Just In
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 12 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- News Weather Report: ಭೀಕರ ಬಿಸಿಲಿನ ನಡುವೆಯೂ ಏಪ್ರಿಲ್ 3ರವರೆಗೂ ಭಾರೀ ಮಳೆ ಮುನ್ಸೂಚನೆ, ಎಲ್ಲೆಲ್ಲಿ?
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ ಸಾಕು
ಸಾಸಿವೆ, ಮೆಣಸು, ಜೀರಿಗೆ, ಧನಿಯಾ, ಚಕ್ಕೆ, ಲವಂಗ, ಏಲಕ್ಕಿ ಈ ಮಸಾಲೆ ಪದಾರ್ಥಗಳಿಲ್ಲದ ಯಾವುದಾದರು ಭಾರತೀಯ ಅಡುಗೆ ಮನೆಯುಂಟೆ? ಇವುಗಳೆಲ್ಲವು ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತಹ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಒಂದೆರಡು ಚಿಟಿಕೆಯಷ್ಟು ಇವುಗಳನ್ನು ಆಹಾರದಲ್ಲಿ ಬೆರೆಸಿದರು ಸಾಕು ಆ ಆಹಾರದ ರುಚಿಯು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿಯೂ ಜೀರಿಗೆ
ಈ ಮಸಾಲೆ ಪದಾರ್ಥಗಳಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನವಿದೆ. ಜೀರಿಗೆ ರಸ, ಜೀರಿಗೆ ಕಷಾಯ, ಜೀರಿಗೆ ಚಿತ್ರಾನ್ನ, ಜೀರಿಗೆ ನೀರು, ಜೀರಾ ರೈಸ್ ಇತ್ಯಾದಿ ವಿಶೇಷ ಅಡುಗೆಗಳು ಇದರಿಂದ ತಯಾರಾಗುತ್ತವೆ. ಇದಕ್ಕೆ ಕಾರಣ ಜೀರಿಗೆಯಲ್ಲಿ ಸಿಕ್ಕುವ ವಿಶಿಷ್ಟವಾದ ರುಚಿಯೇ ಆಗಿರುತ್ತದೆ. ಇದರಲ್ಲಿ ರುಚಿಯ ಜೊತೆಗೆ ಆರೋಗ್ಯಕರ ಅಂಶಗಳು ಸಹ ಇವೆ.
ಹೌದು, ಇಂತಹ ಜೀರಿಗೆಯನ್ನು ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದಲು ಸಹ ಬಳಸಲಾಗುತ್ತದೆ. ಅದರಲ್ಲಿ ಶೀತ ಮತ್ತು ಗಂಟಲ ಕೆರೆತ ಹಾಗು ಗಂಟಲು ನೋವಿನಿಂದ ಉಪಶಮನವನ್ನು ಪಡೆಯಲು ಇದನ್ನು ಬಳಸಲಾಗುತ್ತದೆ ಹಾಗಾದರೆ ಯಾವ ಒಂದು ಅಂಶಗಳ ಮೂಲಕ ಜೀರಿಗೆಯು ಈ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ಕುತೂಹಲ ನಿಮಗಿದೆಯಲ್ಲವೇ?
ಹೌದು ಜೀರಿಗೆಯಲ್ಲಿ ಉರಿಯೂತ, ಶಿಲೀಂಧ್ರ ನಿವಾರಕ ಮತ್ತು ಆಂಟಿ-ಬ್ಯಾಕ್ಟೀರಿಯಾ ಅಂಶಗಳು ಇವೆ. ಇದರ ಜೊತೆಗೆ ವಿಟಮಿನ್ ಸಿ, ವಿಟಮಿನ್ ಎ ಮತ್ತು ಕಬ್ಬಿಣಾಂಶ ಸಹ ಜೀರಿಗೆಯಲ್ಲಿದ್ದು, ಇದು ನಿಮಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹೀಗೆ ಇದು ನಿಮ್ಮ ಮೇಲೆ ದಾಳಿ ಮಾಡುವ ಇನ್ಫೆಕ್ಷನ್ಗಳ ಮೇಲೆ ಹೊರಾಡುತ್ತದೆ. ಒಂದು ವೇಳೆ ನಿಮಗೆ ಶೀತವಿದ್ದಲ್ಲಿ, ಈ ಕೆಳಗೆ ಸೂಚಿಸಿರುವ ಪರಿಹಾರಗಳನ್ನು ಬಳಸಬಹುದು
ಸಿದ್ಧಗೊಳಿಸುವ
ವಿಧಾನ
*ಎರಡು
ಕಪ್
ನೀರಿನಲ್ಲಿ
ಒಂದು
ಟೇಬಲ್
ಚಮಚ
ಜೀರಿಗೆಯನ್ನು
ಹಾಕಿಕೊಂಡು
ಕುದಿಸಿ.
*ಇದಕ್ಕೆ
ಒಂದು
ಸಣ್ಣ
ತುಂಡು
ಶುಂಠಿಯನ್ನು
ಹಾಕಿ
ಬೇಯಿಸಿ,
ಇನ್ನೂ
ಒಳ್ಳೆಯದು.
*ಇದು
ಬೆಂದ
ಮೇಲೆ
ಜೀರಿಗೆ
ಮತ್ತು
ಶುಂಠಿಯ
ಎಲ್ಲಾ
ಅಂಶಗಳು
ಈ
ನೀರಿನಲ್ಲಿ
ಸೇರಿಸಿಕೊಳ್ಳುತ್ತವೆ.
ಇದನ್ನು
ಶೋಧಿಸಿಕೊಳ್ಳಿ.
*ಹೀಗೆ
ಶೋಧಿಸಿದ
ನೀರನ್ನು
ನಿಮಗೆ
ಶೀತ
ಮತ್ತು
ಗಂಟಲು
ನೋವಿನ
ಸಮಸ್ಯೆ
ಬಂದಾಗೆಲ್ಲ
ಸೇವಿಸಿ.
ಇದನ್ನು
ತಯಾರಿಸುವುದು
ಸುಲಭ.
ಇದು
ಕೇವಲ
ಶೀತಕ್ಕಷ್ಟೇ
ಅಲ್ಲದೆ,
ನಿಮ್ಮ
ಜೀರ್ಣಕ್ರಿಯೆ,
ವಿಸರ್ಜನಾ
ಪ್ರಕ್ರಿಯೆ
ಸರಾಗವಾಗಿ
ಸಾಗುತ್ತದೆ
ಮತ್ತು
ಇದು
ನಿಮ್ಮ
ದೇಹದಿಂದ
ಟಾಕ್ಸಿನ್ಗಳನ್ನು
ಹೊರ
ಹಾಕಲು
ಸಹ
ಸಹಾಯ
ಮಾಡುತ್ತದೆ.