Just In
- 24 min ago ದಿನ ಭವಿಷ್ಯ ಮಾರ್ಚ್ 30: ಮಂಗಳವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 27 min ago 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- 2 hrs ago ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- 3 hrs ago ಕೇತು ಕನ್ಯಾ ರಾಶಿಯಲ್ಲಿರುವ ಇನ್ನು 285 ದಿನ 12 ರಾಶಿಗಳ ಮೇಲೆ ಅದರ ಪ್ರಭಾವ ಹೀಗಿರಲಿದೆ
Don't Miss
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಮ್ಮು ಶೀತವಾಗಿದೆಯೇ? ಮೊದಲು ಅಡುಗೆ ಮನೆಗೆ ಓಡಿ!
ಮಳೆಗಾಲದಲ್ಲಿ ಅನೈಚ್ಛಿಕವಾಗಿ ಬರುವ ಕಾಯಿಲೆಗಳೆಂದರೆ ಸುರಿಯುವ ಮೂಗು, ಗಂಟಲಬೇನೆ, ಸತತ ಸೀನು, ಕೆಮ್ಮು ಇತ್ಯಾದಿ. ಇವನ್ನು ಒಂದೇ ಪದದಲ್ಲಿ ಹೇಳುವುದಾದರೆ ಶೀತವಾಗಿದೆ ಎನ್ನಬಹುದು. ವಾಸ್ತವವಾಗಿ ಶೀತ ಎಂದರೆ ಒಂದು ಕಾಯಿಲೆಯೇ ಅಲ್ಲ, ನಮ್ಮ ದೇಹದ ಜೀವ ನಿರೋಧಕ ಶಕ್ತಿ ದೇಹದೊಳಗೆ ನುಸುಳಿದ್ದ ವೈರಿ ವೈರಸ್ಸುಗಳನ್ನು ಕೊಂದು ಹೊರಹಾಕುವ ಒಂದು ವ್ಯವಸ್ಥೆ.
ತೇವಾಂಶ ಹೆಚ್ಚಾದ ಹಾಗೆ ಗಾಳಿ, ನೀರಿನಿಂದ ಹರಡುವ ಈ ವೈರಸ್ಸು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು ಹೆಚ್ಚು ಸಮಯ ಬೇಕಾಗಿಲ್ಲ. ಅದರಲ್ಲೂ ರೋಗಿ ಮೂಗಿಗೆ ಕೈ ಅಡ್ಡ ಇಡದೇ ಸೀನಿದರೆ ಗಾಳಿಯಲ್ಲಿ ಸಿಡಿದ ರಸದ ಮೂಲಕ ಸೋಂಕು ಹರಡಬಲ್ಲ ವೈರಸ್ಸುಗಳು ಸುತ್ತಮುತ್ತ ಇತರರಿಗೂ ಹರಡುತ್ತವೆ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು
ಶೀತಕ್ಕೆ ಮದ್ದು ತೆಗೆದುಕೊಂಡರೆ ಒಂದೇ ವಾರದಲ್ಲಿ ವಾಸಿಯಾಗುತ್ತೆ, ಇಲ್ಲದಿದ್ದರೆ ಏಳು ದಿನ ಬೇಕು ನೋಡಿ ಎಂದು ವೈದ್ಯರೇ ನಗೆಚಟಾಕಿ ಹಾರಿಸುತ್ತಾರೆ. ಏಕೆಂದರೆ ಶೀತಕ್ಕೆ ತೆಗೆದುಕೊಳ್ಳುವ ಮದ್ದು ಕೊಂಚ ಶಮನ ನೀಡಬಲ್ಲದೇ ಹೊರತು ನಮ್ಮ ರಕ್ಷಣಾ ವ್ಯವಸ್ಥೆ ಶೀತಕ್ಕೆ ಕಾರಣವಾದ ವೈರಸ್ಸಿಗೆ ಸೂಕ್ತ ಪ್ರತಿರೋಧವನ್ನು ದೇಹದಲ್ಲಿ ಅಳವಡಿಸಿದ ಬಳಿಕವೇ ಇದರಿಂದ ಮುಕ್ತಿ ದೊರಕುತ್ತದೆ.
