Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!
ಹಸಿಶುಂಠಿ ಎಂದರೆ ನಾವೆಲ್ಲಾ ಒಂದು ಮಸಾಲೆ ವಸ್ತು ಎಂದೇ ತಿಳಿದಿದ್ದೇವೆ. ಇನ್ನೂ ಹೆಚ್ಚೆಂದರೆ ಚಹಾದಲ್ಲಿ ಸೇರಿಸಿ ರುಚಿ ಹೆಚ್ಚಿಸಿಕೊಳ್ಳಬಹುದು ಎಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ. ಆದರೆ ನೂರಾರು ವರ್ಷಗಳಿಂದ ಹಸಿಶುಂಠಿಯನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಅದರಲ್ಲೂ ಭಾರತೀಯ ಔಷಧಿ, ಆಯುರ್ವೇದ ಮತ್ತು ಯುನಾನಿ ಪದ್ಧತಿಗಳಲ್ಲಿ ಹಸಿಶುಂಠಿಗೆ ಮಹತ್ವದ ಸ್ಥಾನವಿದೆ. ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಅಜ್ಜಿಯ ಮದ್ದಿನ ಸಾಮಾನ್ಯರೂಪವಾದ ಕಷಾಯದಲ್ಲಿಯೂ ಹಸಿಶುಂಠಿ ಇಲ್ಲದೇ ಇಲ್ಲ. ಶುಂಠಿ ಅಲರ್ಜಿಯಾಗಿರುವವರಿಗೆ ಹೊರತು ಉಳಿದವರಿಗೆಲ್ಲಾ ಹಸಿಶುಂಠಿ ಮಸಾಲೆಗಿಂತ ಹೆಚ್ಚಾಗಿ ಔಷಧಿಯ ರೂಪದಲ್ಲಿಯೇ ಆರೋಗ್ಯ ವೃದ್ಧಿಸುತ್ತದೆ. ಇದರ ಉರಿಯೂತ ನಿವಾರಕ ಗುಣಕ್ಕೆ ಇದರಲ್ಲಿರುವ ಜಿಂಜರ್ಸಾಲ್ ಮತ್ತು ಶೋಗಾವೋಲ್ (gingerols and shogaols) ಎಂಬ ಪೋಷಕಾಂಶಗಳು ಕಾರಣವಾಗಿದ್ದು ಸೋಂಕುಗಳಿಂದ ರಕ್ಷಣೆ ನೀಡುವುದರ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.
ಗಂಟಲ ಬೇನೆ, ಮಹಿಳೆಯರಿಗೆ ಕಾಡುವ ಮಾಸಿಕ ದಿನಗಳ ಕೆಳಹೊಟ್ಟೆಯ ನೋವು, ಅಜೀರ್ಣ, ಮಲಬದ್ಧತೆ, ಕೆಮ್ಮು, ಶೀತ ಮೊದಲಾದವುಗಳಿಗೆ ಶುಂಠಿ ಉತ್ತಮ ಪರಿಹಾರ ನೀಡಬಲ್ಲದು. ಆದರೆ ಇದರ ಸರಿಯಾದ ಬಳಕೆಯನ್ನು ನಿಮ್ಮ ಕುಟುಂಬ ವೈದ್ಯರ ಸಲಹೆ ಮೇರೆಗೆ ಬಳಸಿದರೆ ಮಾತ್ರ ಉತ್ತಮ. ಇದರ ಆರೋಗ್ಯಕರ ಪರಿಣಾಮಗಳು ಅತಿ ಹೆಚ್ಚಾಗಿ ಸಿಗಬೇಕಾದರೆ ಹಸಿಯಾಗಿ ಸೇವಿಸಬೇಕು ಎಂದು ಯಾರು ಎಲ್ಲಿ ಯಾವಾಗ ಹೇಳಿದ್ದರು ಎಂಬುದನ್ನು ಪರಿಗಣಿಸದೇ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಒಂದು ಚಿಕ್ಕ ತುಂಡನ್ನು ಜಗಿದು ರಸವನ್ನು ನುಂಗಿಬಿಡುತ್ತಾರೆ. ಬಿರುಬೇಸಿಗೆಯ ಧಗೆಯನ್ನು ತಂಪಾಗಿಸುವ ಶುಂಠಿ ಜ್ಯೂಸ್!
ಆದರೆ ಆಯುರ್ವೇದದ ಪ್ರಕಾರ ಹಸಿಶುಂಠಿಯನ್ನು ಹಸಿಯಾಗಿ ಸೇವಿಸಿದರೆ ಕೆಲವು ಪ್ರಯೋಜನಗಳಿವೆ. ಆದರೆ ಇದಕ್ಕೆ ಸರಿಯಾದ ಅಗತ್ಯವಿಲ್ಲದೇ ಇದ್ದರೆ ಸೇವಿಸಬಾರದು ಎಂದೂ ಹೇಳಿದೆ. ಹಾಗಾದರೆ ಇದರ ಸಮರ್ಪಕ ಸೇವನೆ ಹೇಗೆ ಎಂಬ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ನಿವಾರಿಸಲಿದೆ...

