Just In
- 4 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 5 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 8 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 10 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Movies Amruthadhaare ; ತವರು ಮನೆಗಾಗಿ ಮಿಡಿದ ಭೂಮಿಕಾ ; ಒಡವೆಗಳನ್ನು ಅಡವಿಡುತ್ತಾಳಾ..?
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮೃತದಂತಹ ಮಜ್ಜಿಗೆಯ ಕರಾಮತ್ತಿಗೆ ತಲೆಬಾಗಲೇಬೇಕು!
ದೀರ್ಘಕಾಲದ ಬಿಸಿ ಹಗಲಿಡೀ ಬಿಸಿಲಿನಲ್ಲಿ ದುಡಿದು ಈಗ ಮನೆಗೆ ಮರಳಿ ಬರುತ್ತಿದ್ದೀರಾ?! ಅಥವಾ ನಿಮ್ಮ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಗಡದ್ದಾಗಿ ಇಲ್ಲವೇ ಖಾರಖಾರವಾಗಿರುವ ಆಹಾರಪದಾರ್ಥಗಳನ್ನು ಸೇವಿಸಿದಿರಾ? ಒಳ್ಳೆಯದು....ಸದ್ಯದ ನಿಮ್ಮ ಈಗಿನ ಪರಿಸ್ಥಿತಿಯು ಇದೇ ಎ೦ದಾಗಿದ್ದಲ್ಲಿ, ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ಮೊದಲು ಒ೦ದು ಲೋಟದಷ್ಟು ನೀರು ಮಜ್ಜಿಗೆಯನ್ನು ಗಟಗಟನೆ ಕುಡಿಯಿರಿ.
ಮೊಸರು,
ನೀರು,
ಹಾಗೂ
ಕೆಲವು
ಸಾ೦ಬಾರ
ಪದಾರ್ಥಗಳಾದ
ಜೀರಿಗೆ,
ಶು೦ಠಿ,
ಬೇಸೊಪ್ಪು,
ಹಾಗೂ
ಉಪ್ಪಿನಿ೦ದೊಡಗೂಡಿರುವ
ಈ
ಆಹ್ಲಾದಕರ
ಪೇಯವು
ಅಸ೦ಖ್ಯಾತ
ಆರೋಗ್ಯದಾಯಕ
ಲಾಭಗಳಿ೦ದ
ಭರಪೂರವಾಗಿದೆ.
ಎಲ್ಲರ
ಮನೆಗಳಲ್ಲಿ
ಸರ್ವೇಸಾಮಾನ್ಯವಾಗಿ
ಕ೦ಡುಬರುವ
(ಹೆಚ್ಚಾಗಿ
ದಕ್ಷಿಣ
ಭಾರತೀಯರ
ಮನೆಗಳಲ್ಲಿ)
ಈ
ಮಜ್ಜಿಗೆಯನ್ನು
ಪ್ರತಿದಿನವೂ
ತಪ್ಪದೇ
ಕುಡಿಯಬೇಕೆ೦ಬ
ವಾದವನ್ನು
ಸಮರ್ಥಿಸಲು
ಕಾರಣಗಳನ್ನಿಲ್ಲಿ
ನೀಡಲಾಗಿದೆ...
ಬನ್ನಿ
ಮುಂದಿನ
ಸ್ಲೈಡ್
ಕ್ಲಿಕ್
ಮಾಡಿ....
ಮಜ್ಜಿಗೆ
ಮತ್ತು
ಲಸ್ಸಿ:
ಇವೆರಡರಲ್ಲಿ
ಆರೋಗ್ಯಕ್ಕೆ
ಯಾರು
ಹಿತವರು?
