ಈ ಬೇಸಿಗೆಯಲ್ಲಿ ನಿಮ್ಮ ದೇಹ ತಂಪಾಗಿಸಲು ಕೆಲವೊಂದು ಆಯುರ್ವೇದ ಟಿಪ್ಸ್

ಬೇಸಿಗೆ ಬಂತೆಂದರೆ ಒಂದು ರೀತಿಯ ಭಯ ಶುರು . ಎಲ್ಲೆಲ್ಲಿಯೂ ನೀರಿಗೆ ಹಾಹಾಕಾರ . ತರಕಾರಿ ಹಣ್ಣುಗಳ ಬೆಲೆಗಳು ಗಗನಚುಂಬಿ ಕಟ್ಟಡಗಳಂತೆ ಮೇಲೇರುತ್ತಲೇ ಇರುತ್ತವೆ . ಸಾಲದ್ದಕ್ಕೆ ಸಾಂಕ್ರಾಮಿಕ ರೋಗಗಳ ಹಾವಳಿ ಬೇರೆ . ಒಂದು ತಿಂದರೆ ಹೆಚ್ಚು ಒಂದು ತಿಂದರೆ ಕಮ್ಮಿ ಎಂಬಂತಾಗುತ್ತದೆ ಆರೋಗ್ಯ . ವಿಪರೀತ ಔಷಧಿಗಳ ಸೇವನೆಯೂ ನಿಷಿದ್ಧ . ಏಕೆಂದರೆ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಭಯ . ಆಯುರ್ವೇದ ಪಂಡಿತರ ಪ್ರಕಾರ ಬಿರು ಬೇಸಿಗೆಯ ಕಾಲ ದೇಹದ ಪಿತ್ತದ ಕಾಲವಂತೆ !!! ಆದ್ದರಿಂದ ಆದಷ್ಟು ನಮ್ಮ ದೇಹದ ಪಿತ್ತವನ್ನು ನಿಯಂತ್ರಿಸಿದರೆ ಯಾವ ಖಾಯಿಲೆಯೂ ಹತ್ತಿರ ಸುಳಿಯದೆ ಎಂದಿನಂತೆ ಆರಾಮವಾಗಿ ಜೀವನ ನಡೆಸಬಹುದು .

Ayurvedic Tips To Keep Cool This Summer | Boldsky Kannada

ಕೆಲವು ಆಯುರ್ವೇದ ತಜ್ಞರು ಹೇಳುವ ಪ್ರಕಾರ ಆದಷ್ಟು ನಮ್ಮ ದೇಹದ ಉಷ್ಣಾಂಶವನ್ನು ತಗ್ಗಿಸಲು ಬೇಸಿಗೆಯಲ್ಲಿ ಅಲ್ಕಲೈನ್ ಅಂಶ ಹೊಂದಿರುವ ಆಹಾರಗಳನ್ನೇ ಸೇವಿಸಬೇಕಂತೆ . ಹಸಿರು ಎಲೆ ತರಕಾರಿಗಳು , ನೀರಿನಂಶ ಹೆಚ್ಚಿರುವ ತರಕಾರಿ ಹಣ್ಣುಗಳು ಮತ್ತು ಹಣ್ಣಿನ ರಸ ಹೀಗೆ ಇತ್ಯಾದಿ ಆಹಾರಗಳು ಬೇಸಿಗೆಯಲ್ಲಿ ಬೆವರಿನ ರೂಪದಲ್ಲಿ ಹಾವಿಯಾಗುತ್ತಿರುವ ನಮ್ಮ ದೇಹದ ನೀರಿನ ಅಂಶವನ್ನು ಮತ್ತೆ ಸಮತೋಲನಕ್ಕೆ ತರುತ್ತವೆ . ಅವರ ಸಲಹೆಗಳಂತೆ ಬೇಸಿಗೆಗೆ ಕೆಲವೊಂದು ಆಯುರ್ವೇದಿಕ ಟಿಪ್ಸ್ ಗಳನ್ನು ಇಲ್ಲಿ ಕೊಟ್ಟಿರುತ್ತೇವೆ .