ಮಧುಮೇಹಿಗಳು
ಮಧುಮೇಹಿಗಳು, ಅದರಲ್ಲೂ ಟೈಪ್ 1 ಮಧುಮೇಹಿಗಳು ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಹಸಿಶುಂಠಿಯ ರಸವನು ಬೆರೆಸಿದ ನೀರನ್ನು ಪ್ರಥಮ ಆಹಾರವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಇಡಿಯ ದಿನ ಏಕಪ್ರಕಾರವಾಗಿರುವಂತೆ ನೋಡಿಕೊಳ್ಳಬಹುದು.

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ
ಹಸಿಶುಂಠಿಯ ರಸ ರಕ್ತಪರಿಚಲನೆಯನ್ನು ಚುರುಕುಗೊಳಿಸಲು ಉತ್ತಮವಾಗಿದೆ. ಇದಕ್ಕಾಗಿ ಶುಂಠಿಯ ರಸವನ್ನು ದಿನದ ಪೇಯದಲ್ಲಿ ಬೆರೆಸಿ ಕುಡಿಯುವುದು ಉತ್ತಮ. ಆದರೆ ಕೆಲವರು ಅತಿರೇಕಕ್ಕೆ ಹೋಗಿ ಹಸಿಶುಂಠಿಯ ರಸವನ್ನು ಚರ್ಮಕ್ಕೆ ನೇರವಾಗಿ ಹೆಚ್ಚಿಕೊಳ್ಳುತ್ತಾರೆ. ಆದರೆ ಇದು ಅಪಾಯಕರವಾಗಿದ್ದು ಹಚ್ಚಿದ ಸ್ಥಳದಲ್ಲಿ ಅಪಾರವಾದ ಉರಿ ಕಾಣಿಸಿಕೊಂಡು ಬಹಳ ಹೊತ್ತಿನವರೆಗೆ ಉರಿಯುತ್ತದೆ. (ಇದನ್ನು ಖಂಡಿತಾ ಪ್ರಯತ್ನಿಸಬೇಡಿ)

ಹಸಿವನ್ನು ಹೆಚ್ಚಿಸುತ್ತದೆ
ಕೆಲವರಿಗೆ ಹಸಿವಾಗದೇ ಊಟಕ್ಕೆ ಮನಸ್ಸಿರುವುದೇ ಇಲ್ಲ. ಬಲವಂತವಾಗಿ ಊಟಕ್ಕೆ ಬಡಿಸಿದರೂ ನೆಪಮಾತ್ರಕ್ಕೆ ಕೊಂಚ ಊಟ ಮಾಡಿ ಎದ್ದು ಹೋಗುತ್ತಾರೆ. ಇವರಿಗೆ ಊಟಕ್ಕೂ ಮುನ್ನ ಚಿಕ್ಕ ತುಂಡು ಹಸಿಶುಂಠಿಯನ್ನು ಜಗಿಯಲು ನೀಡಿದರೆ ಸುಮಾರು ಅರ್ಥಘಂಟೆಯಲ್ಲಿ ಹಸಿವಾಗುತ್ತಿದೆ ಎಂದು ಓಡಿ ಬರುತ್ತಾರೆ.

ತಲೆನೋವು ನಿವಾರಿಸುತ್ತದೆ
ಒಂದು ವೇಳೆ ನೀವು ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದರೆ ಮಾತ್ರ ಈ ವಿಧಾನ ಅನುಸರಿಸಿ. ಹಸಿಶುಂಠಿಯ ಚಿಕ್ಕ ತುಂಡನ್ನು ನಯವಾಗಿ ಅರೆದು ಇದನ್ನು ಕೊಂಚವೇ ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಹಣೆ, ಹಣೆಯ ಪಕ್ಕದ ಭಾಗ ಮತ್ತು ಕಿವಿಯ ಹಿಂಭಾಗದ ಮೂಳೆಯಿರುವಲ್ಲಿ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಲೆನೋವು ನಿವಾರಿಸುತ್ತದೆ
ಇದು ಕೊಂಚ ಉರಿ ತರಿಸುತ್ತದಾದರೂ ತಲೆನೋವನ್ನು ಮಾತ್ರ ಕಡಿಮೆಗೊಳಿಸುವ ಮೂಲಕ ಉರಿಯನ್ನು ಸ್ವಲ್ಪ ಸಹಿಸಿಕೊಳ್ಳಬೇಕು.ಆದರೆ ತಲೆನೋವು ಪ್ರಾರಂಭವಾದ ಕೂಡಲೇ ಹಚ್ಚಿಕೊಳ್ಳುವುದು ಅಗತ್ಯ. ಒಮ್ಮೆ ತಲೆನೋವು ಉಗ್ರ ರೂಪ ಪಡೆಯಿತೋ, ಈ ವಿಧಾನವಲ್ಲ, ಯಾವುದೇ ಔಷಧಿ ಮೈಗ್ರೇನ್ ತಲೆನೋವನ್ನು ಶಮನಗೊಳಿಸಲು ಸಾಧವಿಲ್ಲ.

