Just In
Don't Miss
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದ್ರೋಗ ಓಡಿಸುವ ವೃದ್ಧಾಪ್ಯದ ಧನಾತ್ಮಕತೆ!
ಜೀವನದಲ್ಲಿ ಏನೇ ಕಷ್ಟ ಬಂದರೂ ಎದೆ ಗುಂದದೆ ಗುಣಾತ್ಮಕ ಚಿಂತನೆಯಿಂದ ಅದನ್ನು ಎದುರಿಸಿದರೆ, ಒತ್ತಡಗಳಿಂದ ಉದ್ಭವಿಸಬಹುದಾದ ಅದೆಷ್ಟೋ ಬಗೆಯ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ. ವಯೋ ವೃದ್ಧರಿಗೆ ಈ ಮಾತು ಹೆಚ್ಚು ಅನ್ವಯಿಸುತ್ತದೆ, ಎನ್ನುತ್ತದೆ, ಒಂದು ಹೊಸ ಸಂಶೋಧನೆ.
ಋಣಾತ್ಮಕ ಚಿಂತನೆಗಳು ನಮ್ಮ ಜೀವನದ ಮೌಲ್ಯವನ್ನೇ ಹಾಳುಗೆಡವುತ್ತವೆ. ಅದೇ ಗುಣಾತ್ಮಕ ಚಿಂತನೆ ಉಳ್ಳವರು ವೃದ್ಧಾಪ್ಯ ತಲುಪಿದರೂ ಅವರ ವಯಸ್ಸಿನ ಇತರರಿಗೆ ಕಾಡುವ ಕಾಯಿಲೆಗಳು ಇವರತ್ತ ಚಿಂತೆಯಿಂದ ನಡುವಿನ ಸೊನ್ನೆ ಮಾಯವಾಗಿ " ಚಿತೆ" ಹತ್ತಿರವಾಗುತ್ತದೆ ಎಂಬ ನಾಣ್ಣುಡಿ ಕೇಳಿದ್ದೇವೆ. ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?
ಅಮೇರಿಕಾದ ನಾರ್ತ್ ಕೆರೋಲಿನಾ ಯೂನಿವರ್ಸಿಟಿಯ ಪ್ರೊಫೆಸರ್ ಶೆವಾನ್ ನ್ಯೂಪರ್ಟ್ ಹೇಳುತ್ತಾರೆ" ಅಘಾತಗಳಿಂದ ತಬ್ಬಿಬ್ಬಾಗಿ ಧೃತಿಗೆಡುವವರು ಬೇಗನೇ ವೃದ್ಧರಾಗುತ್ತಾರೆ. ಋಣಾತ್ಮಕ ಚಿಂತನೆ ಉಳ್ಳವರು ವಯಸ್ಸಾದಂತೆಲ್ಲ ಒತ್ತಡಕ್ಕೊಳಗಾಗಿ ತನ್ಮೂಲಕ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಧನಾತ್ಮಕ ಧೋರಣೆ ಉಳ್ಳವರು ಇದಕ್ಕೆ ವಿರುದ್ಧವಾದ ಸತ್ಪರಿಣಾಮ ಪಡೆಯುತ್ತಾರೆ". ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!
ಇವರು ತಮ್ಮ ಸಂಶೋಧನೆಗಾಗಿ 60 ರಿಂದ 96 ವಯಸ್ಸಿನ 43 ಜನರಿಗೆ ಎಂಟು ದಿನಗಳ ಕಾಲ ನಿರಂತರ ಸಂದರ್ಶನ ನಡೆಸಿದರು. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅವರ ಜೀವನದ ಕುರಿತಾದ ಧೋರಣೆಯನ್ನು ಪರಿಶೀಲಿಸಲಾಯ್ತು. ಉದಾಹರಣೆಗೆ: ಅವರಿಗೆ ತಾವು ಯೌವ್ವನದಲ್ಲಿ ಎಲ್ಲರಿಗೂ ಸಲ್ಲುವಂತಿದ್ದು, ಈಗಲೂ ಹಾಗೆಯೇ ಇದ್ದೀರೋ ಅಥವ ತಾನು ನಿಷ್ಪ್ರಯೋಜಕ ಎನ್ನಿಸುತ್ತಿದೆಯೇ? ಎಂದು ಕೇಳಿದರು.
ಯೌವ್ವನದಲ್ಲಿ ಆನಂದವಾಗಿದ್ದು, ಈಗ ಹಾಗಿಲ್ಲ ಎನಿಸುತ್ತಿದೆಯೇ? ಎಂಬಿತ್ಯಾದಿಯಾಗಿ, ಎಂಟು ದಿನಗಳ ಪ್ರಶ್ನೆಗಳೂ ಹೀಗೆಯೇ ಇರುತ್ತಿದ್ದವು. ವ್ಯಕ್ತಿಗಳ ಧೋರಣೆಯಿಂದ ಧನಾತ್ಮಕವೋ ಇಲ್ಲಾ ಋಣಾತ್ಮಕವೋ ಎಂಬುದನ್ನು ತಿಳಿಯುವುದು ಮತ್ತು ಅದಕ್ಕನುಗುಣವಾಗಿ ಅವರ ಶರೀರ ಖಾಯಿಲೆಗಳಿಗೆ ಎರವಾದ ರೀತಿಯನ್ನು ಪರಿಶೀಲಿಸುವುದು ಈ ಸಂಶೋಧನೆಯ ಹಿಂದಿದ್ದ ಚಿಂತನೆ.
" ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಜೀವನದ ಕುರಿತಂತೆ ವ್ಯಕ್ತಿಯ ಧೋರಣೆ ಹೇಗಿರುತ್ತದೆ ಎಂದು ಹೇಳಲಾಗದು. ಅದು ಆ ವ್ಯಕ್ತಿ . ಬೆಳೆದು ಬಂದ ಸಂಸ್ಕೃತಿ, ರೀತಿ-ರಿವಾಜುಗಳನ್ನು ಹೊಂದಿಕೊಂಡಿರುತ್ತದೆ " ಎನ್ನುತ್ತಾರೆ, ಆ ವಿದ್ಯಾಲಯದ ಸಂಶೋಧಕ ವಿದ್ಯಾರ್ಥಿನಿ ಜೆನ್ನಿಫರ್.
ನಿಜ...ನಮ್ಮ ಧೋರಣೆಯ ಹಿಂದೆ ನಮ್ಮ ಹಿರಿಯರು ನಮಗೆ ನೀಡಿದ ಸಂಸ್ಕಾರದ ಪರಿಣಾಮ ಇದ್ದೇ ಇದೆ. ಅದೊಂದು ವೇಳೆ ಋಣಾತ್ಮಕವಾಗಿದ್ದರೂ ಇಂದಿನ ವಿದ್ಯಾವಂತ ಜನತೆ ಅದನ್ನು ಧನಾತ್ಮಕವಾಗಿ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ, ಅನ್ನಿಸುತಿಲ್ಲವೇ?.
ಐಎಎನ್ಎಸ್ ವರದಿ