ದೇಹದ ಪಿತ್ತದ ಅಂಶವನ್ನು ನಿಯಂತ್ರಣದಲ್ಲಿ ಇಡುವಂತಹ ಆಹಾರಗಳನ್ನೇ ಸೇವಿಸಿ

ದೇಹದ ಪಿತ್ತದ ಅಂಶವನ್ನು ನಿಯಂತ್ರಣದಲ್ಲಿ ಇಡುವಂತಹ ಆಹಾರಗಳನ್ನೇ ಸೇವಿಸಿ

ಮನುಷ್ಯನಿಗೆ ಪಿತ್ತ ಹೆಚ್ಚಾದಂತೆ ಅತಿಸಾರ, ಆಯಾಸ, ತಲೆತಿರುಗುವಿಕೆ, ವಾಕರಿಕೆ, ವಾಂತಿ ಇತ್ಯಾದಿ ಖಾಯಿಲೆಗಳು ಶುರುವಾಗುತ್ತವೆ . ಇವುಗಳನ್ನು ಕಡೆಗಣಿಸಿದ್ದೇ ಆದರೆ , ಮುಂದೆ ಆಸ್ಪತ್ರೆಯ ಬಾಗಿಲು ತಟ್ಟಬೇಕಾಗುತ್ತದೆ . ಹಾಗಾಗಿ ಬೇಸಿಗೆಯಲ್ಲಿ ಮೊದಲು ಪಿತ್ತದ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಎಲ್ಲದಕ್ಕೂ ಕ್ಷೇಮ . ಕಲ್ಲಂಗಡಿ ಹಣ್ಣು , ಸೇಬು ಹಣ್ಣು , ಬೆರ್ರಿ ಹಣ್ಣುಗಳು , ಪಿಯರ್ ( ಪೇರಳೆ ) ಹಣ್ಣುಗಳು , ಒಣದ್ರಾಕ್ಷಿ ಮತ್ತು ಎಲ್ಲಾ ಬಗೆಯ ಹಸಿರು ತರಕಾರಿಗಳು ಬೇಸಿಗೆಗೆ ಅತ್ಯಂತ ಸೂಕ್ತ .

ಆದಷ್ಟು ದೇಹಕ್ಕೆ ತಂಪನ್ನು ಧಾರೆಯೆರೆಯುವ ಆಹಾರಗಳನ್ನೇ ಉಪಯೋಗಿಸಿ

ಆದಷ್ಟು ದೇಹಕ್ಕೆ ತಂಪನ್ನು ಧಾರೆಯೆರೆಯುವ ಆಹಾರಗಳನ್ನೇ ಉಪಯೋಗಿಸಿ

ಬೇಸಿಗೆಯಲ್ಲಿ ನಮ್ಮ ದೇಹ ಹೊರಗಿನ ವಾತಾವರಣಕ್ಕೆ ತಕ್ಕಂತೆ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗಿರುತ್ತದೆ . ಇಲ್ಲವೆಂದರೆ ಅದೇ ನಮ್ಮ ದೇಹದ ತಾಪಮಾನದ ವ್ಯತ್ಯಾಸವಾಗಿ ರೋಗ ರುಜಿನಗಳು ಮೈ ಗಂಟಿಕೊಳ್ಳುತ್ತವೆ . ಯಾವುದೇ ಕಾರಣಕ್ಕೂ ದೇಹದ ಬಿಸಿ ಹೆಚ್ಚು ಮಾಡುವಂತಹ ಆಹಾರ ಬೇಡವೇ ಬೇಡ . ಉದಾಹರಣೆಗೆ ಬೀಟ್ ರೂಟ್ , ಕ್ಯಾರಟ್ , ಬೆಳ್ಳುಳ್ಳಿ , ಮೆಣಸಿನಕಾಯಿ , ಟೊಮೇಟೊ , ಉಪ್ಪಿನ ಅಂಶವಿರುವ ಚೀಸ್ , ಹುಳಿ ಅಂಶವಿರುವ ಕ್ರೀಮ್ ಮತ್ತು ಮಾಂಸಾಹಾರಗಳನ್ನು ಆದಷ್ಟು ಬೇಸಿಗೆ ಮುಗಿಯುವವರೆಗೂ ದೂರವಿಡಿ . ಸಲಾಡ್ ಗಳನ್ನು ಹೆಚ್ಚು ಸೇವಿಸಿ ದ್ರವಾಹಾರಗಳನ್ನು ಯಾವುದೇ ಕಾರಣಕ್ಕೂ ಬಿಡಬೇಡಿ.

