Latest Updates
-
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ!
ಹೃದ್ರೋಗ ಓಡಿಸುವ ವೃದ್ಧಾಪ್ಯದ ಧನಾತ್ಮಕತೆ!
ಜೀವನದಲ್ಲಿ ಏನೇ ಕಷ್ಟ ಬಂದರೂ ಎದೆ ಗುಂದದೆ ಗುಣಾತ್ಮಕ ಚಿಂತನೆಯಿಂದ ಅದನ್ನು ಎದುರಿಸಿದರೆ, ಒತ್ತಡಗಳಿಂದ ಉದ್ಭವಿಸಬಹುದಾದ ಅದೆಷ್ಟೋ ಬಗೆಯ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ. ವಯೋ ವೃದ್ಧರಿಗೆ ಈ ಮಾತು ಹೆಚ್ಚು ಅನ್ವಯಿಸುತ್ತದೆ, ಎನ್ನುತ್ತದೆ, ಒಂದು ಹೊಸ ಸಂಶೋಧನೆ.
ಋಣಾತ್ಮಕ ಚಿಂತನೆಗಳು ನಮ್ಮ ಜೀವನದ ಮೌಲ್ಯವನ್ನೇ ಹಾಳುಗೆಡವುತ್ತವೆ. ಅದೇ ಗುಣಾತ್ಮಕ ಚಿಂತನೆ ಉಳ್ಳವರು ವೃದ್ಧಾಪ್ಯ ತಲುಪಿದರೂ ಅವರ ವಯಸ್ಸಿನ ಇತರರಿಗೆ ಕಾಡುವ ಕಾಯಿಲೆಗಳು ಇವರತ್ತ ಚಿಂತೆಯಿಂದ ನಡುವಿನ ಸೊನ್ನೆ ಮಾಯವಾಗಿ " ಚಿತೆ" ಹತ್ತಿರವಾಗುತ್ತದೆ ಎಂಬ ನಾಣ್ಣುಡಿ ಕೇಳಿದ್ದೇವೆ. ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?
ಅಮೇರಿಕಾದ ನಾರ್ತ್ ಕೆರೋಲಿನಾ ಯೂನಿವರ್ಸಿಟಿಯ ಪ್ರೊಫೆಸರ್ ಶೆವಾನ್ ನ್ಯೂಪರ್ಟ್ ಹೇಳುತ್ತಾರೆ" ಅಘಾತಗಳಿಂದ ತಬ್ಬಿಬ್ಬಾಗಿ ಧೃತಿಗೆಡುವವರು ಬೇಗನೇ ವೃದ್ಧರಾಗುತ್ತಾರೆ. ಋಣಾತ್ಮಕ ಚಿಂತನೆ ಉಳ್ಳವರು ವಯಸ್ಸಾದಂತೆಲ್ಲ ಒತ್ತಡಕ್ಕೊಳಗಾಗಿ ತನ್ಮೂಲಕ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಧನಾತ್ಮಕ ಧೋರಣೆ ಉಳ್ಳವರು ಇದಕ್ಕೆ ವಿರುದ್ಧವಾದ ಸತ್ಪರಿಣಾಮ ಪಡೆಯುತ್ತಾರೆ". ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!

ಇವರು ತಮ್ಮ ಸಂಶೋಧನೆಗಾಗಿ 60 ರಿಂದ 96 ವಯಸ್ಸಿನ 43 ಜನರಿಗೆ ಎಂಟು ದಿನಗಳ ಕಾಲ ನಿರಂತರ ಸಂದರ್ಶನ ನಡೆಸಿದರು. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅವರ ಜೀವನದ ಕುರಿತಾದ ಧೋರಣೆಯನ್ನು ಪರಿಶೀಲಿಸಲಾಯ್ತು. ಉದಾಹರಣೆಗೆ: ಅವರಿಗೆ ತಾವು ಯೌವ್ವನದಲ್ಲಿ ಎಲ್ಲರಿಗೂ ಸಲ್ಲುವಂತಿದ್ದು, ಈಗಲೂ ಹಾಗೆಯೇ ಇದ್ದೀರೋ ಅಥವ ತಾನು ನಿಷ್ಪ್ರಯೋಜಕ ಎನ್ನಿಸುತ್ತಿದೆಯೇ? ಎಂದು ಕೇಳಿದರು.
ಯೌವ್ವನದಲ್ಲಿ ಆನಂದವಾಗಿದ್ದು, ಈಗ ಹಾಗಿಲ್ಲ ಎನಿಸುತ್ತಿದೆಯೇ? ಎಂಬಿತ್ಯಾದಿಯಾಗಿ, ಎಂಟು ದಿನಗಳ ಪ್ರಶ್ನೆಗಳೂ ಹೀಗೆಯೇ ಇರುತ್ತಿದ್ದವು. ವ್ಯಕ್ತಿಗಳ ಧೋರಣೆಯಿಂದ ಧನಾತ್ಮಕವೋ ಇಲ್ಲಾ ಋಣಾತ್ಮಕವೋ ಎಂಬುದನ್ನು ತಿಳಿಯುವುದು ಮತ್ತು ಅದಕ್ಕನುಗುಣವಾಗಿ ಅವರ ಶರೀರ ಖಾಯಿಲೆಗಳಿಗೆ ಎರವಾದ ರೀತಿಯನ್ನು ಪರಿಶೀಲಿಸುವುದು ಈ ಸಂಶೋಧನೆಯ ಹಿಂದಿದ್ದ ಚಿಂತನೆ.
" ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಜೀವನದ ಕುರಿತಂತೆ ವ್ಯಕ್ತಿಯ ಧೋರಣೆ ಹೇಗಿರುತ್ತದೆ ಎಂದು ಹೇಳಲಾಗದು. ಅದು ಆ ವ್ಯಕ್ತಿ . ಬೆಳೆದು ಬಂದ ಸಂಸ್ಕೃತಿ, ರೀತಿ-ರಿವಾಜುಗಳನ್ನು ಹೊಂದಿಕೊಂಡಿರುತ್ತದೆ " ಎನ್ನುತ್ತಾರೆ, ಆ ವಿದ್ಯಾಲಯದ ಸಂಶೋಧಕ ವಿದ್ಯಾರ್ಥಿನಿ ಜೆನ್ನಿಫರ್.
ನಿಜ...ನಮ್ಮ ಧೋರಣೆಯ ಹಿಂದೆ ನಮ್ಮ ಹಿರಿಯರು ನಮಗೆ ನೀಡಿದ ಸಂಸ್ಕಾರದ ಪರಿಣಾಮ ಇದ್ದೇ ಇದೆ. ಅದೊಂದು ವೇಳೆ ಋಣಾತ್ಮಕವಾಗಿದ್ದರೂ ಇಂದಿನ ವಿದ್ಯಾವಂತ ಜನತೆ ಅದನ್ನು ಧನಾತ್ಮಕವಾಗಿ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ, ಅನ್ನಿಸುತಿಲ್ಲವೇ?.
ಐಎಎನ್ಎಸ್ ವರದಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
