆ ಫ್ಲಾವನಾಯ್ಡ್, ಕಾರೊಟೆನಾಯ್ಡ್ ಮತ್ತು ಫೆನೊಲಿಕ್ ಆಮ್ಲ. ಈ ಎಲ್ಲಾ ಆಂಟಿಆಕ್ಸಿಡೆಂಟ್ ಗಳು ದೀರ್ಘಕಾಲಿಕ ಕಾಯಿಲೆ ವಿರುದ್ಧ ಹೋರಾಡುವುದು ಮತ್ತು ದೇಹವನ್ನು ಆರೋಗ್ಯವಾಗಿ ಇಡುತ್ತದೆ. ಆಂಟಿಆಕ್ಸಿಡೆಂಟ್ ಚರ್ಮವನ್ನು ಕಾಂತಿಯುತವಾಗಿಸಿ, ನೀವು ಯುವಕರಂತೆ ಕಾಣುವಂತೆ ಮಾಡುವುದು.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು
ಖರ್ಜೂರದಲ್ಲಿ ಗ್ಲೈಸೆಮಿಕ್ ಸಂಕೀರ್ಣವಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಣೆ ಮಾಡಲು ಅತ್ಯುತ್ತಮ ಪರಿಹಾರವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಿಂದ ಮಧುಮೇಹ ಇರುವಂತಹ ಜನರು ತಮ್ಮ ಆಹಾರ ಕ್ರಮದಿಂದ ಸಕ್ಕರೆ ಸಂಪೂರ್ಣವಾಗಿ ತೆಗೆದು ಹಾಕುವ ಬದಲು ಖರ್ಜೂರದ ಸಕ್ಕರೆ ಬಳಸಿಕೊಳ್ಳಬಹುದು.
Most Read: ದಿನಕ್ಕೆ ಎರಡೇ ಎರಡು ಒಣ ಖರ್ಜೂರ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು
ಮೂಳೆಯ ಆರೋಗ್ಯ ರಕ್ಷಿಸುವುದು
ಖರ್ಜೂರದಲ್ಲಿ ವಿವಿಧ ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳಾಗಿರುವಂತಹ ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಮೆಗ್ನಿಶಿಯಂ ಇದೆ. ಇದರಿಂದ ಮೂಳೆಯ ಆರೋಗ್ಯವು ಉತ್ತಮವಾಗುವುದು. ಅಸ್ಥಿರಂಧ್ರತೆ ಸಮಸ್ಯೆಯನ್ನು ಇದು ನಿವಾರಿಸುವುದು. ಮುಂದಿನ ಸಲ ನೀವು ಯಾವುದೇ ಸಿಹಿ ತಿಂಡಿ ಮಾಡಲು ಬಯಸುತ್ತಿದ್ದರೆ ಆಗ ನೀವು ಖರ್ಜೂರದ ಸಕ್ಕರೆ ಬಳಸಿ ಮತ್ತು ನೈಸರ್ಗಿಕವಾಗಿ ಸಿಗುವ ಸಕ್ಕರೆಯ ರುಚಿಯನ್ನು ಆನಂದಿಸಿ.