Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಕೆಮ್ಮು ಶೀತವಿದ್ದಾಗ ಸಿಟ್ರಸ್ ಹಣ್ಣುಗಳ ಸೇವನೆ ಸುರಕ್ಷಿತವೇ?
ಶೀತ ಕೆಮ್ಮು ಹೆಚ್ಚು ಕಡಿಮೆ ಸಾಮಾನ್ಯವಾಗಿ ಜನರನ್ನು ಕಾಡುವ ರೋಗವಾಗಿದೆ. ಶೀತದ ವಸ್ತುಗಳನ್ನು ಈ ಸಮಯದಲ್ಲಿ ಸೇವಿಸುವುದರಿಂದ ಇದು ಅತಿಯಾಗುತ್ತದೆ ಎಂಬ ಭಯವೂ ಇರುವುದರಿಂದ ಜನ ಆದಷ್ಟು ತಂಪಿನ ವಸ್ತುಗಳ ಸೇವನೆ ಮಾಡುವುದಿಲ್ಲ ಅಂತೆಯೇ ಧೂಳು ಮತ್ತು ಪ್ರದೂಷಿತ ವಾತಾವರಣ ಕೂಡ ಶೀತ ಇಲ್ಲವೇ ಕೆಮ್ಮನ್ನು ಅತಿಯಾಗಿಸುತ್ತದೆ. ರಾತ್ರಿಯ ಹೊತ್ತು ಕೆಮ್ಮು ಬರಲು ಕಾರಣಗಳೇನು?
ಆದರೆ ಇದರ ಜೊತೆಗೆ ಥಳುಕು ಹಾಕಿಕೊಂಡಿರುವ ಊಹಪೋಹವೆಂದರೆ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ಕೂಡ ಕೆಮ್ಮು ಶೀತ ತೀವ್ರವಾಗುತ್ತದೆ ಎಂದಾಗಿದೆ. ಇದು ಜನರ ಮೌಢ್ಯವೇ ಅಥವಾ ನಿಜಕ್ಕೂ ಇಂತಹ ಸಂಗತಿ ಒಂದಿದೆಯೇ ಎಂಬುದು ಆ ದೇವರೇ ಬಲ್ಲ. ಅದಾಗ್ಯೂ ಯಾವುದೇ ವೈಜ್ಞಾನಿಕ ಅನ್ವೇಷಣೆಗಳು ಈ ಮಾತನ್ನು ದೃಢೀಕರಿಸಿಲ್ಲ. ತೀವ್ರ ಶೀತ ಕೆಮ್ಮಿರುವಾಗ ಸಿಟ್ರಸ್ ಹಣ್ಣುಗಳನ್ನು ಸೇವಿಸಬಾರದು ಎಂಬುದನ್ನು ಖಾತ್ರಿಪಡಿಸಲು ಯಾವುದೇ ಮಾಹಿತಿಗಳಿಲ್ಲ. ಶೀತ, ಕೆಮ್ಮು, ಜ್ವರಕ್ಕೆಲ್ಲಾ ರಾಮಬಾಣ- ಬಿಸಿ ಬಿಸಿಯಾದ ಸೂಪ್!
ಆದರೂ ಜನರು ಇದನ್ನು ಪಾಲಿಸಿಕೊಂಡು ಬರುತ್ತಾರೆ. ಸಿಟ್ರಸ್ ಹಣ್ಣುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಲಿಂಬೆ, ಕಿತ್ತಳೆ, ದ್ರಾಕ್ಷಿ ಇದರಲ್ಲಿ ಪ್ರಮುಖವಾಗಿರುವಂತಹದ್ದು. ಅಂತೆಯೇ ವಿಟಮಿನ್ ಸಿ ಅಂಶಗಳನ್ನೊಳಗೊಂಡಿರುವ ಸೇಬು, ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿ ಮುಂತಾದವುಗಳೂ ಇವೆ. ದಿನಕ್ಕೊಂದು ಸೇಬು ತಿನ್ನಿ ವೈದ್ಯರನ್ನು ದೂರವಿಡಿ ಎಂಬ ಮಾತೇ ಇದ್ದು ಈ ಹಣ್ಣುಗಳು ಹೇಗೆ ಕೆಮ್ಮನ್ನು ತೀವ್ರವಾಗಿಸುತ್ತದೆ ಅಲ್ಲವೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಹಣ್ಣುಗಳ ಸೇವನೆಯನ್ನು ಮಾಡಬೇಕೇ ಬೇಡವೇ ಎಂಬುದನ್ನು ನಾವು ಕೆಲವೊಂದು ಮಾಹಿತಿಗಳ ಮೂಲಕ ತಿಳಿದುಕೊಳ್ಳೋಣ...

ದ್ರವದ ಮೂಲ
ಕೆಮ್ಮು ಮತ್ತು ಶೀತದ ಸಂದರ್ಭದಲ್ಲಿ, ನಿಮ್ಮ ದೇಹಕ್ಕೆ ಸಾಕಷ್ಟು ನೀರು ಬೇಕು. ನೀವು ಯಾವಾಗಲೂ ನೀರು ಕುಡಿಯುತ್ತಲೇ ಇರಲು ಸಾಧ್ಯವಿಲ್ಲ ಅಲ್ಲವೇ? ಈ ಹಣ್ಣುಗಳಲ್ಲಿ ಹೇರಳವಾಗಿ ನೀರಿನ ಅಂಶವಿದ್ದು ಇದು ಕೆಮ್ಮು ಮತ್ತು ಶೀತದ ಸಂದರ್ಭದಲ್ಲಿ ದೇಹಕ್ಕೆ ಸಾಕಷ್ಟು ನೀರಿನ ಪೂರೈಕೆಯನ್ನು ಮಾಡುತ್ತದೆ.ಅಂತೆಯೇ ನಾಲಗೆಗೆ ರುಚಿಯನ್ನೂ ನೀಡುತ್ತವೆ.

