Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದೀರಾ? ಎಚ್ಚರ!
ಪ್ರತೀದಿನ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ವಿಟಮಿನ್ ಮಾತ್ರೆಯನ್ನು ತೆಗೆದುಕೊಳ್ಳುವುದು ಒಂದು ಅಭ್ಯಾಸವೆಂಬಂತೆ ರೂಢಿಸಿಕೊಂಡಿರುತ್ತಾರೆ. ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾದಾಗ ವೈದ್ಯರೇ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ಅದು ನಿಯಮಿತ ಅವಧಿವರೆಗೆ ಮಾತ್ರ ಇರುತ್ತದೆ. ನಮ್ಮ ದೇಹದಲ್ಲಿ ವಿಟಮಿನ್ಸ್ ಬ್ಯಾಲೆನ್ಸ್ ಆದಾಗ ಮಾತ್ರೆ ನಿಲ್ಲಿಸಿ, ಆ ವಿಟಮಿನ್ ಗಳಿರುವ ಆಹಾರಗಳನ್ನು ತಿನ್ನುವಂತೆ ವೈದ್ಯರು ಆಯ್ಕೆ ಮಾಡುತ್ತಾರೆ.
ಆದರೆ ಕೆಲವರು ವಿಟಮಿನ್ ಮಾತ್ರೆಗೆ ಅಡಿಕ್ಟ್ ಆಗಿ ಬಿಡುತ್ತಾರೆ. ಆದ್ದರಿಂದ ಪ್ರತೀದಿನ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಜಾಹೀರಾತುಗಳನ್ನು ನೋಡಿ ವೈದ್ಯರ ಸಲಹೆ ಪಡೆಯದೆಯೇ ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ.
ಆದರೆ ವಿಟಮಿನ್ ಅಂಶ ದೇಹದಲ್ಲಿ ಅತಿಯಾದರೂ ತೊಂದರೆ ಎಂಬ ಅಂಶ ಗೊತ್ತಿದೆಯೇ? ಇಲ್ಲವೆಂದರೆ ಮುಂದೆ ಓದಿ:

ಕಬ್ಬಿಣದಂಶವಿರುವ ಮಾತ್ರೆಗಳು
ದೇಹದಲ್ಲಿ ರಕ್ತ ಕಮ್ಮಿಯಾದಾಗ ವೈದ್ಯರು ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ಸ್ವಲ್ಪ ದಿನಗಳವರೆಗೆ ಮಾತ್ರ ತಿನ್ನಿ, ನಂತರ ಕಬ್ಬಿಣದಂಶವಿರುವ ಆಹಾರವನ್ನು ತಿನ್ನಿ. ಇದರಿಂದ ದೇಹದಲ್ಲಿ ಕಬ್ಬಿಣದಂಶ ಬ್ಯಾಲೆನ್ಸ್ ಮಾಡಿ, ರಕ್ತ ಉತ್ಪತ್ತಿಯನ್ನು ಹೆಚ್ಚು ಮಾಡಬಹುದು.
ಅಡ್ಡ ಪರಿಣಾಮ ತಿಳಿಯಲು ಮುಂದಿನ ಸ್ಲೈಡ್ ನೋಡಿ

ಅಡ್ಡ ಪರಿಣಾಮ
ಇಲ್ಲ ಕಬ್ಬಿಣದಂಶ ಇರುವ ಮಾತ್ರೆ ತಿನ್ನುವುದನ್ನು ಮುಂದುವರೆಸುತ್ತೇನೆ ಅನ್ನುವುದಾದರೆ ಮಲಬದ್ಧತೆ, ಹೊಟ್ಟೆ ಕೆಡುವುದು ಮುಂತಾದ ಸಮಸ್ಯೆ ಕಂಡು ಬರುವುದು.

ಕ್ಯಾಲ್ಸಿಯಂ ಮಾತ್ರೆ
ಮೂಳೆ ಸ್ಟ್ರಾಂಗ್ ಆಗಲು ಕ್ಯಾಲ್ಸಿಯಂ ವಿಟಮಿನ್ ಸಪ್ಲಿಮೆಂಟ್ ಇರುವ ಈ ಮಾತ್ರೆ ತಿನ್ನಿ, ಈ ಪುಡಿ ಒಳ್ಳೆಯದು ಮುಂತಾದ ಜಾಹೀರಾತು ಕೇಳಿರಬಹುದು. ಆದರೆ ಅವಕ್ಕೆಲ್ಲಾ ಕಿವಿ ಕೊಡದೆ ಕ್ಯಾಲ್ಸಿಯಂ ಇರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಅಡ್ಡ ಪರಿಣಾಮ
ಕ್ಯಾಲ್ಸಿಯಂ ಸಪ್ಲಿಮೆಂಟ್ ಅಧಿಕ ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು.

ಸತುವಿನಂಶವಿರುವ ಸಪ್ಲಿಮೆಂಟ್
ಸತು ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಅವಶ್ಯಕ. ಪುರುಷರಲ್ಲಿ ಸತುವಿನಂಶ ಕಮ್ಮಿಯಾದರೆ ಲೈಂಗಿಕ ನಿಶ್ಯಕ್ತಿ ಉಂಟಾಗುವುದು. ಸತುವಿನಂಶ ಕಮ್ಮಿಯಾದರೆ ಸಪ್ಲಿಮೆಂಟ್ ಬದಲು ಸತುವಿನಂಶವಿರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಅಡ್ಡ ಪರಿಣಾಮ
ಏಕೆಂದರೆ ಸತುವಿನಂಶ ಸಪ್ಲಿಮೆಂಟ್ ತಿಂದರೆ ರಕ್ತದೊತ್ತಡ ಅಧಿಕವಾಗುವ ಸಂಭವ ಅಧಿಕ. ಮತ್ತೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಬೇರೆ ಔಷಧಿಯ ಮೊರೆ ಹೋಗುವ ಪರಿಸ್ಥಿತಿ ಬರಬಹುದು.

ವಿಟಮಿನ್ ಇ ಮಾತ್ರೆಗಳು
ವಿಟಮಿನ್ ಇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಸಪ್ಲಿಮೆಂಟ್ ಅನ್ನು ಅಧಿಕವಾಗಿ ಸೇವಿಸುವುದು ಒಳ್ಳೆಯದಲ್ಲ.

ಅಡ್ಡಪರಿಣಾಮ
ಏಕೆಂದರೆ ವಿಟಮಿನ್ ಇ ಅಂಶ ದೇಹದಲ್ಲಿ ಅಧಿಕವಾದರೆ ಮೈ ಊದಿಕೊಳ್ಳುವುದು, ತಲೆಸುತ್ತು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆ ಕಂಡು ಬರುವುದು, ಜಾಗ್ರತೆ.



Click it and Unblock the Notifications