Just In
- 2 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 3 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 4 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 5 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಜೀಮಾರ್ ಕಾಯಿಲೆಗೆ ಅರಿಶಿನದ ಕರ್ಕ್ಯುಮಿನ್ ಅಂಶದಲ್ಲಿದೆ ಪರಿಹಾರ!
ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಅರಿಶಿಣಕ್ಕೊಂದು ವಿಶೇಷ ಸ್ಥಾನವಿದೆ . ಅಡುಗೆಯಿಂದ ಮಂಗಳ ಕಾರ್ಯದವರೆಗೂ ಅರಿಶಿನ ಎಲ್ಲರ ಮನೆ ಮಾತಾಗಿದೆ . ಹಾಗಾಗಿಯೇ ಎಲ್ಲರೂ ಅರಿಶಿನವನ್ನು ಪೂಜ್ಯ ಮತ್ತು ಗೌರವ ಭಾವನೆಗಳಿಂದ ಕಾಣುತ್ತಾರೆ. ಶುಭ ಕಾರ್ಯದಲ್ಲಿ ಅರಿಶಿನ ಮೈ ಮೇಲೆ ಬಿದ್ದರೆ ಒಳ್ಳೆಯ ಸಂಕೇತ ಎಂದು ಹೇಳುತ್ತಾರೆ. ಅರಿಶಿನ ಚೆಲ್ಲಿದರೆ ಅದನ್ನು ತುಳಿಯಬಾರದು ಎಂದು ಹಲವರು ನಂಬಿದ್ದಾರೆ ಮತ್ತು ಅದೇ ರೀತಿ ಈಗಲೂ ಪಾಲಿಸುತ್ತಿದ್ದಾರೆ ಕೂಡ.
ಇನ್ನು ಆರೋಗ್ಯದ ವಿಷಯಕ್ಕೆ ಬರುವುದಾದರೆ ಬಹಳ ಹಿಂದಿನ ಕಾಲದ ಆಯುರ್ವೇದ ಔಷಧಿಯಿಂದ ಹಿಡಿದು ಈಗಿನ ಕಾಲದಲ್ಲಿ ಕೂಡ ಅನೇಕ ನಾಟಿ ವೈದ್ಯರು ಅರಿಶಿನ ದ ಉಪಯೋಗದ ಬಗ್ಗೆ ಚೆನ್ನಾಗಿ ಅರಿತು ಅದರಿಂದ ಔಷಧಿಗಳನ್ನು ತಯಾರಿಸಿ ಸಮಾಜದ ಜನರ ಖಾಯಿಲೆ ವಾಸಿ ಮಾಡುವ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ .
ಅರಿಶಿನದಿಂದ ಆರೋಗ್ಯಕ್ಕೆ ಆಗುವಂತ ಪ್ರಯೋಜನಗಳು ಹಲವಾರು . ಇದರಲ್ಲಿ ಆಂಟಿ ಒಕ್ಸಿಡಾಂಟ್ ಮತ್ತು ಆಂಟಿ ಇಂಪ್ಲಾಮೇಟರಿ ಗುಣ ಲಕ್ಷಣಗಳು ಕೂಡಿದ್ದು ಮನುಷ್ಯನ ದೇಹದ ಕಾಂತಿಯಿಂದ ಹಿಡಿದು ಮೂಳೆಗಳ ಸಮಸ್ಯೆ , ಹೃದಯದ ಸಮಸ್ಯೆ , ಹೊಟ್ಟೆಯ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಮಹಾಮಾರಿ ರೋಗಗಳಿಗೂ ಅರಿಶಿಣದಲ್ಲಿನ ಚಮತ್ಕಾರಿ ಅಂಶಗಳು ಮುಕ್ತಿ ಕೊಡುತ್ತವೆ...
ಈಗ
ಮೆದುಳಿನ
ಸಮಸ್ಯೆಗಳಿಗೆ
ಅರಿಶಿನದಿಂದ
ಯಾವ
ರೀತಿ
ಪರಿಹಾರವಿದೆ
ಎಂಬುದನ್ನು
ನೋಡೋಣ.
ಹಲವಾರು
ಮಂದಿ
ವಯಸ್ಸಿಗೆ
ಅನುಗುಣವಾಗಿ
ಮರೆವಿನ
ಖಾಯಿಲೆಯಿಂದ
ಬಳಲುತ್ತಿರುತ್ತಾರೆ
.
ಕೆಲವರು
ವಯಸ್ಸಿನಲ್ಲಿ
ಚಿಕ್ಕವರಿದ್ದರೂ
ಎಲ್ಲಾ
ಮರೆಯುವ
ಸಮಸ್ಯೆಯಿಂದ
ಬಳಲುತ್ತಿರುತ್ತಾರೆ
.
ಅರಿಶಿನದಲ್ಲಿ
ಈ
ಸಮಸ್ಯೆಯಿಂದ
ಮುಕ್ತಿ
ಕೊಡಿಸುವ
ಶಕ್ತಿ
ಇದೆ.