ನ್ಯೂಟ್ರೀನ್ಗಳ ಮೂಲ
ಲಿಂಬೆ, ಕಿತ್ತಳೆ, ದ್ರಾಕ್ಷಿ ಇತರೆ ಹಣ್ಣುಗಳು ವಿಟಮಿನ್ ಬಿ, ಸಿ ಮತ್ತು ಇತರೆ ಮಿನರಲ್ಗಳಾದ ಪೊಟ್ಯಾಶಿಯಮ್, ಫೈಬರ್, ಕಾರ್ಬೋಹೈಡ್ರೇಟ್ಸ್ ಮುಂತಾದವುಗಳನ್ನು ಒಳಗೊಂಡಿರುತ್ತವೆ. ವೈರಲ್ ದಾಳಿಯ ವಿರುದ್ಧ ನಿಮ್ಮ ದೇಹ ಹೋರಾಡುತ್ತಿರುವಾಗ ಇವುಗಳು ನಿಮಗೆ ಅತ್ಯವಶ್ಯಕವಾಗಿರುತ್ತವೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಕೆಮ್ಮು ಇರುವಾಗ ಸಿಟ್ರಸ್ ಹಣ್ಣುಗಳನ್ನು ಸೇವಿಸಿದಾಗ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಿಟಮಿನ್ ಅಂಶಗಳು ಇದರಲ್ಲಿ ಹೇರಳವಾಗಿದ್ದು ಇದರಲ್ಲಿರುವ ಮಿನರಲ್ಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬ್ಯಾಕ್ಟೀರಿಯಾ ಮತ್ತು ವೈರಲ್ ದಾಳಿಯ ವಿರುದ್ಧ ಹೋರಾಡಲು ಉತ್ತೇಜನವನ್ನು ನೀಡುತ್ತದೆ. ಈ ಹಣ್ಣುಗಳಲ್ಲಿರುವ ನಾರಿನಂಶ ಯಾವುದೇ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನಿಮಗೆ ಒದಗಿಸುತ್ತದೆ.

ಶ್ವಾಸಕೋಶವನ್ನು ನಿರಾಳಗೊಳಿಸುತ್ತದೆ
ನಿಮ್ಮ ಕೆಮ್ಮಿನ ಹಿಂದೆ ಶ್ವಾಸಕೋಶದ ಸಮಸ್ಯೆ ಇದ್ದಲ್ಲಿ, ಒಂದು ಸಿಟ್ರಸ್ ಹಣ್ಣು ನಿಮಗೆ ಸಹಕಾರಿಯಾಗಿದೆ. ಅದುವೇ ದ್ರಾಕ್ಷಿ. ದ್ರಾಕ್ಷಿಯನ್ನು ಕೆಮ್ಮಿರುವಾಗ ಸೇವಿಸಬಾರದು ಎನ್ನುವುದು ಸುಳ್ಳಾಗಿದೆ. ನೀವು ದ್ರಾಕ್ಷಿ ಅಥವಾ ಅದರ ರಸವನ್ನು ಸೇವಿಸಿದಾಗ ಶ್ವಾಸಕೋಶದಲ್ಲಿ ಕಟ್ಟುವಿಕೆ ನಿರಾಳವಾಗಿ ಕೆಮ್ಮು ಉಂಟಾಗುವುದಿಲ್ಲ.

ನೋಯುತ್ತಿರುವ ಗಂಟಲು
ಕೆಮ್ಮಿನ ತೀವ್ರ ಲಕ್ಷಣ ಎಂದೆನಿಸಿರುವ ನೋಯುತ್ತಿರುವ ಗಂಟಲನ್ನು ಗುಣಪಡಿಸಲು ಈ ಹಣ್ಣುಗಳು ಸಮರ್ಥವಾಗಿವೆ. ಲಿಂಬೆ ಜ್ಯೂಸ್ ಅನ್ನು ಜೇನಿನೊಂದಿಗೆ ಅಥವಾ ಸ್ವಲ್ಪ ಕಿತ್ತಳೆ ರಸವನ್ನು ಸೇವಿಸಿದಾಗ ನಿಮಗೆ ಕೊಂಚ ಆರಾಮ ಎಂದೆನಿಸುತ್ತದೆ.

ಫ್ರುಟ್ ಸಲಾಡ್ ಬೌಲ್
ನಿಮ್ಮ ಕುಟುಂಬದಲ್ಲಿ ನೀವು ಅಥವಾ ನಿಮ್ಮಲ್ಲಿ ಯಾರಾದರೂ ಕೆಮ್ಮಿನಿಂದ ಬಳಲುತ್ತಿದ್ದೀರಿ ಎಂದಾದಲ್ಲಿ ಲಿಂಬೆ, ಕಿತ್ತಳೆ, ಪೈನಾಪಲ್ ಮತ್ತು ದ್ರಾಕ್ಷಿ ಇರುವ ರುಚಿಕರವಾದ ಫ್ರುಟ್ ಸಲಾಡ್ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಲಿಂಬೆ ರಸವನ್ನು ಹಿಂಡಿಕೊಳ್ಳಿ ಮತ್ತು ನಿಮ್ಮ ಕೆಮ್ಮಿಗೆ ಇದು ಹೇಗೆ ಸಹಕಾರಿಯಾಗಿದೆ ಎಂಬುದನ್ನು ನಿಮಗೇ ಕಂಡುಕೊಳ್ಳಬಹುದಾಗಿದೆ.



Click it and Unblock the Notifications