ಸಮಯಕ್ಕೆ ಸರಿಯಾಗಿ ತಿನ್ನುವುದನ್ನು ರೂಡಿಸಿಕೊಳ್ಳಿ

ಸಮಯಕ್ಕೆ ಸರಿಯಾಗಿ ತಿನ್ನುವುದನ್ನು ರೂಡಿಸಿಕೊಳ್ಳಿ

ಮನುಷ್ಯ ಎಂದ ಮೇಲೆ ಇಂತಿಷ್ಟೇ ಆಹಾರ ಇಷ್ಟೇ ಗಂಟೆಗೆ ಪ್ರತಿದಿನ ಸೇವಿಸಬೇಕು . ಇಷ್ಟೇ ಗಂಟೆಗಳ ಕಾಲ ನಿದ್ದೆ ಮಾಡಬೇಕು . ಹೀಗೆ ವ್ಯಾಯಾಮ ಮಾಡಬೇಕು ಎಂಬೆಲ್ಲ ನಿಯಮಗಳಿವೆ . ಅದರಂತೆ ನಡೆದರೆ ಖಂಡಿತ ಮನುಷ್ಯ ದೀರ್ಘಾಯುಷಿಯಾಗಿ ಬಾಳುವುದರಲ್ಲಿ ಯಾವುದೇ ಅನುಮಾನವಿಲ್ಲ . ಹಾಗಾಗಿ ಮಿತಾಹಾರಿಯೇ ಆದರೂ ಸರಿ , ಸಮಯಕ್ಕೆ ಸರಿಯಾಗಿ ತಿನ್ನುವುದನ್ನು ರೂಢಿ ಮಾಡಿಕೊಂಡರೆ ಮನುಷ್ಯನ ಜೀರ್ಣಾಂಗವೂ ಚೆನ್ನಾಗಿ ಕೆಲಸ ಮಾಡುತ್ತದೆ . ದೇಹದ ಪಿತ್ತದ ಅಂಶವೂ ನಿಯಂತ್ರಿಸಲ್ಪಡುತ್ತದೆ . ಪಚನ ಶಕ್ತಿಯೂ ಚೆನ್ನಾಗಿರುತ್ತದೆ . ಮನುಷ್ಯನ ಬದುಕು ಆರೋಗ್ಯದಿಂದ ಕೂಡಿರುತ್ತದೆ .

ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆ ಉಪಯೋಗಿಸಿ

ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆ ಉಪಯೋಗಿಸಿ

ಯುಗಾದಿ ಹಬ್ಬದ ದಿನ ಮಾತ್ರ ನಾವು ಎಣ್ಣೆ ಸ್ನಾನ ಮಾಡುತ್ತೇವೆ . ಬೇರೆ ಸಮಯದಲ್ಲಿ ಅದರ ಪರಿವೇ ಇರುವುದಿಲ್ಲ . ಆದರೆ ಸ್ನಾನ ಮಾಡುವಾಗ ಎಣ್ಣೆ ಹಚ್ಚಿ ನಂತರ ಸ್ನಾನ ಮಾಡಿದರೆ ದೇಹಕ್ಕೆ ತುಂಬಾ ಉಪಯೋಗ . ಅದರಲ್ಲೂ ಸ್ನಾನಕ್ಕೆ ಮುಂಚೆ ತೆಂಗಿನ ಎಣ್ಣೆಯನ್ನು ನಿಮ್ಮ ಮೈ ಕೈ ಗೆ ಉಜ್ಜಿಕೊಂಡು ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದ್ದೇ ಆದರೆ , ನಿಮ್ಮ ದೇಹಕ್ಕೆ ತಂಪು . ಮನಸ್ಸಿಗೆ ಹಿತ . ನೀವು ಬೇಕಾದರೆ ತೆಂಗಿನ ಎಣ್ಣೆ ಲಭ್ಯವಿಲ್ಲದ ಪಕ್ಷದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಬೇಕಾದರೂ ಉಪಯೋಗಿಸಬಹುದು .

