Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ಶ್ಲೇಷ್ಮ ಕೆಮ್ಮು ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು
ನಮ್ಮ ದೇಹವು ಕೆಲವೊಂದು ಸ್ವಚಿಕಿತ್ಸೆಯನ್ನು ಮಾಡಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಸಣ್ಣ ನೋವು ಅಥವಾ ಗಾಯವಾದರೆ ನಾವು ಏನೇ ಮಾಡದೆ ಇದ್ದರೂ ಅದು ತನ್ನಿಂದ ತಾನೇ ನಿವಾರಣೆಯಾಗುವುದು. ಇಂತಹ ಹಲವಾರು ಉದಾಹರಣೆಗಳು ಇದೆ. ಅದೇ ರೀತಿಯಾಗಿ ಉತ್ಪಾದಕ ಕೆಮ್ಮು ಅಥವಾ ಶ್ಲೇಷ್ಮ ಕೆಮ್ಮು ನೈಸರ್ಗಿಕವಾಗಿ ದೇಹವು ಶ್ವಾಸಕೋಶ ಮತ್ತು ಶ್ವಾಸನಾಳವನ್ನು ಕಫದಿಂದ ಮುಕ್ತವಾಗಿಡಲು ಮಾಡುವಂತಹ ಕ್ರಿಯೆಯಾಗಿದೆ.
ಅದಾಗ್ಯೂ, ಆದರೆ ಈ ಕೆಮ್ಮಿನ ಬಗ್ಗೆ ನಾವು ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಈ ಶ್ಲೇಷ್ಮ ಕೆಮ್ಮು ದೀರ್ಘಕಾಲದ ತನಕ ಇದ್ದರೆ ಅಥವಾ ಕೆಮ್ಮಿನೊಂದಿಗೆ ಜ್ವರ, ತೂಕ ಇಳಿಕೆ ಅಥವಾ ಕೆಮ್ಮಿನೊಂದಿಗೆ ರಕ್ತಸ್ರಾವವು ಆಗುತ್ತಲಿದ್ದರೆ ಆಗ ಎಚ್ಚರಿಕೆ ವಹಿಸಬೇಕು.ಇಂತಹ ಯಾವುದೇ ಲಕ್ಷಣಗಳು ಇದ್ದರೂ ನೀವು ವೈದ್ಯರನ್ನು ಭೇಟಿಯಾಗಲೇಬೇಕು. ಆದರೆ ಶ್ಲೇಷ್ಮ ಕೆಮ್ಮಿಗೆ ಮನೆಯಲ್ಲೇ ಕೆಲವೊಂದು ನೈಸರ್ಗಿಕ ಪರಿಹಾರ ಕಂಡು ಕೊಳ್ಳಬಹುದು. ಇದಕ್ಕಾಗಿ ಕೆಲವು ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿರುವುದು.

ಕೆಮ್ಮಿಗೆ ಜೇನುತುಪ್ಪದ ಮನೆಮದ್ದು
ಕೆಮ್ಮಿಗೆ ಜೇನುತುಪ್ಪವು ತುಂಬಾ ಪರಿಣಾಮಕಾರಿ ಮನೆಮದ್ದು ಆಗಿದೆ. ಎರಡು ಚಮಚ ಜೇನುತುಪ್ಪವನ್ನು ನೇರವಾಗಿ ಅಥವಾ ಬಿಸಿ ನೀರಿನೊಂದಿಗೆ ಬೆರೆಸಿಕೊಂಡು ಸೇವನೆ ಮಾಡಿದರೆ ಇದು ಉತ್ಪಾದಕ ಕೆಮ್ಮು ನಿವಾರಣೆ ಮಾಡುವುದು. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೇನುತುಪ್ಪ ನೀಡಬೇಡಿ.

ಶ್ಲೇಷ್ಮ ಕೆಮ್ಮನ್ನು ನಿವಾರಣೆ ಮಾಡಲು ನೀಲಗಿರಿ ಎಣ್ಣೆ
ಶ್ಲೇಷ್ಮ ಕೆಮ್ಮನ್ನು ನಿವಾರಣೆ ಮಾಡಲು ನೀಲಗಿರಿ ಎಣ್ಣೆಯನ್ನು ಮೂಗಿನ ಮೂಲಕ ಎಳೆದುಕೊಂಡರೆ ಒಳ್ಳೆಯದು. ಹಬೆಯಾಡುವಂತಹ ಬಿಸಿ ನೀರಿಗೆ 2-3 ಹನಿ ನೀಲಗಿರಿ ಎಣ್ಣೆಯನ್ನು ಹಾಕಿಕೊಳ್ಳಿ ಮತ್ತು ಅದನ್ನು ಸುಮಾರು 15 ನಿಮಿಷ ಕಾಲ ಎಳೆದುಕೊಂಡೆ ಆಗ ಕೆಮ್ಮು ನಿವಾರಣೆ ಆಗುವುದು ಮತ್ತು ಒಳ್ಳೆಯ ನಿದ್ರೆ ಕೂಡ ಬರುವುದು. ಕೆಲವೊಂದು ಜನರಿಗೆ ನೀಲಗಿರಿ ಎಣ್ಣೆಯಿಂದ ಅಲರ್ಜಿ ಉಂಟಾಗಬಹುದು. ಇದರ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕು.

