ದೇಹದ ಪ್ರತಿಯೊಂದು ಅಂಗಾಂಗಗಳ ಕಾರ್ಯವೇನು ಮತ್ತು ಅದು ಯಾವ ರೀತಿ ಕೆಲಸ ಮಾಡುತ್ತೇವೆ ಎಂದು ಬಾಲ್ಯದಿಂದಲೇ ವಿಜ್ಞಾನ ಪುಸ್ತಕಗಳಲ್ಲಿ ಓದಿಕೊಂಡು ಬರುತ್ತಿದ್ದೇವೆ. ದೇಹದ ಪ್ರತಿಯೊಂದು ಭಾಗವು ನಮ್ಮ ದೈನಂದಿನ ಕ್ರಿಯೆಗಳಿಗೆ ಅತೀ ಅಗತ್ಯ. ಇದರಲ್ಲಿ ಯಾವುದೇ ಒಂದು ಅಂಗವು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ ಆಗ ಸಮಸ್ಯೆ ಆಗುವುದು. ಇದರಲ್ಲಿ ಪ್ರಮುಖವಾಗಿ ನರಗಳ ವ್ಯವಸ್ಥೆ. ನರಗಳು ಕೆಲವೊಂದು ಸನ್ನೆಗಳು ಹಾಗೂ ಮಾಹಿತಿ ದೇಹದ ಒಂದು ಭಾಗದಿಂದ ಇತರ ಭಾಗಗಳಿಗೆ ಕಳುಹಿಸುವಂತಹ ಕೆಲಸ ಮಾಡುತ್ತದೆ.
ಇದು ಮಾನಸಿಕ ಹಾಗೂ ದೈಹಿಕವಾಗಿ ಅತೀ ಅಗತ್ಯ. ನರಗಳ ಮೂಲಕ ಹೋದಂತಹ ಸಂಕೇತಗಳೇ ಅತೀ ಸಣ್ಣ ಕೆಲಸ ಮಾಡಿಸುವುದು. ಉದಾಹರಣೆಗೆ ಮೆದುಳು ಜೀರ್ಣಕ್ರಿಯೆಯ ವ್ಯವಸ್ಥೆಗೆ ಜೀರ್ಣಕ್ರಿಯೆ ಆಮ್ಲ ಬಿಡುಗಡೆ ಮಾಡಲು ಸಂಕೇತ ಕಳುಹಿಸುವುದು. ಇದರಿಂದ ನಮಗೆ ಹಸಿವಾಗುವುದು ತಿಳಿಯುವುದು. ಕಾಲುಗಳಿಗೆ ಚಲಿಸಬೇಕೆಂದು ಮೆದುಳು ಸಂಕೇತ ಕಳುಹಿಸಿದಾಗ ಅದು ಎದ್ದು ನಿಂತು ಚಲಿಸಲು ಆರಂಭಿಸುವುದು. ಇದರಿಂದಾಗಿ ನರಗಳ ವ್ಯವಸ್ಥೆಯು ತುಂಬಾ ಸಂಕೀರ್ಣವಾಗಿರುವುದು ಮತ್ತು ಇದರ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಏರುಪೇರಾದರೂ ಅದರಿಂದ ದೊಡ್ಡ ಮಟ್ಟದ ಸಮಸ್ಯೆ ಕಾಡುವುದು.
ನರಗಳಿಗೆ ಹಾನಿಯಾದ ಸಂದರ್ಭದಲ್ಲಿ ಮೆದುಳಿನಿಂದ ದೇಹದ ಇತರ ಭಾಗಗಳಿಗೆ ಸಂಕೇತ ಮತ್ತು ಮಾಹಿತಿ ಹೋಗುವುದಿಲ್ಲ. ಆರೋಗ್ಯ ಸಮಸ್ಯೆ, ಗಾಯಾಳು, ಮೆದುಳಿಗೆ ಹಾನಿ ಇತ್ಯಾದಿಯಿಂದ ನರಗಳಿಗೆ ಹಾನಿ ಸಂಭವಿಸಬಹುದು. ನರಗಳಿಗೆ ಹಾನಿಯಾದ ಬಗ್ಗೆ ಕಾಣಿಸಿಕೊಳ್ಳುವ ಅಸಾಮಾನ್ಯ ಸಂಕೇತಗಳು ಯಾವುದು ಮತ್ತು ಅದನ್ನು ನಾವು ಯಾಕೆ ಕಡೆಗಣಿಸಬಾರದು ಎಂದು ತಿಳಿದುಕೊಳ್ಳುವ...
