Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಲಿವರ್ ಗಟ್ಟಿಗೊಳಿಸುವ ರೀತಿ ಇಲ್ಲಿದೆ ನೋಡಿ

ದೇಹದಲ್ಲಿನ ಕಲ್ಮಶವನ್ನು ಹೊರಹಾಕುವುದು, ಜೀರ್ಣಕ್ರಿಯೆ ಸರಾಗಗೊಳಿಸುವುದು, ಮುಂತಾದ ಅತ್ಯಗತ್ಯ ಕಾರ್ಯ ನಿರ್ವಹಿಸುವ ಲಿವರ್ ಗೂ ಕೆಲವೊಮ್ಮೆ ತೊಂದರೆ ಉಂಟಾಗುತ್ತದೆ. ಹಿಪಟೆಟಿಸ್ ಎ, ಬಿ, ಸಿ ಮತ್ತು ಡಿ ಎಂಬ ಸಮಸ್ಯೆ ಲಿವರ್ ಗೆ ತಗುಲುತ್ತದೆ.
ಆದ್ದರಿಂದ ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಕೆಲವು ಮಾರ್ಗವನ್ನು ಇಲ್ಲಿ ನೀಡಲಾಗಿದೆ. ಮದ್ಯ ತ್ಯಜನೆ ಮತ್ತು ಸೂಕ್ತ ವ್ಯಾಯಾಮದೊಂದಿಗೆ ಕೆಲವು ಆಹಾರ ವಿಧಾನ ಅನುಸರಿಸಿದರೆ ಲಿವರನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಆ ಆಹಾರಗಳಾವುದೆಂದು ಇಲ್ಲಿ ತಿಳಿದುಕೊಳ್ಳಿ.
ಲಿವರ್ ಆರೋಗ್ಯವಾಗಿಡಲು ಯಾವ ಆಹಾರ ಸೇವನೆ ಮುಖ್ಯ?
* ಸೇಬು ಮತ್ತು ಬೀಟ್ ರೂಟ್: ಸೇಬಿನಲ್ಲಿರುವ ಪೆಕ್ಟಿನ್ ಎಂಬ ಅಂಶ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದುಹಾಕುವಲ್ಲಿ ಹೆಚ್ಚು ಸಹಕಾರಿ. ಇದು ದೊಡ್ಡ ಕರುಳನ್ನು ಶುದ್ಧಗೊಳಿಸಲೂ ಅನುವಾಗುತ್ತದೆ. ಆದ್ದರಿಂದ ಪ್ರತಿ ದಿನ ಸೇಬನ್ನು ತಿಂದರೆ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ ಜೊತೆಗೆ ಲಿವರ್ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಬೀಟ್ ರೂಟ್ ನಲ್ಲಿಯೂ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೀರಿಕೊಳ್ಳುವ ವಿಶೇಷ ಗುಣವಿದೆ.
* ಕಹಿ ತರಕಾರಿ: ಚಿಕೋರಿ, ಕಾಡು ಸೇವಂತಿ, ಹಾಗಲಕಾಯಿ ಮುಂತಾದ ತರಕಾರಿಗಳು ತೇಗನ್ನು ನಿಯಂತ್ರಿಸಿ ಲಿವರನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.
* ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿನ ಅಲಿಸಿನ್ ಅಂಶ ಲಿವರ್ ನಲ್ಲಿ ಸೇರಿಕೊಳ್ಳುವ ವಿಷಕಾರಿ ಪದಾರ್ಥಗಳನ್ನು ನಿವಾರಿಸುತ್ತದೆ. ಆದ್ದರಿಂದ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಹೆಚ್ಚು ಬಳಸಿದರೆ ಒಳಿತು. ಇದರಿಂದ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ ಮತ್ತುರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.
* ನಿಂಬೆ ಪಾನೀಯ: ನಿಂಬೆರಸ ಪಿತ್ತಜನಕಾಂಗವನ್ನು ಆರೋಗ್ಯವಾಗಿಡುವ ಪಾನೀಯ. ಬಿಸಿ ನೀರಿನೊಂದಿಗೆ ನಿಂಬೆ ರಸ ಬೆರೆಸಿ ಬೆಳಗ್ಗಿನ ಜಾವ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೊಟ್ಟೆ ಶುದ್ಧವಾಗಿರುತ್ತದೆ ಮತ್ತು ಲಿವರ್ ಕಾರ್ಯ ವೈಖರಿಗೂ ಸಹಾಯ ಮಾಡುತ್ತದೆ.
* ಆಂಟಿಯಾಕ್ಸಿಡಂಟ್: ವಿಷಕಾರಿ ಅಂಶಗಳನ್ನು ದೇಹದಿಂದ ಹೊರಕ್ಕೆ ತೆಗೆದು ಹಾಕುವಲ್ಲಿ ಆಂಟಿಯಾಕ್ಸಿಡಂಟ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಆಂಟಿಯಾಕ್ಸಿಡಂಟ್ ಹೇರಳವಾಗಿರುವ ಸೇಬು, ಸ್ಟ್ರಾಬೆರಿ, ದ್ರಾಕ್ಷಿ, ಖರ್ಬೂಜದ ಹಣ್ಣನ್ನು ತಿನ್ನುತ್ತಿರಬೇಕು.
* ಮೊಳಕೆ ಕಾಳು: ಎಲೆ ಕೋಸು, ಹೂ ಕೋಸು, ಮೊಳಕೆ ಒಡೆದ ಕಾಳುಗಳು ಸಿಗರೇಟ್ ಸೇವನೆಯಿಂದ ದೇಹದಲ್ಲಿ ಸೇರಿಕೊಳ್ಳುವ ವಿಷಕಾರಿ ಅಂಶಗಳ ಕೆಟ್ಟ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡುತ್ತದೆ. ತರಕಾರಿಗಳಲ್ಲಿ ಲಿವರ್ ಕಾರ್ಯ ವೈಖರಿಗೆ ಸಹಾಯ ಮಾಡುವ ಗ್ಲೂಕೊಸಿನೋಲೇಟ್ ಇರುವುದರಿಂದ ಆಹಾರದಲ್ಲಿ ಹೆಚ್ಚು ತರಕಾರಿಗಳ ಬಳಕೆಯಿರಬೇಕು.
* ನಾರಿನಂಶದ ಆಹಾರ: ಅನ್ನ, ದವಸ ಧಾನ್ಯಗಳು, ಹಣ್ಣು ಮತ್ತು ಕೆಲವು ತರಕಾರಿಗಳಲ್ಲಿ ನಾರಿನಂಶ ಹೇರಳವಾಗಿದೆ. ಆದ್ದರಿಂದ ಹೆಚ್ಚು ಫೈಬರ್ ಅಂಶವನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿದಷ್ಟೂ ಒಳ್ಳೆಯದು.
ಲಿವರ್ ಕಾರ್ಯ ವೈಖರಿಗೆ ಸಹಾಯಕವಾಗುವ ಈ ಆಹಾರಗಳ ಹೊರತಾಗಿಯೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರವಾಗಿರಬೇಕೆಂದರೆ ವ್ಯಾಯಾಮವೂ ತುಂಬಾ ಮುಖ್ಯ. ವ್ಯಾಯಾಮದೊಂದಿಗೆ ಉತ್ತಮ ಆಹಾರ ಪದ್ಧತಿ ಅನುಸರಿಸಿದರೆ ದೇಹ ಸದೃಢವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











