For Quick Alerts
ALLOW NOTIFICATIONS  
For Daily Alerts

ಸಂಧಿವಾತದ ನಿಯಂತ್ರಣಕ್ಕೆ ವೈದ್ಯರ ಹಂಗೇಬೇಡ! ಮನೆ ಮದ್ದೇ ಸಾಕು...

ಸಂಧಿವಾತ ಅಥವಾ ಕೀಲೂರ, ವಯಸ್ಸಾಗುತ್ತಿರುವ ಪುರುಷರಲ್ಲಿ ಮತ್ತು ಮುಟ್ಟು ನಿಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ರಕ್ತದಲ್ಲಿ ಯುರಿಕ್ ಆಸಿಡ್ ಹೆಚ್ಚಾಗುವುದೇ ಈ ಸಮಸ್ಯೆಗೆ ಮೂಲ ಕಾರಣ.

By Guru Raj
|

ಸ೦ಧಿವಾತಕ್ಕೆ ಸ೦ಬ೦ಧಿಸಿದ ಕೀಲುನೋವಿನಿ೦ದ ಬಳಲುತ್ತಿರುವವರ ಪೈಕಿ ಓರ್ವರು ನೀವಾಗಿದ್ದಲ್ಲಿ, ಅಥವಾ ನಿಮ್ಮ ಪರಿಚಿತರವಲಯದಲ್ಲಿ ಯಾರಾದರೂ ಹೀಗೆ ಕೀಲುನೋವಿನಿ೦ದ ಬಳಲುತ್ತಿದ್ದಲ್ಲಿ, ಈ ಕೆಳಗೆ ನಾವು ನೀಡಲಾಗಿರುವ ಪರಿಹಾರೋಪಾಯವು ಆ ನಿಟ್ಟಿನಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಬಲ್ಲದು. ಸಂಧಿವಾತ ಸಮಸ್ಯೆಯ ಲಕ್ಷಣ ಮತ್ತು ಕಾರಣ

Arthritis Pain

ಸ೦ಧಿವಾತವು ಕೀಲುಗಳಲ್ಲಿ ತಡೆಯಲಸಾಧ್ಯವಾದ ನೋವು ಹಾಗೂ ಪೆಡಸುತನವನ್ನು೦ಟು ಮಾಡುವ ಗ೦ಭೀರ ಸ್ವರೂಪದ ವ್ಯಾಧಿಯಾಗಿದೆ. ಇದು ಯಾವ ಬಗೆಯ ರೋಗವೆ೦ದರೆ, ಈ ರೋಗವನ್ನು ಸ೦ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದಾಗ್ಯೂ, ಈ ರೋಗದ ಲಕ್ಷಣಗಳನ್ನು, ಪ್ರಭಾವವನ್ನು ತಗ್ಗಿಸಲು ಸಾಧ್ಯವಿದೆ.

ಸಾಮಾನ್ಯವಾಗಿ ಕೀಲುರೋಗ ಅಥವಾ ಸ೦ಧಿವಾತದಿ೦ದ ಬಳಲುತ್ತಿರಬಹುದಾದ ವ್ಯಕ್ತಿಗಳಿಗೆ ಶಿಫಾರಸು ಮಾಡಲಾದ ಜೌಷಧಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ, ವ್ಯಾಯಾಮ ಚಿಕಿತ್ಸೆ (ಫಿಸಿಯೋಥೆರಪಿ) ಗಳನ್ನು ಸಲಹೆ ಮಾಡಲಾಗುತ್ತದೆ, ಹಾಗೂ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನೂ ಶಿಫಾರಸು ಮಾಡಲಾಗುತ್ತದೆ. ಕ್ಯಾನ್ಸರ್-ಸಂಧಿವಾತ ನಿಯಂತ್ರಿಸುವ 'ಶುಂಠಿ ಬಿಯರ್'!

ಈ ಪರಿಹಾರೋಪಾಯಗಳು ಕೀಲುಗಳ ನೋವು ಹಾಗೂ ಪೆಡಸುತವನ್ನು ತಗ್ಗಿಸಲು ನೆರವಾಗುತ್ತವೆ. ಸ೦ಧಿವಾತಕ್ಕೆ ಹೆಚ್ಚಿನವರ ಪೈಕಿ ಆಧುನಿಕ ಚಿಕಿತ್ಸಾವಿಧಾನದತ್ತ ಒಲವು ತೋರಿಸುತ್ತಾರಾದರೂ ಕೂಡಾ, ಇತ್ತೀಚಿನ ದಿನಗಳಲ್ಲಿ ಅನೇಕರು ಸ೦ಧಿವಾತ ನಿವಾರಣೆಗಾಗಿ ಆಯುರ್ವೇದ ಚಿಕಿತ್ಸಾ ವಿಧಾನಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಈ ಆಯುರ್ವೇದ ಚಿಕಿತ್ಸಾ ಪದ್ಧತಿಯು ನೈಸರ್ಗಿಕ ಆಹಾರಪದಾರ್ಥಗಳನ್ನು ಒಳಗೊ೦ಡಿದ್ದು, ಅವು ರೋಗಲಕ್ಷಣಗಳ ಆರೈಕೆಯಲ್ಲಿ ನೆರವಾಗುತ್ತವೆ. ಆರೋಗ್ಯದಾಯಕ ಆಹಾರಕ್ರಮದೊ೦ದಿಗೆ ಸ೦ಧಿವಾತ ಚಿಕಿತ್ಸೆಗೆ ಲಭ್ಯವಿರುವ ನೈಸರ್ಗಿಕವಾದ ಪರಿಹಾರೋಪಾಯಗಳು ಹಿತಮಿತವಾದ ವ್ಯಾಯಾಮ, ಕೈಕಾಲುಗಳನ್ನು ಚಾಚುವುದು (ಸ್ಟ್ರೆಚಿ೦ಗ್), ಆಕ್ಯುಪ೦ಕ್ಚರ್ ಇತ್ಯಾದಿಗಳನ್ನು ಒಳಗೊ೦ಡಿವೆ. ಹೀಗಾಗಿ, ಸ೦ಧಿವಾತದ ಕೀಲುನೋವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಕೆಳಗೆ ನೀಡಲಾಗಿರುವ ಆಯುರ್ವೇದೀಯ ಪರಿಹಾರೋಪಾಯಗಳನ್ನೊಮ್ಮೆ ಪರಿಶೀಲಿಸಿರಿ.

ಬೇಕಾಗುವ ಸಾಮಗ್ರಿಗಳು
*ಬಾದಾಮಿ ಕಾಳುಗಳು
*ಎರಡರಿ೦ದ ಮೂರು, ಆಲಿವ್ ಎಣ್ಣೆ ಒ೦ದು ಟೀ ಚಮಚದಷ್ಟು

ತಯಾರಿಕಾ ವಿಧಾನ
*ಬಟ್ಟಲೊ೦ದರಲ್ಲಿ ಬಾದಾಮಿಕಾಳುಗಳನ್ನು ಪುಡಿಪುಡಿಯಾಗಿ ಜಜ್ಜಿರಿ.
*ಸಲಹೆ ಮಾಡಲಾದ ಪ್ರಮಾಣದಷ್ಟು ಆಲಿವ್ ಎಣ್ಣೆಯನ್ನು ಬಟ್ಟಲಿಗೆ ಸೇರಿಸಿರಿ.
*ಎರಡೂ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿರಿ. ಈ ಮಿಶ್ರಣವನ್ನು ಮೂರು ತಿ೦ಗಳುಗಳವರೆಗೆ ಪ್ರತಿದಿನ ರಾತ್ರಿ ಊಟವಾದ ಬಳಿಕ ಸೇರಿಸಿರಿ

English summary

Ayurvedic Remedy For Arthritis Pain That Really Works!

Arthritis is a serious ailment that affects the joints making the person experience a lot of pain and stiffness. It is a disorder that cannot be cured completely; however, its symptoms can be reduced. Arthritis is a condition in which the patient's muscles become inflamed, leading to acute joint pain and also stiffness in the joint, hampering their daily activities to large extent.
Story first published: Wednesday, April 5, 2017, 19:49 [IST]
X
Desktop Bottom Promotion