Just In
- 5 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 6 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 6 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 6 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲಬದ್ಧತೆಯ ಸಮಸ್ಯೆಯೇ? ಇನ್ನು ಚಿಂತೆ ಬಿಡಿ...
ಅನಾರೋಗ್ಯಕರ ಆಹಾರ ಕ್ರಮ, ಒತ್ತಡದ ಜೀವನ ಶೈಲಿಯಿಂದಾಗಿ ಇಂದಿನ ದಿನಗಳಲ್ಲಿ ಜನರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮನೆಯಿಂದ ಹೊರಗಡೆ ಏನೇ ತಿಂದರೂ ಅದು ಅಜೀರ್ಣವಾಗಿ ಸಮಸ್ಯೆಯನ್ನು ಉಂಟುಮಾಡಬಹುದು. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಅದೇ ಮಲಬದ್ಧತೆ.
ಪ್ರತಿಯೊಬ್ಬರು ಒಂದಲ್ಲಾ ಒಂದು ದಿನ ಮಲಬದ್ಧತೆಗೆ ಒಳಗಾಗುತ್ತಾರೆ. ಇದು ಹೆಚ್ಚಿನ ಸಮಯ ಯಾರನ್ನೂ ಕಾಡುವುದಿಲ್ಲ. ಆದರೆ ಕೆಲವೊಮ್ಮೆ ಇದು ತುಂಬಾ ನೋವನ್ನು ಉಂಟುಮಾಡುವ ಸ್ಥಿತಿ ನಿರ್ಮಾಣ ಮಾಡುತ್ತದೆ. ಆಹಾರ ಕ್ರಮ, ನೀರು ಕಡಿಮೆ ಕುಡಿಯುವುದು ಮತ್ತು ಜೀವನಶೈಲಿ ಇದಕ್ಕೆ ಪ್ರಮುಖ ಕಾರಣವಾಗಿದೆ.
ಮಲಬದ್ಧತೆಯು ಒಂದು ದಿನಕ್ಕಿಂತ ಹೆಚ್ಚು ನಿಮ್ಮನ್ನು ಕಾಡಲು ಆರಂಭಿಸಿದರೆ ಆಗ ತಕ್ಷಣ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಬೇಕು. ಯಾಕೆಂದರೆ ಇದು ಮುಂದೆ ದೊಡ್ಡ ಸಮಸ್ಯೆ ಕಾಡಲಿದೆ ಎನ್ನುವ ಸುಳಿವಾಗಿರಬಹುದು. ಕೆಲವೊಂದು ಸಂದರ್ಭಗಳಲ್ಲಿ ಪ್ಲೆಥ್ರಾ ಎನ್ನುವ ಔಷಧಿಯನ್ನು ನೀಡಲಾಗುತ್ತದೆ. ಆದರೆ ಯಾವಾಗಲೂ ಇದನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವುದು.
ಆದರೆ ಮನೆಯಲ್ಲಿ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಮಲಬದ್ಧತೆಯನ್ನು ನಿವಾರಿಸಬಹುದಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಮತ್ತು ಸುರಕ್ಷಿತ ಕೂಡ. ಇದರಲ್ಲಿ ಪ್ರಮುಖವಾದ ಮನೆಮದ್ದು ಆಲಿವ್ ಎಣ್ಣೆ, ಕಾಫಿ ಅಥವಾ ಕಿತ್ತಳೆ ಜ್ಯೂಸ್. ಶತಮಾನಗಳಿಂದಲೂ ಆಲಿವ್ ಎಣ್ಣೆಯನ್ನು ಅಜೀರ್ಣ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕೆಲವೊಂದು ರೋಗಗಳಿಗೆ ಬಳಸಲಾಗುತ್ತಿದೆ. ಕರುಳಿನ ಸರಿಯಾದ ಚಲನೆಯಲ್ಲಿ ಆಲಿವ್ ಎಣ್ಣೆ ಮ್ಯಾಜಿಕ್ ನಂತೆ ಕೆಲಸ ಮಾಡುತ್ತದೆ.
ಆಲಿವ್ ಎಣ್ಣೆಯಲ್ಲಿರುವ ಕೆಲವೊಂದು ಅಂಶಗಳು ಮಲವು ಸರಾಗವಾಗಿ ವಿಸರ್ಜನೆಯಾಗಲು ನೆರವಾಗುವುದು. ಇದನ್ನು ಕಾಫಿಯ ಜತೆ ಸೇರಿಸಿ ಕುಡಿದರೆ ಆಗ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. ನಿಮ್ಮ ಕರುಳಿನ ಸಮಸ್ಯೆಯನ್ನು ಸರಿಯಾದ ಸ್ಥಿತಿಗೆ ಮರಳಿ ತರಲು ಈ ಸರಳ ಮದ್ದನ್ನು ಪರೀಕ್ಷಿಸಿ. ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಲು ಸೂಪರ್ ಟಿಪ್ಸ್
ಸಾಮಗ್ರಿಗಳು
*1
ಚಮಚ
ಎಕ್ಸ್
ಟ್ರಾ
ವರ್ಜಿನ್
ಆಲಿವ್
ಎಣ್ಣೆ
*1
ಕಪ್
ಕಾಫಿ
*1
ಗ್ಲಾಸ್
ಕಿತ್ತಳೆ
ಜ್ಯೂಸ್
ಬಳಸುವ
ವಿಧಾನ
*ಒಂದು
ಚಮಚ
ಆಲಿವ್
ಎಣ್ಣೆಯನ್ನು
ಒಂದು
ಕಪ್
ಕಾಫಿ
ಅಥವಾ
ಒಂದು
ಲೋಟ
ಜ್ಯೂಸ್ಗೆ
ಸೇರಿಸಿ.
ಇದು
ಅದ್ಭುತವಾಗಿ
ಕೆಲಸ
ಮಾಡಬೇಕೆಂದರೆ
ಬೆಳಿಗ್ಗೆ
ಖಾಲಿ
ಹೊಟ್ಟೆಯಲ್ಲಿ
ಇದನ್ನು
ಸೇವಿಸಬೇಕು.
*ಆರಂಭದಲ್ಲಿ
ಇದನ್ನು
ಸ್ವಲ್ಪ
ಸ್ವಲ್ಪವೇ
ಸೇವಿಸಿ
ಇದಕ್ಕೆ
ನಿಮ್ಮ
ದೇಹವು
ಯಾವ
ರೀತಿ
ಹೊಂದಿಕೊಳ್ಳಲಿದೆ
ಎನ್ನುವುದನ್ನು
ತಿಳಿದುಕೊಳ್ಳಿ.
ಇದರ
ಬಳಿಕ
ಹೆಚ್ಚು
ಸೇವಿಸಿ.
ಬೆಳಿಗ್ಗೆ
ಖಾಲಿ
ಹೊಟ್ಟೆಯಲ್ಲಿ
ಸೇವಿಸಿದರೆ
ಉತ್ತಮ
ಫಲಿತಾಂಶ
ಪಡೆಯಬಹುದು.