Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬೇಸಿಗೆಯ ಬಿಸಿಯನ್ನು ತಂಪಾಗಿಸಲು ಆರೋಗ್ಯ ಟಿಪ್ಸ್
ಅಬ್ಬಾ ಬೇಸಿಗೆಯೆಂಬುದು ಧಗೆಯೊಂದಿಗೆ ಮೈಯಿಂದ ಸೋರಿಹೋಗುವ ಬೆವರನ್ನು ಸಾಕಷ್ಟು ದಯಪಾಲಿಸುತ್ತದೆ. ನೆತ್ತಿಯ ಮೇಲೆ ಸುಡುವ ಸೂರ್ಯ ನಮ್ಮಲ್ಲಿರುವ ಶಕ್ತಿಯನ್ನು ಹೀರಿಬಿಟ್ಟಿದ್ದಾನೆ ಎಂದೇ ನಮಗೆನಿಸುವಷ್ಟು ಆಯಾಸ, ಸುಸ್ತು, ಬಾಯಾರಿಕೆ ನಮಗುಂಟಾಗುತ್ತದೆ. ತಣ್ಣಗಿನ ನೀರಿನಲ್ಲೇ ಆದಷ್ಟು ಸಮಯ ಕಳೆದುಬಿಡುವಾ ಎಂಬ ಭಾವನೆ ನಮ್ಮಲ್ಲಿ ಉದ್ಭವವಾಗುವುದೇ ಬಿರುಬೇಸಿಗೆಯಲ್ಲಿ.
ಈ ಸಮಯದಲ್ಲಿ ಹಸಿವು ಕಡಿಮೆಯಾಗಿ ದ್ರವಾಹಾರದತ್ತಲೇ ಮನಸ್ಸು ವಾಲುತ್ತದೆ. ದೇಹಕ್ಕೆ ಸಾಧ್ಯವಾದಷ್ಟು ನೀರಿನ ಪೂರೈಕೆಯನ್ನು ಈ ಕಾಲದಲ್ಲಿ ನಾವು ಮಾಡುತ್ತಿರಬೇಕು. ಉಷ್ಣದ ಆಹಾರವನ್ನು ತ್ಯಜಿಸಿ ಆದಷ್ಟು ತಂಪಿನ ಆಹಾರದತ್ತ ನಾವು ಒಲವು ತೋರಿಸಬೇಕು. ಜೇನು ಮೊದಲಾದ ಉಷ್ಣ ಪದಾರ್ಥಗಳನ್ನು ಆದಷ್ಟು ಸೇವಿಸದಿರುವುದೇ ಉತ್ತಮವಾಗಿರುತ್ತದೆ.
ಆದಷ್ಟು ತಾಜಾ ಹಣ್ಣಿನ ರಸ, ಹಣ್ಣುಗಳ ಸೇವನೆ ಅಂತೆಯೇ ಲೀಟರುಗಟ್ಟಲೆ ನೀರನ್ನು ಸೇವಿಸುತ್ತಲೇ ಇರಬೇಕು. ಬೇಸಿಗೆಯಲ್ಲಿ ನೀವು ಏನು ಮಾಡಬೇಕು ಏನು ಮಾಡಬಾರದು ಎಂಬ ಚಿಕ್ಕ ಸಲಹೆಗಳನ್ನು ನಾವು ನಿಮ್ಮ ಹಿತಕ್ಕಾಗಿ ಇಂದಿಲ್ಲಿ ನೀಡಲಿದ್ದು ಇದರಿಂದ ಬೇಸಿಗೆಯ ಧಗೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬ ಟಿಪ್ಸ್ ನಿಮಗೆ ದೊರೆಯುತ್ತದೆ. ಹಾಗಿದ್ದರೆ ಬನ್ನಿ ತಡ ಮಾಡದೇ ಕೆಳಗಿನ ಸ್ಲೈಡರ್ ಕ್ಲಿಕ್ ಮಾಡುತ್ತಾ ಬೇಸಿಗೆಯ ಬಿಸಿಯನ್ನು ತಂಪಾಗಿಸುವ ಬಗೆಯನ್ನು ಕಂಡುಕೊಳ್ಳಿ...