ಪಿನ್ ಮತ್ತು ಸೂಜಿ ನೋವು
ಏನಾದರೂ ಗಾಯವಾದರೆ ಅಥವಾ ದೇಹದ ಯಾವುದೇ ಭಾಗಕ್ಕೆ ಹೆಚ್ಚಿನ ಶ್ರಮ ಬಿದ್ದರೆ ಆಗ ಕೈಗಳು ಮತ್ತು ಪಾದದಲ್ಲಿ ನೋವು ಕಾಣಿಸಿಕೊಳ್ಳುವುದು. ಯಾವುದೇ ಸರಿಯಾದ ಕಾರಣವಿಲ್ಲದೆ ಮತ್ತು ನಿಯಮಿತವಾಗಿ ನಿಮ್ಮ ಕೈಗಗಳು ಮತ್ತು ಪಾದದಲ್ಲಿ ತೀವ್ರ, ಸೆಳೆಯುವ, ಉರಿಯುವಂತಹ ನೋವು ಕಾಣಿಸಿಕೊಂಡರೆ ಇದು ನರಗಳಿಗೆ ಹಾನಿ ಉಂಟಾಗಿರುವ ಸಂಕೇತವಾಗಿದೆ. ಮೆದುಳು ಮತ್ತು ಚರ್ಮಕ್ಕೆ ಯಾವುದೇ ರೀತಿಯ ಸಂಕೇತಗಳು ಹೋಗದೆ ಇರುವಾಗ ಇಂತಹ ಸಮಸ್ಯೆ ಕಾಣಿಸುವುದು. ಇದನ್ನು ಒಂದು ಬಾಹ್ಯ ನರರೋಗವೆಂದು ಕರೆಯಲಾಗುತ್ತದೆ.
ಮರಗಟ್ಟುವಿಕೆ
ಪಾದಗಳೂ ಮತ್ತು ಕಾಲಿನಲ್ಲಿ ಮರಗಟ್ಟುವಿಕೆಯ ಅನುಭವವಾದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣಗಳಾಗಿವೆ. ನರಗಳಿಗೆ ಹಾನಿಯಾದರೆ ಅದರಿಂದ ಮರಗಟ್ಟುವಿಕೆ ಉಂಟಾಗುವುದು. ಇದರಿಂದ ದೇಹದ ಒಂದು ಭಾಗದಲ್ಲಿ ಸ್ಪರ್ಶಜ್ಞಾನ ಇಲ್ಲವಾಗುವುದು. ಇದು ಮೊದಲಿಗೆ ಪಾದ ಮತ್ತು ಕೈಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ದೇಹದ ಇತರ ಭಾಗಗಳಿಗೆ ಕೂಡ ಹರಡುವುದು.
ಸಮತೋಲ ಕಳೆದುಕೊಳ್ಳುವುದು
ಜ್ವರ, ತುಂಬಾ ಬಳಲಿರುವಾಗ, ನಿಶ್ಯಕ್ತಿ ಕಾಡಿದಾಗ ನಮ್ಮ ದೇಹದ ಸಮತೋಲನ ಕಳೆದುಕೊಳ್ಳುವುದು. ಆದರೆ ಈ ಕಾರಣಗಳು ಯಾವುದೂ ಇಲ್ಲದೆ ಕೂಡ ನೀವು ಸಮತೋಲನ ಕಳೆದುಕೊಂಡರೆ, ಬಿದ್ದು ಗಾಯಗಳು ಆಗುತ್ತಲಿದ್ದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣಗಳಾಗಿವೆ. ಇಂತಹ ಘಟನೆಗಳನ್ನು ತಪ್ಪಿಸಲು ತಕ್ಷಣ ವೈದ್ಯರನ್ನು ಭೇಟಿಯಾಗಿ.
