Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳ್ಳುಳ್ಳಿ ಎಷ್ಟು ಉಪಕಾರಿಯೋ, ಅಷ್ಟೇ ಅಪಾಯಕಾರಿಯೂ ಕೂಡ!
ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ತಿನ್ನುವುದರಿಂದ ಕೆಲವಾರು ಲಾಭಗಳಿವೆ ಸರಿ, ಆದರೆ ಇದರಿಂದ ಕೆಲವು ಗಂಭೀರವಾದ ಅಡ್ಡ ಪರಿಣಾಮಗಳೂ ಇವೆ ಎಂದು ಇದಕ್ಕೂ ಮುನ್ನ ನಿಮಗೆ ಗೊತ್ತಿತ್ತೇ? ಇದರರ್ಥ ಬೆಳ್ಳುಳ್ಳಿ ಅನಾರೋಗ್ಯಕರ ಎಂದು ಸರ್ವಥಾ ಅಲ್ಲ. ಆದರೆ ಈ ಪ್ರಮಾಣ ಹೆಚ್ಚಾದರೆ ಮಾತ್ರ ಈ ಅಡ್ಡಪರಿಣಾಮಗಳೂ ಹೆಚ್ಚಾಗುತ್ತದೆ ಹಾಗೂ ಕೆಲವು ಆರೋಗ್ಯಕ್ಕೇ ಮಾರಕವಾಗಬಹುದು. ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಹೆಚ್ಚಾಗಿ ಉಪಯೋಗಿಸಲ್ಪಡುವ ಸಾಂಬಾರ ಪದಾರ್ಥವಾಗಿದೆ. ಇದರ ಬಳಕೆ ಕೇವಲ ಅಡುಗೆಗೆ ಸೀಮಿತವಾಗಿಲ್ಲ, ಹಲವು ಮನೆಮದ್ದುಗಳಲ್ಲಿಯೂ ಬೆಳ್ಳುಳ್ಳಿಯನ್ನು ಉಪಯೋಗಿಸಲಾಗುತ್ತದೆ.
ಬೆಳ್ಳುಳ್ಳಿಯಲ್ಲಿ ಸೆಲೆನಿಯಂ, ಕಬ್ಬಿಣ, ಅಯೋಡಿನ್, ಗಂಧಕ ಮೊದಲಾದ ಹಲವಾರು ಅವಶ್ಯಕ ಖನಿಜಗಳಿವೆ. ಇವು ಕೆಲವಾರು ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದೊತ್ತಡ ಕಡಿಮೆಗೊಳಿಸುವುದು, ಕೊಲೆಸ್ಟ್ರಾಲ್ ಮಟ್ಟ ಸರಿಪಡಿಸುವುದು, ಸೋಂಕುಗಳ ವಿರುದ್ದ ಹೋರಾಡುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮೊದಲಾದವುಗಳ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕಾದರೆ ಬೆಳ್ಳುಳ್ಳಿಯ ಪ್ರಮಾಣ ಮಿತವಾಗಿರಬೇಕು. ಒಂದು ವೇಳೆ ಈ ಪ್ರಮಾಣ ಹೆಚ್ಚಿದರೆ ಇದರ ಅಡ್ಡಪರಿಣಾಮಗಳೇ ಪ್ರಯೋಜನಗಳನ್ನೆಲ್ಲಾ ನುಂಗಿ ಹಾಕಿ ಔಷಧಿರೂಪದ ಬೆಳ್ಳುಳ್ಳಿ ವಿಷದ ರೂಪ ಪಡೆಯುತ್ತದೆ.ಬನ್ನಿ, ಬೆಳ್ಳುಳ್ಳಿಯ ಅತಿಯಾದ ಸೇವನೆಯಿಂದ ಯಾವ ಅಡ್ಡಪರಿಣಾಮಗಳಿವೆ ಎಂಬುದನ್ನು ನೋಡೋಣ....

ಯಕೃತ್ಗೆ ಹಾನಿ ಎಸಗಬಹುದು
ಅತಿಯಾದ ಬೆಳ್ಳುಳ್ಳಿ ಸೇವನೆಯಿಂದ ಯಕೃತ್ ಗೆ ಘಾಸಿಯಾಗಬಹುದು. ಯಕೃತ್ ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗವಾಗಿದೆ. ಭಾರತದಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ಬೆಳ್ಳುಳ್ಳಿಯ ಅತಿಯಾದ ಸೇವನೆಯಿಂದ ಯಕೃತ್ ನಲ್ಲಿ ವಿಷಕಾರಿ ಅಂಶಗಳ ಸಂಗ್ರಹ ಹೆಚ್ಚುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಅತಿಸಾರ
ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇದರ ಅಡ್ಡಪರಿಣಾಮವಗಿ ಅತಿಸಾರ ಎದುರಾಗಬಹುದು. ಕೆಲವು ವ್ಯಕ್ತಿಗಳಲ್ಲಿ ಬೆಳ್ಳುಳ್ಳಿ ವಾಯುಪ್ರಕೋಪವನ್ನು ಉಂಟುಮಾಡಬಹುದು ಹಾಗೂ ಇದರ ಮೂಲಕ ಅತಿಸಾರ ಎದುರಾಗಬಹುದು.