ಅರಿಶಿನದಲ್ಲಿ
ಕರ್ಕ್ಯುಮಿನ್
ಎಂಬ
ಅಂಶವಿದ್ದು
ಮನುಷ್ಯರು
ಬಳಲುವ
"
ಆಲ್ಜಿಮರ್
"
ಖಾಯಿಲೆಗೆ
ಇದು
ಒಳ್ಳೆಯ
ಔಷಧಿಯಾಗಿದೆ.
ಇದು
"
ಅಮೇರಿಕನ್
ಜರ್ನಲ್
ಓಫ್
ಜೆರಿಯಾಟ್ರಿಕ್
ಸೈಕಿಯಾಟ್ರಿ
"
ಪ್ರಕಟಗೊಳಿಸಿದ
ವರದಿಯಲ್ಲಿ
ಸಾಬೀತಾಗಿದೆ.
ಅಲ್ಲಿನ ಸಂಶೋಧಕರು ಡೆಮೆನ್ಷಿಯಾ ಇಲ್ಲದ ಮನುಷ್ಯರ ಮೇಲೆ ಅರಿಶಿನದ ಕರ್ಕ್ಯುಮಿನ್ ಅಂಶ ದೇಹದ ಒಳಗೆ ಸೇರಿದರೆ ಯಾವ ರೀತಿ ಅವರ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಪರೀಕ್ಷಿಸಿದರು. ಜೊತೆಗೆ ಮೊದಲೇ ಮೆದುಳಿನಲ್ಲಿ ದದ್ದುಗಳು ಮತ್ತು ಗೋಜಲುಗಳನ್ನು ಹೊಂದಿ ಆಲ್ಜಿಮರ್ ಖಾಯಿಲೆಯಿಂದ ಬಳಲುತ್ತಿರುವ ಜನರ ಮೇಲೆ ಅರಿಶಿನದ ಕರ್ಕ್ಯುಮಿನ್ ಅಂಶದ ಪರಿಣಾಮ ಹೇಗಿರುತ್ತದೆ ಎಂದು ಅದೇ ಸಮಯದಲ್ಲಿ ಪರೀಕ್ಷಿಸಿದರು.
ಆಗ ಅವರಿಗೆ ತಿಳಿದ ಸತ್ಯ ಏನೆಂದರೆ ಕರ್ಕ್ಯುಮಿನ್ ಅದರ ಪರಿಣಾಮಗಳನ್ನು ಮಾನವನ ಮೆದುಳಿನ ಮೇಲೆ ಹೇಗೆ ಉಂಟು ಮಾಡುತ್ತದೆ ಎಂಬುದು ಖಚಿತವಾಗದಿದ್ದರೂ , ಮೆದುಳಿನಲ್ಲಿ ಉಂಟಾಗಿರುವ ಉರಿಯೂತವನ್ನು (inflammation)ಕಡಿಮೆ ಮಾಡುವ ಶಕ್ತಿ ಅರಿಶಿನಕ್ಕಿದೆ ಎಂದು ಸಾಬೀತಾಯಿತು . ಮೆದುಳಿನ ಉರಿಯೂತದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ ಮತ್ತು ಅಂತವರಿಗೆ ಆಲ್ಜಿಮರ್ ನಂತಹ ಕಾಯಿಲೆಗಳು ಬಹಳ ಬೇಗನೆ ಅವರಿಸತೊಡಗುತ್ತವೆ. ಆದ್ದರಿಂದ ಅರಿಶಿನ ಈ ಎರಡೂ ರೀತಿಯ ಸಮಸ್ಯೆಗಳಿಗೆ ರಾಮಬಾಣ ಎಂದು ಗೊತ್ತಾಯಿತು ಎಂದು ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿರುವ ಪ್ರತಿಷ್ಠಿತ " ಯೂನಿವರ್ಸಿಟಿ ಓಫ್ ಕ್ಯಾಲಿಫೋರ್ನಿಯಾ " ದ ಸದಸ್ಯರಾದ ಗ್ಯಾರಿ ಸ್ಮಾಲ್ ರವರು ಅಭಿಪ್ರಾಯ ಪಟ್ಟಿದ್ದಾರೆ .
ಅಲ್ಲಿನ ಸಂಶೋಧಕರು ಈ ಪರೀಕ್ಷೆಗೆ ಸುಮಾರು 40 ಜನರನ್ನು ಒಳಪಡಿಸಿದ್ದರು . ಎಲ್ಲರೂ 50 ವರ್ಷದಿಂದ 90 ವರ್ಷ ವಯಸ್ಸಾಗಿದ್ದ ವರಾಗಿದ್ದು ಅದರಲ್ಲಿ ಕೆಲವರಿಗೆ ಸೌಮ್ಯ ರೀತಿಯಲ್ಲಿ ಜ್ಞಾಪಕ ಶಕ್ತಿ ಕುಂಠಿತವಾಗಿತ್ತು . ಸಂಶೋಧನೆಯಲ್ಲಿ ಅವರಿಗೆ 90 ಮಿಲ್ಲಿ ಗ್ರಾಂ ನಷ್ಟು ಕರ್ಕ್ಯುಮಿನ್ ಸೇವಿಸುವಂತೆ ಅಥವಾ 18 ತಿಂಗಳ ಕಾಲ ಪ್ರತಿದಿನ ಪ್ಲೇಸ್ಬೊ ಗೆ ಒಳಗಾಗುವಂತೆ ಹೇಳಿದರು.
ಸಂಶೋಧನೆಗೆ ಒಳಗಾಗಿದ್ದ ಎಲ್ಲಾ 40 ಜನರು ಪ್ರಮಾಣೀಕೃತ ಅರಿವಿನ ಮೌಲ್ಯಮಾಪನಗಳಿಗೆ ಸಂಶೋಧನೆಯ ಶುರುವಿನ ಸಮಯದಲ್ಲಿ ಮತ್ತು 6 ತಿಂಗಳ ನಡುವಿನಲ್ಲಿ ಒಳಗಾಗಿದ್ದರು ಮತ್ತು ಅಧ್ಯಯನದ ಪ್ರಾರಂಭದಲ್ಲಿ ಮತ್ತು 18 ತಿಂಗಳ ನಂತರ ಅವರ ರಕ್ತದಲ್ಲಿನ ಕರ್ಕ್ಯುಮಿನ್ ಮಟ್ಟವನ್ನು ಪರೀಕ್ಷೆಯ ಮೂಲಕ ತಿಳಿದುಕೊಳ್ಳಲಾಯಿತು. 30 ಮಂದಿ ಸ್ವಯಂ ಸೇವಕರು ಅವರ ಮೆದುಳಿನಲ್ಲಿ ಅಮೈಲೋಯ್ಡ್ ಮತ್ತು ಟೌ ಅಂಶ ಪತ್ತೆ ಹಚ್ಚಲು ಸಂಶೋಧನೆಯ ಮೊದಲ ಹಂತದಲ್ಲಿ ಮತ್ತು 18 ತಿಂಗಳ ನಂತರ " ಪಾಸಿಟ್ರಾನ್ ಎಮಿಶನ್ ಟೊಮೊಗ್ರಫಿ " ಅಥವಾ ಪಿ . ಈ . ಟಿ . ಎಂಬ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಟ್ಟಿದ್ದರು .
ಇದರಲ್ಲಿ ಯಾರು ಕರ್ಕ್ಯುಮಿನ್ ಅಂಶವನ್ನು ತೆಗೆದುಕೊಂಡು ಸಂಶೋಧನೆಗೆ ಹಾಜರಾಗಿದ್ದರೋ ಅವರು ಮಾನಸಿಕವಾಗಿ ಬಹಳ ಸದೃಢವಾಗಿದ್ದರು ಏಕೆಂದರೆ ಅವರ ಬುದ್ಧಿ ಶಕ್ತಿ ಮತ್ತು ನೆನಪಿನ ಶಕ್ತಿ ಬಹಳ ಚೆನ್ನಾಗಿ ಅಭಿವೃದ್ಧಿ ಕಂಡಿತ್ತು . ಅದೇ ಪ್ಲೇಸ್ ಬೊ ತೆಗೆದುಕೊಂಡವರಿಗೆ ಯಾವ ಬದಲಾವಣೆಗಳೂ ಆಗಿರಲಿಲ್ಲ.
ಈ ಸಂಶೋಧನೆಯ ಕೊನೆಯ ಹಂತಕ್ಕೆ ಬಂದ ಮೇಲೆ ಸಂಶೋಧಕರು ಕರ್ಕ್ಯುಮಿನ್ ಅಂಶವನ್ನು ಅದರ ಸುರಕ್ಷಿತ ರೂಪದಲ್ಲಿ ತೆಗೆದುಕೊಂಡರೆ ಕೆಲವು ವರ್ಷಗಳಲ್ಲಿ ಬುದ್ಧಿ ಶಕ್ತಿಯಲ್ಲಿ ಮತ್ತು ಅರಿವಿನ ವಿಷಯದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು . ಕರ್ಕ್ಯುಮಿನ್ ಅಂಶವನ್ನು ಹೊಂದಿರುವ ಅರಿಶಿನ ಆರೋಗ್ಯದ ವಿಚಾರದಲ್ಲಂತೂ ತನ್ನ ಒಳ್ಳೆಯ ಪ್ರಭಾವ ಉಂಟುಮಾಡುವ ಗುಣವನ್ನು ಇತರ ಎಲ್ಲಾ ಮಸಾಲೆ ಪದಾರ್ಥಗಳಿಗೆ ಹೋಲಿಸಿದರೆ ಅರಿಶಿಣವೇ ಶ್ರೇಷ್ಠ ಎಂದು ಅಭಿಪ್ರಾಯ ಪಟ್ಟಿದ್ದಾರೆ . ಆದ್ದರಿಂದ ನಿಮ್ಮ ಮನೆಯ ಅಡುಗೆಯಲ್ಲಿ ನೀವು ಪ್ರತಿ ದಿನ ಯಾವುದೇ ಸಂಕೋಚವಿಲ್ಲದೆ ಅರಿಶಿನವನ್ನು ಉಪಯೋಗಿಸಬಹುದು .