ಸ್ನಾಯುಗಳು ದುರ್ಬಲ
ಸ್ವಲ್ಪ ಚಟುವಟಿಕೆ ಮಾಡಿದರೂ ಸ್ನಾಯುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಂಡರೆ ಇದು ಸ್ನಾಯುಗಳು ದುರ್ಬಲವಾಗುವುದರ ಲಕ್ಷಣವಾಗಿದೆ. ಮೆದುಳು ಮತ್ತು ಸ್ನಾಯುಗಳ ಗುಂಪಿನ ನಡುವಿನ ಸಂಕೇತದ ಮೇಲೆ ಪರಿಣಾಮ ಬಿದ್ದಾಗ ಸ್ನಾಯುಗಳ ಗುಂಪು ದುರ್ಬಲವಾಗುವುದು. ಇದರಿಂದಾಗಿ ದೈನಂದಿನ ಚಟುವಟಿಕೆಗಳಾದ ನಡೆಯುವುದು ಮತ್ತು ಚಲಿಸುವುದು ಕೂಡ ಕಷ್ಟವಾಗುವುದು. ಸ್ನಾಯುಗಳ ದುರ್ಬಲತೆಯಿಂದ ಕೆಲವೊಂದು ಸಂದರ್ಭಗಳಲ್ಲಿ ಸ್ನಾಯುಗಳ ನಿಯಂತ್ರಣ ತಪ್ಪುವುದು.
ಸೆಳೆತ
ತುಂಬಾ ಕಠಿಣ ಕೆಲಸ ಮತ್ತು ವ್ಯಾಯಾಮದಿಂದ ಸ್ನಾಯುಗಳಲ್ಲಿ ಊತ ಕಂಡುಬಂದರೆ ಅಥವಾ ನಿರ್ಜಲೀಕರಣವಾದರೆ ಆಗ ಒಂದೆರಡು ದಿನ ಸ್ನಾಯು ಸೆಳೆತವಾಗುವ ಸಾಮಾನ್ಯ ಅನುಭವವಾಗುವುದು. ಆದರೆ ನಿಯಮಿತವಾಗಿ ಸ್ನಾಯುಗಳಲ್ಲಿ ಜುಮ್ಮೆನ್ನುವ ಸಂವೇದನೆಯೊಂದಿಗೆ ಸೆಳೆತ ಕಾಣಿಸಿಕೊಂಡರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣವಾಗಿರುವುದು.
ಅಸಾಮಾನ್ಯ ಎದೆಬಡಿತ
ಓಡಿದಾಗ, ವ್ಯಾಯಾಮ ಮಾಡಿದಾಗ, ಭಯಭೀತರಾದಾಗ ಅಥವಾ ತುಂಬಾ ಅಚ್ಚರಿಗೊಳಗಾದಾಗ ನಮ್ಮ ಎದೆಬಡಿತ ಹೆಚ್ಚಾಗುವುದು ಸಾಮಾನ್ಯ. ಅದಾಗ್ಯೂ ನೀವು ತುಂಬಾ ತೀವ್ರ ಎದೆಬಡಿತ ಅಥವಾ ಅತೀ ನಿಧಾನ ಎದೆಬಡಿತದ ಅನುಭವವಾಗಿ ಅಯಾಸವಾದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣವಾಗಿದೆ. ಮೆದುಳು ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ಸರಿಯಾದ ಸಂಕೇತ ಕಳುಹಿಸದೇ ಇರುವುದು ಇದರ ಲಕ್ಷಣವಾಗಿದೆ.