ವಾಕರಿಕೆ, ವಾಂತಿ ಹಾಗೂ ಎದೆಯುರಿ:
ರಾಷ್ಟ್ರೀಯ ಕ್ಯಾನ್ಸರ್ ವಿದ್ಯಾಸಂಸ್ಥೆಯ ಪ್ರಕಾರ ಹಸಿಬೆಳ್ಳುಳ್ಳಿಯನ್ನು ಅಥವಾ ಬೆಳ್ಳುಳ್ಳಿ ಎಣ್ಣೆಯನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಎದೆಯುರಿ, ವಾಕರಿಕೆ ಹಾಗೂ ವಾಂತಿ ಎದುರಾಗುತ್ತದೆ. ಅಲ್ಲದೇ, ಹಾರ್ವರ್ಡ್ ವೈದ್ಯಕೀಯ ಶಾಲೆಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಬೆಳ್ಳುಳ್ಳಿ ಸೇವನೆಯಿಂದ ಜಠರಗರುಳಿನ ಹಿಮ್ಮರಳುವಿಕೆ (gastroesophageal reflux) ಎಂಬ ತೊಂದರೆಯೂ ಎದುರಾಗಬಹುದು.

ರಕ್ತಸ್ರಾವವನ್ನು ಹೆಚ್ಚಿಸಬಹುದು
ಒಂದು ವೇಳೆ ನೀವು ರಕ್ತವನ್ನು ತಿಳಿಗೊಳಿಸುವ ಔಷಧಿಗಳನ್ನು ಸೇವಿಸುತ್ತಿದ್ದರೆ ನಿಮಗೆ ಬೆಳ್ಳುಳ್ಳಿ ಸರ್ವಥಾ ಸಲ್ಲದು ಎಂದು ಮೇರಿಲ್ಯಾಂಡ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯದ ವರದಿಯೊಂದು ತಿಳಿಸಿದೆ. ಏಕೆಂದರೆ ಬೆಳ್ಳುಳ್ಳಿಯ ಸೇವನೆಯಿಂದ ರಕ್ತಸ್ರಾವದ ಸಾಧ್ಯತೆ ಹೆಚ್ಚುತ್ತದೆ ಹಾಗೂ ಒಂದು ವೇಳೆ ನೀವು ಈಗಾಗಲೇ ಶಸ್ತ್ರಕ್ರಿಯೆಗೆ ಒಳಗಾಗಿದ್ದರೆ ಕನಿಷ್ಠ ಎರಡು ವಾರಗಳವರೆಗಾದರೂ ಬೆಳ್ಳುಳ್ಳಿಯನ್ನು ಸೇವಿಸಬಾರದು.

ವಾಯುಪ್ರಕೋಪ ಎದುರಾಗಬಹುದು
ಬೆಳ್ಳುಳ್ಳಿಯನ್ನು ಹಸಿಯಾಗಿ ಹೆಚ್ಚುಪ್ರಮಾಣದಲ್ಲಿ ಸೇವಿಸಿದರೆ ಇದರ ಅಡ್ಡಪರಿಣಾಮವಾಗಿ ವಾಯುಪ್ರಕೋಪ ಎದುರಾಗಬಹುದು. ಜೀರ್ಣಕ್ರಿಯೆಯಲ್ಲಿ ಬೆಳ್ಳುಳ್ಳೀ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಇದರ ಪ್ರಮಾಣ ಹೆಚ್ಚಾದರೆ ಜೀರ್ಣಕ್ರಿಯೆಯನ್ನೇ ಬಾಧಿಸಬಹುದು. ಆದ್ದರಿಂದ ಹಸಿಯಾಗಿ ಸೇವಿಸುವಾಗ ಬೆಳ್ಳುಳ್ಳಿಯ ಪ್ರಮಾಣ ಮಿತವಾಗಿರಬೇಕು.

