Just In
- 51 min ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 8 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 8 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 9 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News Gold Price: ಗಗನ ಕುಸುಮವಾದ ಬಂಗಾರ: ಮಾರ್ಚ್ 28ರ ಚಿನ್ನ ಮತ್ತು ಬೆಳ್ಳಿ ದರ ವಿವರ
- Sports SRH vs MI: ಇತಿಹಾಸದ ಪುಟ ಸೇರಿದ ಪಂದ್ಯ; ಈ ಪಂದ್ಯದಲ್ಲಿ ದಾಖಲಾದ ರೆಕಾರ್ಡ್ ಪಟ್ಟಿ ಇಲ್ಲಿದೆ
- Finance 7th pay Commission: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ, ಒಂದು ದಿನ ಮುಂಚಿತವಾಗಿ ಸಂಬಳ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೋಟುದ್ದ ಬೆಂಡೆಕಾಯಿಯಲ್ಲಿದೆ, ಬೆಟ್ಟದಷ್ಟು ಆರೋಗ್ಯಕರ ಗುಣಗಳು
ಮೂತ್ರಪಿಂಡಗಳಲ್ಲಿರುವ (ಕಿಡ್ನಿ) ಕಲ್ಮಶಗಳನ್ನು ಹೊರಹಾಕಲು ಕೆಲವಾರು ವಿಧಾನಗಳಿವೆ. ಇದರಲ್ಲಿ ಅತಿ ಸುಲಭವಾದ ವಿಧಾನವೆಂದರೆ ಎಳೆಯ ಬೆಂಡೆಕಾಯಿಯ ಬಳಕೆ. ಇದು ಮಧುಮೇಹ, ಅಸ್ತಮಾ ಮತ್ತು ಕೊಲೆಸ್ಟ್ರಾಲ್ ಹೆಚ್ಚಳದ ತೊಂದರೆಯನ್ನು ಸಮರ್ಥವಾಗಿ ನಿವಾರಿಸುತ್ತದೆ. ಆರೋಗ್ಯದ ಗಣಿ-ಎಲೆಮರೆ ಕಾಯಿಯಂತಿರುವ ಬೆಂಡೆಕಾಯಿ
ಬೆಂಡೆಕಾಯಿಯಲ್ಲಿ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ತೂಕ ಹೆಚ್ಚದೇ ಇರಲು ಇದರ ಖಾದ್ಯಗಳು ನೆರವಾಗುತ್ತವೆ. ಬೆಂಡೆಯ ಇನ್ನೊಂದು ಒಳ್ಳೆಯ ಗುಣವೆಂದರೆ ಇದನ್ನು ಯಾವ ರೂಪದಲ್ಲಿ ಸೇವಿಸಿದರೂ, ಅಂದರೆ ಬೇಯಿಸಿ, ಹುರಿದು, ಕರಿದು ಅಥವಾ ಅರೆಬೇಯಿಸಿ ತಿಂದರೂ ಇದರ ಗುಣಗಳು ಬದಲಾಗುವುದಿಲ್ಲ.
ಎಳೆಬೆಂಡೆಯನ್ನು ಹಸಿಯಾಗಿಯೂ ತಿನ್ನಬಹುದು. ಉಪ್ಪಿನ ಕಾಯಿಯ ರೂಪದಲ್ಲಿಯೂ ನಂಜಿಕೊಳ್ಳಬಹುದು. ಒಂದು ಕಪ್ ಬೆಂಡೆಕಾಯಿಯಲ್ಲಿ ಎರಡು ಗ್ರಾಂ ಪ್ರೋಟೀನ್, ಏಳು ಗ್ರಾಂ ಕಾರ್ಬೋಹೈಡ್ರೇಟುಗಳು, ಮೂರು ಗ್ರಾಂ ಕರಗದ ನಾರು, 0.1 ಗ್ರಾಮ್ ಕೊಬ್ಬು, 30 ಕ್ಯಾಲೋರಿ ಶಕ್ತಿ, 60ಮಿಲಿಗ್ರಾಂ ಮೆಗ್ನೀಶಿಯಂ ಮತ್ತು 21ಮಿಲಿಗ್ರಾಂ ವಿಟಮಿನ್ ಸಿ ಇವೆ. ಬೆಂಡೆಕಾಯಿ ನೆನೆಸಿಟ್ಟ ನೀರು ಕುಡಿದರೆ ಹತ್ತಾರು ಲಾಭ
ಒಂದು ವೇಳೆ ನಿಮ್ಮ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿಲ್ಲದಿದ್ದರೆ, ನಿತ್ಯವೂ ಬೆಂಡೆಕಾಯಿಯನ್ನು ಸೇವಿಸಲು ಮರೆಯದಿರಿ. ಅಷ್ಟೇ ಅಲ್ಲದೆ, ಮಧುಮೇಹಿಗಳೂ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ
ಒಂದು ವೇಳೆ ನಿಮ್ಮ ರಕ್ತದ ಸಕ್ಕರೆಯ ಪ್ರಮಾಣ ಏರುಪೇರಾಗುತ್ತಿದ್ದರೆ ಇದನ್ನು ಸರಿಪಡಿಸಲು ಬೆಂಡೆಯಿಂದ ತಯಾರಿಸಬಹುದಾದ ಒಂದು ಸುಲಭ ವಿಧಾನವಿದೆ. ಸುಮಾರು ಆರು ಎಳೆ ಬೆಂಡೆಕಾಯಿಗಳನ್ನು ಚಿಕ್ಕದಾಗಿ ತುಂಡರಿಸಿ ಈ ತುಂಡುಗಳನ್ನು ಒಂದು ಪಾತ್ರೆ ನೀರಿನಲ್ಲಿ ಹಾಕಿ ಇಡಿಯ ರಾತ್ರಿ ನೆನೆಸಿಡಬೇಕು. ಸರ್ವ ರೋಗಕ್ಕೂ ರಾಮಬಾಣವಾಗಿರುವ ಬೆಂಡೆಕಾಯಿಯ ಪ್ರಯೋಜನಗಳೇನು?
ಮರುದಿನ ಬೆಳಿಗ್ಗೆ ಎದ್ದ ತಕ್ಷಣ ಬೇರಾವುದನ್ನೂ ಮಾಡುವುದಕ್ಕೂ ಮುನ್ನವೇ ಅಂದರೆ ಕಣ್ಣುಜ್ಜಿಕೊಳ್ಳುತ್ತಿದ್ದಂತೆಯೇ ಈ ನೀರನ್ನು ಸೋಸಿ ಗಟಗಟ ಕುಡಿದುಬಿಡಬೇಕು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲ, ಇಡಿಯ ದಿನ ಅನಗತ್ಯವಾಗಿ ತಿನ್ನುವ ಬಯಕೆಯೂ ಕಡಿಮೆಯಾಗುತ್ತದೆ.