ಹೆಚ್ಚುಚ್ಚು ನೀರು ಕುಡಿಯಿರಿ
ಡೀಹೈಡ್ರೇಶನ್ ಅನ್ನು ಬೇಸಿಗೆ ಉಂಟುಮಾಡುತ್ತದೆ. ದೇಹದಲ್ಲಿ ನೀರು ಬೆವರಿನ ರೂಪದಲ್ಲಿ ಹರಿದು ಹೋಗುವುದು ಬೇಸಿಗೆಯಲ್ಲಾಗಿದ್ದು ಈ ಸಮಯದಲ್ಲಿ ದೇಹಕ್ಕೆ ಸಾಕಷ್ಟು ನೀರಿನ ಪೂರೈಕೆಯನ್ನು ನೀವು ಮಾಡಬೇಕಾಗುತ್ತದೆ. ನೀರನ್ನು ಆಗಾಗ್ಗೆ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ನೀರಡಿಕೆಯನ್ನು ನೀಗಿಸಿಕೊಳ್ಳಬಹುದಾಗಿದೆ.

ಕೆಫೇನ್ ತ್ಯಜಿಸಿ
ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡು ಕೆಫೇನ್ ಮತ್ತು ಸಕ್ಕರೆ ಬೆರೆತ ಪಾನೀಯಗಳನ್ನು ಆದಷ್ಟು ಬೇಸಿಗೆಯಲ್ಲಿ ಕಡಿಮೆ ಸೇವಿಸುವುದು ಒಳಿತು. ಜೀರ್ಣಕ್ರಿಯೆ ವ್ಯವಸ್ಥೆಗೆ ಧಕ್ಕೆಯನ್ನು ತರುವ ಫಾಸ್ಫರಿಕ್ ಆಸಿಡ್ನ ರಚನೆಗೆ ಇದು ಕಾರಣವಾಗುವುದರಿಂದ ಇವುಗಳ ಸೇವನೆ ಬೇಡವೇ ಬೇಡ.

ಒಣ ಹಣ್ಣುಗಳನ್ನು ಸೇವಿಸದಿರಿ
ಒಣ ಹಣ್ಣುಗಳು ಆರೋಗ್ಯಕರ ಮತ್ತು ಪೋಷಕಾಂಶಭರಿತವಾಗಿರುತ್ತವೆ. ಅದಾಗ್ಯೂ ಇವುಗಳು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತವೆ ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಸೇವಿಸದಿರುವುದೇ ಒಳಿತು. ಬೇಸಿಗೆಯಲ್ಲಿ ಒಣಹಣ್ಣುಗಳ ಬದಲಿಗೆ ತಾಜಾ ಹಣ್ಣುಗಳನ್ನೇ ಅಧಿಕವಾಗಿ ಸೇವಿಸಿ.

ಉಷ್ಣ ಆಹಾರಗಳನ್ನು ಸೇವಿಸದಿರಿ
ಬೇಸಿಗೆಯಲ್ಲಿ ಉಷ್ಣವನ್ನುಂಟು ಮಾಡುವ ಆಹಾರಗಳನ್ನು ಸೇವಿಸದಿರಿ. ಪಾಲಾಕ್, ಕರಿಮೆಣಸು, ಮೂಲಂಗಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸದಿರಿ. ಮಸಾಲೆ ಪದಾರ್ಥಗಳ ಸೇವನೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಸಕ್ಕರೆ ಭರಿತ ಆಹಾರ ಸೇವನೆ ನಿಲ್ಲಿಸಿ
ದೇಹದ ಉಷ್ಣತೆನ್ನು ಸಕ್ಕರೆ ಇರುವ ಆಹಾರ ಪದಾರ್ಥಗಳೂ ಹೆಚ್ಚಿಸುತ್ತವೆ. ಜೇನು ಮತ್ತು ಕಾಕಂಬಿ ಸೇವನೆಯನ್ನು ಬಿಡಿ. ತರಕಾರಿ ಮತ್ತು ಹಣ್ಣುಗಳಲ್ಲಿ ಇರುವ ನೈಸರ್ಗಿಕ ಸಕ್ಕರೆಯನ್ನು ಅಧಿಕವಾಗಿ ಸೇವಿಸಿ.



Click it and Unblock the Notifications