ಮುಂದಿನ ಬಾರಿ ಶೀತ ಬಂದಾಗ ಬೇರೆಯೇ ವೈರಸ್ಸು ಕಾರಣವಾಗಿರುತ್ತದೆ. ಅಂತೆಯೇ ಪ್ರತಿ ಬಾರಿಯ ಶೀತಕ್ಕೂ ಬೇರೆ ಬೇರೆ ವೈರಸ್ಸು ಕಾರಣವಾಗುತ್ತವೆ. ಶೀತದ ಮದ್ದುಗಳು ತಾತ್ಕಾಲಿಕ ಉಪಶಮನ ನೀಡುತ್ತವಾದರೂ ಇದರ ಅಡ್ಡಪರಿಣಾಮಗಳಾದ ತಲೆಸುತ್ತುವಿಕೆ, ಹೊಟ್ಟೆ ಉಬ್ಬರಿಕೆ, ತಲೆನೋವು ಇತ್ಯಾದಿಗಳನ್ನು ಸಹಿಸಬೇಕಾಗುತ್ತದೆ.
ಒಂದರ್ಥದಲ್ಲಿ ಶೀತಕ್ಕಿಂತಲೂ ಈ ಅಡ್ಡಪರಿಣಾಮಗಳೇ ಹೆಚ್ಚು ನೋವು ನೀಡುತ್ತವೆ ಹಾಗೂ ಸುಸ್ತು ಮಾಡುತ್ತವೆ. ಇವು ದೈನಂದಿನ ಚಟುವಟಿಕೆಯನ್ನೇ ಏರುಪೇರುಗೊಳಿಸಬಹುದು. ಜಾಣತನದ ಕ್ರಮವೆಂದರೆ ಶೀತ ಯಾವಾಗ ಪ್ರಾರಂಭವಾಯಿತು ಎನ್ನಿಸುತ್ತದೆಯೋ ಆಗಲೇ ಸೂಕ್ತ ಮದ್ದು ತೆಗೆದುಕೊಂಡು ಬಿಡುವುದು.
ಅದಕ್ಕೆ ವೈದ್ಯರ ಬಳಿ ಓಡಬೇಕಾಗಿಲ್ಲ, ಬರೆಯ ಅಡುಗೆ ಮನೆಗೆ ಓಡಿದರೆ ಸಾಕು ಅಷ್ಟೇ. ನಮ್ಮ ಅಡುಗೆಗೆ ಬಳಸುವ ಸುಲಭ ಸಾಮಾಗ್ರಿಗಳು ಶೀತವನ್ನು ಎದುರಿಸಲು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡದೇ ದಿನದ ಚಟುವಟಿಕೆಗಳು ಯಥಾವತ್ತಾಗಿ ನಡೆಯಲು ನೆರವಾಗುತ್ತವೆ.
ಶೀತಕ್ಕೆ ಸೂಕ್ತವಾದ ಎರಡು ಮನೆಮದ್ದುಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಮಾಹಿತಿಯನ್ನು ಸಂಗ್ರಹಿಸಿದ್ದು ಕೆಳಗಿನ ಮಾಹಿತಿ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತಿದೆ. ಸಾಮಾನ್ಯವಾಗಿ ಬಳಕೆಯಾಗುವ ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಬಳಸಿ ಕೆಲವು ಮನೆಮದ್ದುಗಳನ್ನು ತಯಾರಿಸಲಾಗಿದ್ದು ಶತಮಾನಗಳಿಂದ ಶೀತ ಕೆಮ್ಮು ನೆಗಡಿಗಳಿಗೆ ಸಮರ್ಥವಾದ ಉತ್ತರ ನೀಡುತ್ತದೆ. ಅಲ್ಲದೇ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಲು ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣಗಳು ನೆರವಾಗುತ್ತವೆ. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?
ಜೇನು
ಮತ್ತು
ಬೆಳ್ಳುಳ್ಳಿಯ
ಸಿರಪ್
ಒಂದು
ಬೆಳ್ಳುಳ್ಳಿಯ
ಎಸಳನ್ನು
ಸುಲಿದು
ಚಿಕ್ಕದಾಗಿ
ಹೆಚ್ಚಿ
ಒಂದು
ಚಿಕ್ಕ
ಬೋಗುಣಿಯಲ್ಲಿ
ಹಾಕಿ.
ಇದಕ್ಕೆ
ಎರಡರಿಂದ
ಮೂರು
ದೊಡ್ಡಚಮಚ
ಜೇನುತುಪ್ಪ
ಸೇರಿಸಿ
ಚೆನ್ನಾಗಿ
ಮಿಶ್ರಣ
ಮಾಡಿ.
ಈ
ಮಿಶ್ರಣವನ್ನು
ದಿನದಲ್ಲಿ
ಹಲವಾರು
ಬಾರಿ
ಕೊಂಚಕೊಂಚವಾಗಿ
ನಿಯಮಿತವಾಗಿ
ಸೇವಿಸುತ್ತಾ
ಬನ್ನಿ.
ಇದರಿಂದ
ಕೆಮ್ಮು
ಮತ್ತು
ಶೀತ
ನಿಧಾನವಾಗಿ
ಕಡಿಮೆಯಾಗುತ್ತಾ
ಬರುತ್ತದೆ.
ಜೇನು
ಮತ್ತು
ಬೆಳ್ಳುಳ್ಳಿಯ
ಟೀ
ಒಂದೆರಡು
ಬೆಳ್ಳುಳ್ಳಿಯ
ಎಸಳುಗಳನ್ನು
ಚಿಕ್ಕದಾಗಿ
ಹೆಚ್ಚಿ
ಸಾಮಾನ್ಯ
ಪ್ರಮಾಣದ
ಅರ್ಧದಷ್ಟು
ಟೀಪುಡಿಯೊಂದಿಗೆ
ನೀರಿನಲ್ಲಿ
ಕೊಂಚ
ಕಾಲ
ಕುದಿಸಿ
ಬಳಿಕ
ಸಕ್ಕರೆಯ
ಬದಲಿಗೆ
ಜೇನು
ಸೇರಿಸಿ
ಟೀ
ತಯಾರಿಸಿ.
ಹಾಲು
ಅಗತ್ಯವಿಲ್ಲ
ಎನಿಸಿದರೆ
ಮೊದಲು
ಕೊಂಚಕಾಲ
ಬೆಳ್ಳುಳ್ಳಿಯನ್ನು
ಕುದಿಸಿ
ನಂತರ
ಟೀಪುಡಿಹಾಕಿ
ಕೊಂಚವೇ
ಕುದಿಸಿ
ಸೋಸಿಬಿಡಿ.
ಈ
ಟೀ
ಅನ್ನು
ದಿನವಿಡೀ
ಬಿಸಿಬಿಸಿಯಾಗಿ
ನಿಧಾನವಾಗಿ
ಗುಟುಕರಿಸಿ.
ಇದರಿಂದ
ಗಂಟಲಿನಲ್ಲಿದ್ದ
ಬ್ಯಾಕ್ಟೀರಿಯಾ
ಮತ್ತು
ವೈರಸ್ಸುಗಳು
ನಿವಾರಣೆಯಾಗಿ
ಉತ್ತಮ
ಪರಿಹಾರ
ದೊರಕುತ್ತದೆ.
ಇನ್ನು
ಶೀತ,
ಗಂಟಲು
ಕೆರೆತಕ್ಕೆ
ಗುಡ್
ಬೈ
ಹೇಳಿ!
ಈ ಎರಡೂ ವಿಧಾನಗಳು ನೂರಾರು ವರ್ಷಗಳಿಂದ ಭಾರತದಾದ್ಯಂತ ಬಳಕೆಯಲ್ಲಿದ್ದು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಉಪಯುಕ್ತವಾಗಿವೆ. ಶೀತವಾಗದೇ ಇದ್ದರೂ ಈ ಟೀ ಅನ್ನು ದಿನಕ್ಕೊಂದು ಬಾರಿ ಕುಡಿಯುವ ಮೂಲಕ ಶೀತ ಬರದೇ ಇರುವಂತೆ ದೇಹವನ್ನು ಸನ್ನದ್ಧಗೊಳಿಸಬಹುದು. ಆದರೆ ಒಂದು ವೇಳೆ ನಿಮಗೆ ಬೇರೆ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇದ್ದರೆ ಈ ಟೀ ಕುಡಿಯುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ.