Latest Updates
-
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ ಸಾಕು
ಸಾಸಿವೆ, ಮೆಣಸು, ಜೀರಿಗೆ, ಧನಿಯಾ, ಚಕ್ಕೆ, ಲವಂಗ, ಏಲಕ್ಕಿ ಈ ಮಸಾಲೆ ಪದಾರ್ಥಗಳಿಲ್ಲದ ಯಾವುದಾದರು ಭಾರತೀಯ ಅಡುಗೆ ಮನೆಯುಂಟೆ? ಇವುಗಳೆಲ್ಲವು ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತಹ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಒಂದೆರಡು ಚಿಟಿಕೆಯಷ್ಟು ಇವುಗಳನ್ನು ಆಹಾರದಲ್ಲಿ ಬೆರೆಸಿದರು ಸಾಕು ಆ ಆಹಾರದ ರುಚಿಯು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿಯೂ ಜೀರಿಗೆ
ಈ ಮಸಾಲೆ ಪದಾರ್ಥಗಳಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನವಿದೆ. ಜೀರಿಗೆ ರಸ, ಜೀರಿಗೆ ಕಷಾಯ, ಜೀರಿಗೆ ಚಿತ್ರಾನ್ನ, ಜೀರಿಗೆ ನೀರು, ಜೀರಾ ರೈಸ್ ಇತ್ಯಾದಿ ವಿಶೇಷ ಅಡುಗೆಗಳು ಇದರಿಂದ ತಯಾರಾಗುತ್ತವೆ. ಇದಕ್ಕೆ ಕಾರಣ ಜೀರಿಗೆಯಲ್ಲಿ ಸಿಕ್ಕುವ ವಿಶಿಷ್ಟವಾದ ರುಚಿಯೇ ಆಗಿರುತ್ತದೆ. ಇದರಲ್ಲಿ ರುಚಿಯ ಜೊತೆಗೆ ಆರೋಗ್ಯಕರ ಅಂಶಗಳು ಸಹ ಇವೆ.
ಹೌದು, ಇಂತಹ ಜೀರಿಗೆಯನ್ನು ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದಲು ಸಹ ಬಳಸಲಾಗುತ್ತದೆ. ಅದರಲ್ಲಿ ಶೀತ ಮತ್ತು ಗಂಟಲ ಕೆರೆತ ಹಾಗು ಗಂಟಲು ನೋವಿನಿಂದ ಉಪಶಮನವನ್ನು ಪಡೆಯಲು ಇದನ್ನು ಬಳಸಲಾಗುತ್ತದೆ ಹಾಗಾದರೆ ಯಾವ ಒಂದು ಅಂಶಗಳ ಮೂಲಕ ಜೀರಿಗೆಯು ಈ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬ ಕುತೂಹಲ ನಿಮಗಿದೆಯಲ್ಲವೇ?
ಹೌದು ಜೀರಿಗೆಯಲ್ಲಿ ಉರಿಯೂತ, ಶಿಲೀಂಧ್ರ ನಿವಾರಕ ಮತ್ತು ಆಂಟಿ-ಬ್ಯಾಕ್ಟೀರಿಯಾ ಅಂಶಗಳು ಇವೆ. ಇದರ ಜೊತೆಗೆ ವಿಟಮಿನ್ ಸಿ, ವಿಟಮಿನ್ ಎ ಮತ್ತು ಕಬ್ಬಿಣಾಂಶ ಸಹ ಜೀರಿಗೆಯಲ್ಲಿದ್ದು, ಇದು ನಿಮಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹೀಗೆ ಇದು ನಿಮ್ಮ ಮೇಲೆ ದಾಳಿ ಮಾಡುವ ಇನ್ಫೆಕ್ಷನ್ಗಳ ಮೇಲೆ ಹೊರಾಡುತ್ತದೆ. ಒಂದು ವೇಳೆ ನಿಮಗೆ ಶೀತವಿದ್ದಲ್ಲಿ, ಈ ಕೆಳಗೆ ಸೂಚಿಸಿರುವ ಪರಿಹಾರಗಳನ್ನು ಬಳಸಬಹುದು

ಸಿದ್ಧಗೊಳಿಸುವ ವಿಧಾನ
*ಎರಡು ಕಪ್ ನೀರಿನಲ್ಲಿ ಒಂದು ಟೇಬಲ್ ಚಮಚ ಜೀರಿಗೆಯನ್ನು ಹಾಕಿಕೊಂಡು ಕುದಿಸಿ.
*ಇದಕ್ಕೆ ಒಂದು ಸಣ್ಣ ತುಂಡು ಶುಂಠಿಯನ್ನು ಹಾಕಿ ಬೇಯಿಸಿ, ಇನ್ನೂ ಒಳ್ಳೆಯದು.
*ಇದು ಬೆಂದ ಮೇಲೆ ಜೀರಿಗೆ ಮತ್ತು ಶುಂಠಿಯ ಎಲ್ಲಾ ಅಂಶಗಳು ಈ ನೀರಿನಲ್ಲಿ ಸೇರಿಸಿಕೊಳ್ಳುತ್ತವೆ. ಇದನ್ನು ಶೋಧಿಸಿಕೊಳ್ಳಿ.
*ಹೀಗೆ ಶೋಧಿಸಿದ ನೀರನ್ನು ನಿಮಗೆ ಶೀತ ಮತ್ತು ಗಂಟಲು ನೋವಿನ ಸಮಸ್ಯೆ ಬಂದಾಗೆಲ್ಲ ಸೇವಿಸಿ.
ಇದನ್ನು ತಯಾರಿಸುವುದು ಸುಲಭ. ಇದು ಕೇವಲ ಶೀತಕ್ಕಷ್ಟೇ ಅಲ್ಲದೆ, ನಿಮ್ಮ ಜೀರ್ಣಕ್ರಿಯೆ, ವಿಸರ್ಜನಾ ಪ್ರಕ್ರಿಯೆ ಸರಾಗವಾಗಿ ಸಾಗುತ್ತದೆ ಮತ್ತು ಇದು ನಿಮ್ಮ ದೇಹದಿಂದ ಟಾಕ್ಸಿನ್ಗಳನ್ನು ಹೊರ ಹಾಕಲು ಸಹ ಸಹಾಯ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications