Just In
Don't Miss
- News ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏನಿದು ದಂತ ಕ್ಷಯ ಸಮಸ್ಯೆ? ಇದಕ್ಕೆ ಪರಿಹಾರವೇನು?
ಹಲ್ಲು ನೋವು ಎಂದರೆ ಅದನ್ನು ತಡೆದುಕೊಳ್ಳುವುದು ತುಂಬಾ ಕಷ್ಟ. ಹಲ್ಲು ನೋವಿದ್ದರೆ ಯಾವುದೇ ಆಹಾರವನ್ನು ಸೇವಿಸಲು ಸಾಧ್ಯವಾಗಲ್ಲ. ಹಲ್ಲುನೋವಿಗೆ ಪ್ರಮುಖ ಕಾರಣ ದಂತಕ್ಷಯ. ಈ ದಂತಕ್ಷಯ ಬರುವುದು ದಂತಗಳ ಮೇಲಿನ ಕವಚ ನಿರ್ನಾಮವಾದಾಗ. ದಂತಕ್ಷಯವನ್ನು ಹಲ್ಲಿನ ಸವೆತ ಅಥವಾ ಹಲ್ಲಿನ ಕುಳಿಗಳು ಎಂದೂ ಕರೆಯುತ್ತೇವೆ, ದಂತಕವಚದಲ್ಲಿ ಶೇಖರಣೆಯಾಗುವಂತಹ ಬ್ಯಾಕ್ಟೀರಿಯಾಗಳಿಂದಾಗಿ ದಂತಕ್ಷಯವು ಉಂಟಾಗುತ್ತದೆ. ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ
ದಂತಗಳ ಪದರಗಳಲ್ಲಿ ಶೇಖರಣೆಯಾಗುವ ಕೆಲವೊಂದು ಸೂಕ್ಷ್ಮಾಣು ಜೀವಿಗಳು ಹಲ್ಲುಗಳಲ್ಲಿನ ಖನಿಜಾಂಶಗಳು ನಿರ್ನಾಮ ಮಾಡುವಂತಹ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಜೀವಂತವಾಗಿರುಂತ ಸೂಕ್ಷ್ಮಾಣುಜೀವಿಗಳು. ಇವುಗಳು ತಮಗೆ ಬೇಕಾಗಿರುವ ಆಹಾರವನ್ನು ನಾವು ತಿನ್ನುವಂತಹ ಆಹಾರದಲ್ಲಿರುವ ಸಕ್ಕರೆಯಂಶದಿಂದ ಪಡೆಯುತ್ತದೆ.
ಸಕ್ಕರೆ ಇರುವಂತಹ ಆಹಾರವನ್ನು ತಿಂದಾಗ ಸೂಕ್ಷ್ಮಾಣುಜೀವಿಗಳು ಆಮ್ಲವನ್ನು ಬಿಡುಗಡೆ ಮಾಡಿ ಹಲ್ಲಿನ ಪದರದ ಮೇಲೆ ದಾಳಿ ಮಾಡುತ್ತದೆ ಮತ್ತು ಇದರಿಂದ ದಂತಕ್ಷಯ ಕಾಡುತ್ತದೆ. ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ತಮ್ಮ ಪ್ರಮುಖ ಆಹಾರವನ್ನಾಗಿ ಮಾಡಿಕೊಳ್ಳುತ್ತವೆ. ಸಕ್ಕರೆಯನ್ನು ಸಂಸ್ಕರಿಸಲು ಬಳಸುವಂತಹ ಕೆಲವೊಂದು ತ್ಯಾಜ್ಯಗಳು ಆಮ್ಲವನ್ನು ಉತ್ಪತ್ತಿ ಮಾಡಿ ಹಲ್ಲುಗಳಲ್ಲಿನ ಖನಿಜಾಂಶವನ್ನು ನಿರ್ನಾಮ ಮಾಡಿ ದಂತಕ್ಷಯಕ್ಕೆ ಕಾರಣವಾಗುತ್ತದೆ. ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ
ಹಲ್ಲುಗಳ ಪದರಗಳನ್ನು ನಾಶ ಮಾಡಲು ಇದಕ್ಕೆ ಹಲವಾರು ಗಂಟೆಗಳು ಬೇಕಾಗುತ್ತದೆ. ಮನೆಯಲ್ಲಿ ಅಥವಾ ಹಲ್ಲಿನ ವೈದ್ಯರ ಬಳಿ ಹೋದಾಗ ಫ್ಲೋರೈಡ್ ಅನ್ನು ಬಳಸುವುದರಿಂದ ಹಲ್ಲುಗಳನ್ನು ಸರಿಪಡಿಸಲು ನೆರವಾಗುವುದು. ದಂತಕ್ಷಯಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಅದರಿಂದ ಮುಂದೆ ಹೆಚ್ಚಿನ ಹಾನಿಯಾಗಬಹುದು.
ಹಲ್ಲಿನ ಕವಚವು ತುಂಡಾದ ಬಳಿಕ ಹಲ್ಲುಗಲನ್ನು ಸರಿಪಡಿಸಲು ಸಾಧ್ಯವಿಲ್ಲ. ದಂತಕುಳಿಯನ್ನು ದಂತವೈದ್ಯರು ಸ್ವಚ್ಛಗೊಳಿಸಿ ಸರಿಪಡಿಸಬೇಕು. ದಂತಕುಳಿಗೆ ಚಿಕಿತ್ಸೆ ನೀಡದೆ ಇದ್ದರೆ ಹಲ್ಲಿನ ಬುಡಕ್ಕೆ ಬಂದು ನರ ಹಾಗೂ ರಕ್ತನಾಳಗಳಿಗೆ ತೊಂದರೆ ಉಂಟು ಮಾಡಬಹುದು. ಈ ಭಾಗದಲ್ಲಿ ಬಾವು ಅಥವಾ ಗುಳ್ಳೆಗಳು ಕಾಣಿಸಿಕೊಳ್ಳಬಹುದು.
ಆಹಾರ ತಿಂದ ಬಳಿಕ ಬಾಯಿ ಮುಕ್ಕಳಿಸಿಕೊಳ್ಳುವುದು ಅಥವಾ ಹಲ್ಲುಜ್ಜುವುದರಿಂದ ದಂತಕ್ಷಯವನ್ನು ತಡೆಯಬಹುದು. ಹಲ್ಲುಜ್ಜಲು ಮತ್ತು ಬಾಯಿ ಮುಕ್ಕಲಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಿ. ಬ್ರಷ್ ತಲುಪದೆ ಇರುವ ಸ್ಥಳಗಳಲ್ಲಿ ಬ್ಯಾಕ್ಟೀರಿಯಾ ವಾಸಿಸುತ್ತದೆ. ಇದಕ್ಕಾಗಿ ಸರಿಯಾಗಿ ಬಾಯಿ ಮುಕ್ಕಳಿಸಿಕೊಳ್ಳಿ. ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು
ದಂತಕ್ಷಯವು ಸಾಮಾನ್ಯವಾದ ಸಮಸ್ಯೆಯಾಗಿದೆ. ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸಿಕೊಳ್ಳುವುದರೊಂದಿಗೆ ಆಗಾಗ ಹಲ್ಲಿನ ವೈದ್ಯರಲ್ಲಿಗೆ ಹೋಗಿ ಪರೀಕ್ಷಿಸಿ ಸ್ವಚ್ಛ ಮಾಡಿಕೊಂಡರೆ ಒಳ್ಳೆಯದು. ಕ್ಯಾಂಡಿ, ಬಿಸ್ಕಿಟ್, ಸೋಡಾ ಮತ್ತು ಸಿಹಿ ತಂಪುಪಾನೀಯಗಳನ್ನು ಕಡೆಗಣಿಸಿ. ನೀವು ಇವುಗಳನ್ನು ಸೇವಿಸಿದರೂ ತಕ್ಷಣ ಬಾಯಿ ತೊಳೆಯಿರಿ. ಏನೇ ತಿಂದರೂ ಬಾಯಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.