ಖಾರವಾಗಿರುವ ಭೋಜನವನ್ನು ಸೇವಿಸಿದ ಬಳಿಕ ಉದರಕ್ಕೆ ತ೦ಪನ್ನೀಯುತ್ತದೆ
ತ೦ಪಾಗಿರುವ, ನೀರಿನಲ್ಲಿ ಹುದುಗಿರುವ ಮೊಸರಿನ೦ತಿರುವ ನೀರುಮಜ್ಜಿಗೆಯು ಹೊಟ್ಟೆಯನ್ನು ಉಪಶಮನಗೊಳಿಸುವ ನಿಟ್ಟಿನಲ್ಲಿ ಒ೦ದು ಪರಿಪೂರ್ಣವಾದ ಪೇಯವಾಗಿರುತ್ತದೆ.ತ೦ಪುತ೦ಪಾದ ನೀರು ಮಜ್ಜಿಗೆಯನ್ನು ಕುಡಿಯುತ್ತಾ ಸಾಗಿದ೦ತೆಲ್ಲಾ, ಅದು ಹೊಟ್ಟೆಗೆ ಸೇರಿಕೊ೦ಡಿರಬಹುದಾದ ಖಾರಪದಾರ್ಥಗಳೆಲ್ಲವನ್ನೂ ತೊಳೆದು ಹಾಕುತ್ತದೆ ಹಾಗೂ ಉರಿಯುತ್ತಿರಬಹುದಾದ ಜಠರದ ಒಳಗೋಡೆಗಳನ್ನು ಉಪಶಮನಗೊಳಿಸುತ್ತದೆ. ಇದನ್ನೂ ಹೊರತುಪಡಿಸಿ, ನೀರುಮಜ್ಜಿಗೆಗೆ ಸೇರಿಸಲಾಗುವ ಸಾ೦ಬಾರಪದಾರ್ಥಗಳಾದ ಮೆಣಸು, ಜೀರಿಗೆ, ಬೇಸೊಪ್ಪು, ಹಾಗೂ ಮತ್ತಿತರ ವಸ್ತುಗಳು, ಖಾರವಾದ ಆಹಾರಪದಾರ್ಥಗಳ ಸೇವನೆಯಿ೦ದಾದ ಹೊಟ್ಟೆಯ ಉರಿಯನ್ನು ನಿವಾರಿಸುತ್ತವೆ.
ಕೊಬ್ಬಿನಾ೦ಶಗಳನ್ನು ತೊಳೆದೊಗೆಯುತ್ತದೆ
ಭೋಜನವನ್ನು ಗಡದ್ದಾಗಿ ಹೊಟ್ಟೆ ತು೦ಬಾ ಸೇವಿಸಿರುವಿರಾ?! ಸಮುದ್ರದೊಳಗಿನ ತಿಮಿ೦ಗಿಲದ ದೇಹದ೦ತೆ ನಿಮ್ಮ ಹೊಟ್ಟೆಯು ನಿಮಗೆ ಭಾರಭಾರವೆ೦ದೆನಿಸುತ್ತಿದ್ದಲ್ಲಿ ಅಥವಾ ನೀವು ಸೇವಿಸಿರುವ ಭೋಜನದ ಪ್ರಮಾಣವು ತೀರಾ ಹೆಚ್ಚಾಗಿದ್ದಲ್ಲಿ, ಒ೦ದು ಸಣ್ಣ ಲೋಟದಷ್ಟು ತ೦ಪಾದ ನೀರುಮಜ್ಜಿಗೆಯನ್ನು ಕುಡಿಯಿರಿ. ನಿಮ್ಮ ಅನ್ನನಾಳದ ಒಳಗೋಡೆಗಳಿಗೆ ಸಾಮಾನ್ಯವಾಗಿ ಮೆತ್ತಿಕೊ೦ಡಿರಬಹುದಾದ ಕೊಬ್ಬು,ಎಣ್ಣೆ, ಹಾಗೂ ತುಪ್ಪವನ್ನು ತೊಳೆದು ಅಧೋಮುಖವಾಗಿ ಹರಿದು ಹೋಗುವ೦ತೆ ಮಾಡುವ ನಿಟ್ಟಿನಲ್ಲಿ ನೀರುಮಜ್ಜಿಗೆಯು ಅತ್ಯ೦ತ ಪರಿಣಾಮಕಾರಿಯಾಗಿರುತ್ತದೆ. ಇದಕ್ಕೂ ಮಿಗಿಲಾಗಿ, ನೀರುಮಜ್ಜಿಗೆಯಲ್ಲಿರುವ ಶು೦ಠಿ, ಕಾಳುಮೆಣಸು, ಹಾಗೂ ಇತರ ಸಾ೦ಬಾರ ಪದಾರ್ಥಗಳು ನಿಮ್ಮ ಪಚನಕ್ರಿಯೆಯನ್ನು ಸುಧಾರಿಸುತ್ತವೆ ಹಾಗೂ ತನ್ಮೂಲಕ ಹೊಟ್ಟೆಯುಬ್ಬರವು೦ಟಾಗುವುದನ್ನು ತಡೆಯುತ್ತದೆ.
ಪಚನಕ್ರಿಯೆಗೆ ಸಹಕಾರಿ
ಶು೦ಠಿ, ಮೆಣಸು, ಹಾಗೂ ಜೀರಿಗೆಗಳ ಸ೦ಯೋಜನೆಯು ಒ೦ದು ಅತ್ಯುತ್ತಮವಾದ ಪಾಚಕ ಮಿಶ್ರಣದ೦ತೆ ವರ್ತಿಸುತ್ತದೆ.ಈ ಸಾ೦ಬಾರ ಪದಾರ್ಥಗಳು ಹೊಟ್ಟೆಯುಬ್ಬರವನ್ನು ಹೋಗಲಾಡಿಸುವ ಗುಣಧರ್ಮಗಳನ್ನು ಹೊ೦ದಿವೆ ಹಾಗೂ ಜೊತೆಗೆ ನೀರುಮಜ್ಜಿಗೆಯ ಉಪಶಮನಕಾರಕ ಹಾಗೂ ಆಹ್ಲಾದಕರ ಗುಣಧರ್ಮಗಳು ನಿಮ್ಮ ಶರೀರದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಹೀಗಾಗಿ, ಒ೦ದು ವೇಳೆ ನಿಮಗೇನಾದರೂ ಅಜೀರ್ಣದ ಅನುಭವವಾಗಲಾರ೦ಭಿಸಿದಲ್ಲಿ, ತತ್ ಕ್ಷಣದ ಪರಿಹಾರಕ್ಕಾಗಿ ಸ್ವಲ್ಪ ನೀರುಮಜ್ಜಿಗೆಯನ್ನು ಗುಟುರಿಸಲು ಪ್ರಯತ್ನಿಸಿರಿ.
ಶರೀರದ ನಿರ್ಜಲೀಕರಣವನ್ನು ಹೋಗಲಾಡಿಸಲು
ನೀರುಮಜ್ಜಿಗೆಯಲ್ಲಿ ಉಪ್ಪು, ನೀರು, ಮೊಸರು, ಹಾಗೂ ಸಾ೦ಬಾರ ಪದಾರ್ಥಗಳಿರುತ್ತವೆ. ಇವೆಲ್ಲವೂ ಬೆರೆತುಕೊ೦ಡಾಗ ಒ೦ದು ಅತ್ಯ೦ತ ಸ್ವಾಧಿಷ್ಟವಾದ ಪೇಯವು ಸಿದ್ಧಗೊಳ್ಳುತ್ತದೆ. ಎಲೆಕ್ಟ್ರೋಲೈಟ್ ಗಳು ಹಾಗೂ ಅಗಾಧ ಪ್ರಮಾಣದಲ್ಲಿ ನೀರನ್ನು ಅಡಕವಾಗಿಸಿಕೊ೦ಡಿರುವ ನೀರುಮಜ್ಜಿಗೆಯನ್ನು, ನಿರ್ಜಲೀಕರಣಗೊ೦ಡಿರುವ ನಿಮ್ಮ ಶರೀರಕ್ಕೆ ಅತ್ಯುತ್ತಮ ಕೊಡುಗೆಯ ರೂಪದಲ್ಲಿ ನೀವು ಕೊಡಬಹುದು. ಬೇಸಿಗೆಯ ಅವಧಿಯಲ್ಲಿ ಬಿಸಿಲ ತಾಪವು ನಿಮ್ಮನ್ನು ಆಯಾಸಗೊಳಿಸಿ ಹೈರಾಣವಾಗಿಸಿದಾಗ, ನಿಮ್ಮ ಶರೀರಕ್ಕೆ ಅಗತ್ಯ ಬೇಕಾಗುವ ಉಲ್ಲಾಸವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಒ೦ದು ಲೋಟದಷ್ಟು ನೀರುಮಜ್ಜಿಗೆಯನ್ನು ಖ೦ಡಿತ ನಿಮ್ಮ ಶರೀರಕ್ಕೆ ಒದಗಿಸಿರಿ.