Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಒತ್ತಡ ನಿವಾರಣೆಗೆ ಅನುಸರಿಸಿ- 'ಊರ್ಧ್ವ ಹಸ್ತಾಸನ'
ಪ್ರಸ್ತುತ, ಸ್ಪರ್ಧಾತ್ಮಕ ಮನೋಭಾವಾ ಎಲ್ಲಾ ಕ್ಷೇತ್ರದಲ್ಲಿಯೂ ವ್ಯಾಪಕವಾಗಿ ಕಂಡು ಬರುತ್ತಿದೆ. ಕ್ರೀಡಾ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಕಛೇರಿಯ ಕೆಲಸ ಯಾವುದೇ ಆಗಿರಬಹುದು, ಒಂದು ಬಗೆಯ ಸ್ಪರ್ಧೆ ಒಳಗೊಂಡಿದ್ದು, ಇದರಿಂದಾಗಿ ಒತ್ತಡ ಉಂಟಾಗುತ್ತದೆ.
ಇದು ತೀವ್ರ ಸ್ವರೂಪದ್ದಾಗಿರಬಹುದು ಅಥವಾ ಲಗುವಾಗಿರಬಹುದು. ಯಾವುದೇ ರೀತಿಯಲ್ಲಿದ್ದರೂ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ, ಒತ್ತಡದಿಂದ ದೂರ ಉಳಿಯಲು, ನಮ್ಮ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಸಾಕಷ್ಟು ಒತ್ತಡ ನಿವಾರಣೆಯ ವಿಧಾನಗಳನ್ನು ನಾವು ಅಳವಡಿಸಿಕೊಳ್ಳಬಹುದು.

ಆದರೆ ಎಲ್ಲಾ ವಿಧಾನಗಳಲ್ಲಿ ಯೋಗಾಭ್ಯಾಸವು,ಒತ್ತಡ ನಿವಾರಿಸುವಲ್ಲಿ ಹೆಚ್ಚು ಸಹಾಯಕಾರಿಯೆಂದು ಸಾಬೀತಾಗಿದೆ. ಇರುವ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ, ಒತ್ತಡಮಯ ಸಂರ್ದಭಗಳನ್ನು ನಿಭಾಯಿಸಲೂ ಸಹಾಯಕಾರಿಯಾಗಿದೆ. ಊರ್ಧ್ವ ಹಸ್ತಾಸನವು, ಒತ್ತಡ ನಿವಾರೆಣೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಒತ್ತಡಕ್ಕೆ ಕಡಿವಾಣ ಹಾಕಲು 'ಉತ್ಥಾನ ಶಿಶೋ ಆಸನ' ಅನುಸರಿಸಿ
ಊರ್ಧ್ವ ಹಸ್ತಾಸನ ಹೆಸರಿನ ಮೂಲ ಸಂಸ್ಕೃತ ಭಾಷೆಯದ್ದಾಗಿದೆ. "ಊರ್ಧ್ವ" ಎಂದರೆ ಮೇಲಕ್ಕೆ ಎಂದರ್ಥ, "ಹಸ್ತ" ಎಂದರೆ ಕೈಗಳು ಎಂದರ್ಥ ಹಾಗು "ಆಸನ"ವೆಂದರೆ ಭಂಗಿ ಎಂದರ್ಥ. ಇದು ಅತ್ಯಂತ ಸುಲಭವಾದ ಆಸನವಾಗಿದ್ದು, ಸಾಮಾನ್ಯವಾಗಿ ಎಲ್ಲರೂ ಎದ್ದ ಕೂಡಲೇ ತಮಗೆ ಅರಿವಿಲ್ಲದೇ ಮಾಡುತ್ತಾರೆ. ಇಡೀ ದೇಹವನ್ನು ಹಿಗ್ಗಿಸಿದಂತಾಗುತ್ತದೆ. ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ನೋಡೋಣ.
ಊರ್ಧ್ವ ಹಸ್ತಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ಮೊದಲನೆಯದಾಗಿ, ತಾಡಾಸನದಂತೆ ನೇರವಾಗಿ ನಿಂತುಕೊಳ್ಳಿ.