ಕೆಮ್ಮು ಕಡಿಮೆಗೊಳಿಸುತ್ತದೆ
ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ. ನೀರು ಸುಮಾರು ಅರ್ಧದಷ್ಟಾದ ಬಳಿಕ ಈ ನೀರನ್ನು ಸೋಸಿ ಕೆಲವು ಹನಿ ಲಿಂಬೆರಸ ಮತ್ತು ಕೊಂಚ ಜೇನು ಸೇರಿಸಿ ಕಲಕಿ ಬಿಸಿಬಿಸಿಯಾಗಿಯೇ ಕುಡಿಯಿರಿ. ಸಾಧ್ಯವಾದರೆ ಕೊಂಚ ಬಿಸಿ ಇರುವಂತೆಯೇ ಮುಖ ಮೇಲೆತ್ತೆ ಗಂಟಲಲ್ಲಿ ಗಳಗಳ ಮಾಡಿ. ಇದರಿಂದ ಕೆಮ್ಮು, ಕಫ ಮತ್ತು ಕಟ್ಟಿಕೊಂಡಿರುವ ಮೂಗು ಸಹಾ ತೆರೆದು ಶೀತದಿಂದ ಆರಾಮ ದೊರಕುತ್ತದೆ.

ಹಲ್ಲುನೋವು ಕಡಿಮೆಗೊಳಿಸುತ್ತದೆ
ಒಂದು ವೇಳೆ ಒಸಡುಗಳ ಒಳಭಾಗದಲ್ಲಿ ಬಾವು ಬಂದು ಹಲ್ಲು ನೋಯುತ್ತಿದ್ದರೆ ಹಸಿಶುಂಠಿಯ ಚಿಕ್ಕ ತುಂಡು ಈ ನೋವನ್ನು ಶಮನಗೊಳಿಸಬಲ್ಲದು. ಇದಕ್ಕಾಗಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ನೀರಿನಲ್ಲಿ ಕುದಿಸಿ, ಈ ನೀರು ಅರ್ಧವಾದಾಗ ಸೋಸಿ ತಣಿಸಿ ಈ ನೀರಿನಿಂದ ಸಾಕಷ್ಟು ಬಾರಿ ಮುಕ್ಕಳಿಸಿ ಉಗಿಯಬೇಕು.

ವಾಕರಿಕೆ ಕಡಿಮೆಗೊಳಿಸುತ್ತದೆ
ವಾಕರಿಕೆ ಮತ್ತು ಇದರ ಪರಿಣಾಮವಾಗಿ ಎದುರಾಗುವ ವಾಂತಿಯ ತೊಂದರೆಯಿಂದ ಪಾರಾಗಲು ಹಸಿಶುಂಠಿ ಉತ್ತಮವಾಗಿದೆ. ಸಾಮಾನ್ಯವಾಗಿ ಬೆಳಿಗ್ಗೆದ್ದ ಕೂಡಲೇ ಈ ತೊಂದರೆಗೆ ಒಳಗಾಗುವವರು ಹಸಿಶುಂಠಿಯನ್ನು ಬೇಯಿಸಿದ ನೀರನ್ನು ತಣಿಸಿ ಕುಡಿಯುವುದು ಉತ್ತಮ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಹಸಿಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ ನೀರು ಅರ್ಧವಾದ ಬಳಿಕ ಕೊಂಚ ಜೇನು ಸೇರಿಸಿ ಈ ನೀರನ್ನು ಬಿಸಿಬಿಸಿಯಾಗಿ ಊಟದ ಬಳಿಕ ಕುಡಿಯಿರಿ. ಇದರಿಂದ ಅಜೀರ್ಣದ ತೊಂದರೆ ನಿವಾರಣೆಯಾಗುತ್ತದೆ.



Click it and Unblock the Notifications











