Just In
- 3 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 4 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 4 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಪಟೈಟಿಸ್ ಬಿ ಎಂಬ ಮೌನ ಹಂತಕ-ಇರಲಿ ಎಚ್ಚರ!
ದೇವರು ಸೃಷ್ಟಿಸಿರುವ ಮಾನವ ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಗಳು ತುಂಬಾ ಸೂಕ್ಷ್ಮವೆನ್ನಬಹುದು. ಇದರ ಮರುಸೃಷ್ಟಿ ಅಸಾಧ್ಯವಾದರೂ ವೈದ್ಯಕೀಯ ಲೋಕದಲ್ಲಿ ಕೆಲವೊಂದು ಅಂಗಾಂಗಗಳನ್ನು ಮರುಸೃಷ್ಟಿ ಮಾಡಲು ಪ್ರಯತ್ನಿಸಲಾಗುತ್ತಾ ಇದೆ. ಕೆಲವು ಯಶಸ್ವಿಯಾದರೂ ಇನ್ನು ಕೆಲವು ಪ್ರಯತ್ನದ ಮಟ್ಟದಲ್ಲಿಯೇ ಇದೆ.
ದೇಹದಲ್ಲಿ ನಾವು ಹುಟ್ಟಿದಾಗಿನಿಂದ ಸಾಯುವ ತನಕ ವಿಶ್ರಾಂತಿಯಿಲ್ಲದ ಬಡಿದುಕೊಳ್ಳುವ ಹೃದಯ, ಕೋಟ್ಯಂತರ ಸಂವೇದನೆಗಳನ್ನು ಅರ್ಥಮಾಡಿಕೊಂಡು ದೇಹವನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮೆದುಳು ದೇಹದ ಅತೀ ಸೂಕ್ಷ್ಮ ಅಂಗಾಂಗಗಳು. ಅದೇ ರೀತಿ ಯಕೃತ್ ಕೂಡ ಪ್ರಮುಖ ಭಾಗವಾಗಿದೆ.
ಮಾರಕ ಕಾಯಿಲೆ 'ಹೆಪಟೈಟಿಸ್' ಬಗ್ಗೆ ಎಚ್ಚರ ಅತ್ಯಗತ್ಯ
ಯಕೃತ್ನ ಆರೋಗ್ಯ ಚೆನ್ನಾಗಿದ್ದರೆ ದೇಹವು ಆರೋಗ್ಯವಾಗಿರುವುದು. ಯಕೃತ್ ರಕ್ತದಲ್ಲಿರುವ ಸಕ್ಕರೆ, ಪ್ರೋಟೀನ್ ಮತ್ತು ಕೊಬ್ಬನ್ನು ನಿಯಂತ್ರಿಸಿ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಇದು ಸ್ರವಿಸುವಂತಹ ಬಿಲಿರುಬಿನ್ ಕೆಂಪುರಕ್ತದ ಕಣಗಳನ್ನು ವಿಭಜಿಸುವುದು. ಕರುಳು ಹೀರಿಕೊಳ್ಳುವಂತಹ ಕೆಲವೊಂದು ಪೋಷಕಾಂಶಗಳನ್ನು ಯಕೃತ್ ಸಂಸ್ಕರಿಸುತ್ತದೆ ಮತ್ತು ದೇಹವು ಅದನ್ನು ಬಳಸಿಕೊಳ್ಳುತ್ತದೆ. ರಕ್ತ ಹೆಪ್ಪುಗಟ್ಟುವಂತಹ ಅಂಶವೊಂದನ್ನು ಬಿಡುಗಡೆ ಮಾಡುತ್ತದೆ. ಯಕೃತ್ ನ ಆರೋಗ್ಯ ಸರಿಯಾಗಿಲ್ಲದೆ ಇದ್ದರೆ ಹಲವಾರು ರೀತಿಯ ಅನಾರೋಗ್ಯಗಳು ಕಾಣಿಸಿಕೊಳ್ಳಬಹುದು.
ಇಂತಹ ರೋಗಗಳಲ್ಲಿ ಪ್ರಮುಖವಾಗಿ ಹೆಪಟೈಟಿಸ್ ಬಿ ತುಂಬಾ ಅಪಾಯಕಾರಿ ಕಾಯಿಲೆ. ಹೆಪಟೈಟಿಸ್ ಬಿ ಯ ವೈರಸ್ ನೇರವಾಗಿ ಯಕೃತ್ ಮೇಲೆ ದಾಳಿ ಮಾಡಬಹುದು. ಇದು ಯಕೃತ್ನಲ್ಲಿ ಉರಿಯೂತ ಉಂಟು ಮಾಡಿ ಸಮಸ್ಯೆ ಸೃಷ್ಟಿಸುವುದು. ಯಕೃತ್ ನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ ಮತ್ತು ಹೆಪಟೈಟಿಸ್ ಬಿ ಯನ್ನು ತಡೆಯುವುದು ಹೇಗೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....
ಆರೋಗ್ಯಕರ, ನಾರಿನಾಂಶ ಹೆಚ್ಚಿರುವ ಆಹಾರ
ಯಕೃತ್ನ ಆರೋಗ್ಯ ಕಾಪಾಡುವ ಪ್ರಮುಖ ವಿಧಾನವೆಂದರೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು. ಅತಿಯಾದ ತೂಕವು ಯಕೃತ್ ನ ಮೇಲೆ ಒತ್ತಡ ಹಾಕುವುದು. ಅತಿಯಾದ ತೂಕವೆಂದರೆ ಅತಿಯಾದ ಕೊಬ್ಬು ಎಂದರ್ಥ. ಇದರಿಂದ ಸಿರೋಸಿಸ್ ನಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆರೋಗ್ಯಕರ, ನಾರಿನಾಂಶ ಅಧಿಕವಾಗಿರುವಂತಹ ಆಹಾರ ಸೇವಿಸುವುದು ಮತ್ತು ದೇಹದ ತೂಕ ನಿಯಂತ್ರಣದಲ್ಲಿಡುವುದು ಯಕೃತ್ ನ ಆರೋಗ್ಯಕ್ಕೆ ತುಂಬಾ ಸಹಕಾರಿ.
ಆಲ್ಕೋಹಾಲ್ ಸೇವನೆ ಕಡಿಮೆಗೊಳಿಸುವುದು
ಆಲ್ಕೋಹಾಲ್ ಸೇವನೆ ಮಾಡುವುದರಿಂದ ಅದು ನೇರವಾಗಿ ಯಕೃತ್ ನ ಮೇಲೆ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಯಕೃತ್ ನ ಕೋಶಗಳಿಗೆ ಹಾನಿಗೊಳಿಸಿ ಅದು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡುವುದು. ಈ ಸಮಯದಲ್ಲಿ ಯಕೃತ್ ಸಂಪೂರ್ಣವಾಗಿ ಕೆಟ್ಟು ಹೋಗಿ ಯಕೃತ್ ನ ಕಸಿ ಅಂತಿಮ ದಾರಿಯಾಗಬಹುದು. ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿದರೆ ಅದರಿಂದ ಯಕೃತ್ ನ ಆರೋಗ್ಯ ಒಳ್ಳೆಯದಾಗಿ ಹೆಪಟೈಟಿಸ್ ಬಿಯನ್ನು ತಡೆಯಬಹುದು.
ಧೂಮಪಾನ ತ್ಯಜಿಸಿ
ಧೂಮಪಾನದಿಂದ ಶ್ವಾಸಕೋಶ ಮತ್ತು ದೇಹದ ಪ್ರತಿರೋಧಕ ಶಕ್ತಿಯು ಕುಂದುವುದು. ಇದರಿಂದ ಯಾವುದೇ ಸೋಂಕು ದೇಹವನ್ನು ಬೇಗನೆ ಕಾಡಬಹುದು. ಪ್ರತಿರೋಧಕ ಶಕ್ತಿಯು ತುಂಬಾ ದುರ್ಬಲವಾಗಿದ್ದರೆ ದೇಹವು ಯಾವುದೇ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಯಕೃತ್ ನ ಆರೋಗ್ಯ ಮತ್ತು ಹೆಪಟೈಟಿಸ್ ಬಿ ಬರದಂತೆ ತಡೆಯಲು ಧೂಮಪಾನ ತ್ಯಜಿಸಿ.
ನಿಯಮಿತ ವ್ಯಾಯಾಮ
ಆರೋಗ್ಯಕರ ಆಹಾರದೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡಿದರೆ ಯಕೃತ್ ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವ್ಯಾಯಾಮ ಮಾಡಿದರೆ ಅತಿಯಾಗಿ ತೂಕ ಹೆಚ್ಚಿಸಿಕೊಳ್ಳುವುದನ್ನು ತಡೆಯಬಹುದು. ಇದರಿಂದ ಯಕೃತ್ ಆರೋಗ್ಯವಾಗಿರುವುದು.
ಅತಿಯಾದ ಔಷಧಿ ಅಥವಾ ಸ್ವ ಔಷಧಿ ತೆಗೆದುಕೊಳ್ಳಬೇಡಿ
ಇದು ತುಂಬಾ ಅಪಾಯಕಾರಿಯೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಅನಾರೋಗ್ಯ ಕಾಡಿದಾಗ ಎಷ್ಟು ಮಟ್ಟದ ಔಷಧಿ ಬೇಕೆಂದು ನಮಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ಹೆಚ್ಚಿನ ನೋವು ನಿವಾರಕ ಔಷಧಿಗಳಲ್ಲಿ ರಕ್ತವನ್ನು ತೆಳುವಾಗಿಸುವ ಅಂಶವಿದೆ. ಇದನ್ನು ಅತಿಯಾಗಿ ಸೇವಿಸಿದರೆ ರಕ್ತವು ತೆಳುವಾಗಿ ಅಧಿಕ ರಕ್ತದೊತ್ತಡ ಉಂಟಾಗಬಹುದು ಮತ್ತು ಹೆಚ್ಚು ರಕ್ತ ಸ್ರವಿಸಬಹುದು.