ತಲೆತಿರುಗುವಿಕೆ
ನಿಯಮಿತವಾಗಿ ನಿಮಗೆ ತಲೆಭಾರವಾಗುವುದು ಅಥವಾ ತಲೆತಿರುಗುವಿಕೆ ಕಂಡುಬಂದರೆ ಇದು ನಿರ್ಜಲೀಕರಣ, ದೀರ್ಘಕಾಲದ ಆಯಾಸ, ಮೆದುಳಿನ ಗಡ್ಡೆ, ರಕ್ತಹೀನತೆ ಇತ್ಯಾದಿಗಳಲ್ಲಿ ಯಾವುದಾದರೂ ಒಂದರ ಸಮಸ್ಯೆಯಾಗಿರಬಹುದು. ಎಲ್ಲಾ ರೀತಿಯ ಪರೀಕ್ಷೆ ಮಾಡಿಸಿಕೊಂಡಿದ್ದರೂ ಇನ್ನು ಕೂಡ ಆಯಾಸ ಪರಿಹಾರವಾಗುತ್ತಿಲ್ಲವೆಂದಾದರೆ ಆಗ ಇದು ನರಗಳಿಗೆ ಹಾನಿಯಾಗಿರುವ ಲಕ್ಷಣವೆಂದು ಹೇಳಬಹುದು.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
8 ಗಂಟೆ ನಿದ್ದೆ ಮಾಡಿದ್ರೂ ಇನ್ನೂ ಸುಸ್ತಾದಂತಾಗುತ್ತಾ ?
ಲಿಂಬೆಸಿಪ್ಪೆ-ಸಂಧಿವಾತದ ಚಿಕಿತ್ಸೆ ಹಾಗೂ ಇತರ ಪ್ರಯೋಜನಗಳು
ಯಾವ್ಯಾವ ಹಣ್ಣಿನ ಜ್ಯೂಸ್ಗಳು ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಡಿಟೇಲ್ಸ್
ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವಿಸುವುದು ಆರೋಗ್ಯಕರವೇ?
ಶೀತ-ಕೆಮ್ಮಿನಿಂದ ರಕ್ಷಣೆ ನೀಡುತ್ತವೆ ಈ ಅದ್ಭುತ ಹತ್ತು ಸರಳ ಟ್ರಿಕ್ಸ್
ಕರಬೂಜ ಹಣ್ಣು ತಿಂದ್ರೆ, ಈ 15 ಆರೋಗ್ಯಕಾರಿ ಲಾಭಗಳು ಪಡೆಯಬಹುದು
ಕದ್ದುಮುಚ್ಚಿ ಬ್ಲೂ ಫಿಲಂ ನೋಡುತ್ತಿದ್ದೀರಾ? ಹಾಗಾದರೆ ಇಂದೇ ನಿಲ್ಲಿಸಿ! ಯಾಕೆ ಗೊತ್ತೇ?
ನಿಮ್ಮ ಹಲ್ಲುಗಳನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದಾದ 5 ವಿಧಾನಗಳು
ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದೀರೇ? ಹಾಗಾದ್ರೆ ಸೇವಿಸುವ ಆಹಾರ ಹೀಗಿರಲಿ…
ಆರೋಗ್ಯ ಟಿಪ್ಸ್: ಕ್ಯಾನ್ಸರ್ನ್ನು ನಿಯಂತ್ರಿಸುವ ಪವರ್ ಈ ತರಕಾರಿಗಳಲ್ಲಿದೆ!
ದೇಹದ ಲಿವರ್ನ ಆರೋಗ್ಯಕ್ಕೆ ಪವರ್ ಫುಲ್ ಆಹಾರಗಳು
ಏಲಕ್ಕಿ ನೀರನ್ನು ಒಂದು ವಾರ ಕುಡಿಯಿರಿ-ಪರಿಣಾಮ ಗಮನಿಸಿ
ಈಗೆಲ್ಲಾ ಸಮಸ್ಯೆ ಬಂದರೆ, ನಾಚಿಕೆ ಮಾಡಿಕೊಳ್ಳಬೇಡಿ! ಕೂಡಲೇ ವೈದ್ಯರಿಗೆ ತೋರಿಸಿ...
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಈ ಶಾಸಕರ ವಿರುದ್ಧ ಮಹಿಳಾ ದೌರ್ಜನ್ಯ ಕೇಸ್ ಗಳಿವೆ!
ಮತ ಹಾಕಿ ಉಚಿತ ಇಂಟರ್ ನೆಟ್ ಸೇವೆ ಪಡೆಯಿರಿ
ಕರ್ನಾಟಕ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