ಈರುಳ್ಳಿ ಮತ್ತು ಸಕ್ಕರೆ ಸಿರಪ್ ನ ಮನೆಮದ್ದಿನಿಂದ ಕೆಮ್ಮು ನಿವಾರಣೆ
ಈರುಳ್ಳಿ ಮತ್ತು ಸಕ್ಕರೆ ಸಿರಪ್ ಕೆಮ್ಮು ನಿವಾರಣೆ ಮಾಡಲು ತುಂಬಾ ಪರಿಣಾಕಾರಿಯಾಗಿರುವ ಮನೆಮದ್ದು ಆಗಿದೆ. ಒಂದು ಈರುಳ್ಳಿಯನ್ನು ತುಂಡರಿಸಿಕೊಂಡು ಅದನ್ನು ಪಿಂಗಾಣಿಗೆ ಹಾಕಿಕೊಳ್ಳೀ. ಇದರ ಬಳಿಕ ಅರ್ಧ ಕಪ್ ಸಕ್ಕರೆ ಹಾಕಿಕೊಂಡು ಅದಕ್ಕೆ ಮುಚ್ಚಳ ಹಾಕಿಬಿಡಿ. ರಾತ್ರಿಯಿಡಿ ಇದು ಹಾಗೆ ಇರಲಿ ಅಥವಾ ಕೆಲವು ಗಂಟೆಗಳ ಕಾಲ ಹಾಗೆ ಬಿಡಿ. ಈರುಳ್ಳಿಯು ಸಕ್ಕರೆಯನ್ನು ಹೀರಿಕೊಳ್ಳುವ ಕಾರಣದಿಂದಾಗಿ ನಿಮಗೆ ಈರುಳ್ಳಿ ಸಿರಪ್ ಸಿಗುವುದು. ನೈಸರ್ಗಿಕವಾಗಿ ಶ್ಲೇಷ್ಮ ಕೆಮ್ಮು ನಿವಾರಣೆ ಮಾಡಲು ನೀವು ಎರಡು ಗಂಟೆಗೊಮ್ಮೆ ಒಂದು ಚಮಚ ಈರುಳ್ಳಿ ಸಿರಪ್ ನ್ನು ಸೇವಿಸಿ. ಇದು ತುಂಬಾ ಸರಳವಾಗಿರುವಂತಹ ಮನೆಮದ್ದು ಆಗಿದೆ.

ಚಿಕನ್ ಸೂಪ್ ನಿಂದ ಉತ್ಪಾದಕ ಕೆಮ್ಮಿಗೆ ಪರಿಹಾರ
ಸಾಮಾನ್ಯ ಶೀತದಿಂದ ಕಾಣಿಸಿಕೊಂಡಿರುವಂತಹ ಉತ್ಪಾದಕ ಕೆಮ್ಮನ್ನು ನಿವಾರಣೆ ಮಾಡಲು ಬಿಸಿಯಾಗಿರುವಂತಹ ಚಿಕನ್ ಸೂಪ್ ತುಂಬಾ ಪರಿಣಾಮಕಾರಿ ಆಗಿರುವುದು. ಕಫದ ಸ್ರವಿಸುವಿಕೆಯನ್ನು ತೆಳು ಮಾಡುವಂತಹ ಇದು ಕೆಮ್ಮಿನಿಂದ ಆರಾಮ ನೀಡುವುದು. ಇಷ್ಟು ಮಾತ್ರವಲ್ಲದೆ ಪ್ರತಿರೋಧಕ ವ್ಯವಸ್ಥೆಯಲ್ಲಿ ಇರುವಂತಹ ಉರಿಯೂತ ಹೆಚ್ಚಿಸುವ ಡಬ್ಲ್ಯೂಬಿಸಿಯನ್ನು ನಿಧಾನಗೊಳಿಸುವುದು.

ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ
ಒಂದು ಹಸಿ ಶುಂಠಿಯನ್ನು ತುಂಡು ಮಾಡಿಕೊಂಡು ಅದನ್ನು ರುಬ್ಬಿಕೊಂಡು ಅದರ ರಸವನ್ನು ತೆಗೆಯಿರಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಂಡು ಉಗುರು ಬೆಚ್ಚಗೆ ಮಾಡಿಕೊಂಡು ಸೇವನೆ ಮಾಡಿ. ಈ ಮಿಶ್ರಣವನ್ನು ನೀವು ದಿನದಲ್ಲಿ ಮೂರು ಸಲ ಸೇವನೆ ಮಾಡಿದರೆ ಆಗ ಕೆಮ್ಮು ಮಾಯವಾಗುವುದು. ಜೇನುತುಪ್ಪದೊಂದಿಗೆ ಶುಂಠಿ ಚಾ ಕುಡಿದರೆ ಅದರಿಂದ ಕೆಮ್ಮು ನಿವಾರಿಸಬಹುದು.

ಸಾಸಿವೆ
ಕೆಮ್ಮಿಗೆ ಸಾಸಿವೆಯು ತುಂಬಾ ಪರಿಣಾಮಕಾರಿಯಾದ ಮನೆಮದ್ದು. ಇದರಲ್ಲಿ ಇರುವಂತಹ ಸಲ್ಫರ್ ಅಂಶವು ಕಫದ ಹರಿವನ್ನು ಉತ್ತೇಜಿಸುವುದು. ಸಾಸಿವೆ ಕಾಳನ್ನು ಜಜ್ಜಿಕೊಳ್ಳಬೇಕು ಮತ್ತು ಅದನ್ನು 15 ನಿಮಿಷ ಕಾಲ ನೀರಿನಲ್ಲಿ ನೆನೆಸಿದ ಬಳಿಕ ಸೇವಿಸಬೇಕು.

ಹೆಚ್ಚು ದ್ರವಾಹಾರ ಸೇವನೆ ಮಾಡಿ
ನೀರಿನೊಂದಿಗೆ ಹೆಚ್ಚಿನ ದ್ರವಾಹಾರ ಸೇವನೆ ಮಾಡುವುದರಿಂದ ಕೆಮ್ಮನ್ನು ಉಂಟು ಮಾಡುವಂತಹ ಸೋಂಕನ್ನು ನಿವಾರಣೆ ಮಾಡಲು ನೆರವಾಗುವುದು. ಇದಕ್ಕೆ ಹೊರತಾಗಿ ದೀರ್ಘಕಾಲದ ತನಕ ದೇಹವನ್ನು ತೇವಾಂಶದಿಂದ ಇಡುವ ಮೂಲಕವಾಗಿ ಕಫವನ್ನು ಸಡಿಲಗೊಳಿಸಲು ನೆರವಾಗುವುದು ಮತ್ತು ಇದರಿಂದ ದೇಹದಿಂದ ಸುಲಭವಾಗಿ ಅದು ಹೊರಗೆ ಹೋಗುವುದು. ಹಣ್ಣು ಮತ್ತು ತರಕಾರಿ ಜ್ಯೂಸ್ ನ ಜತೆಗೆ ನೀವು ಪ್ರತಿನಿತ್ಯ ಹತ್ತು ಲೋಟ ನೀರಿನ ಸೇವನೆ ಮಾಡಿದರೆ ಅದರಿಂದ ತುಂಬಾ ನೆರವಾಗುವುದು.

ಹಸಿಶುಂಠಿ
ಈ ವಿಧಾನವನ್ನು ಸಾಮಾನ್ಯವಾಗಿ ವಿಶ್ವದೆಲ್ಲೆಡೆ ಕೆಮ್ಮಿನ ನಿವಾರಣೆಗಾಗಿ ಬಳಸಲಾಗುತ್ತದೆ. ಅರ್ಧ ದೊಡ್ಡಚಮಚ ಹಸಿಶುಂಠಿಯನ್ನು ಜಜ್ಜಿ ಕೊಂಚ ಕಾಳುಮೆಣಸಿನ ಪುಡಿ ಹಾಗೂ ಒಂದು ದೊಡ್ಡ ಚಮಚ ಜೇನು ಮತ್ತು ಕೊಂಚ ಶಿರ್ಕಾ ಸೇರಿಸಿ. ಇವೆಲ್ಲವನ್ನೂ ಸುಮಾರು ಎರಡರಿಂದ ಮೂರು ದೊಡ್ಡಚಮಚ ನೀರು ಬೆರೆಸಿ ಈ ಪ್ರಮಾಣವನ್ನು ದಿನದಲ್ಲಿ ಮೂರು ಹೊತ್ತು ಸೇವಿಸಿ ಖಾಲಿ ಮಾಡಬೇಕು. ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಹಲವು ರೀತಿಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಕೆಮ್ಮಿನ ಒಂದು ಅಡ್ಡಪರಿಣಾಮವಾಗಿರುವ ಸೋಂಕನ್ನು ಹಸಿಶುಂಠಿ ನಿವಾರಿಸುವ ಕಾರಣ ಕೆಮ್ಮಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ
ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.



Click it and Unblock the Notifications