2. ಎರಡೂ ತೋಳುಗಳನ್ನು ಸಮಾನಂತರವಾಗಿರುವಂತೆ ಬದಿಯಲ್ಲಿರಿಸಬೇಕು.
3. ನಿಧಾನವಾಗಿ ಎರಡೂ ತೋಳುಗಳನ್ನು ಚಾವಣಿಯತ್ತ ಮೇಲಕ್ಕೆ ಎತ್ತಬೇಕು.
4. ತೋಳುಗಳ ಜೊತೆಯಲ್ಲಿ ನಿಮ್ಮ ಅಂಗೈಗಳು ಸಹ ನಿಮ್ಮ ತಲೆಯ ಮೇಲೆ ಒಂದಕ್ಕೊಂದು ಮುಖ ಮಾಡುವಂತೆ ಇರಬೇಕು.
5. ನಿಮ್ಮ ಬಾಹುಗಳು ನೇರವಾಗಿರಬೇಕು.
6. ಮೇಲಕ್ಕೆ ನೋಡಬೇಕು.
7. ಹಿಂದಕ್ಕೆ ಬಾಹುಗಳನ್ನು ಅದುಮಬೇಕು.
8. ಕಾಲುಗಳನ್ನು ನೇರವಾಗಿಟ್ಟುಕೊಂಡಿರಬೇಕು, ಮಂಡಿಗಳನ್ನು ಮೇಲೆಳೆದುಕೊಳ್ಳಬೇಕು.
9. ಇದೇ ಭಂಗಿಯಲ್ಲಿ ಸ್ವಲ್ಪ ಕಾಲವಿದ್ದು ಧೀರ್ಘವಾಗಿ ಉಸಿರಾಡಿಸಿ.
10. ನಿಧಾನವಾಗಿ ಭಂಗಿಯಿಂದ ಹೊರಗೆ ಬನ್ನಿ. ಈ ಟಾಪ್ 10 ಕೊಡುಗೆ ಯೋಗ ಮಾಡುವವರಿಗೆ ಮಾತ್ರ
ಊರ್ಧ್ವ ಹಸ್ತಾಸನದಿಂದಾಗುವ ಇತರ ಲಾಭಗಳು
*ಬೆನ್ನೆಲಬನ್ನು ಎಳೆದು ಹಿಗ್ಗಿಸಲು ನೆರವಾಗುತ್ತದೆ.
*ಹೊಟ್ಟೆಯನ್ನು ಎಳೆದು ಹಿಗ್ಗಿಸಲು ನೆರವಾಗುತ್ತದೆ.
*ತೋಳುಗಳನ್ನು ಎಳೆದು ಹಿಗ್ಗಿಸಲು ನೆರವಾಗುತ್ತದೆ.
*ಆಯಾಸ ಮತ್ತು ಆತಂಕವನ್ನು ತಗ್ಗಿಸುತ್ತದೆ.
*ರಕ್ತನಿಬಿಡತೆಯನ್ನು ನಿವಾರಿಸಲು ನೆರವಾಗುತ್ತದೆ.
*ಅಸ್ತಮಾ ತೊಂದರೆಯ ನಿವಾರಣೆಗೂ ಸಹಾಯಕಾರಿ.
ಎಚ್ಚರಿಕೆ:
ಯಾರಿಗೆ ಕುತ್ತಿಗೆ ಹಾಗು ತೋಳುಗಳಲ್ಲಿ ಗಾಯಗಳಾಗಿದೆಯೋ ಅಂತಹವರು ಈ ಊರ್ಧ್ವ ಹಸ್ತಾಸನವನ್ನು ಮಾಡತಕ್ಕದ್ದಲ್ಲ. ನುರಿತ ಯೋಗಾತರಬೇತಿದಾರರ ಸಲಹೆ ಸೂಚನೆಗಳ ಮೇರೆಗೆ ಮಾಡುವುದು ಹೆಚ್ಚು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













