Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದೀರಾ? ಎಚ್ಚರ!
ಪ್ರತೀದಿನ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ವಿಟಮಿನ್ ಮಾತ್ರೆಯನ್ನು ತೆಗೆದುಕೊಳ್ಳುವುದು ಒಂದು ಅಭ್ಯಾಸವೆಂಬಂತೆ ರೂಢಿಸಿಕೊಂಡಿರುತ್ತಾರೆ. ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾದಾಗ ವೈದ್ಯರೇ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ಅದು ನಿಯಮಿತ ಅವಧಿವರೆಗೆ ಮಾತ್ರ ಇರುತ್ತದೆ. ನಮ್ಮ ದೇಹದಲ್ಲಿ ವಿಟಮಿನ್ಸ್ ಬ್ಯಾಲೆನ್ಸ್ ಆದಾಗ ಮಾತ್ರೆ ನಿಲ್ಲಿಸಿ, ಆ ವಿಟಮಿನ್ ಗಳಿರುವ ಆಹಾರಗಳನ್ನು ತಿನ್ನುವಂತೆ ವೈದ್ಯರು ಆಯ್ಕೆ ಮಾಡುತ್ತಾರೆ.
ಆದರೆ ಕೆಲವರು ವಿಟಮಿನ್ ಮಾತ್ರೆಗೆ ಅಡಿಕ್ಟ್ ಆಗಿ ಬಿಡುತ್ತಾರೆ. ಆದ್ದರಿಂದ ಪ್ರತೀದಿನ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಜಾಹೀರಾತುಗಳನ್ನು ನೋಡಿ ವೈದ್ಯರ ಸಲಹೆ ಪಡೆಯದೆಯೇ ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ.
ಆದರೆ ವಿಟಮಿನ್ ಅಂಶ ದೇಹದಲ್ಲಿ ಅತಿಯಾದರೂ ತೊಂದರೆ ಎಂಬ ಅಂಶ ಗೊತ್ತಿದೆಯೇ? ಇಲ್ಲವೆಂದರೆ ಮುಂದೆ ಓದಿ:

ಕಬ್ಬಿಣದಂಶವಿರುವ ಮಾತ್ರೆಗಳು
ದೇಹದಲ್ಲಿ ರಕ್ತ ಕಮ್ಮಿಯಾದಾಗ ವೈದ್ಯರು ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದನ್ನು ಸ್ವಲ್ಪ ದಿನಗಳವರೆಗೆ ಮಾತ್ರ ತಿನ್ನಿ, ನಂತರ ಕಬ್ಬಿಣದಂಶವಿರುವ ಆಹಾರವನ್ನು ತಿನ್ನಿ. ಇದರಿಂದ ದೇಹದಲ್ಲಿ ಕಬ್ಬಿಣದಂಶ ಬ್ಯಾಲೆನ್ಸ್ ಮಾಡಿ, ರಕ್ತ ಉತ್ಪತ್ತಿಯನ್ನು ಹೆಚ್ಚು ಮಾಡಬಹುದು.
ಅಡ್ಡ ಪರಿಣಾಮ ತಿಳಿಯಲು ಮುಂದಿನ ಸ್ಲೈಡ್ ನೋಡಿ

ಅಡ್ಡ ಪರಿಣಾಮ
ಇಲ್ಲ ಕಬ್ಬಿಣದಂಶ ಇರುವ ಮಾತ್ರೆ ತಿನ್ನುವುದನ್ನು ಮುಂದುವರೆಸುತ್ತೇನೆ ಅನ್ನುವುದಾದರೆ ಮಲಬದ್ಧತೆ, ಹೊಟ್ಟೆ ಕೆಡುವುದು ಮುಂತಾದ ಸಮಸ್ಯೆ ಕಂಡು ಬರುವುದು.

ಕ್ಯಾಲ್ಸಿಯಂ ಮಾತ್ರೆ
ಮೂಳೆ ಸ್ಟ್ರಾಂಗ್ ಆಗಲು ಕ್ಯಾಲ್ಸಿಯಂ ವಿಟಮಿನ್ ಸಪ್ಲಿಮೆಂಟ್ ಇರುವ ಈ ಮಾತ್ರೆ ತಿನ್ನಿ, ಈ ಪುಡಿ ಒಳ್ಳೆಯದು ಮುಂತಾದ ಜಾಹೀರಾತು ಕೇಳಿರಬಹುದು. ಆದರೆ ಅವಕ್ಕೆಲ್ಲಾ ಕಿವಿ ಕೊಡದೆ ಕ್ಯಾಲ್ಸಿಯಂ ಇರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಅಡ್ಡ ಪರಿಣಾಮ
ಕ್ಯಾಲ್ಸಿಯಂ ಸಪ್ಲಿಮೆಂಟ್ ಅಧಿಕ ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು.

ಸತುವಿನಂಶವಿರುವ ಸಪ್ಲಿಮೆಂಟ್
ಸತು ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಅವಶ್ಯಕ. ಪುರುಷರಲ್ಲಿ ಸತುವಿನಂಶ ಕಮ್ಮಿಯಾದರೆ ಲೈಂಗಿಕ ನಿಶ್ಯಕ್ತಿ ಉಂಟಾಗುವುದು. ಸತುವಿನಂಶ ಕಮ್ಮಿಯಾದರೆ ಸಪ್ಲಿಮೆಂಟ್ ಬದಲು ಸತುವಿನಂಶವಿರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಅಡ್ಡ ಪರಿಣಾಮ
ಏಕೆಂದರೆ ಸತುವಿನಂಶ ಸಪ್ಲಿಮೆಂಟ್ ತಿಂದರೆ ರಕ್ತದೊತ್ತಡ ಅಧಿಕವಾಗುವ ಸಂಭವ ಅಧಿಕ. ಮತ್ತೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಬೇರೆ ಔಷಧಿಯ ಮೊರೆ ಹೋಗುವ ಪರಿಸ್ಥಿತಿ ಬರಬಹುದು.

ವಿಟಮಿನ್ ಇ ಮಾತ್ರೆಗಳು
ವಿಟಮಿನ್ ಇ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಸಪ್ಲಿಮೆಂಟ್ ಅನ್ನು ಅಧಿಕವಾಗಿ ಸೇವಿಸುವುದು ಒಳ್ಳೆಯದಲ್ಲ.

ಅಡ್ಡಪರಿಣಾಮ
ಏಕೆಂದರೆ ವಿಟಮಿನ್ ಇ ಅಂಶ ದೇಹದಲ್ಲಿ ಅಧಿಕವಾದರೆ ಮೈ ಊದಿಕೊಳ್ಳುವುದು, ತಲೆಸುತ್ತು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆ ಕಂಡು ಬರುವುದು, ಜಾಗ್ರತೆ.



Click it and Unblock the Notifications