ತಲೆಸುತ್ತುವಿಕೆ ಎದುರಾಗಬಹುದು
ಕೆಲವು ವ್ಯಕ್ತಿಗಳಲ್ಲಿ ಬೆಳ್ಳುಳ್ಳಿಯ ಸೇವನೆಯ ಬಳಿಕ ತಲೆಸುತ್ತುವಿಕೆ ಕಂಡುಬರಬಹುದು. ತಜ್ಞರ ಪಕಾರ ಹಸಿ ಬೆಳ್ಳುಳ್ಳಿಯ ಪ್ರಮಾಣ ಹೆಚ್ಚಿದರೆ ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕಿಳಿಯಬಹುದು. ಆದ್ದರಿಂದ ರಕ್ತದೊತ್ತಡ ಸಾಮಾನ್ಯಕ್ಕಿಂತಲೂ ಕಡಿಮೆ ಇರುವ ವ್ಯಕ್ತಿಗಳಿಗೆ ಹಸಿಬೆಳ್ಳುಳ್ಳಿ ಸಲ್ಲದು.

ಚರ್ಮ ಕೆಂಪಗಾಗಿಸಬಹುದು
ಒಂದು ವೇಳೆ ಹಸಿ ಬೆಳ್ಳುಳ್ಳಿಯ ಪ್ರಮಾಣ ಹೆಚ್ಚಾದರೆ ಇದು ಚರ್ಮದಲ್ಲಿ ತುರಿಕೆಯುಂಟುಮಾಡಿ ಕೆಲವೆಡೆ ಚರ್ಮವನ್ನು ಕೆಂಪಗಾಗಿಸಬಹುದು. ಇದಕ್ಕೆ ಬೆಳ್ಳುಳ್ಳಿಯಲ್ಲಿರುವ ಅಲೈಯಿನ್ ಲೈಸ್ ಎಂಬ ಕಿಣ್ವವೇ ಕಾರಣವಾಗಿದೆ. ಇದು ಚರ್ಮದಲ್ಲಿ ಅಲರ್ಜಿಯ ಮೂಲಕ ತುರಿಕೆಯುಂಟು ಮಾಡಬಹುದು.

ತಲೆನೋವು
ಕೆಲವು ವೇಳೆ ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ತಕ್ಷಣವೇ ಮೈಗ್ರೇನ್ ತಲೆನೋವಿಗೆ ಪ್ರಚೋದನೆ ದೊರಕಬಹುದು. ತಲೆನೋವಿಗೆ ಮೂಲವಾಗಿರುವ trigeminal ಎಂಬ ನರಕ್ಕೆ ಬೆಳ್ಳುಳ್ಳಿಯ ಪೋಷಕಾಂಶಗಳು ಪ್ರಚೋದನೆ ನೀಡುವ ಮೂಲಕ ಮೆದುಳಿನ ಪದರಕ್ಕೆ ನೋವಿನ ಸಂವೇದನೆ ನೀಡುವ ಕಣಗಳು ತಲೆನೋವಿಗೆ ಕಾರಣವಾಗುತ್ತದೆ.

ದೃಷ್ಟಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು
ಒಂದು ವೇಳೆ ಹಸಿ ಬೆಳ್ಳುಳ್ಳಿಯ ಸೇವನೆ ಅತಿಯಾದರೆ ಇದು ಹೈಫೀಮಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಈ ಸ್ಥಿತಿಯಲ್ಲಿ ಕಣ್ಣಿನ ಒಳಭಾಗದಲ್ಲಿ ರಕ್ತಸ್ರಾವವಾಗಬಹುದು. ಕಣ್ಣಿನ ಗುಡ್ಡೆಯ ಒಳಭಾಗದಲ್ಲಿ ರಕ್ತಸ್ರಾವವಾದರೆ ಇದು ದೃಷ್ಟಿಯನ್ನು ಮಂದವಾಗಿಸುವುದು ಮಾತ್ರವಲ್ಲ, ಕುರುಡುತನವನ್ನೂ ಎದುರಿಸಬೇಕಾಗಬಹುದು. ಬೆಳ್ಳುಳ್ಳಿಯ ಅಡ್ಡಪರಿಣಾಮಗಳಲ್ಲಿ ಇದು ಅತಿ ಘೋರವಾದ ಅಡ್ಡಪರಿಣಾಮವಾಗಿದೆ.

ಗರ್ಭಿಣಿಯರಿಗೆ ಸಲ್ಲದು
ಹಸಿಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರು ಸೇವಿಸಿದರೆ ಇದು ಗರ್ಭಕ್ಕೂ ಮಾರಕವಾಗಬಲ್ಲುದು. ಆದ್ದರಿಂದ ಗರ್ಭಿಣಿಯರು ಹಾಗೂ ಹಾಲೂಡಿಸುತ್ತಿರುವ ತಾಯಂದಿರು ಬೆಳ್ಳುಳ್ಳಿಯ ಸೇವನೆಯಿಂದ ದೂರವಿರಬೇಕು. ಗರ್ಭಿಣಿಯರಿಗೆ ಇದು ಹೆರಿಗೆಯ ದಿನವನ್ನು ಹಿಂದೆ ತರುವ ಸಾಧ್ಯತೆಯೂ ಇದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.



Click it and Unblock the Notifications