ಬಿಸಿ ಬಿಸಿ ನೀರು / ಬಿಸಿ ಬಿಸಿ ಕಾಫಿ ಅಥವಾ ಸುಡುವಂತಹ ಚಹಾದಿಂದ ದೂರ ಇರಿ

ಬಿಸಿ ಬಿಸಿ ನೀರು / ಬಿಸಿ ಬಿಸಿ ಕಾಫಿ ಅಥವಾ ಸುಡುವಂತಹ ಚಹಾದಿಂದ ದೂರ ಇರಿ

ಈ ಬಿಸಿಯ ಪದಾರ್ಥಗಳೇ ಹೀಗೆ ದೇಹದ ಉಷ್ಣಾಂಶ ಹೆಚ್ಚಿಸುವುದರ ಜೊತೆಗೆ ಪಿತ್ತ ದೋಷವನ್ನೂ ಜಾಸ್ತಿ ಮಾಡುತ್ತವೆ . ಬಿಸಿ ಟೀ ಕುಡಿದು ಪಿತ್ತ ಜಾಸ್ತಿ ಆಗಿ ತಲೆ ಸುತ್ತು ಬಂದು ಬಿದ್ದರು ಎಂದು ಯಾರ ಬಾಯಲ್ಲಾದರೂ ಕೇಳಿರುತ್ತೇವೆ . ಆದ್ದರಿಂದ ರೂಮ್ ಟೆಂಪರೇಚರ್ ಗೆ ತಕ್ಕಂತೆ ಕಾಫಿ ಅಥವಾ ಚಹಾ ಕುಡಿಯುವುದು ಒಳ್ಳೆಯದು .

ಬೆಳಗ್ಗೆಯ ವ್ಯಾಯಾಮ ಮರೆಯಬೇಡಿ

ಬೆಳಗ್ಗೆಯ ವ್ಯಾಯಾಮ ಮರೆಯಬೇಡಿ

ಮನುಷ್ಯನ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದನ್ನು ಕರಗಿಸುವಂತಹ ವ್ಯಾಯಾಮ . ಮಿತ ಆಹಾರ ನಿಯಮಿತ ವ್ಯಾಯಾಮ ಮನುಷ್ಯನ ದೇಹಕ್ಕೆ ಆರೋಗ್ಯ ಕಾಪಾಡಲು ಅತ್ಯಗತ್ಯ ಎಂದು ಅನೇಕ ದೈಹಿಕ ಆರೋಗ್ಯ ಸಂಬಂಧಿತ ವರದಿಗಳಲ್ಲಿ ಪ್ರಕಟಗೊಂಡಿದೆ . ಬೇಸಿಗೆ ಬಂತು ಎಂದು ವ್ಯಾಯಾಮ ಮಾಡುವುದನ್ನು ಬಿಡುವ ಹಾಗಿಲ್ಲ . ಆದಷ್ಟು ವ್ಯಾಯಾಮದ ಸಮಯವನ್ನು ಬೆಳಗ್ಗೆಗೆ ಬದಲಾಯಿಸಿಕೊಂಡರೆ ಒಳ್ಳೆಯದು . ಏಕೆಂದರೆ ಬೆಳಗಿನ ಸಮಯ ತಂಪಾಗಿರುತ್ತದೆ ಮತ್ತು ವ್ಯಾಯಾಮ ಮಾಡಲು ಯಾವುದೇ ಆಯಾಸ ಆಗುವುದಿಲ್ಲ.

ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಎಣ್ಣೆಗಳು ನಿಮ್ಮ ಬಳಿಯಿದ್ದರೆ ಕ್ಷೇಮ

ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಎಣ್ಣೆಗಳು ನಿಮ್ಮ ಬಳಿಯಿದ್ದರೆ ಕ್ಷೇಮ

ಇದಕ್ಕಾಗಿ ನೀವು ಶ್ರೀ ಗಂಧದ ಎಣ್ಣೆ ಅಥವಾ ಮಲ್ಲಿಗೆ ಎಣ್ಣೆ ಉಪಯೋಗಿಸಿದರೆ ಉತ್ತಮ . ಏಕೆಂದರೆ ಇವು ದೇಹಕ್ಕೆ ತಂಪು ಕೊಡುವುದು ಮಾತ್ರವಲ್ಲದೆ ಬೆವರಿನ ದುರ್ಗಂಧದ ವಾಸನೆಯನ್ನು ದೂರ ಇಡುತ್ತವೆ .

ಐಸ್ ನಂತೆ ಕುಳಗರಿಯುವ ತಂಪಾದ ಪಾನೀಯಗಳನ್ನು ಮುಟ್ಟಲೇಬೇಡಿ

ಐಸ್ ನಂತೆ ಕುಳಗರಿಯುವ ತಂಪಾದ ಪಾನೀಯಗಳನ್ನು ಮುಟ್ಟಲೇಬೇಡಿ

ಬೇಸಿಗೆಯಲ್ಲಿ ತಂಪಾದ ಪಾನೀಯಗಳಿಗೆ ಎಲ್ಲರೂ ಆಸೆ ಪಡುತ್ತಾರೆ ನಿಜ . ಐಸ್ ಕ್ರೀಮ್ , ಕೋಲ್ಡ್ ಡ್ರಿಂಕ್ಸ್ , ತಾಜಾ ಹಣ್ಣಿನ ರಸ , ಕಬ್ಬಿನ ಹಾಲು , ಕೋಲ್ಡ್ ಬಾದಾಮಿ ಹಾಲು ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ . ಇವುಗಳು ಮಾಮೂಲಿನಂತೆ ತಂಪಾಗಿದ್ದರೆ ದೇಹಕ್ಕೂ ಆರೋಗ್ಯಕ್ಕೂ ಬಹಳ ಒಳ್ಳೆಯದು . ಅದು ಬಿಟ್ಟು ತೀರಾ ಕೋಲ್ಡ್ ಇರುವ ಅಂದರೆ ರೆಫ್ರಿಜಿರೇಟರ್ ನಲ್ಲಿ ಇಟ್ಟಿರುವಂತಹ ಐಸ್ ಗಡ್ಡೆಯಂತೆ ತಣ್ಣಗಿರುವ ಪಾನೀಯಗಳನ್ನು ಕುಡಿದದ್ದೇ ಆದರೆ ಖಂಡಿತ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . ಏಕೆಂದರೆ ಇಷ್ಟು ತಂಪಾದ ಆಹಾರಗಳು ಜೀರ್ಣ ಪ್ರಕ್ರಿಯೆಗಳನ್ನು ಮಂದಗತಿಯಲ್ಲಿ ಸಾಗುವಂತೆ ಮಾಡಿ ದೇಹಕ್ಕೆ ಶಕ್ತಿ ಪೂರೈಕೆ ಆಗುವುದನ್ನೇ ತಡೆಯುತ್ತವೆ . ಜೊತೆಗೆ ದೇಹದಲ್ಲಿ ಹಲವಾರು ಕೀಟಾಣುಗಳ ಉತ್ಪತ್ತಿಗೂ ಕಾರಣವಾಗುತ್ತವೆ .

English summary

Ayurvedic tips to keep cool this summer

With the mercury soaring high with each passing day - dehydration, diarrhea, fatigue, dizziness, nausea, vomiting - are becoming too common. According to Ayurveda, summer is the season of pitta, thus it’s important for us to keep our pitta dosha cool in order to not aggravate the symptoms. According to experts, it’s important for us to eat more alkaline foods to fight the heat in our body. Consuming green vegetables, water-rich foods and drinking enough water are of paramount importance during summer.
X
Desktop Bottom Promotion