Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಹೃದ್ರೋಗ ಓಡಿಸುವ ವೃದ್ಧಾಪ್ಯದ ಧನಾತ್ಮಕತೆ!
ಜೀವನದಲ್ಲಿ ಏನೇ ಕಷ್ಟ ಬಂದರೂ ಎದೆ ಗುಂದದೆ ಗುಣಾತ್ಮಕ ಚಿಂತನೆಯಿಂದ ಅದನ್ನು ಎದುರಿಸಿದರೆ, ಒತ್ತಡಗಳಿಂದ ಉದ್ಭವಿಸಬಹುದಾದ ಅದೆಷ್ಟೋ ಬಗೆಯ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ. ವಯೋ ವೃದ್ಧರಿಗೆ ಈ ಮಾತು ಹೆಚ್ಚು ಅನ್ವಯಿಸುತ್ತದೆ, ಎನ್ನುತ್ತದೆ, ಒಂದು ಹೊಸ ಸಂಶೋಧನೆ.
ಋಣಾತ್ಮಕ ಚಿಂತನೆಗಳು ನಮ್ಮ ಜೀವನದ ಮೌಲ್ಯವನ್ನೇ ಹಾಳುಗೆಡವುತ್ತವೆ. ಅದೇ ಗುಣಾತ್ಮಕ ಚಿಂತನೆ ಉಳ್ಳವರು ವೃದ್ಧಾಪ್ಯ ತಲುಪಿದರೂ ಅವರ ವಯಸ್ಸಿನ ಇತರರಿಗೆ ಕಾಡುವ ಕಾಯಿಲೆಗಳು ಇವರತ್ತ ಚಿಂತೆಯಿಂದ ನಡುವಿನ ಸೊನ್ನೆ ಮಾಯವಾಗಿ " ಚಿತೆ" ಹತ್ತಿರವಾಗುತ್ತದೆ ಎಂಬ ನಾಣ್ಣುಡಿ ಕೇಳಿದ್ದೇವೆ. ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?
ಅಮೇರಿಕಾದ ನಾರ್ತ್ ಕೆರೋಲಿನಾ ಯೂನಿವರ್ಸಿಟಿಯ ಪ್ರೊಫೆಸರ್ ಶೆವಾನ್ ನ್ಯೂಪರ್ಟ್ ಹೇಳುತ್ತಾರೆ" ಅಘಾತಗಳಿಂದ ತಬ್ಬಿಬ್ಬಾಗಿ ಧೃತಿಗೆಡುವವರು ಬೇಗನೇ ವೃದ್ಧರಾಗುತ್ತಾರೆ. ಋಣಾತ್ಮಕ ಚಿಂತನೆ ಉಳ್ಳವರು ವಯಸ್ಸಾದಂತೆಲ್ಲ ಒತ್ತಡಕ್ಕೊಳಗಾಗಿ ತನ್ಮೂಲಕ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಧನಾತ್ಮಕ ಧೋರಣೆ ಉಳ್ಳವರು ಇದಕ್ಕೆ ವಿರುದ್ಧವಾದ ಸತ್ಪರಿಣಾಮ ಪಡೆಯುತ್ತಾರೆ". ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!

ಇವರು ತಮ್ಮ ಸಂಶೋಧನೆಗಾಗಿ 60 ರಿಂದ 96 ವಯಸ್ಸಿನ 43 ಜನರಿಗೆ ಎಂಟು ದಿನಗಳ ಕಾಲ ನಿರಂತರ ಸಂದರ್ಶನ ನಡೆಸಿದರು. ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅವರ ಜೀವನದ ಕುರಿತಾದ ಧೋರಣೆಯನ್ನು ಪರಿಶೀಲಿಸಲಾಯ್ತು. ಉದಾಹರಣೆಗೆ: ಅವರಿಗೆ ತಾವು ಯೌವ್ವನದಲ್ಲಿ ಎಲ್ಲರಿಗೂ ಸಲ್ಲುವಂತಿದ್ದು, ಈಗಲೂ ಹಾಗೆಯೇ ಇದ್ದೀರೋ ಅಥವ ತಾನು ನಿಷ್ಪ್ರಯೋಜಕ ಎನ್ನಿಸುತ್ತಿದೆಯೇ? ಎಂದು ಕೇಳಿದರು.
ಯೌವ್ವನದಲ್ಲಿ ಆನಂದವಾಗಿದ್ದು, ಈಗ ಹಾಗಿಲ್ಲ ಎನಿಸುತ್ತಿದೆಯೇ? ಎಂಬಿತ್ಯಾದಿಯಾಗಿ, ಎಂಟು ದಿನಗಳ ಪ್ರಶ್ನೆಗಳೂ ಹೀಗೆಯೇ ಇರುತ್ತಿದ್ದವು. ವ್ಯಕ್ತಿಗಳ ಧೋರಣೆಯಿಂದ ಧನಾತ್ಮಕವೋ ಇಲ್ಲಾ ಋಣಾತ್ಮಕವೋ ಎಂಬುದನ್ನು ತಿಳಿಯುವುದು ಮತ್ತು ಅದಕ್ಕನುಗುಣವಾಗಿ ಅವರ ಶರೀರ ಖಾಯಿಲೆಗಳಿಗೆ ಎರವಾದ ರೀತಿಯನ್ನು ಪರಿಶೀಲಿಸುವುದು ಈ ಸಂಶೋಧನೆಯ ಹಿಂದಿದ್ದ ಚಿಂತನೆ.
" ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಜೀವನದ ಕುರಿತಂತೆ ವ್ಯಕ್ತಿಯ ಧೋರಣೆ ಹೇಗಿರುತ್ತದೆ ಎಂದು ಹೇಳಲಾಗದು. ಅದು ಆ ವ್ಯಕ್ತಿ . ಬೆಳೆದು ಬಂದ ಸಂಸ್ಕೃತಿ, ರೀತಿ-ರಿವಾಜುಗಳನ್ನು ಹೊಂದಿಕೊಂಡಿರುತ್ತದೆ " ಎನ್ನುತ್ತಾರೆ, ಆ ವಿದ್ಯಾಲಯದ ಸಂಶೋಧಕ ವಿದ್ಯಾರ್ಥಿನಿ ಜೆನ್ನಿಫರ್.
ನಿಜ...ನಮ್ಮ ಧೋರಣೆಯ ಹಿಂದೆ ನಮ್ಮ ಹಿರಿಯರು ನಮಗೆ ನೀಡಿದ ಸಂಸ್ಕಾರದ ಪರಿಣಾಮ ಇದ್ದೇ ಇದೆ. ಅದೊಂದು ವೇಳೆ ಋಣಾತ್ಮಕವಾಗಿದ್ದರೂ ಇಂದಿನ ವಿದ್ಯಾವಂತ ಜನತೆ ಅದನ್ನು ಧನಾತ್ಮಕವಾಗಿ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ, ಅನ್ನಿಸುತಿಲ್ಲವೇ?.
ಐಎಎನ್ಎಸ್ ವರದಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
